AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರಿಯ ಕಿನ್ನರಿ.. ಹಲ್ಲು ಮುರಿದು ಹೋಗಿದ್ದಕ್ಕೆ ಪ್ರತಿಯಾಗಿ ಉಡುಗೊರೆ ಕೊಡು.. ಎಲ್ಲರ ಮನಗೆದ್ದ ಚೆಂದದ ಪತ್ರ!

ಶಾಲೆಯಲ್ಲಿ ಪುಟ್ಟ ಹುಡುಗನೊಬ್ಬನ ಹಲ್ಲು ಮುರಿದುಹೋಗಿದ್ದಕ್ಕೆ ಶಿಕ್ಷಕಿ ಅವನನ್ನು ಸಮಾಧಾನಿಸುವ ಸಲುವಾಗಿ ಒಂದು ಪತ್ರ ಬರೆದಿದ್ದಾರೆ. ಕಿನ್ನರಿ ಇವನ ಹಲ್ಲಿಗೆ ಪ್ರತಿಯಾಗಿ ಉಡುಗೊರೆ ಕೊಡು ಎಂದು ಬರೆದಿರುವ ಪತ್ರದ ಭಾವಾನುವಾದ ಇಲ್ಲಿದೆ.

ಪ್ರಿಯ ಕಿನ್ನರಿ.. ಹಲ್ಲು ಮುರಿದು ಹೋಗಿದ್ದಕ್ಕೆ ಪ್ರತಿಯಾಗಿ ಉಡುಗೊರೆ ಕೊಡು.. ಎಲ್ಲರ ಮನಗೆದ್ದ ಚೆಂದದ ಪತ್ರ!
ಪ್ರಿಯ ಕಿನ್ನರಿ.. ಎಲ್ಲರ ಮನಗೆದ್ದ ಪತ್ರ
Skanda
| Edited By: |

Updated on:Jan 16, 2021 | 7:29 PM

Share

ಕೆಲವೊಂದು ಸಣ್ಣ ಘಟನೆಗಳು ನಮಗೆ ಅರಿವಿಲ್ಲದಂತೆಯೇ ಮುಖದಲ್ಲಿ ಮಂದಹಾಸ ಮೂಡಿಸಿಬಿಡುತ್ತವೆ. ಎಷ್ಟು ದೊಡ್ಡವರಾದರೂ ಮಕ್ಕಳ ಜೊತೆ ಇದ್ದಾಗ ಮಕ್ಕಳಂತೆ ಯೋಚಿಸಿದರೆ ಮಾತ್ರ ಚೆನ್ನ. ಬ್ರಿಟಿಷ್​ ಕೊಲಂಬಿಯಾ ಪ್ರಾಂತ್ಯದ ನರ್ಸರಿ ಶಾಲೆಯ ಉಪಪ್ರಾಂಶುಪಾಲರು ಬರೆದ ಪತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ಎಲ್ಲರ ಮನಸ್ಸು ಗೆದ್ದಿದೆ.

ಶಾಲೆಯಲ್ಲಿ ಪುಟ್ಟ ಹುಡುಗನೊಬ್ಬನ ಹಲ್ಲು ಮುರಿದುಹೋಗಿದ್ದಕ್ಕೆ ಶಿಕ್ಷಕಿ ಅವನನ್ನು ಸಮಾಧಾನಿಸುವ ಸಲುವಾಗಿ ಒಂದು ಪತ್ರ ಬರೆದಿದ್ದಾರೆ. ಕಿನ್ನರಿ ಇವನ ಹಲ್ಲಿಗೆ ಪ್ರತಿಯಾಗಿ ಉಡುಗೊರೆ ಕೊಡು ಎಂದು ಬರೆದಿರುವ ಪತ್ರದ ಭಾವಾನುವಾದ ಇಲ್ಲಿದೆ.

——-

ಹಾರ್ಟ್​ ಹೈಲ್ಯಾಂಡ್ಸ್​ ಎಲಿಮೆಂಟರಿ ಸ್ಕೂಲ್​

ಪ್ರಿಯ ಕಿನ್ನರಿ,

ಇಂದು ನಮ್ಮ ಪುಟ್ಟ ಗೇವಿನ್​ ಮಧ್ಯಾಹ್ನದ ಊಟಕ್ಕೆ ತಯಾರಾಗುತ್ತಿದ್ದ ಹೊತ್ತಿನಲ್ಲೇ ಅವನ ಒಂದು ಹಲ್ಲು ಕಳಚಿ ಬಿದ್ದಿದೆ. ಅದು ತರಗತಿಯಲ್ಲೇ ಉದುರಿಹೋಗಿದೆಯಾದರೂ ನಮ್ಮ ತಂಡದ ಶತಾಯುಗತಾಯ ಪ್ರಯತ್ನದ ನಂತರವೂ ಹಲ್ಲನ್ನು ಹುಡುಕೋದು ಸಾಧ್ಯವಾಗಲೇ ಇಲ್ಲ. ಅವನಿಗೆ ಹಲ್ಲು ಹುಡುಕಿ ಕೊಡುವುದರಲ್ಲಿ ನಾವು ಸೋತು ಹೋಗಿದ್ದೇವೆ.

