AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Panjshir: ತಾಲಿಬಾನ್ ಪಾಲಿಗೆ ಈವರೆಗೆ ಸವಾಲಾಗಿಯೇ ಉಳಿದಿರುವ ಅಫ್ಘಾನಿಸ್ತಾನದ ಪ್ರತಿರೋಧದ ಕಣಿವೆ ಪಂಜ್​ಶೀರ್​

ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ವಿರೋಧಿ ಬಣದ ಬಹುತೇಕ ಹೋರಾಟಗಾರರು ಪಂಜ್​ಶೀರ್​ಗೆ ಧಾವಿಸಿದ್ದು, ಪ್ರಬಲ ಪ್ರತಿರೋಧ ತೋರಲು ಸಜ್ಜಾಗಿದ್ದಾರೆ.

Panjshir: ತಾಲಿಬಾನ್ ಪಾಲಿಗೆ ಈವರೆಗೆ ಸವಾಲಾಗಿಯೇ ಉಳಿದಿರುವ ಅಫ್ಘಾನಿಸ್ತಾನದ ಪ್ರತಿರೋಧದ ಕಣಿವೆ ಪಂಜ್​ಶೀರ್​
ಅಫ್ಘಾನಿಸ್ತಾನದ ಆಂತರಿಕ ವಿದ್ಯಮಾನವನ್ನು ವಿಶ್ವ ಕುತೂಹಲದಿಂದ ಗಮನಿಸುತ್ತಿದೆ
TV9 Web
| Edited By: |

Updated on:Aug 23, 2021 | 6:21 PM

Share

ಅಫ್ಘಾನಿಸ್ತಾನದ ಪಂಜ್​ಶೀರ್​ ಕಣಿವೆಯಲ್ಲಿ ನಿರ್ಣಾಯಕ ಯುದ್ಧಕ್ಕೆ ಭೂಮಿಕೆ ಸಿದ್ಧವಾಗಿದೆ. ಈ ಕಣಿವೆಯು ಈ ಹಿಂದೆ ಎಂದಿಗೂ ತಾಲಿಬಾನ್ ಅಧೀನಕ್ಕೆ ಬಂದಿರಲಿಲ್ಲ. ಇದೀಗ ಕಣಿವೆಗೆ ತಾಲಿಬಾನ್ ನೂರಾರು ಹೋರಾಟಗಾರರನ್ನು ರವಾನಿಸಿದೆ. ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ವಿರೋಧಿ ಬಣದ ಬಹುತೇಕ ಹೋರಾಟಗಾರರು ಪಂಜ್​ಶೀರ್​ಗೆ ಧಾವಿಸಿದ್ದು, ಪ್ರಬಲ ಪ್ರತಿರೋಧ ತೋರಲು ಸಜ್ಜಾಗಿದ್ದಾರೆ.

ಕಾಬೂಲ್​ಗೆ 150 ಕಿಮೀ ವಾಯವ್ಯಕ್ಕಿರುವ ಪಂಜ್​ಶೀರ್​ನಲ್ಲಿ ಪದಚ್ಯುತ ಸರ್ಕಾರದ ಉಪಾಧ್ಯಕ್ಷ ಅಮರುಲ್ಲಾ ಸಲೇಹ್, ಮಾಜಿ ರಕ್ಷಣಾ ಸಚಿವ ಬಿಸ್ಮಿಲ್ಲಾ ಮೊಹಮದಿ ಮತ್ತು ನ್ಯಾಷನಲ್ ರೆಸಿಸ್ಟೆನ್ಸ್​ ಫ್ರಂಟ್​ನ ಅಹ್ಮದ್ ಮಸೂದ್​ ಸೇರಿದಂತೆ ಹಲವು ಹಿರಿಯ ಸದಸ್ಯರು ನೆರೆದಿದ್ದಾರೆ.

