AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಪಕ್ಷಗಳ ಟೀಕೆಯ ಬೆನ್ನಲ್ಲೇ ಜಿ7 ಶೃಂಗಸಭೆಗೆ ಕೆನಡಾದಿಂದ ಮೋದಿಗೆ ಆಹ್ವಾನ

ಕೆನಡಾದ ಪ್ರಧಾನಿಯವರ ಆಹ್ವಾನದ ಮೇರೆಗೆ ಜಿ7 ಶೃಂಗಸಭೆಯಲ್ಲಿ ಭಾಗವಹಿಸುವುದಾಗಿ ಪ್ರಧಾನಿ ಮೋದಿ ದೃಢಪಡಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರನ್ನು ಜಿ7 ಶೃಂಗಸಭೆಗೆ ಆಹ್ವಾನಿಸಿಲ್ಲ ಎಂದು ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷಗಳು ಆರೋಪಿಸಿದ್ದವು. ಕಾಂಗ್ರೆಸ್ ಇದನ್ನು 'ರಾಜತಾಂತ್ರಿಕ ಪ್ರಮಾದ' ಎಂದು ಕರೆದಿತ್ತು. ಇದರ ನಡುವೆ ಭಾರತದ ಪ್ರಧಾನಿ ಮೋದಿಗೆ ಕೆನಡಾದ ಪ್ರಧಾನಿ ಮಾರ್ಕ್ ಕಾರ್ನಿ ಅವರಿಂದ ಕರೆ ಬಂದಿದೆ.

ವಿಪಕ್ಷಗಳ ಟೀಕೆಯ ಬೆನ್ನಲ್ಲೇ ಜಿ7 ಶೃಂಗಸಭೆಗೆ ಕೆನಡಾದಿಂದ ಮೋದಿಗೆ ಆಹ್ವಾನ
Pm Modi
ಸುಷ್ಮಾ ಚಕ್ರೆ
|

Updated on: Jun 06, 2025 | 8:55 PM

Share

ನವದೆಹಲಿ, ಜೂನ್ 6: ಪ್ರಧಾನಿ ನರೇಂದ್ರ ಮೋದಿ (Narendra Modi) ಹೊಸದಾಗಿ ಆಯ್ಕೆಯಾದ ಕೆನಡಾದ ಪ್ರಧಾನಿ ಮಾರ್ಕ್ ಕಾರ್ನಿ ಅವರೊಂದಿಗೆ ಇಂದು ದೂರವಾಣಿ ಸಂಭಾಷಣೆ ನಡೆಸಿದ್ದಾರೆ. ಈ ಸಮಯದಲ್ಲಿ ಅವರು ಇತ್ತೀಚಿನ ಚುನಾವಣಾ ವಿಜಯಕ್ಕಾಗಿ ಮಾರ್ಕ್ ಕಾರ್ನಿ (Mark Carney)  ಅವರನ್ನು ಅಭಿನಂದಿಸಿದ್ದಾರೆ. ಇದೇ ವೇಳೆ ಈ ತಿಂಗಳ ಕೊನೆಯಲ್ಲಿ ಕನನಾಸ್ಕಿಸ್‌ನಲ್ಲಿ ನಡೆಯಲಿರುವ ಜಿ7 ಶೃಂಗಸಭೆಯಲ್ಲಿ ಭಾಗವಹಿಸಲು ಕೆನಡಾ ಪ್ರಧಾನಿ ಆಹ್ವಾನಿಸಿದ್ದಾರೆ. ಈ ಬಗ್ಗೆ ಎಕ್ಸ್​ನಲ್ಲಿ ಪೋಸ್ಟ್ ಮಾಡಿರುವ ಪ್ರಧಾನಿ ಮೋದಿ, “ಕೆನಡಾದ ಪ್ರಧಾನಿ ಮಾರ್ಕ್ ಕಾರ್ನಿ ಅವರಿಂದ ಕರೆ ಸ್ವೀಕರಿಸಿದ್ದಕ್ಕೆ ಸಂತೋಷವಾಗಿದೆ. ಅವರ ಇತ್ತೀಚಿನ ಚುನಾವಣಾ ವಿಜಯಕ್ಕಾಗಿ ಅವರನ್ನು ಅಭಿನಂದಿಸಿದ್ದೇನೆ. ಈ ತಿಂಗಳ ಕೊನೆಯಲ್ಲಿ ಕನನಾಸ್ಕಿಸ್‌ನಲ್ಲಿ ನಡೆಯಲಿರುವ ಜಿ7 ಶೃಂಗಸಭೆಗೆ ಆಹ್ವಾನ ನೀಡಿದ್ದಕ್ಕಾಗಿ ಅವರಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ” ಎಂದು ಪೋಸ್ಟ್ ಮಾಡಿದ್ದಾರೆ.

