AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಲಾಹೋರ್​​ನಲ್ಲಿ ಕಲಾವಿದನ ಬಂಧನ; ಕಾರಣ ಕೇಳಿದರೆ ‘ಇದೆಲ್ಲ ಅಪರಾಧವಾ’ ಎಂಬ ಪ್ರಶ್ನೆ ಮೂಡದೆ ಇರದು

ಅಬುಝಾರ್​ ಒಬ್ಬ ಕಲಾವಿದ ಮತ್ತು ಶಿಕ್ಷಕ. ಕಲ್ಮಾ ಚೌಕ್​ ಬಳಿ ಆಟೋಕ್ಕೆ ಕಾಯುತ್ತ ನಿಂತಿದ್ದ. ಆಗ ಅಲ್ಲಿಗೆ ವ್ಯಾನ್​​ನಲ್ಲಿ ಬಂದ ಪೊಲೀಸರು ಅವನ ಬಳಿ ಐಡಿ ಕಾರ್ಡ್ ತೋರಿಸಲು ಹೇಳಿದರು. ಅದೃಷ್ಟಕ್ಕೆ ಆತನ ಬಳಿ ಇತ್ತು.

ಲಾಹೋರ್​​ನಲ್ಲಿ ಕಲಾವಿದನ ಬಂಧನ; ಕಾರಣ ಕೇಳಿದರೆ ‘ಇದೆಲ್ಲ ಅಪರಾಧವಾ’ ಎಂಬ ಪ್ರಶ್ನೆ ಮೂಡದೆ ಇರದು
ಬಂಧಿತ ಕಲಾವಿದ
TV9 Web
| Edited By: |

Updated on: Jun 14, 2021 | 1:23 PM

Share

ಲಾಹೋರ್​: ಪಾಕಿಸ್ತಾನದಲ್ಲಿ ಯಾವುದೆಲ್ಲ ಅಪರಾಧವೆನಿಸಿಕೊಳ್ಳುತ್ತದೆ ಎಂದು ಹೇಳುವುದು ಕಷ್ಟ. ನಾವು-ನೀವು ಊಹಿಸಲು ಸಾಧ್ಯವಿಲ್ಲದ್ದೂ ಇಲ್ಲ ಬಂಧಿಸಲ್ಪಡುವಷ್ಟು ಅಪರಾಧ ಎಂಬುದಕ್ಕೆ ಇಲ್ಲೊಂದು ಘಟನೆ ನಡೆದಿದೆ. ಇತ್ತೀಚೆಗೆ ಪಾಕಿಸ್ತಾನದ ಕಲಾವಿದನೊಬ್ಬನನ್ನು ಲಾಹೋರ್​ ಪೊಲೀಸರು ಬಂಧಿಸಿದ್ದಾರೆ. ಆದರೆ ಕಾರಣ ಮಾತ್ರ ತೀರ ಕ್ಷುಲ್ಲಕ. ಈ ಬಂಧಿತ ಕಲಾವಿದನ ಹೆಸರು ಅಬುಝಾರ್​ ಮಧು ಎಂದಾಗಿದ್ದು, ಒಂದು ದಿನ ಮುಂಜಾನೆ ಹೊತ್ತಲ್ಲಿ ಆಟೋಕ್ಕಾಗಿ ಕಾಯುತ್ತ ನಿಂತಿದ್ದರು. ಅವರನ್ನು ನೋಡಿದ ಪೊಲೀಸರು ಎಳೆದುಕೊಂಡು ಹೋಗಿ ಠಾಣೆಯಲ್ಲಿ ಕೂಡಿದ್ದಾರೆ. ನನ್ನನ್ನು ಯಾಕ್ರೀ ಬಂಧಿಸಿದ್ದೀರಿ ಎಂದು ಕೇಳಿದ್ದಕ್ಕೆ.. ನೀನು ತಲೆಕೂದಲನ್ನು ಉದ್ದ ಬಿಟ್ಟಿದ್ದಕ್ಕೆ ಅರೆಸ್ಟ್ ಮಾಡಿದ್ದೇವೆ ಎಂದು ಹೇಳಿದ್ದಾರೆ.