ತಾಲಿಬಾನ್ ಎದುರು ತಲೆತಗ್ಗಿಸುವುದಿಲ್ಲ ಎಂದು ಸಲೇಹ್ ಈಗಾಗಲೇ ಪ್ರತಿಜ್ಞೆ ಮಾಡಿದ್ದಾರೆ. ಅಶ್ರಫ್ ಘನಿ ಅಫ್ಘಾನಿಸ್ತಾನ ತೊರೆದ ನಂತರ ತಮ್ಮನ್ನು ತಾವು ಅಫ್ಘಾನಿಸ್ತಾನದ ಹಂಗಾಮಿ ಅಧ್ಯಕ್ಷ ಎಂದು ಘೋಷಿಸಿಕೊಂಡಿದ್ದಾರೆ. ಪಂಜ್​ಶೀರ್​ ಕಡೆಗೆ ತಾಲಿಬಾನಿಗಳು ಯೋಧರನ್ನು ರವಾನಿಸುತ್ತಿದ್ದಾರೆ. ಆದರೆ ಅಂದರಾಬ್ ಕಣಿವೆಯಿಂದಲೇ ಅವರು ಹಿಮ್ಮೆಟ್ಟಬೇಕಾಯಿತು. ಸಲಾಂಗ್ ಹೆದ್ದಾರಿಯನ್ನೂ ರೆಸಿಸ್ಟೆನ್ಸ್​ ಫ್ರಂಟ್​ ಮುಚ್ಚಿದೆ. ಈ ಪ್ರದೇಶವನ್ನು ತಾಲಿಬಾನಿಗಳು ಗೆಲ್ಲಲು ಆಗುವುದಿಲ್ಲ ಎಂದು ಸಲೇಹ್ ಸೋಮವಾರ ಟ್ವೀಟ್ ಮಾಡಿದ್ದರು.

ಪಂಜ್​ಶೀರ್ ಕಣಿವೆಯ ಇತಿಹಾಸ ಪಂಜ್​ಶೀರ್ ಎಂದರೆ ಐದು ಸಿಂಹಗಳು ಎಂದರ್ಥ. ಈ ಹೆಸರೇಕೆ ಬಂತು ಎಂದು ಹುಡುಕಿದರೆ 10ನೇ ಶತಮಾನದ ಕೆಲ ಘಟನೆಗಳನ್ನು ಉಲ್ಲೇಖಿಸಬೇಕಾಗುತ್ತದೆ. ಐವರು ಸೋದರರು ಪ್ರವಾಹದ ನೀರನ್ನು ನಿಯಂತ್ರಿಸಲು ಜಲಾಶಯವೊಂದನ್ನು ನಿರ್ಮಿಸಿದರು. ಅಂದು ಅಫ್ಘಾನಿಸ್ತಾನದ ಸುಲ್ತಾನನಾಗಿ ಮೊಹಮದ್ ಘಜ್ನಿ ಆಳ್ವಿಕೆ ನಡೆಸುತ್ತಿದ್ದ. ಈ ಕಣಿವೆಯಲ್ಲಿರುವ 1.50 ಲಕ್ಷ ನಿವಾಸಿಗಳು ತಜಿಕ್ ಬುಡಕಟ್ಟಿಗೆ ಸೇರಿದವರು. ತಾಲಿಬಾನಿಗಳಲ್ಲಿ ಬಹುತೇಕರು ಪಷ್ತೂನ್ ಬುಡಕಟ್ಟಿಗೆ ಸೇರಿದವರೇ ಇದ್ದಾರೆ. ಹೀಗಾಗಿ ಸಾಂಸ್ಕೃತಿಕವಾಗಿಯೂ ಈ ಎರಡು ಸಮುದಾಯಗಳ ನಡುವೆ ತಾಕಲಾಟ ನಡೆಯುತ್ತಲೇ ಇದೆ. ಪಂಜ್​ಶೀರ್​ ಪ್ರಾಂತ್ಯದಲ್ಲಿಯೇ ಜನಿಸಿದ ಸಲೇಹ್ ಇಲ್ಲಿಯೇ ತರಬೇತಿ ಪಡೆದವರು.

ಇಲ್ಲಿ ಎಂದೂ ತಾಲಿಬಾನ್ ಗೆದ್ದಿಲ್ಲ ಪಂಜ್​ಶೀರ್ ಪ್ರಾಂತ್ಯದಲ್ಲಿ ಎಂದಿಗೂ ತಾಲಿಬಾನ್ ಗೆಲುವು ಸಾಧಿಸಿಲ್ಲ. 1990ರ ದಶಕದಲ್ಲಿಯೂ ತಾಲಿಬಾನಿಗಳಿಗೆ ಪಂಜ್​ಶೀರ್​ ಕೈವಶವಾಗಿರಲಿಲ್ಲ. ಅದಕ್ಕೂ ಮೊದಲು ಸೊವಿಯತ್ ರಷ್ಯಾಗೂ ಇಲ್ಲಿ ಜಯ ಸಿಕ್ಕಿರಲಿಲ್ಲ.

