AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತಾಲಿಬಾನ್ ಸಂಸ್ಥಾಪಕ ಮುಲ್ಲಾ ಓಮರ್ ಬಳಸಿದ್ದ ಕಾರನ್ನು ಮಣ್ಣಿನಡಿಯಿಂದ ಹೊರತೆಗೆದ ಅಧಿಕಾರಿಗಳು

ಮುಲ್ಲಾ ಓಮರ್ ಈ ಟೊಯೊಟಾ ಕಾರು ಬಳಸಿಯೇ ಕಂದಾಹಾರ್​​ನಿಂದ ಹೊರ ಹೋಗಿದ್ದು ಎಂದು ತಾಲಿಬಾನ್ ಅಧಿಕಾರಿಗಳು ಹೇಳಿದ್ದಾರೆ. 2013ರಲ್ಲಿ ಅಡಗುತಾಣದಲ್ಲೇ ಮುಲ್ಲಾ ಓಮರ್ ಸಾವಿಗೀಡಾಗಿದ್ದು, ಹಲವು ವರ್ಷಗಳ ವರೆಗೆ ಆತನ ಸಾವಿನ ಸುದ್ದಿ ಮುಚ್ಚಿಡಲಾಗಿತ್ತು.

ತಾಲಿಬಾನ್ ಸಂಸ್ಥಾಪಕ ಮುಲ್ಲಾ ಓಮರ್ ಬಳಸಿದ್ದ ಕಾರನ್ನು ಮಣ್ಣಿನಡಿಯಿಂದ ಹೊರತೆಗೆದ ಅಧಿಕಾರಿಗಳು
ಹೂತಿಟ್ಟಿದ್ದ ಕಾರನ್ನು ಹೊರತೆಗೆಯುತ್ತಿರುವುದು
TV9 Web
| Edited By: |

Updated on:Jul 07, 2022 | 2:59 PM

Share

ಕಂದಾಹಾರ್: 9/11ರ ದಾಳಿ ನಂತರ ಅಮೆರಿಕ ಪಡೆಗಳಿಂದ ತಪ್ಪಿಸಲು ತಾಲಿಬಾನ್(Taliban) ಸಂಸ್ಥಾಪಕ ಮುಲ್ಲಾ ಓಮರ್ (Mullah Omar)  ಬಳಸಿದ್ದ ಕಾರನ್ನು ಹೂತಿಟ್ಟಿದ್ದು, ಎರಡು ದಶಕಗಳ ನಂತರ ಅದನ್ನು ಹೊರತೆಗೆಯಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಅಫ್ಘಾನಿಸ್ತಾನದ (Afghanistan)ಜಬೂಲ್ ಪ್ರಾಂತ್ಯದಲ್ಲಿರುವ ಗ್ರಾಮವೊಂದರಲ್ಲಿ ಬಿಳಿ ಬಣ್ಣದ ಟೊಯೊಟಾ ಕೊರೊಲ್ಲ ಕಾರನ್ನು ಹೂತಿಡಲಾಗಿತ್ತು. ಅದನ್ನು ಹೊರತೆಗೆಯುವಂತೆ ಈ ವಾರ ಆದೇಶಿಸಲಾಗಿತ್ತು ಎಂದು ತಾಲಿಬಾನ್​​ನ ಅಧಿಕಾರಿ ಅಬ್ದುಲ್ ಜಬ್ಬಾರ್ ಒಮರಿ ಹೇಳಿದ್ದಾರೆ. ಕಾರಿನ ಮುಂಭಾಗಕ್ಕೆ ಸ್ವಲ್ಪ ಹಾನಿಯಾಗಿದ್ದು, ಅದು ಉತ್ತಮ ರೀತಿಯಲ್ಲಿದೆ ಎಂದು ಜಬುಲ್ ಪ್ರಾಂತ್ಯದ ಮಾಹಿತಿ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕ ರಹಮತುಲ್ಲಾ ಹಮ್ಮದ್ ಹೇಳಿರುವುದಾಗಿ ಎಎಫ್​​ಪಿ ವರದಿ ಮಾಡಿದೆ. ವಾಹನ ಕಳೆದುಹೋಗುವುದನ್ನು ತಪ್ಪಿಸಲು 2001ರಲ್ಲಿ ಓಮರ್ ನೆನಪಿಗೆ ಮುಜಾಹಿದ್ದೀನ್ ಈ ವಾಹನವನ್ನು ಹೂತಿಟ್ಟಿದೆ ಎಂದು ಅವರು ಹೇಳಿದ್ದಾರೆ. ವಾಹನವನ್ನು ಹೊರತೆಗೆಯುತ್ತಿರುವ ಫೋಟೊವನ್ನು ತಾಲಿಬಾನ್ ಮಾಧ್ಯಮಗಳು ಪ್ರಕಟಿಸಿವೆ. ಈ ಕಾರನ್ನು ರಾಜಧಾನಿಯಲ್ಲಿರುವ ಮ್ಯೂಸಿಯಂನಲ್ಲಿ ದೊಡ್ಡ ಐತಿಹಾಸಿಕ ಸ್ಮಾರಕ ಎಂದು ಪ್ರದರ್ಶನಕ್ಕಿರಿಸಲಾಗುವುದು ಎಂದು ಹಮ್ಮದ್ ಹೇಳಿದ್ದಾರೆ.