ಭಾರತ ಮತ್ತು ಕೆನಡಾ ನಡುವಿನ ಹದಗೆಟ್ಟ ದ್ವಿಪಕ್ಷೀಯ ಸಂಬಂಧಗಳ ಕಾರಣದಿಂದಾಗಿ ಭಾರತವನ್ನು ಶೃಂಗಸಭೆಗೆ ಆಹ್ವಾನಿಸಲಾಗಿಲ್ಲ ಎಂಬ ವಿಪಕ್ಷಗಳ ಆರೋಪದ ನಡುವೆಯೇ ಈ ಆಹ್ವಾನ ಬಂದಿದೆ. ಭಾರತವನ್ನು ಆಹ್ವಾನಿಸಲಾಗಿಲ್ಲ ಎಂದು ಹಲವಾರು ಮಾಧ್ಯಮಗಳು ವರದಿಗಳನ್ನು ಪ್ರಕಟಿಸಿದ್ದವು. ಇದರಿಂದ ಕಾಂಗ್ರೆಸ್ ಪಕ್ಷ ಮೋದಿ ಸರ್ಕಾರದ ಮೇಲೆ ವಾಗ್ದಾಳಿ ನಡೆಸಿತ್ತು.

ಇದನ್ನೂ ಓದಿ
Image
ವಿಮಾನಕ್ಕೆ ಹದ್ದು ಡಿಕ್ಕಿಯಾಗಿ ತುರ್ತು ಭೂಸ್ಪರ್ಶ; 175 ಪ್ರಯಾಣಿಕರು ಪಾರು
Image
ರಷ್ಯಾದಿಂದ ಬಾಕಿ ಎಸ್-400 ಕ್ಷಿಪಣಿ ವ್ಯವಸ್ಥೆಗಳು ಭಾರತಕ್ಕೆ 2026ಕ್ಕೆ ಲಭ್ಯ
Image
ಉಕ್ರೇನ್‌ ಡ್ರೋನ್ ದಾಳಿಯಲ್ಲಿ ಯುದ್ಧ ವಿಮಾನ ಪತನದ ಬಗ್ಗೆ ಮೌನ ಮುರಿದ ರಷ್ಯಾ
Image
ಪಾಕಿಸ್ತಾನ ಭಿಕ್ಷಾ ಪಾತ್ರೆ ಹಿಡಿದು ದೇಶಗಳ ಸುತ್ತುತ್ತಿದೆ

ಇದನ್ನೂ ಓದಿ: ಟ್ರಂಪ್ ಜೊತೆಗಿನ ಮುನಿಸಿನ ಬೆನ್ನಲ್ಲೇ ಹೊಸ ರಾಜಕೀಯ ಪಕ್ಷದ ಸುಳಿವು ನೀಡಿದ ಎಲಾನ್ ಮಸ್ಕ್

ಜೂನ್ 5ರಂದು ಬ್ಲೂಮ್‌ಬರ್ಗ್ “ಕೆನಡಾ ಸಂಬಂಧಗಳ ಹದಗೆಟ್ಟ ಸಂಕೇತವಾಗಿ ಮೋದಿಯನ್ನು ಜಿ -7 ಶೃಂಗಸಭೆಗೆ ಆಹ್ವಾನಿಸಲಾಗಿಲ್ಲ” ಎಂದು ಪ್ರಕಟಿಸಿತ್ತು. ದೆಹಲಿಯಲ್ಲಿ ಹೆಸರಿಸದ ಅಧಿಕಾರಿಗಳನ್ನು ಉಲ್ಲೇಖಿಸಿ ವರದಿಯು ಭಾರತದ ಪ್ರಧಾನಿಗೆ ಶೃಂಗಸಭೆಗೆ ಆಹ್ವಾನ ಬಂದಿಲ್ಲ ಎಂದು ಹೇಳಿಕೊಂಡಿತ್ತು. ಸದಸ್ಯರಲ್ಲದವರನ್ನು ಆಹ್ವಾನಿಸುವುದು ಆತಿಥೇಯ ರಾಷ್ಟ್ರದ ಹಕ್ಕು ಎಂದು ಅದು ಹೇಳಿತ್ತು. ಕಾಂಗ್ರೆಸ್ ಕೂಡ ಇದನ್ನು ರಾಜತಾಂತ್ರಿಕ ಪ್ರಮಾದ ಎಂದು ಟೀಕಿಸಿತ್ತು.

