AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತನ್ನ ಏಜೆಂಟ್​ಗಳನ್ನು ಎಡಿಟರ್​ಗಳಾಗಿ ನೇಮಕ ಮಾಡಿ ವಿಕಿಪೀಡಿಯಾ ಕಂಟೆಂಟ್ ಗಳಲ್ಲಿ ಹಸ್ತಕ್ಷೇಪ ಮಾಡುವುದನ್ನು ಸೌದಿ ಅರೇಬಿಯ ಮುಂದುವರಿಸಿದೆ: ವರದಿ

ಇದಕ್ಕೂ ಮುನ್ನ, ವಿಕಿಪೀಡಿಯದ ಮಾತೃಸಂಸ್ಥೆಯಾಗಿರುವ ವಿಕಿಮೀಡಿಯ ಸೌದಿ ಅರೇಬಿಯಾದಲ್ಲಿದ್ದ ತನ್ನ ಆಡಳಿತಾಧಿಕಾರಿಗಳನ್ನು ಕೆಲಸದಿಂದ ವಜಾ ಮಾಡಿತ್ತು.

ತನ್ನ ಏಜೆಂಟ್​ಗಳನ್ನು ಎಡಿಟರ್​ಗಳಾಗಿ ನೇಮಕ ಮಾಡಿ ವಿಕಿಪೀಡಿಯಾ ಕಂಟೆಂಟ್ ಗಳಲ್ಲಿ ಹಸ್ತಕ್ಷೇಪ ಮಾಡುವುದನ್ನು ಸೌದಿ ಅರೇಬಿಯ ಮುಂದುವರಿಸಿದೆ: ವರದಿ
ಸೌದಿ ಅರೇಬಿಯಾದ ರಾಜಕುಮಾರ ಮೊಹಮ್ಮದ್ ಬಿನ್ ಸಲ್ಮಾನ್
Follow us
TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Jan 06, 2023 | 7:00 PM

ಸೌದಿ ಅರೇಬಿಯಾ ಸರ್ಕಾರವು (Saudi Arabia) ಸಂಸ್ಥೆಯ ಉನ್ನತ ಱಂಕಿನ ಅಡಳಿತಾಧಿಕಾರಿಗಳನ್ನು ನೇಮಿಸಿ ವಿಕಿಪಿಡಿಯಾದಲ್ಲಿ (Wikipedia) ಹಸ್ತಕ್ಷೇಪ ಮಾಡುವುದನ್ನು ಮುಂದುವರಿಸಿದೆ. ವೆಬ್ ಸೈಟ್ ನಲ್ಲಿ ಲಭ್ಯವಿರುವ ಸಾರಾಂಶದ (content) ಮೇಲೆ ಹಿಡಿತ ಸಾಧಿಸುವ ಉದ್ದೇಶದಿಂದ ಅದು ಹಾಗೆ ಮಾಡುತ್ತಿದೆ ಅನ್ನೋದು ವರದಿಯೊಂದರ ಮೂಲಕ ಬಯಲಾಗಿದೆ. ಸೌದಿ ಅರೇಬಿಯ ಸರ್ಕಾರವು ವಿಕಿಪಿಡಿಯಾದಲ್ಲಿ ಕೆಲಸ ಮಾಡುತ್ತಿದ್ದ ತನ್ನ ಇಬ್ಬರು ಅಧಿಕಾರಿಗಳಾದ ಒಸಾಮಾ ಖಾಲಿದ್ ಮತ್ತು ಜಿಯಾದ್ ಅಲ್-ಸೊಫಿಯಾನಿರನ್ನು ಸಾರ್ವಜನಿಕ ಅಭಿಪ್ರಾಯವನ್ನು ಕಡೆಗಣಿಸಿದ ಮತ್ತು ಸಾರ್ವಜನಿಕ ನೈತಿಕತೆಯನ್ನು ಉಲ್ಲಂಘಿಸಿದ ಅರೋಪದಲ್ಲಿ ಜೈಲಿಗೆ ತಳ್ಳಿದೆ.

