AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಯುವ ರಾಜ್​ಕುಮಾರ್​ ವಿಚ್ಛೇದನದ ಬಗ್ಗೆ ಸಂಪೂರ್ಣ ವಿವರ ನೀಡಿದ ಶ್ರೀದೇವಿ ತಂದೆ ಭೈರಪ್ಪ

‘ಅವರು ದೊಡ್ಮನೆ ಅಂತ ಹೇಳಿಕೊಳ್ಳಬಾರದು. ಇದನ್ನು ನಾವು ನಿರೀಕ್ಷಿಸಿರಲಿಲ್ಲ. ಅವರ ಟಾರ್ಚರ್​ಗೆ ಹೆದರಿಕೊಂಡು ನನ್ನ ಮಗಳು ಆಸ್ಪತ್ರೆಗೆ ದಾಖಲಾಗಿದ್ದಳು. ಈಗಲೂ ಅವಳು ಅಲ್ಲಿ ಇರುವುದು ನನಗೆ ಇಷ್ಟ ಇಲ್ಲ’ ಎಂದು ಶ್ರೀದೇವಿ ತಂದೆ ಭೈರಪ್ಪ ಹೇಳಿದ್ದಾರೆ. ಯುವ ರಾಜ್​ಕುಮಾರ್​ ಜೊತೆಗಿನ ಮನಸ್ತಾಪದ ಬಗ್ಗೆ ಅವರು ಮಾತನಾಡಿದ್ದಾರೆ.

ಯುವ ರಾಜ್​ಕುಮಾರ್​ ವಿಚ್ಛೇದನದ ಬಗ್ಗೆ ಸಂಪೂರ್ಣ ವಿವರ ನೀಡಿದ ಶ್ರೀದೇವಿ ತಂದೆ ಭೈರಪ್ಪ
ಶ್ರೀದೇವಿ ತಂದೆ ಭೈರಪ್ಪ
ರಾಮ್​, ಮೈಸೂರು
| Edited By: |

Updated on: Jun 10, 2024 | 11:17 PM

Share

ದೊಡ್ಮನೆ ಕುಡಿಯ ಸಂಸಾರದ ಗಲಾಟೆ ಬಹಿರಂಗ ಆಗಿದೆ. ಯುವ ರಾಜ್​ಕುಮಾರ್ (Yuva Rajkumar)​ ಮತ್ತು ಶ್ರೀದೇವಿ ದಾಂಪತ್ಯದಲ್ಲಿ ಬಿರುಕು ಮೂಡಿದೆ. ವಿಚ್ಛೇದನ ಪಡೆಯಲು ಯುವ ರಾಜ್​ಕುಮಾರ್​ ಮುಂದಾಗಿದ್ದಾರೆ. ಈ ಬಗ್ಗೆ ಶ್ರೀದೇವಿ (Sridevi) ಅವರ ತಂದೆ ಭೈರಪ್ಪ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ. ‘ಮೊದಲು ನನಗೆ ಇದರ ಬಗ್ಗೆ ಗೊತ್ತಿರಲಿಲ್ಲ. ನನ್ನ ಮಗಳು ನವೆಂಬರ್​ನಲ್ಲಿ ಅಮೆರಿಕದಿಂದ ಬಂದಾಗ ಅವರು ಗಲಾಟೆ ಮಾಡಿದ್ದಾರೆ. ಆಗ ನನ್ನ ಮಗಳು ಅತ್ತುಕೊಂಡು ಫೋನ್​ ಮಾಡಿದ್ದಳು. ಆಗ ಮಾತನಾಡಲು ಅವರ ಮನೆಗೆ ಹೋದಾಗ ಯುವ ಜೊತೆ ಮಾತನಾಡೋಕೆ ಅವರ ತಂದೆ-ತಾಯಿ ನಮ್ಮನ್ನು ಬಿಡಲೇ ಇಲ್ಲ. ಆತ ಕೂಡ ತನಗೆ ಬಿಡುವು ಇಲ್ಲ ಅಂತ ಹೇಳಿ ಹೊರಟುಹೋದ್ರು. ಡಿಸೆಂಬರ್​ನಲ್ಲಿ ಇಲ್ಲಿಗೆ ಬರ್ತೀನಿ ಅಂದ್ರು. ಬಂದು ಸುಮ್ಮನೇ ಕುಳಿತಿದ್ದರು. ಮಗಳ ತಪ್ಪು ಏನು ಅಂತ ನಾನು ಕೇಳಿದ್ದಕ್ಕೂ ಉತ್ತರ ಕೊಡಲಿಲ್ಲ. ನನ್ನ ಮಗಳು ಕಿರುಕುಳ ಮಾಡುತ್ತಾಳೆ ಅಂತ ಆರೋಪ ಹೊರಿಸಿದ್ದಾರೆ. ನನ್ನ ಮಗಳು ಕಿರುಕುಳ ನೀಡುವಂತವಳಲ್ಲ’ ಎಂದು ಭೈರಪ್ಪ (Bhyrappa) ಹೇಳಿದ್ದಾರೆ.