ಇದಕ್ಕೆ ಮುಖ್ಯಕಾರಣ ಪಂಜ್​ಶೀರ್​ ಇರುವ ಭೌಗೋಳಿಕ ಪ್ರದೇಶ. ಹಿಂದುಖುಷ್ ಪರ್ವತಶ್ರೇಣಿಯಲ್ಲಿ ಹರಡಿಕೊಂಡಿರುವ ಪಂಜ್​ಶೀರ್ ಕಣಿವೆಗೆ ಇರುವ ಏಕೈಕ ಪ್ರವೇಶ ಸಾಧ್ಯತೆ ಪಂಜ್​ಶೀರ್​ ನದಿ ರೂಪಿಸಿರುವ ಕಿರಿದಾದ ಹಾದಿಗಳು ಮಾತ್ರ. ಹೀಗಾಗಿಯೇ ಇದು ದಾಳಿಕೋರರಿಗೆ ಗೆಲ್ಲಲು ದುಸ್ಸಾಧ್ಯವಾಗಿರುವ ಮತ್ತು ರಕ್ಷಣೆ ಮಾಡಿಕೊಳ್ಳುವವರಿಗೆ ವರದಾನವಾಗಿರುವ ಪ್ರದೇಶ ಎನಿಸಿದೆ. ಈ ಕಣಿವೆಯು ಪಚ್ಚೆಗೂ ಪ್ರಸಿದ್ಧವಾಗಿದೆ. ಈ ಹಿಂದೆ ಇಲ್ಲಿನ ಪಚ್ಚೆಗಳನ್ನು ಮಾರಿಯೇ ಪ್ರತಿರೋಧ ಚಳವಳಿಯನ್ನು ಸಂಘಟಿಸಲಾಗುತ್ತಿತ್ತು.

1989ರಲ್ಲಿ ಸೋವಿಯತ್​ ಸೇನೆ ಹಿಂದೆ ಸರಿದ ನಂತರ ಏನಾಯಿತು? ಸೋವಿಯತ್ ಸೇನೆಯು ಅಫ್ಘಾನಿಸ್ತಾನದಿಂದ ಹಿಂದೆ ಸರಿದ ನಂತರ ಸ್ಫೋಟಗೊಂಡ ಅಂತರ್ಯುದ್ಧದಲ್ಲಿ ತಾಲಿಬಾನ್ ಜಯಗಳಿಸಿತು. ಆದರೆ ಅಫ್ಘಾನಿಸ್ತಾನದಲ್ಲಿ ಮನೆಮಾತಾಗಿರುವ ಅಹ್ಮದ್ ಶಾ ಮಸೂದ್ ಪಂಜ್​ಶೀರ್ ಕಣಿವೆಯನ್ನು ಸುಪರ್ದಿಗೆ ತೆಗೆದುಕೊಂಡು ಸುನ್ನಿ ಪಷ್ತೂನ್ ತಾಲಿಬಾನಿಗಳ ವಿರುದ್ಧ ಪ್ರಬಲ ಪ್ರತಿರೋಧ ಒಡ್ಡಿದರು. ಪಂಜ್​ಶೀರ್ ಕಣಿವೆಯನ್ನು ತಮ್ಮ ಸುಪರ್ದಿಯಲ್ಲಿಯೇ ಉಳಿಸಿಕೊಳ್ಳಲು ಯಶಸ್ವಿಯಾದರು. ಚೀನಾ ಮತ್ತು ತಜಕಿಸ್ತಾನದ ಗಡಿ ಸೇರಿದಂತೆ ಈಶಾನ್ಯ ಅಫ್ಘಾನಿಸ್ತಾನದ ಬಹುತೇಕ ಪ್ರದೇಶಗಳನ್ನು ಮಸೂದ್​ ರಕ್ಷಿಸಿದ್ದರು. 2001ರಲ್ಲಿ ಅಮೆರಿಕ ಮೇಲೆ ದಾಳಿ ನಡೆಯುವ ಕೆಲವೇ ದಿನಗಳಿಗೆ ಮೊದಲ ಅಲ್​ಖೈದಾ ಉಗ್ರಗಾಮಿಗಳು ಮಸೂದ್​ನನ್ನು ಕೊಂದು ಹಾಕಿದ್ದರು.