ಬೆಳಗ್ಗೆ ಗೇವಿನ್​ ಶಾಲೆಗೆ ಬರುವಾಗ ಅವನ ಹಲ್ಲುಗಳು ಸರಿಯಾಗಿಯೇ ಇದ್ದವು. ಆದರೆ, ಮಧ್ಯಾಹ್ನ ಆಗುವಷ್ಟರಲ್ಲಿ ಅದು ಹೇಗೋ ಏನೋ ಹಲ್ಲುಗಳ ನಡುವೆ ಪುಟಾಣಿ ಅಂತರ ಕಾಣಿಸಿಕೊಂಡಿದೆ. ಒಬ್ಬ ಅನುಭವಿ ಶಿಕ್ಷಕಿ ಮತ್ತು ಹವ್ಯಾಸಿ ದಂತ ವೈದ್ಯಳಾಗಿರುವ ನಾನು ಇದನ್ನು ಖಂಡಿತವಾಗಿಯೂ ದೃಢಪಡಿಸಬಲ್ಲೆ.

ದಯವಿಟ್ಟು ನನ್ನ ಈ ಪತ್ರವನ್ನು ಗೇವಿನ್​ನ ಹಲ್ಲು ಕಳೆದು ಹೋಗಿರುವುದಕ್ಕೆ ಸಾಕ್ಷಿಯೆಂದು ಪರಿಗಣಿಸು ಮತ್ತು ಆ ಹಲ್ಲು ತೆಗೆದುಕೊಂಡಿರುವುದಕ್ಕೆ ಪ್ರತಿಯಾಗಿ ಈ ಪುಟಾಣಿಗೆ ನೀನು ಬೇರೆಯವರಿಗೆ ಕೊಡುವಂತೆಯೇ ಉಡುಗೊರೆ ರೂಪದಲ್ಲಿ ಹಣವನ್ನು ಕೊಟ್ಟುಬಿಡು.

ನಿನಗೆ ಇದರ ಬಗ್ಗೆ ಏನೇ ಅನುಮಾನವಿದ್ದರೂ ಮೇಲಿರುವ ವಿಳಾಸದ ಮೂಲಕ ನನ್ನನ್ನು ಧಾರಾಳವಾಗಿ ಸಂಪರ್ಕಿಸು.

ಇಂತಿ ನಿನ್ನ ವಿಶ್ವಾಸಿ, ಶಾಂಡೀ ಎಂ ವೈಟ್​ಹೆಡ್

ವಿಶೇಷ ಸೂಚನೆ: ನಾನು 2000ನೇ ಇಸವಿಯಲ್ಲಿ ಕಳೆದುಕೊಂಡ ಬುದ್ಧಿವಂತ ಹಲ್ಲಿಗೆ ನೀನಿನ್ನೂ ದುಡ್ಡು ಕೊಡುವುದು ಬಾಕಿಯಿದೆ. ಅದಕ್ಕಾಗಿ ನಾನು ಕಾಯುತ್ತಲೇ ಇದ್ದೇನೆ. ಆದಷ್ಟು ಬೇಗ ನನಗೂ ದುಡ್ಡು ಕೊಡು. ನನಗೆ ನನ್ನದೇ ಆದ ಖರ್ಚಿದೆ!

ಓದು ಮಗು ಓದು: ಯಾವ ಪುಸ್ತಕವದು ಅನನ್ಯಳನ್ನು ಅಮೆರಿಕಕ್ಕೆ ಕರೆದೊಯ್ದಿದ್ದು?