ಈ ಬಗ್ಗೆ ನತಾಶಾ ಜಾವೇದ್​ ಎಂಬುವರು ಸರಣಿ ಟ್ವೀಟ್ ಮಾಡಿದ್ದಾರೆ. ಜಾವೇದ್​ ಲಾಹೋರ್​​ನಲ್ಲಿ ಮಕ್ಕಳ ಹಕ್ಕುಗಳ ವಕೀಲರಾಗಿದ್ದಾರೆ. ಅಬುಝಾರ್​ ಮಧು ನನ್ನ ಸ್ನೇಹಿತ ಎಂದು ಹೇಳಿಕೊಂಡಿರುವ ನತಾಶಾ, ಅಬುಝಾರ್​ ಕೂದಲು ಉದ್ದ ಬಿಟ್ಟಿದ್ದಕ್ಕೆ ಆತನನ್ನು ಪೊಲೀಸು ಬಂಧಿಸಿದ್ದು ನಿಜಕ್ಕೂ ಶಾಕಿಂಗ್​ ಎಂದಿದ್ದಾರೆ. ಕೂದಲು ಉದ್ದವಾಗಿದೆ ಎಂಬ ಕಾರಣಕ್ಕೆ ಜೈಲಿಗೆ ಹಾಕಲಾಗಿತ್ತು. ರಾತ್ರಿಯೆಲ್ಲ ಅಲ್ಲೇ ಇದ್ದ ಎಂದು ಬರೆದುಕೊಂಡಿದ್ದಾರೆ.

ಅಬುಝಾರ್​ ಒಬ್ಬ ಕಲಾವಿದ ಮತ್ತು ಶಿಕ್ಷಕ. ಕಲ್ಮಾ ಚೌಕ್​ ಬಳಿ ಆಟೋಕ್ಕೆ ಕಾಯುತ್ತ ನಿಂತಿದ್ದ. ಆಗ ಅಲ್ಲಿಗೆ ವ್ಯಾನ್​​ನಲ್ಲಿ ಬಂದ ಪೊಲೀಸರು ಅವನ ಬಳಿ ಐಡಿ ಕಾರ್ಡ್ ತೋರಿಸಲು ಹೇಳಿದರು. ಅದೃಷ್ಟಕ್ಕೆ ಆತನ ಬಳಿ ಇತ್ತು, ತೋರಿಸಿದ. ಆದರೂ ಪೊಲೀಸರು ಅಬುಝಾರ್​​ನನ್ನು ಬಂಧಿಸಿ, ಕರೆದುಕೊಂಡು ಹೋದರು. ಉದ್ದ ಕೂದಲಿನ ಕಾರಣ ಕೊಟ್ಟರು ಎಂದು ನತಾಶಾ ಬರೆದುಕೊಂಡಿದ್ದಾರೆ.

ತಾವು ಅಬುಝಾರ್​​ನನ್ನು ನೋಡಿ ಆತನ ಉದ್ದ ಕೂದಲು ಬನ್​ನಲ್ಲಿ ಕಟ್ಟಲ್ಪಟ್ಟಿತ್ತು. ಒಂದು ತೋಳಿಗೆ ಬಳೆಯನ್ನು ತೊಟ್ಟಿದ್ದ. ಮುಂಜಾನೆ 3 ಗಂಟೆ ಹೊತ್ತಿಗೆ ರಸ್ತೆಯಲ್ಲಿ ಇದ್ದ. ಹಾಗಾಗಿ ಪ್ರಶ್ನೆಗಳು ಮೂಡಿದ ಕಾರಣ ಬಂಧಿಸಬೇಕಾಯಿತು ಎಂದು ಪೊಲೀಸರು ಹೇಳಿಕೊಂಡಿದ್ದಾರೆ. ಇನ್ನು ಅಬುಝಾರ್​​ನನ್ನು ಕರೆದುಕೊಂಡು ಹೋಗಿ ಆತನ ಬ್ಯಾಗ್​ ಮತ್ತು ಅದರಲ್ಲಿದ್ದ ವಸ್ತುಗಳನ್ನೂ ಪರಿಶೀಲಿಸಲಾಗಿದೆ ಎಂದೂ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಇದನ್ನೂ ಓದಿ: ಕೊರೊನಾಗೆ ಬಲಿಯಾದವರ ಕುಟುಂಬಕ್ಕೆ 1 ಲಕ್ಷ ರೂ ಪರಿಹಾರ; ಕುಟುಂಬದಲ್ಲಿ ಒಬ್ಬರಿಗೆ ಮಾತ್ರ: ಸಿಎಂ ಯಡಿಯೂರಪ್ಪ ಘೋಷಣೆ