‘ಮೊದಲು ಲವ್​ ಮಾಡಿದ್ದರು. ಆಮೇಲೆ ಅರೇಂಜ್​ ಮ್ಯಾರೇಜ್​ ಆಯಿತು. ಅವರು ಪದೇ ಪದೇ ಬಂದು ಮದುವೆ ಮಾಡಿಕೊಡಿ ಅಂತ ಹಿಂಸೆ ಮಾಡಿದ್ದರು. ತುಂಬ ಒತ್ತಾಯ ಮಾಡಿದರು. ಆಮೇಲೆ ನಾವು ಒಪ್ಪಿಕೊಂಡು ನಿಶ್ಚಿತಾರ್ಥ ಮಾಡಿದೆವು. ಆ ನಂತರವೂ ಬೇಡ ಅನಿಸುತ್ತದೆ ಅಂತ ನಾನು ನನ್ನ ಮಗಳಿಗೆ ಹೇಳಿದ್ದೆ. ಆಮೇಲೆ ನಾನೇ ಮನಸ್ಸು ಸೋತೆ. ದೊಡ್ಮನೆ ಅಂತ ನಾನು ಒಪ್ಪಿಕೊಂಡಿದ್ದಲ್ಲ. ನನ್ನ ಮಗಳು ವಿದ್ಯಾವಂತೆ. ದುಡಿದು ತಿನ್ನುವಂತಹ ಶಕ್ತಿ ಇರುವಂತವಳು. ಆ ಹುಡುಗ ಎಸ್​ಎಸ್​ಎಲ್​ಸಿ. ಆದ್ರೂ ನಾವು ಮದುವೆ ಮಾಡಿದ್ದೇವೆ’ ಎಂದಿದ್ದಾರೆ ಭೈರಪ್ಪ.

‘ತನ್ನ ಬಗ್ಗೆ ಕೆಟ್ಟ ಮಾತು ಆಡುತ್ತಾರೆ ಎಂದು ಮಗಳು ನಮಗೆ ಯಾವತ್ತೂ ಹೇಳಲಿಲ್ಲ. ನವೆಂಬರ್​ನಲ್ಲಿ ಅವರ ಮನೆಯಲ್ಲೇ ಇದ್ದಳು. ಬಳಿಕ ಅಕಾಡೆಮಿಗೆ ಕಳಿಸಿದೆ. ನಂತರ ಫ್ರೆಂಡ್​ ಮನೆಗೆ ಹೋದಳು. ಅಲ್ಲಿಂದ ಅವಳನ್ನು ಕರೆದುಕೊಂಡು ಹೋಟೆಲ್​ಗೆ ಕರೆದುಕೊಂಡು ಹೋಗಿ ಅಲ್ಲಿ ಬಿಟ್ಟ. ಮರುದಿನ ಅವಳು ಅಮೆರಿಕಗೆ ಹೋದಳು. ಮನೆಯಲ್ಲಿ ತುಂಬ ಕೆಟ್ಟ ಮಾತು ಆಡುತ್ತಿದ್ದರು ಅಂತ ನನ್ನ ಮಗಳು ನನಗೆ ಹೇಳಿದ್ದಳು’ ಎಂದು ಭೈರಪ್ಪ ಹೇಳಿದ್ದಾರೆ.

ಇದನ್ನೂ ಓದಿ: ಯುವ ರಾಜ್​ಕುಮಾರ್​ ಡಿವೋರ್ಸ್​ ವಿಚಾರದಲ್ಲಿ ಕೇಳಿಬಂತು ಸಪ್ತಮಿ ಗೌಡ ಹೆಸರು

‘ಯುವರಾಜ್​ ನನ್ನ ಜೊತೆ ತುಂಬ ಚೆನ್ನಾಗಿ ಇದ್ದ. ನನಗೆ ಹುಷಾರಿಲ್ಲ ಎಂದರೆ ಮಗಳು-ಅಳಿಯ ಬರುತ್ತಿದ್ದರು. ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದರು. ನನಗೆ ತಿಳಿದ ಮಟ್ಟಿಗೆ ಮನೆಯವರದ್ದೇ ಸಮಸ್ಯೆ. ಮನೆಯವರೇ ಯುವರಾಜ್​ಗೆ ಕೇಳಿಕೊಟ್ಟು ಈ ಥರ ಟಾರ್ಚರ್ ಮಾಡಿಸುತ್ತಾ ಇದ್ದಾರೆ. ಹಣ, ಆಸ್ತಿ ವಿಚಾರಕ್ಕೆ ಮನಸ್ತಾಪ ಆಗಿಲ್ಲ. ಅವರಿಗಿಂತ ಜಾಸ್ತಿ ನಮ್ಮ ಬಳಿಯೇ ಇದೆ. ನಾವು ತೋರಿಸಿಕೊಳ್ಳಲ್ಲ. ಸಿಂಪಲ್​ ಆಗಿ ಇರುವ ಜನ. ಕೃಷಿ ಕುಟುಂಬದಿಂದ ಬಂದವವರು. ಹೇಗೆ ಇರಬೇಕೋ ಹಾಗೆಯೇ ಇದ್ದೇವೆ. ನಮ್ಮ ತಂದೆಯ ಕಾಲದಿಂದಲೂ ನಾವು ಕೋಟ್ಯಾಧಿಪತಿಗಳು’ ಎಂದಿದ್ದಾರೆ ಭೈರಪ್ಪ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ
ಮೋದಿಯಿಂದ ನಾಳೆ ಉದ್ಘಾಟನೆಯಾಗಲಿದೆ ಅಸ್ಸಾಂನ ಅತಿದೊಡ್ಡ ವಿಮಾನ ನಿಲ್ದಾಣ
ಮೋದಿಯಿಂದ ನಾಳೆ ಉದ್ಘಾಟನೆಯಾಗಲಿದೆ ಅಸ್ಸಾಂನ ಅತಿದೊಡ್ಡ ವಿಮಾನ ನಿಲ್ದಾಣ