Published On - 6:58 pm, Sat, 16 January 21

Follow Us
ರಾಷ್ಟ್ರಪತಿಗಳ ಗಮನಸೆಳೆದ ಕರಗ: ದ್ರೌಪದಿ ಮುರ್ಮು ಹೇಳಿದ್ದೇನು ಗೊತ್ತಾ?
ರಾಷ್ಟ್ರಪತಿಗಳ ಗಮನಸೆಳೆದ ಕರಗ: ದ್ರೌಪದಿ ಮುರ್ಮು ಹೇಳಿದ್ದೇನು ಗೊತ್ತಾ?
ಮೊದಲ ಪಂದ್ಯದಲ್ಲಿ ಗೋಲ್ಡನ್ ಡಕ್​ಗೆ ಬಲಿಯಾದ ಕೆಎಲ್ ರಾಹುಲ್
ಮೊದಲ ಪಂದ್ಯದಲ್ಲಿ ಗೋಲ್ಡನ್ ಡಕ್​ಗೆ ಬಲಿಯಾದ ಕೆಎಲ್ ರಾಹುಲ್
ಚಂಡೀಗಢದ ಬಿಜೆಪಿ ಕಚೇರಿಯ ಹೊರಗೆ ಗ್ರೆನೇಡ್ ಸ್ಫೋಟ; ವಿಡಿಯೋ ಇಲ್ಲಿದೆ
ಚಂಡೀಗಢದ ಬಿಜೆಪಿ ಕಚೇರಿಯ ಹೊರಗೆ ಗ್ರೆನೇಡ್ ಸ್ಫೋಟ; ವಿಡಿಯೋ ಇಲ್ಲಿದೆ
ನೀವು ಯಾಕೆ ಚುನಾವಣೆಯಲ್ಲಿ ಸ್ಪರ್ಧಿಸಲ್ಲ? ನೇರವಾಗಿ ಉತ್ತರಿಸಿದ ಉಪೇಂದ್ರ
ನೀವು ಯಾಕೆ ಚುನಾವಣೆಯಲ್ಲಿ ಸ್ಪರ್ಧಿಸಲ್ಲ? ನೇರವಾಗಿ ಉತ್ತರಿಸಿದ ಉಪೇಂದ್ರ
ಮೊದಲ ಪಂದ್ಯದಲ್ಲೇ ರಿಷಭ್ ಪಂತ್​ಗೆ ಕೈಕೊಟ್ಟ ಅದೃಷ್ಟ
ಮೊದಲ ಪಂದ್ಯದಲ್ಲೇ ರಿಷಭ್ ಪಂತ್​ಗೆ ಕೈಕೊಟ್ಟ ಅದೃಷ್ಟ
ದಾವಣಗೆರೆಗೆ ಬಂದ ಸಿದ್ದರಾಮಯ್ಯಗೆ ಪ್ರೀತಿಯಿಂದ ಕ್ಲಾಸ್ ತೆಗೆದುಕೊಂಡ ಅಭಿಮಾನಿ
ದಾವಣಗೆರೆಗೆ ಬಂದ ಸಿದ್ದರಾಮಯ್ಯಗೆ ಪ್ರೀತಿಯಿಂದ ಕ್ಲಾಸ್ ತೆಗೆದುಕೊಂಡ ಅಭಿಮಾನಿ
ಟೋಲ್‌ನಲ್ಲಿ ಹೊಸ ನಿಯಮ ಪರಿಣಾಮ: ಫಾಸ್ಟ್‌ಟ್ಯಾಗ್​ಗೆ ಹೆಚ್ಚಿದ ಬೇಡಿಕೆ
ಟೋಲ್‌ನಲ್ಲಿ ಹೊಸ ನಿಯಮ ಪರಿಣಾಮ: ಫಾಸ್ಟ್‌ಟ್ಯಾಗ್​ಗೆ ಹೆಚ್ಚಿದ ಬೇಡಿಕೆ
ಯಮರಾಜನನ್ನು ಭೇಟಿಯಾದ ರಾಹುಲ್ ಗಾಂಧಿ
ಯಮರಾಜನನ್ನು ಭೇಟಿಯಾದ ರಾಹುಲ್ ಗಾಂಧಿ
ಮಹಿಳಾ ಉದ್ಯೋಗಿಯ ತುಟಿಗೆ ಚುಂಬಿಸಲು ಹೋದ ಕಾಮುಕ: ವೀಡಿಯೋ ವೈರಲ್
ಮಹಿಳಾ ಉದ್ಯೋಗಿಯ ತುಟಿಗೆ ಚುಂಬಿಸಲು ಹೋದ ಕಾಮುಕ: ವೀಡಿಯೋ ವೈರಲ್
ಜನಗಣತಿ: ಸ್ವಯಂ ಗಣತಿ ಹೇಗೆ ಮಾಡುವುದು? ಸಾರ್ವಜನಿಕರು ಭಾಗಿಯಾಗೋದು ಹೇಗೆ?
ಜನಗಣತಿ: ಸ್ವಯಂ ಗಣತಿ ಹೇಗೆ ಮಾಡುವುದು? ಸಾರ್ವಜನಿಕರು ಭಾಗಿಯಾಗೋದು ಹೇಗೆ?