ಅವರಿಬ್ಬರಿಗೆ ಕ್ರಮವಾಗಿ 5 ಮತ್ತು 8 ವರ್ಷ ಸೆರೆವಾಸದ ಶಿಕ್ಷೆಯನ್ನು ವಿಧಿಸಲಾಗಿದೆ. ದೇಶದ ಕೆಲವು ರಾಜಕೀಯ ಕಾರ್ಯರ್ತರ ಬಗ್ಗೆ ಮಹತ್ತರವಾದ ಮಾಹಿತಿ ಶೇರ್ ಮಾಡಿದ ಆರೋಪದಲ್ಲಿ ಅವರನ್ನು ಜೈಲಿಗೆ ಹಾಕಲಾಗಿದೆ ಎಂದು ವರದಿ ಹೇಳಿದೆ. ಅವರ ಬಂಧನದ ನಂತರ ಸೌದಿ ಅರೇಬಿಯ ಸರ್ಕಾರವು ಸಂಸ್ಥೆಯ ಉನ್ನತ ಱಂಕಿನ ಆಡಳಿತಾಧಿಕಾರಿಗಳನ್ನು ನೇಮಕ ಮಾಡಿಕೊಂಡು ದೇಶದ ಬಗೆಗಿನ ಮಾಹಿತಿ ಮೇಲೆ ನಿಯಂತ್ರಣ ಸಾಧಿಸಲು ವಿಕಿಪೀಡಿಯ ವೆಬ್ ಸೈಟ್ ನಲ್ಲಿ ಹಸ್ತಕ್ಷೇಪ ಮಾಡುವುದನ್ನು ಮುಂದುವರಿಸಿದೆ.

ಇದನ್ನೂ ಓದಿ:  ಬನ್ನೇರುಘಟ್ಟ ಪ್ರದೇಶದಲ್ಲಿ ಹೆದ್ದಾರಿ ಬೇಡ ಎಂಬ ಮನವಿಗೆ ಒಪ್ಪಿದ ಕೇಂದ್ರ ಸಚಿವ ನಿತಿನ್ ಗಡ್ಕರಿ: ಸಿಎಂ ಬೊಮ್ಮಾಯಿ

ಇದಕ್ಕೂ ಮುನ್ನ, ವಿಕಿಪೀಡಿಯದ ಮಾತೃಸಂಸ್ಥೆಯಾಗಿರುವ ವಿಕಿಮೀಡಿಯ ಸೌದಿ ಅರೇಬಿಯಾದಲ್ಲಿದ್ದ ತನ್ನ ಆಡಳಿತಾಧಿಕಾರಿಗಳನ್ನು ಕೆಲಸದಿಂದ ವಜಾ ಮಾಡಿತ್ತು.

‘ಸೌದಿ ಅರೇಬಿಯ ಸರ್ಕಾರವು ತಾವು ಹೇಳಿದ ಹಾಗೆ ಕೇಳದ ಸಂಪಾದಕರನ್ನು ಜೈಲಿಗೆ ಹಾಕಿ ತನ್ನ ಏಜೆಂಟ್ ಗಳನ್ನು ಸ್ವತಂತ್ರವಾದ ಸಂಪಾದಕರ ಹಾಗೆ ವರ್ತಿಸಲು ಬಿಟ್ಟು ವಿಕಿಪಿಡಿಯಾದಲ್ಲಿ ಹಸ್ತಕ್ಷೇಪ ಮಾಡುವುದನ್ನು ಮುಂದುವರಿಸಿ ವೆಬ್ ಸೈಟ್ ನಲ್ಲಿರುವ ವಿಷಯಗಳನ್ನು ತನಗೆ ಬೇಕಾದ ರೀತಿಯಲ್ಲಿ ತಿರುಚಿಕೊಳ್ಳುತ್ತಿದೆ. ಇದೊಂದು ಕೆಟ್ಟ ಸಂಸ್ಕೃತಿ. ಅಂತರರಾಷ್ಟ್ರೀಯ ಸಂಸ್ಥೆಗಳಲ್ಲಿ ತನ್ನ ಗೂಢಚಾರರನ್ನು ಬಿಟ್ಟು ತನಗೆ ಬೇಕಾದ ಹಾಗೆ ಸ್ವತಂತ್ರವಾದ ಕಂಟೆಂಟ್ ತಯಾರಿಸಿಕೊಳ್ಳುವುದನ್ನು ಸೌದಿ ಅರೇಬಿಯಾ ಸರ್ಕಾರ ಮಾಡುತ್ತಿದೆ,’ ಎಂದು ಡಾನ್ ಮಾಧ್ಯಮದ ಕಾರ್ಯನಿರ್ವಾಹಕ ನಿರ್ದೇಶಕಿ ಸಾರಾ ಲೇಹ್ ವಿಟ್ಸನ್ ಹೇಳಿದ್ದಾರೆ.

