AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಯುವ ರಾಜ್​ಕುಮಾರ್ ತಂಡದವರಿಂದ ಅಪಘಾತ, ಕಾಲಿಗೆ ತೀವ್ರಸ್ವರೂಪದ ಗಾಯವಾದರೂ ದೂರು ದಾಖಲಿಸದ ಮಹಿಳೆ

ಯುವ ರಾಜ್​ಕುಮಾರ್ ತಂಡದವರಿಂದ ಅಪಘಾತ, ಕಾಲಿಗೆ ತೀವ್ರಸ್ವರೂಪದ ಗಾಯವಾದರೂ ದೂರು ದಾಖಲಿಸದ ಮಹಿಳೆ

ಅರುಣ್​ ಕುಮಾರ್​ ಬೆಳ್ಳಿ
|

Updated on: Jun 17, 2025 | 5:41 PM

Share

ಅಪಘಾತದ ನಂತರ ಬೌನ್ಸರ್​​ಗಳು ಕಾರು ನಿಲ್ಲಿಸದೆ ಹೋಗಿದ್ದು ನಿಜವಾದರೂ ಮರುದಿನ ಯುವ ರಾಜ್​ಕುಮಾರ್ ಮತ್ತು ಇತರರು ಬಂದು ತನ್ನನ್ನು ಮಾತಾಡಿಸಿದ್ದಾರೆ ಮತ್ತು ಹಣವನ್ನೂ ನೀಡಿದ್ದಾರೆ ಎಂದು ನಮ್ಮ ವರದಿಗಾರನಿಗೆ ನಿಂಗಮ್ಮ ಹೇಳುತ್ತಾರೆ. ಚಿಕಿತ್ಸೆಗೆ ಎಷ್ಟೇ ಖರ್ಚಾದರೂ ತಾವು ಭರಿಸುತ್ತೇವೆ ಎಂದು ಟೀಮ್​ನವರು ಹೇಳಿದ್ದಾರಂತೆ. ಕಾಲಿಗೆ ತೀವ್ರಸ್ವರೂಪದ ಪೆಟ್ಟಾದರೂ ನಿಂಗಮ್ಮ ಪೊಲೀಸ್ ದೂರು ದಾಖಲಿಸಿಲ್ಲ.

ತುಮಕೂರು, ಜೂನ್ 17: ರವಿವಾರದಂದು ರಾಘವೇಂದ್ರ ರಾಜ್​ಕುಮಾರ್ (Raghavendra Rajkumar) ಅವರ ಮಗ ಯುವ ರಾಜ್​ಕುಮಾರ್ ನಟಿಸಿರುವ ಎಕ್ಕ ಚಿತ್ರದ ತಂಡವು ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ ವಾಪಸ್ಸು ಹೋಗುವಾಗ ಬೌನ್ಸರ್​ಗಳಿದ್ದ ಕಾರು ತನಗೆ ಗುದ್ದಿದ ಕಾರಣ ಕಾಲಿಗೆ ತೀವ್ರವಾದ ಪೆಟ್ಟಾಗಿದೆ ಎಂದು ಈ ಮಹಿಳೆ ಹೇಳುತ್ತಾರೆ. ಅಂದಹಾಗೆ, ಮಹಿಳೆಯ ಹೆಸರು ನಿಂಗಮ್ಮ ಮತ್ತು ಅವರು ಬಳ್ಳಾರಿ ಜಿಲ್ಲೆಯವರು. ಮಠದ ಶಾಲೆಯಲ್ಲಿ ಮಗನನ್ನು ದಾಖಲಿಸಲು ಬಂದಾಗ ಅಪಘಾತ ನಡೆದಿದೆ. ಮಠಕ್ಕೆ ಸಿನಿಮಾದವರು ಬಂದಿದ್ದಾರೆ ಅಂತ ಕಿವಿಗೆ ಬಿದ್ದ ಕೂಡಲೇ ನಿಂಗಮ್ಮನಲ್ಲಿ ಸಹಜವಾಗೇ ಕುತೂಹಲ ಹುಟ್ಟಿದೆ. ಆದರೆ ಚಿತ್ರತಂಡ ವಾಪಸ್ಸು ಹೋಗುವಾಗ ಒಂದು ಕಾರು ತನಗೆ ಗುದ್ದಿದೆ ಎಂದು ನಿಂಗಮ್ಮ ಹೇಳುತ್ತಾರೆ.

ಇದನ್ನೂ ಓದಿ:  ಯುವ ರಾಜ್​ಕುಮಾರ್​ ವಿಚ್ಛೇದನದ ಬಗ್ಗೆ ಸಂಪೂರ್ಣ ವಿವರ ನೀಡಿದ ಶ್ರೀದೇವಿ ತಂದೆ ಭೈರಪ್ಪ

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