ಹೋರಾಟದ ಜವಾಬ್ದಾರಿ ವಹಿಸಿಕೊಂಡ ಮಗ ಅಹ್ಮದ್ ಶಾ ಮಸೂದ್​ನ ಮಗ ಅಹ್ಮದ್ ಮಸೂದ್ ಇದೀಗ ತಾಲಿಬಾನ್ ವಿರೋಧಿ ಹೋರಾಟವನ್ನು ಮುನ್ನಡೆಸುತ್ತಿದ್ದಾನೆ. ಹಿಂದಿನ ಸರ್ಕಾರದ ಭಾಗವಾಗಿದ್ದ ಸಲೇಹ್ ಮತ್ತು ಇತರ ಹೋರಾಟಗಾರರು ಇದೀಗ ಅಹ್ಮದ್ ಮಸೂದ್ ಜೊತೆಗೆ ಕೈಜೋಡಿಸಿದ್ದಾರೆ. ಸಲೇಹ್ ಮಸೂದ್​ನ ಆತ್ಮ ಮತ್ತು ಹಿರಿಮೆಗೆ ಎಂದಿಗೂ ಮೋಸ ಮಾಡುವುದಿಲ್ಲ ಎಂದು ಸಲೇಹ್ ಪ್ರತಿಜ್ಞೆ ಮಾಡಿದ್ದಾರೆ. ಮತ್ತೊಂದೆಡೆ ಪಂಜ್​ಶೀರ್ ಕಣಿವೆಯನ್ನು ಈ ಬಾರಿ ಗೆದ್ದು ತೀರಲೇಬೇಕೆಂದು ತಾಲಿಬಾನ್ ಹಟಕ್ಕೆ ಬಿದ್ದಿದೆ. ಹೀಗಾಗಿಯೇ ಮುಂದಿನ ಬೆಳವಣಿಗೆಗಳು ಕುತೂಹಲ ಕೆರಳಿಸಿವೆ.

(Afghanistans valley of resistance Panjshir remains a challenge for Taliban till today)

ಇದನ್ನೂ ಓದಿ: ಮತ್ತೊಂದು ರಕ್ತಸಿಕ್ತ ಅಧ್ಯಾಯ: ತಾಲಿಬಾನ್ ವಿರೋಧಿಗಳ ಹಿಡಿತದಲ್ಲಿರುವ ಪಂಜ್​ಶಿರ್​ ಕಣಿವೆಯತ್ತ ಧಾವಿಸಿದ ಉಗ್ರರು

ಇದನ್ನೂ ಓದಿ: ಅಫ್ಘಾನ್​ ಕ್ರಿಕೆಟರ್​ ಜತೆ ಮದುವೆಗೆ ಸಿದ್ಧವಾಗಿದ್ದ ಬಿಗ್​ ಬಾಸ್​ ಸ್ಪರ್ಧಿ; ತಾಲಿಬಾನ್​ ಭಯದಿಂದ ಸಂಬಂಧಕ್ಕೆ ಎಳ್ಳು-ನೀರು

