AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಮೆರಿಕ ಸೇನಾ ಪಡೆಯನ್ನು ಅಫ್ಘಾನಿಸ್ತಾನದಿಂದ ಹೊರದಬ್ಬಿದ ಶ್ರೇಯಸ್ಸಿಗಾಗಿ ತಾಲಿಬಾನ್ ನಾಯಕರ ನಡುವೆ ಕಿತ್ತಾಟ

Taliban ಅಫ್ಘಾನಿಸ್ತಾನವನ್ನು ತನ್ನಿಂದಲೇ ತೆಗೆದುಕೊಳ್ಳುವಂತಹ ರಾಜತಾಂತ್ರಿಕ ಪ್ರಯತ್ನಗಳು ಮಿಲಿಟರಿ ಬಲದ ಬಳಕೆಗಿಂತ ಹೆಚ್ಚು ಪರಿಣಾಮಕಾರಿ ಎಂದು ಬರದಾರ್ ವಾದಿಸಿದ್ದರು ಎಂದು ಬಿಬಿಸಿ ವರದಿ ಮಾಡಿದೆ. ಹಕ್ಕಾನಿ ಮತ್ತು ಆತನ ಅನುಯಾಯಿಗಳು ಒಪ್ಪಲಿಲ್ಲ ಎಂದು ವರದಿ ಹೇಳಿದೆ

ಅಮೆರಿಕ ಸೇನಾ ಪಡೆಯನ್ನು ಅಫ್ಘಾನಿಸ್ತಾನದಿಂದ ಹೊರದಬ್ಬಿದ ಶ್ರೇಯಸ್ಸಿಗಾಗಿ ತಾಲಿಬಾನ್ ನಾಯಕರ ನಡುವೆ ಕಿತ್ತಾಟ
ತಾಲಿಬಾನ್
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on: Sep 15, 2021 | 7:20 PM

ಕಾಬೂಲ್: ಅಫ್ಘಾನಿಸ್ತಾನದಲ್ಲಿ ಗೆಲುವು ಸಾಧಿಸಲು ಯಾರು ಹೆಚ್ಚು ಕೆಲಸ ಮಾಡಿದರು ಎಂಬ ವಿಚಾರದಲ್ಲಿ ತಾಲಿಬಾನ್‌ನ ಉನ್ನತ ಸದಸ್ಯರು ಭಾರೀ ಜಗಳವಾಡಿದ್ದಾರೆ ಎಂದು ಬಿಬಿಸಿ ವರದಿ ಮಾಡಿದೆ. ತಾಲಿಬಾನ್ ನಾಯಕತ್ವದಲ್ಲಿ ಎರಡು ಬಣಗಳ ನಡುವಿನ ಹೋರಾಟವು ಕಳೆದ ವಾರದ ಕೊನೆಯಲ್ಲಿ ಕಾಬೂಲ್‌ನಲ್ಲಿರುವ ಅಫ್ಘಾನ್ ಅಧ್ಯಕ್ಷೀಯ ಅರಮನೆಯೊಳಗೆ ನಡೆಯಿತು ಮತ್ತು ಅಮೆರಿಕ ಮಿಲಿಟರಿಯನ್ನು ತಮ್ಮ ದೇಶದಿಂದ ಹೊರದಬ್ಬಿದ ಶ್ರೇಯಸ್ಸು ಯಾರಿಗೆ ಎಂಬ ವಿಷಯದಲ್ಲಿ ಜಗಳ ನಡೆದಿರುವುದಾಗಿ ಬಿಬಿಸಿ ವರದಿ ಮಾಡಿದೆ. ತಮ್ಮ ಹೊಸ ಸರ್ಕಾರದಲ್ಲಿ ಯಾರು ಯಾವ ಕ್ಯಾಬಿನೆಟ್ ಪಾತ್ರಗಳನ್ನು ಪಡೆಯಬೇಕು ಎಂಬುದರ ಬಗ್ಗೆಯೂ ಘರ್ಷಣೆ ನಡೆಸಿವೆ ಎಂದು ಬಿಬಿಸಿ ವರದಿ ಮಾಡಿದೆ.