ಇದನ್ನೂ ಓದಿ: Covid Guidelines: ವಿದೇಶದಿಂದ ಬರುವವರಿಗೆ ಕೋವಿಡ್ ಮಾರ್ಗಸೂಚಿ ಪರಿಷ್ಕರಣೆ, ಇಲ್ಲಿದೆ ಮಾಹಿತಿ

ಕಂಟೆಂಟ್ ಗಳಿಗಾಗಿ ವಿಕಿಪೀಡಿಯ ವಲಂಟೀಯರ್ ಗಳ ಮೇಲೆ ಅತುಕೊಂಡಿದ್ದು, ಅವರು ಅಡ್ಮಿನಿಸ್ಟ್ರೇಟರ್ಸ್ ಮತ್ತ ಎಡಿಟರ್ ಗಳಾಗಿ ಉಚಿತ ಸೇವೆ ಒದಗಿಸುತ್ತಾರೆ. ವಿಕಿಮೀಡಿಯ ಅವರ ಸೇವೆಯನ್ನು ಅಧಿಕೃತತಗೊಳಿಸದ ನಂತರ ಅವರನ್ನು ವಿಕಿಪೀಡಿಯಾ ಯೂಸರ್ಸ್ ಅಂತ ಕರೆಯಲಾಗುತ್ತದೆ. ಈ ಯೂಸರ್ಸ್ ವಿಕಿಮಮೀಡಿಯಾದ ಉದ್ಯೋಗಿಗಳಲ್ಲ ಮತ್ತು ಆಗಲೇ ಹೇಳಿದಂತೆ ವಿಕಿಮೀಡಿಯಾ ಅವರಿಗೆ ಯಾವುದೇ ರೀತಿಯ ಸಂಭಾವನೆ, ಗೌರವ ಧನ ನೀಡುವುದಿಲ್ಲ. ಅದರೆ ಸಂಸ್ಥೆಯು ಅವರಿಗೆ ಸ್ವತಂತ್ರ ಎಡಿಟರ್ ಗಳಾಗಿ ಕೆಲಸ ಮಾಡುವ ಅವಕಾಶ ಕಲ್ಪಿಸುತ್ತದೆ ಮತ್ತು ಕಂಟೆಂಟನ್ನು ಎಡಿಟ್ ಮಾಡುವ ಮತ್ತು ಹೊಸ ಕಂಟೆಂಟ್ ಸೇರಿಸುವ ಸ್ವಾತಂತ್ರ್ಯ ನೀಡುತ್ತದೆ.