Follow Us
ಅಖಾಡಕ್ಕಿಳಿದ ಡಿಕೆಶಿ: ಬಳ್ಳಾರಿಯತ್ತ ತೋಳೇರಿಸಿ ಹೊರಟ ಬಿಜೆಪಿಗೆ ಕೌಂಟರ್!
ಅಖಾಡಕ್ಕಿಳಿದ ಡಿಕೆಶಿ: ಬಳ್ಳಾರಿಯತ್ತ ತೋಳೇರಿಸಿ ಹೊರಟ ಬಿಜೆಪಿಗೆ ಕೌಂಟರ್!
ಆರ್‌ಎಸ್‌ಎಸ್ ಕಚೇರಿ ಮುಂದೆ ಮನುಸ್ಮೃತಿ ಸುಟ್ಟ ಕಾಂಗ್ರೆಸ್‌ ನಾಯಕ ಪೊಲೀಸ್ ವಶ
ಆರ್‌ಎಸ್‌ಎಸ್ ಕಚೇರಿ ಮುಂದೆ ಮನುಸ್ಮೃತಿ ಸುಟ್ಟ ಕಾಂಗ್ರೆಸ್‌ ನಾಯಕ ಪೊಲೀಸ್ ವಶ
ಮಹಾತ್ಮ ಗಾಂಧೀಜಿ ಹತ್ಯೆಯಾದ ಸ್ಥಳ ಯಾವುದು? ಅದು ಈಗ ಹೇಗಿದೆ ನೋಡಿ
ಮಹಾತ್ಮ ಗಾಂಧೀಜಿ ಹತ್ಯೆಯಾದ ಸ್ಥಳ ಯಾವುದು? ಅದು ಈಗ ಹೇಗಿದೆ ನೋಡಿ
ನಾನ್ ವೆಜ್​ ಪ್ರಿಯರಿಗೆ ಶಾಕ್:2 ದಿನ ಬೆಂಗಳೂರಲ್ಲಿ ಸಿಗಲ್ಲ ಮಟನ್-ಚಿಕನ್​!
ನಾನ್ ವೆಜ್​ ಪ್ರಿಯರಿಗೆ ಶಾಕ್:2 ದಿನ ಬೆಂಗಳೂರಲ್ಲಿ ಸಿಗಲ್ಲ ಮಟನ್-ಚಿಕನ್​!
ದರ್ಶನ್ ಭೇಟಿ ಮಾಡಿದ ವಿಜಯಲಕ್ಷ್ಮಿ, ಶಾಸಕ ದರ್ಶನ್ ಪುಟ್ಟಣ್ಣಯ್ಯ, ಝೈದ್ ಖಾನ್
ದರ್ಶನ್ ಭೇಟಿ ಮಾಡಿದ ವಿಜಯಲಕ್ಷ್ಮಿ, ಶಾಸಕ ದರ್ಶನ್ ಪುಟ್ಟಣ್ಣಯ್ಯ, ಝೈದ್ ಖಾನ್
ಮಾಫಿ ಸಾಕ್ಷಿಗೆ ದರ್ಶನ್ ಆಕ್ಷೇಪ; ತುರ್ತು ವಿಚಾರಣೆಗೆ ಹೈಕೋರ್ಟ್ ಸಮ್ಮತಿ
ಮಾಫಿ ಸಾಕ್ಷಿಗೆ ದರ್ಶನ್ ಆಕ್ಷೇಪ; ತುರ್ತು ವಿಚಾರಣೆಗೆ ಹೈಕೋರ್ಟ್ ಸಮ್ಮತಿ
ಬಗೆದಷ್ಟು ಬಯಲಾಗ್ತಿದೆ KPSC ಹಗರಣ: Dysp ನೇಮಕಾತಿಯಲ್ಲೂ ಅಕ್ರಮ ಶಂಕೆ
ಬಗೆದಷ್ಟು ಬಯಲಾಗ್ತಿದೆ KPSC ಹಗರಣ: Dysp ನೇಮಕಾತಿಯಲ್ಲೂ ಅಕ್ರಮ ಶಂಕೆ
ಇಲ್ಲಿ ಎದೆಮಟ್ಟದ ನೀರಿನಲ್ಲಿ ನಡೆದರೆ ಮಾತ್ರ ನರಸಿಂಹನ ದರ್ಶನ ಭಾಗ್ಯ!
ಇಲ್ಲಿ ಎದೆಮಟ್ಟದ ನೀರಿನಲ್ಲಿ ನಡೆದರೆ ಮಾತ್ರ ನರಸಿಂಹನ ದರ್ಶನ ಭಾಗ್ಯ!
ನೆಲಮಂಗಲ-ಹಾಸನ ಹೆದ್ದಾರಿ ಟೋಲ್ ದರ ಹೆಚ್ಚಳ: ವಾಹನ ಸವಾರರ ಆಕ್ರೋಶ
ನೆಲಮಂಗಲ-ಹಾಸನ ಹೆದ್ದಾರಿ ಟೋಲ್ ದರ ಹೆಚ್ಚಳ: ವಾಹನ ಸವಾರರ ಆಕ್ರೋಶ
ಹಸುವಿಗೆ ಶಾಸ್ತ್ರೋಕ್ತವಾಗಿ ಸೀಮಂತ ಮಾಡಿದ ಯುವಕ; ಊರ ಜನರಿಗೆ ಹೋಳಿಗೆ ಊಟ!
ಹಸುವಿಗೆ ಶಾಸ್ತ್ರೋಕ್ತವಾಗಿ ಸೀಮಂತ ಮಾಡಿದ ಯುವಕ; ಊರ ಜನರಿಗೆ ಹೋಳಿಗೆ ಊಟ!