ರಕ್ತಸಿಕ್ತ ಅಂತರ್ಯುದ್ಧದ ನಂತರ 1996 ರಲ್ಲಿ ಕಠಿಣ ಇಸ್ಲಾಮಿಸ್ಟ್ ಚಳುವಳಿಯನ್ನು ಅಧಿಕಾರಕ್ಕೆ ತಂದ ಮುಲ್ಲಾ ಓಮರ್,  ಕಂದಹಾರ್‌ನಲ್ಲಿ ತಾಲಿಬಾನ್ ಸ್ಥಾಪಿಸಿ, ದೇಶದ ಮೇಲೆ ಇಸ್ಲಾಮಿಕ್ ಕಾನೂನಿನ ಕಟ್ಟುನಿಟ್ಟಾದ ಕಾನೂನು ಹೇರಿದರು. ಸೆಪ್ಟೆಂಬರ್ 11ರಂದು ನಡೆದ ದಾಳಿ ನಡೆಸಿದ ಒಸಾಮಾ ಬಿನ್ ಲಾಡೆನ್ ಮತ್ತು ಅಲ್ ಖೈದಾ ಸೇರಿದಂತೆ ಜಿಹಾದಿ ಗುಂಪುಗಳ ತಾಣವಾಗಿದೆ ಅಪ್ಘಾನಿಸ್ತಾನ.

ತಾಲಿಬಾನ್ ಬಿನ್ ಲಾಡೆನ್​​ನ್ನು ಹಸ್ತಾಂತರಿಸಲು ನಿರಾಕರಿಸಿದಾಗ ಅಮೆರಿಕ ಅಪ್ಘಾನಿಸ್ತಾನದ ಮೇಲೆ ದಾಳಿ ನಡೆಸಿ ತಾಲಿಬಾನ್​​ನ್ನು ಅಧಿಕಾರದಿಂದ ಕಿತ್ತೊಗೆದು ಹೊಸ ಸರ್ಕಾರವನ್ನು ಸ್ಥಾಪಿಸಿತ್ತು. ಮುಲ್ಲಾ ಓಮರ್ ಈ ಟೊಯೊಟಾ ಕಾರು ಬಳಸಿಯೇ ಕಂದಾಹಾರ್​​ನಿಂದ ಹೊರ ಹೋಗಿದ್ದು ಎಂದು ತಾಲಿಬಾನ್ ಅಧಿಕಾರಿಗಳು ಹೇಳಿದ್ದಾರೆ. 2013ರಲ್ಲಿ ಅಡಗುತಾಣದಲ್ಲೇ ಮುಲ್ಲಾ ಓಮರ್ ಸಾವಿಗೀಡಾಗಿದ್ದು, ಹಲವು ವರ್ಷಗಳ ವರೆಗೆ ಆತನ ಸಾವಿನ ಸುದ್ದಿ ಮುಚ್ಚಿಡಲಾಗಿತ್ತು.

ಎರಡು ದಶಕಗಳ ರಕ್ತಸಿಕ್ತ ದಂಗೆಯನ್ನು ತಡೆಹಿಡಿಯಲು ಪ್ರಯತ್ನಿಸಿದ ನಂತರ, ಅಮೆರಿಕ ಕಳೆದ ವರ್ಷ ತನ್ನ ಕೊನೆಯ ಸೈನ್ಯವನ್ನು ಹಿಂತೆಗೆದುಕೊಂಡಿತು. ತಾಲಿಬಾನ್ ದೇಶಾದ್ಯಂತ ವ್ಯಾಪಿಸಿ, ಕಾಬೂಲ್ ಅನ್ನು ವಶಪಡಿಸಿಕೊಂಡು ಅಧಿಕಾರಕ್ಕೆ ಮರಳಿತು.