ಮತ್ತಷ್ಟು ವಿದೇಶ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮತದಾರರ ಪರಿಷ್ಕೃತ ಪಟ್ಟಿ ನೀಡಲು ತಡವಾಗಿದ್ದಕ್ಕೆ ಶಾಸಕನಿಗೆ ಅಸಮಾಧಾನ
ಮತದಾರರ ಪರಿಷ್ಕೃತ ಪಟ್ಟಿ ನೀಡಲು ತಡವಾಗಿದ್ದಕ್ಕೆ ಶಾಸಕನಿಗೆ ಅಸಮಾಧಾನ
ಡಾ. ರಾಜ್ ಬಗ್ಗೆ ಅವಹೇಳನಕಾರಿ ಮಾತು: ಆರ್​ಜಿವಿಗೆ ಸಾರಾ ಗೋವಿಂದು ಕ್ಲಾಸ್​
ಡಾ. ರಾಜ್ ಬಗ್ಗೆ ಅವಹೇಳನಕಾರಿ ಮಾತು: ಆರ್​ಜಿವಿಗೆ ಸಾರಾ ಗೋವಿಂದು ಕ್ಲಾಸ್​
ಕುಕ್ಕೆ ದೇಗುಲ ಸೇರಿ ಸರ್ಕಾರದ 3 ಸಾವಿರ ರೂಮ್​​​ ಆನ್​​ ಲೈನ್​ ಬುಕ್ಕಿಂಗ್
ಕುಕ್ಕೆ ದೇಗುಲ ಸೇರಿ ಸರ್ಕಾರದ 3 ಸಾವಿರ ರೂಮ್​​​ ಆನ್​​ ಲೈನ್​ ಬುಕ್ಕಿಂಗ್
ಬಿಜೆಪಿ ನಿಯೋಗದ ನಾಯಕತ್ವ ವಹಿಸಿದ್ದ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ
ಬಿಜೆಪಿ ನಿಯೋಗದ ನಾಯಕತ್ವ ವಹಿಸಿದ್ದ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ
ಸರ್ಕಾರವನ್ನು ದೂರಿ ಏನು ಪ್ರಯೋಜನ ಎಂದ ಅಶಯ್ ಅಂಬಲಿ ತಂದೆ
ಸರ್ಕಾರವನ್ನು ದೂರಿ ಏನು ಪ್ರಯೋಜನ ಎಂದ ಅಶಯ್ ಅಂಬಲಿ ತಂದೆ
ಯಾರು ಹೊಣೆ ಅಂತ ಗೊತ್ತಾಗಲು ಇನ್ನೂ 15 ದಿನ ಕಾಯಬೇಕು: ಜಾರಕಿಹೊಳಿ
ಯಾರು ಹೊಣೆ ಅಂತ ಗೊತ್ತಾಗಲು ಇನ್ನೂ 15 ದಿನ ಕಾಯಬೇಕು: ಜಾರಕಿಹೊಳಿ
ಅವನಿಗೆ 25, ಅವಳಿಗೆ 36..OYO ರೂಂಗೆ ಕರೆದೊಯ್ದು ಹತ್ಯೆ: ಅಸಲಿ ಕಾರಣವೇನು?
ಅವನಿಗೆ 25, ಅವಳಿಗೆ 36..OYO ರೂಂಗೆ ಕರೆದೊಯ್ದು ಹತ್ಯೆ: ಅಸಲಿ ಕಾರಣವೇನು?
ಕಳ್ಳನ ಕರಾಮತ್ತು ಸಿಸಿಟಿವಿ ಕೆಮೆರಾದಲ್ಲಿ ಸೆರೆ, ಪೊಲೀಸರಿಗೆ ಅದೇ ಕ್ಲೂ!
ಕಳ್ಳನ ಕರಾಮತ್ತು ಸಿಸಿಟಿವಿ ಕೆಮೆರಾದಲ್ಲಿ ಸೆರೆ, ಪೊಲೀಸರಿಗೆ ಅದೇ ಕ್ಲೂ!
ಡಿಸಿಪಿಗಳ ಜತೆ ಚರ್ಚಿಸಿ ಆರ್​ಸಿಬಿಗೆ ಸತ್ಕಾರ ಕೂಟ ಏರ್ಪಡಿಸಲಾಗಿತ್ತು: ಜೋಶಿ
ಡಿಸಿಪಿಗಳ ಜತೆ ಚರ್ಚಿಸಿ ಆರ್​ಸಿಬಿಗೆ ಸತ್ಕಾರ ಕೂಟ ಏರ್ಪಡಿಸಲಾಗಿತ್ತು: ಜೋಶಿ
ಜನಸಂದಣಿ ಕಂಡು ಕನ್ನಡಿಗರಿಗಾದಂತೆ ಜನಪ್ರತಿನಿಧಿಗಳಿಗೆ ಗಾಬರಿ ಆಗುತ್ತಿಲ್ಲ
ಜನಸಂದಣಿ ಕಂಡು ಕನ್ನಡಿಗರಿಗಾದಂತೆ ಜನಪ್ರತಿನಿಧಿಗಳಿಗೆ ಗಾಬರಿ ಆಗುತ್ತಿಲ್ಲ