ಆಗಸ್ಟ್ 15 ರಂದು ತಾಲಿಬಾನ್ ಕಾಬೂಲ್ ಮೇಲೆ ಹಿಡಿತ ಸಾಧಿಸಿತು ಮತ್ತು ಆಗಸ್ಟ್ 30 ರಂದು ಅಮೆರಿಕದ ಮಿಲಿಟರಿ ದೇಶದಿಂದ ನಿರ್ಗಮಿಸಿತ್ತು. ಸೆಪ್ಟೆಂಬರ್ 7 ರಂದು ತಾಲಿಬಾನ್ ಮಧ್ಯಂತರ ಸರ್ಕಾರವನ್ನು ಘೋಷಿಸಿತು.

ಹೋರಾಟದ ಒಂದು ಬದಿಯಲ್ಲಿ ತಾಲಿಬಾನ್ ಸಹ ಸಂಸ್ಥಾಪಕ ಮತ್ತು ಹಂಗಾಮಿ ಉಪ ಪ್ರಧಾನಿ ಮುಲ್ಲಾ ಅಬ್ದುಲ್ ಘನಿ ಬರದಾರ್, ಇನ್ನೊಂದು ಕಡೆ ನಿರಾಶ್ರಿತರ ಮಂತ್ರಿ ಖಲೀಲ್ ಉರ್-ರಹಮಾನ್ ಹಕ್ಕಾನಿ ನೇತೃತ್ವ ವಹಿಸಿದ್ದರು.

ಮಧ್ಯಂತರ ಸರ್ಕಾರದ ರಚನೆಯ ಬಗ್ಗೆ ಬರದಾರ್ ಅತೃಪ್ತಿ ಹೊಂದಿದ್ದರಿಂದ ವಾದ ಆರಂಭವಾಯಿತು ಎಂದು ತಾಲಿಬಾನ್ ಮೂಲಗಳು ಬಿಬಿಸಿಗೆ ತಿಳಿಸಿವೆ.

ಅಫ್ಘಾನಿಸ್ತಾನವನ್ನು ತನ್ನಿಂದಲೇ ತೆಗೆದುಕೊಳ್ಳುವಂತಹ ರಾಜತಾಂತ್ರಿಕ ಪ್ರಯತ್ನಗಳು ಮಿಲಿಟರಿ ಬಲದ ಬಳಕೆಗಿಂತ ಹೆಚ್ಚು ಪರಿಣಾಮಕಾರಿ ಎಂದು ಬರದಾರ್ ವಾದಿಸಿದ್ದರು ಎಂದು ಬಿಬಿಸಿ ವರದಿ ಮಾಡಿದೆ. ಹಕ್ಕಾನಿ ಮತ್ತು ಆತನ ಅನುಯಾಯಿಗಳು ಒಪ್ಪಲಿಲ್ಲ ಎಂದು ವರದಿ ಹೇಳಿದೆ.  ಹೀಗೊಂದು ಜಗಳ ನಡೆದಿದೆ ಎಂಬುದನ್ನು ತಾಲಿಬಾನ್ ನಿರಾಕರಿಸಿರುವುದಾಗಿಯೂ ಬಿಬಿಸಿ ಹೇಳಿದೆ.

ಹಲವು ದಿನಗಳವರೆಗೆ ಸಾರ್ವಜನಿಕವಾಗಿ ಕಾಣದ ಕಾರಣ ಬರದಾರ್ ಅವರ ಸ್ಥಿತಿಯ ಬಗ್ಗೆ ವದಂತಿಗಳು ಹರಿದಾಡುತ್ತಿದ್ದಂತೆ ಗೊಂದಲ ಮೂಡಿಸುವ ವರದಿಗಳು ಬಂದಿವೆ. ಹೋರಾಟದ ನಂತರ ಬರದಾರ್ ಕಾಬೂಲ್‌ನಿಂದ ಕಂದಹಾರ್ ನಗರಕ್ಕೆ ಹೊರಟರು ಎಂದು ತಾಲಿಬಾನ್ ಮೂಲಗಳು ಬಿಬಿಸಿಗೆ ತಿಳಿಸಿವೆ.