“ಜನರಿಂದ ಜನರಿಗೆ ಆಳವಾದ ಸಂಬಂಧಗಳಿಂದ ಬದ್ಧವಾಗಿರುವ ರೋಮಾಂಚಕ ಪ್ರಜಾಪ್ರಭುತ್ವ ರಾಷ್ಟ್ರಗಳಾಗಿ ಭಾರತ ಮತ್ತು ಕೆನಡಾ ಪರಸ್ಪರ ಗೌರವದ ಆಸಕ್ತಿಗಳಿಂದ ಮಾರ್ಗದರ್ಶಿಸಲ್ಪಟ್ಟ ನವೀಕೃತ ಚೈತನ್ಯದೊಂದಿಗೆ ಒಟ್ಟಾಗಿ ಕೆಲಸ ಮಾಡುತ್ತವೆ. ಶೃಂಗಸಭೆಯಲ್ಲಿ ನಮ್ಮ ಭೇಟಿಯನ್ನು ಎದುರು ನೋಡುತ್ತಿದ್ದೇವೆ” ಎಂದು ಮೋದಿ ಹೇಳಿದ್ದಾರೆ.

ಇದನ್ನೂ ಓದಿ: 2026ರ ಏಪ್ರಿಲ್‌ನಲ್ಲಿ ಬಾಂಗ್ಲಾದೇಶದಲ್ಲಿ ಚುನಾವಣೆ; ಮುಹಮ್ಮದ್ ಯೂನಸ್ ಘೋಷಣೆ

ಪ್ರಧಾನಿ ಮಾರ್ಕ್ ಕಾರ್ನಿ ನೇತೃತ್ವದ ಕೆನಡಾ ಸರ್ಕಾರವು ಜೂನ್ 15-17ರಂದು ಆಲ್ಬರ್ಟಾದ ಕನನಾಸ್ಕಿಸ್ ರೆಸಾರ್ಟ್‌ನಲ್ಲಿ ಈ ವರ್ಷದ ಜಿ7 ಶೃಂಗಸಭೆಯನ್ನು ಆಯೋಜಿಸಲು ಸಜ್ಜಾಗಿದೆ. ಕೆನಡಾದ ಕನನಾಸ್ಕಿಸ್‌ನಲ್ಲಿ ನಡೆಯುವ G7 ಶೃಂಗಸಭೆಯು ಪಟ್ಟಣವು ಎರಡನೇ ಬಾರಿಗೆ ಜಾಗತಿಕ ಸಭೆಯನ್ನು ಆಯೋಜಿಸಲಿದೆ. ಮೊದಲನೆಯದು 2002ರಲ್ಲಿ ನಡೆದಿತ್ತು. ಈ ವರ್ಷದ ಶೃಂಗಸಭೆಯು G7ನ 50ನೇ ವಾರ್ಷಿಕೋತ್ಸವದೊಂದಿಗೆ ಹೊಂದಿಕೆಯಾಗುವುದರಿಂದ ವಿಶೇಷವಾಗಿ ಮಹತ್ವದ್ದಾಗಿದೆ. ಇದು ವಿಶ್ವದ ಅತ್ಯಂತ ಮುಂದುವರಿದ ದೇಶಗಳಾದ ಕೆನಡಾ, ಫ್ರಾನ್ಸ್, ಜರ್ಮನಿ, ಇಟಲಿ, ಜಪಾನ್, ಯುನೈಟೆಡ್ ಕಿಂಗ್‌ಡಮ್ ಮತ್ತು ಯುನೈಟೆಡ್ ಸ್ಟೇಟ್ಸ್‌ಗಳನ್ನು ಒಳಗೊಂಡಿರುವ ಒಂದು ಗುಂಪು. ಇದಲ್ಲದೆ, ಯುರೋಪಿಯನ್ ಒಕ್ಕೂಟವು ಇಲ್ಲಿ ಚರ್ಚೆಗಳಲ್ಲಿ ಭಾಗವಹಿಸುತ್ತದೆ.

ಕೆನಡಾದ ನೆಲದಲ್ಲಿ ಸಿಖ್ ಪ್ರತ್ಯೇಕತಾವಾದಿಯ ಹತ್ಯೆಯ ಬಗ್ಗೆ ಹೆಚ್ಚುತ್ತಿರುವ ಉದ್ವಿಗ್ನತೆಯ ನಡುವೆ ಭಾರತ ಮತ್ತು ಕೆನಡಾ ಎರಡೂ ದೇಶಗಳು ತಮ್ಮ ಉನ್ನತ ರಾಜತಾಂತ್ರಿಕರನ್ನು ಹೊರಹಾಕಿದ್ದರಿಂದ ಜಸ್ಟಿನ್ ಟ್ರುಡೊ ಅವರ ಆಡಳಿತದಲ್ಲಿ ಭಾರತ-ಕೆನಡಾ ದ್ವಿಪಕ್ಷೀಯ ಸಂಬಂಧವು ಹದಗೆಟ್ಟಿತು. ಆದರೆ,ಕೆನಡಾದ ಹೊಸ ಪ್ರಧಾನಿ ಮಾರ್ಕ್ ಕಾರ್ನಿ ಅವರ ನಾಯಕತ್ವದಲ್ಲಿ ದ್ವಿಪಕ್ಷೀಯ ಸಂಬಂಧವು ಈಗ ಸುಧಾರಿಸುವ ಸಾಧ್ಯತೆಯಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