Published On - 5:11 pm, Mon, 23 August 21

ಕಾಂಬೋಡಿಯಾದಲ್ಲಿ ಬುಲ್ಡೋಜರ್​​​ನಿಂದ ವಿಷ್ಣು ಪ್ರತಿಮೆ ಧ್ವಂಸ
ಕಾಂಬೋಡಿಯಾದಲ್ಲಿ ಬುಲ್ಡೋಜರ್​​​ನಿಂದ ವಿಷ್ಣು ಪ್ರತಿಮೆ ಧ್ವಂಸ
ಬಿಗ್ ಬಾಸ್ ಕನ್ನಡ 12: ಸ್ಪಂದನಾ ಬಾಲ್ಯದ ಶಾಕಿಂಗ್ ಘಟನೆ ವಿವರಿಸಿದ ತಂದೆ
ಬಿಗ್ ಬಾಸ್ ಕನ್ನಡ 12: ಸ್ಪಂದನಾ ಬಾಲ್ಯದ ಶಾಕಿಂಗ್ ಘಟನೆ ವಿವರಿಸಿದ ತಂದೆ
ಹೈವೇಯಲ್ಲಿ ಅಕೌಂಟೆಂಟ್​​ನನ್ನು ಅಡ್ಡ ಹಾಕಿ 85 ಲಕ್ಷ ದೋಚಿದ ಬೈಕ್ ಸವಾರರು
ಹೈವೇಯಲ್ಲಿ ಅಕೌಂಟೆಂಟ್​​ನನ್ನು ಅಡ್ಡ ಹಾಕಿ 85 ಲಕ್ಷ ದೋಚಿದ ಬೈಕ್ ಸವಾರರು
ಹೊಸ ವರ್ಷದ ಪಾರ್ಟಿ ರೂಲ್ಸ್ ತಿಳಿಸಿದ ಬೆಂಗಳೂರು ಪೊಲೀಸ್ ಕಮಿಷನರ್
ಹೊಸ ವರ್ಷದ ಪಾರ್ಟಿ ರೂಲ್ಸ್ ತಿಳಿಸಿದ ಬೆಂಗಳೂರು ಪೊಲೀಸ್ ಕಮಿಷನರ್
‘45’ ಸಿನಿಮಾ ಕಲೆಕ್ಷನ್ ಸೂಪರ್: ಸ್ವತಃ ನಿರ್ಮಾಪಕರೇ ಹೇಳಿದ ಮಾತು ಕೇಳಿ..
‘45’ ಸಿನಿಮಾ ಕಲೆಕ್ಷನ್ ಸೂಪರ್: ಸ್ವತಃ ನಿರ್ಮಾಪಕರೇ ಹೇಳಿದ ಮಾತು ಕೇಳಿ..
ಗಡಿಯಲ್ಲಿ ಸೈನಿಕರಿಗೆ ಸಹಾಯ ಮಾಡಿದ್ದ ಬಾಲಕನಿಗೆ ವಿಶೇಷ ಪುರಸ್ಕಾರ
ಗಡಿಯಲ್ಲಿ ಸೈನಿಕರಿಗೆ ಸಹಾಯ ಮಾಡಿದ್ದ ಬಾಲಕನಿಗೆ ವಿಶೇಷ ಪುರಸ್ಕಾರ
ದೇಶದ ಅತ್ಯುನ್ನತ ಪ್ರಶಸ್ತಿ ಸ್ವೀಕರಿಸಿದ ವೈಭವ್ ಸೂರ್ಯವಂಶಿ
ದೇಶದ ಅತ್ಯುನ್ನತ ಪ್ರಶಸ್ತಿ ಸ್ವೀಕರಿಸಿದ ವೈಭವ್ ಸೂರ್ಯವಂಶಿ
ಫ್ಯಾಮಿಲಿ ನೋಡಿ ಕಣ್ಣೀರಾದ ಬಿಗ್​​ಬಾಸ್ ಮನೆಯ ಟಫ್​ ಮ್ಯಾನ್ ರಘು
ಫ್ಯಾಮಿಲಿ ನೋಡಿ ಕಣ್ಣೀರಾದ ಬಿಗ್​​ಬಾಸ್ ಮನೆಯ ಟಫ್​ ಮ್ಯಾನ್ ರಘು
ಉನ್ನಾವ್ ಅತ್ಯಾಚಾರ ಸಂತ್ರಸ್ತೆಯ ಕುಟುಂಬದಿಂದ ನ್ಯಾಯಾಲಯದೆದುರು ಪ್ರತಿಭಟನೆ
ಉನ್ನಾವ್ ಅತ್ಯಾಚಾರ ಸಂತ್ರಸ್ತೆಯ ಕುಟುಂಬದಿಂದ ನ್ಯಾಯಾಲಯದೆದುರು ಪ್ರತಿಭಟನೆ
‘45’ ಸಿನಿಮಾಕ್ಕೆ ಪೈರಸಿ ಕಾಟ: ನಿರ್ಮಾಪಕ ಹೇಳಿದ್ದೇನು?
‘45’ ಸಿನಿಮಾಕ್ಕೆ ಪೈರಸಿ ಕಾಟ: ನಿರ್ಮಾಪಕ ಹೇಳಿದ್ದೇನು?