ಸೋಮವಾರ ತಾಲಿಬಾನ್ ವಕ್ತಾರ ಸುಹೈಲ್ ಶಾಹೀನ್ ಟ್ವೀಟ್ ಮಾಡಿದ್ದು, ಕಾದಾಟದಲ್ಲಿ ಬರದಾರ್ ಸಾವನ್ನಪ್ಪಿದ್ದಾರೆ ಎಂಬ ವದಂತಿಗಳು ಸುಳ್ಳು ಎಂದಿದ್ದಾರೆ.

ಬಿಬಿಸಿಯ ಪ್ರಕಾರ ತಾಲಿಬಾನ್​​ನ ವಕ್ತಾರರು ಬರದಾರ್ ಅವರು ತಾಲಿಬಾನ್ ನ ಪ್ರತ್ಯೇಕ ನಾಯಕರಾದ ಮುಲ್ಲಾ ಹೈಬತುಲ್ಲಾ ಅಖುಂಡಜಾದಾರನ್ನು ಭೇಟಿ ಮಾಡಲು ಕಂದಹಾರ್ ಗೆ ಪ್ರಯಾಣ ಬೆಳೆಸಿದ್ದಾರೆ ಎಂದು ಹೇಳಿದ್ದಾರೆ. ಆದಾಗ್ಯೂ, ಬರದಾರ್ ಅವರು “ದಣಿದಿದ್ದರು ಮತ್ತು ಸ್ವಲ್ಪ ವಿಶ್ರಾಂತಿ ಬಯಸಿದ್ದರು ಎಂದು ತಾಲಿಬಾನ್ ವಕ್ತಾರರು ಬಿಬಿಸಿಗೆ ಹೇಳಿದ್ದಾರೆ. ಆಗಸ್ಟ್ 15 ರಿಂದ ಅಖುಂಡಜಾದಾ ಕೂಡ ಸಾರ್ವಜನಿಕವಾಗಿ ಕಾಣುತ್ತಿಲ್ಲ ಎಂದು ರಾಯಿಟರ್ಸ್ ವರದಿ ಮಾಡಿದೆ.

ಇದನ್ನೂ ಓದಿ: Afghanistan Updates: ತಾಲಿಬಾನ್​ ಸಂಘಟನೆಯ ಹುಟ್ಟೂರು ಕಂದಹಾರ್​ನಲ್ಲೇ ತಾಲಿಬಾನಿಗಳ ವಿರುದ್ಧ ಜನಾಕ್ರೋಶ

(Top members of the Taliban had a massive brawl after falling out over who gets credit for US departure reports BBC)