Published On - 2:57 pm, Thu, 7 July 22

Follow Us
ಮೂರನೇ ಬಾರಿ ರಾಜ್ಯಪಾಲರನ್ನು ಭೇಟಿ ಮಾಡಿದ ಟಿವಿಕೆ ಮುಖ್ಯಸ್ಥ ವಿಜಯ್
ಮೂರನೇ ಬಾರಿ ರಾಜ್ಯಪಾಲರನ್ನು ಭೇಟಿ ಮಾಡಿದ ಟಿವಿಕೆ ಮುಖ್ಯಸ್ಥ ವಿಜಯ್
ತಮಿಳುನಾಡಿನಲ್ಲಿ ಹೇಗಿದೆ ವಿಜಯ್ ಕ್ರೇಜ್: ಕಣ್ಣಾರೆ ನೋಡಿದ ವಜ್ರಾಂಗ್ ಮಾತು
ತಮಿಳುನಾಡಿನಲ್ಲಿ ಹೇಗಿದೆ ವಿಜಯ್ ಕ್ರೇಜ್: ಕಣ್ಣಾರೆ ನೋಡಿದ ವಜ್ರಾಂಗ್ ಮಾತು
ಮ್ಯಾಜಿಕ್ ನಂಬರ್ ಗಿಂತಲೂ ಹೆಚ್ಚಿನ ಬೆಂಬಲ: ವಿಜಯ್​​ ಕೈ ಹಿಡಿದ ಪಕ್ಷಗಳಾವುವು
ಮ್ಯಾಜಿಕ್ ನಂಬರ್ ಗಿಂತಲೂ ಹೆಚ್ಚಿನ ಬೆಂಬಲ: ವಿಜಯ್​​ ಕೈ ಹಿಡಿದ ಪಕ್ಷಗಳಾವುವು
ತಮಿಳುನಾಡಿನಲ್ಲಿ TVK ಸರ್ಕಾರ ಫಿಕ್ಸ್‌, ಮ್ಯಾಜಿಕ್ ನಂಬರ್ ಹೊಂದಿಸಿದ ವಿಜಯ್
ತಮಿಳುನಾಡಿನಲ್ಲಿ TVK ಸರ್ಕಾರ ಫಿಕ್ಸ್‌, ಮ್ಯಾಜಿಕ್ ನಂಬರ್ ಹೊಂದಿಸಿದ ವಿಜಯ್
ವಿಜಯ್ ಜೊತೆ ನಟಿಸಿರುವ ಕನ್ನಡದ ನಟ ವಜ್ರಾಂಗ್ ದಳಪತಿ ಬಗ್ಗೆ ಹೇಳಿದ್ದೇನು?
ವಿಜಯ್ ಜೊತೆ ನಟಿಸಿರುವ ಕನ್ನಡದ ನಟ ವಜ್ರಾಂಗ್ ದಳಪತಿ ಬಗ್ಗೆ ಹೇಳಿದ್ದೇನು?
ನನ್ನ ಎಲ್ಲಾ ಅಸ್ತಿ ಅನಾಥ ಆಶ್ರಮಕ್ಕೆ ಕೊಡ್ತೇನೆ ಎಂದ ತಾಯಿ
ನನ್ನ ಎಲ್ಲಾ ಅಸ್ತಿ ಅನಾಥ ಆಶ್ರಮಕ್ಕೆ ಕೊಡ್ತೇನೆ ಎಂದ ತಾಯಿ
ತಮಿಳುನಾಡಿನ ಒಳರಾಜಕೀಯನ ಎಳೆಎಳೆಯಾಗಿ ಬಿಚ್ಚಿಟ್ಟ ಕಾಂಗ್ರೆಸ್ ಉಸ್ತುವಾರಿ
ತಮಿಳುನಾಡಿನ ಒಳರಾಜಕೀಯನ ಎಳೆಎಳೆಯಾಗಿ ಬಿಚ್ಚಿಟ್ಟ ಕಾಂಗ್ರೆಸ್ ಉಸ್ತುವಾರಿ
ಆಪ್ತ ಸಹಾಯಕನ ಅರಿಶಿಣ ಶಾಸ್ತ್ರದಲ್ಲಿ ಪತ್ನಿ ಜೊತೆ ಶರಣು ಸಲಗರ ಡ್ಯಾನ್ಸ್​​
ಆಪ್ತ ಸಹಾಯಕನ ಅರಿಶಿಣ ಶಾಸ್ತ್ರದಲ್ಲಿ ಪತ್ನಿ ಜೊತೆ ಶರಣು ಸಲಗರ ಡ್ಯಾನ್ಸ್​​
ಜಿಗಣಿ ಪೊಲೀಸರ ಭರ್ಜರಿ ಬೇಟೆ: ಕೋಟ್ಯಂತರ ರೂ ಮೌಲ್ಯದ 250 ಕೆಜಿ ಗಾಂಜಾ ಜಪ್ತಿ
ಜಿಗಣಿ ಪೊಲೀಸರ ಭರ್ಜರಿ ಬೇಟೆ: ಕೋಟ್ಯಂತರ ರೂ ಮೌಲ್ಯದ 250 ಕೆಜಿ ಗಾಂಜಾ ಜಪ್ತಿ
ಸಂಚಲನ ಮೂಡಿಸಿದ ಬಿಎಲ್ ಸಂತೋಷ್ ಪೋಸ್ಟ್
ಸಂಚಲನ ಮೂಡಿಸಿದ ಬಿಎಲ್ ಸಂತೋಷ್ ಪೋಸ್ಟ್