ದೃಷ್ಟಿಹೀನ ಮಕ್ಕಳು ಹುಟ್ಟುಹಬ್ಬದ ಶುಭಾಶಯ ಕೋರಿದಾಗ ಕಣ್ಣೀರಿಟ್ಟ ರಾಷ್ಟ್ರಪತಿ
ದೃಷ್ಟಿಹೀನ ಮಕ್ಕಳು ಹುಟ್ಟುಹಬ್ಬದ ಶುಭಾಶಯ ಕೋರಿದಾಗ ಕಣ್ಣೀರಿಟ್ಟ ರಾಷ್ಟ್ರಪತಿ
‘ಪಪ್ಪಿ’ ಸಿನಿಮಾಗೆ 50 ದಿನದ ಸಂಭ್ರಮ; ವೇದಿಕೆಯಲ್ಲಿ ಬಾಲ ನಟರ ಡೈಲಾಗ್
‘ಪಪ್ಪಿ’ ಸಿನಿಮಾಗೆ 50 ದಿನದ ಸಂಭ್ರಮ; ವೇದಿಕೆಯಲ್ಲಿ ಬಾಲ ನಟರ ಡೈಲಾಗ್
ಸಿಎಂ ಮತ್ತು ಡಿಸಿಎಂ ಜೊತೆ ಹಲವಾರು ಸಚಿವರು ನಾಳೆ ತುಮಕೂರು ಆಗಮನ
ಸಿಎಂ ಮತ್ತು ಡಿಸಿಎಂ ಜೊತೆ ಹಲವಾರು ಸಚಿವರು ನಾಳೆ ತುಮಕೂರು ಆಗಮನ
ಬೆನ್ನು ನೋವಿಗೆ ಕಾರಣವೇನು? ಯೋಗದ ಮೂಲಕ ಪರಿಹರಿಸಿಕೊಳ್ಳುವುದು ಹೇಗೆ?
ಬೆನ್ನು ನೋವಿಗೆ ಕಾರಣವೇನು? ಯೋಗದ ಮೂಲಕ ಪರಿಹರಿಸಿಕೊಳ್ಳುವುದು ಹೇಗೆ?
ಐದು ದಿನಗಳ ಕಾಲ ಸುಟ್ಟ ಗಾಯಗಳೊಂದಿಗೆ ಜೀವನ್ಮರಣ ಹೋರಾಟ ನಡೆಸಿದ ಬಾಲಕ
ಐದು ದಿನಗಳ ಕಾಲ ಸುಟ್ಟ ಗಾಯಗಳೊಂದಿಗೆ ಜೀವನ್ಮರಣ ಹೋರಾಟ ನಡೆಸಿದ ಬಾಲಕ
ವಿದ್ಯುತ್ ಚಿತಾಗಾರದ ಕರೆಂಟ್ ಬಿಲ್ ಬಾಕಿ: ಬಡವಾಯ್ತೇ ಬಿಟಿಡಿಎ
ವಿದ್ಯುತ್ ಚಿತಾಗಾರದ ಕರೆಂಟ್ ಬಿಲ್ ಬಾಕಿ: ಬಡವಾಯ್ತೇ ಬಿಟಿಡಿಎ
ದಿನಕ್ಕೆ 10 ಗಂಟೆ ಕೆಲಸದ ಅವಧಿ ಬಗ್ಗೆ ಸಚಿವ ಸಂತೋಷ್ ಲಾಡ್ ಹೇಳಿದ್ದಿಷ್ಟು!
ದಿನಕ್ಕೆ 10 ಗಂಟೆ ಕೆಲಸದ ಅವಧಿ ಬಗ್ಗೆ ಸಚಿವ ಸಂತೋಷ್ ಲಾಡ್ ಹೇಳಿದ್ದಿಷ್ಟು!
ತನ್ನ ಸಿಗ್ನೇಚರ್ ಸ್ಟೆಪ್​ ಹಾಕುತ್ತಾ ಕುಣಿದು ರಂಜಿಸಿದ ಲೆಜೆಂಡರಿ ಸ್ಟಾರ್
ತನ್ನ ಸಿಗ್ನೇಚರ್ ಸ್ಟೆಪ್​ ಹಾಕುತ್ತಾ ಕುಣಿದು ರಂಜಿಸಿದ ಲೆಜೆಂಡರಿ ಸ್ಟಾರ್
ಇಲ್ಲಿಂದ ಮೇಲೆತ್ತಿ ಎಂಬಂತೆ ಅಸಾಹಯಕತೆಯಿಂದ ಜನರತ್ತ ನೋಡುತ್ತಿರುವ ನಾಯಿ
ಇಲ್ಲಿಂದ ಮೇಲೆತ್ತಿ ಎಂಬಂತೆ ಅಸಾಹಯಕತೆಯಿಂದ ಜನರತ್ತ ನೋಡುತ್ತಿರುವ ನಾಯಿ
ಹಿಮಾಚಲ ಪ್ರದೇಶದಲ್ಲಿ ಭಾರೀ ಮಳೆಯಿಂದ ಭೂಕುಸಿತ; ಹಲವು ರಸ್ತೆಗಳು ಬಂದ್
ಹಿಮಾಚಲ ಪ್ರದೇಶದಲ್ಲಿ ಭಾರೀ ಮಳೆಯಿಂದ ಭೂಕುಸಿತ; ಹಲವು ರಸ್ತೆಗಳು ಬಂದ್