AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಉರ್ದು ಮಾತನಾಡುವ ವ್ಯಕ್ತಿಗಳಿಂದ ಕಾಬೂಲ್ ಕಚೇರಿ ಮೇಲೆ ದಾಳಿ; ಭಾರತೀಯ ವೀಸಾ, ಅಫ್ಘಾನ್ ಪಾಸ್​ಪೋರ್ಟ್ ವಶಪಡಿಸಿದ ದುಷ್ಕರ್ಮಿಗಳು

ಭವಿಷ್ಯದಲ್ಲಿ ಭಯೋತ್ಪಾದಕರಿಗೆ ನಕಲಿ ಪಾಸ್‌ಪೋರ್ಟ್‌ಗಳನ್ನು  ಮಾಡಲು ಈ ದಾಖಲೆಗಳನ್ನು ಬಳಸಬಹುದೆಂಬ ಗಂಭೀರ ಕಾಳಜಿಯಿರುವುದರಿಂದ ಭಾರತೀಯ ವಲಸೆಯ ಏಜೆನ್ಸಿಗಳು ಭಾರತೀಯ ವೀಸಾಗಳೊಂದಿಗೆ ಅಫ್ಘಾನ್ ಪಾಸ್‌ಪೋರ್ಟ್‌ಗಳನ್ನು ವಶಪಡಿಸಿಕೊಂಡಿವೆ.

ಉರ್ದು ಮಾತನಾಡುವ ವ್ಯಕ್ತಿಗಳಿಂದ ಕಾಬೂಲ್ ಕಚೇರಿ ಮೇಲೆ ದಾಳಿ; ಭಾರತೀಯ ವೀಸಾ, ಅಫ್ಘಾನ್ ಪಾಸ್​ಪೋರ್ಟ್ ವಶಪಡಿಸಿದ ದುಷ್ಕರ್ಮಿಗಳು
ತಾಲಿಬಾನ್ ಹೋರಾಟಗಾರರು
TV9 Web
| Edited By: |

Updated on: Aug 25, 2021 | 3:44 PM

Share

ಕಾಬೂಲ್:  ಉರ್ದು ಮಾತನಾಡುವ ಜನರ ಗುಂಪೊಂದು ಕಾಬೂಲ್ ನಲ್ಲಿರುವ ಕಚೇರಿಗಳಿಗೆ ನುಗ್ಗಿ ಮುದ್ರೆಯೊತ್ತಲಾದ ಭಾರತೀಯ ವೀಸಾಗಳೊಂದಿಗೆ ಹಲವಾರು ಸಂಖ್ಯೆಯ ಅಫಘಾನ್ ಪಾಸ್‌ಪೋರ್ಟ್‌ಗಳನ್ನು ವಶಪಡಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ಅಫ್ಘಾನಿಸ್ತಾನದಲ್ಲಿ ಭಾರತೀಯ ಮಿಷನ್‌ಗಳ ಪರವಾಗಿ ಕಾಬೂಲ್‌ನಲ್ಲಿ ಭಾರತೀಯ ವಲಸೆ ಕಾರ್ಯಗಳನ್ನು ನಿರ್ವಹಿಸುವ ಭಾರತೀಯ ಭದ್ರತಾ ಏಜೆನ್ಸಿಗಳಲ್ಲಿ ಎಚ್ಚರಿಕೆ ಸೂಚನೆ ನೀಡಲಾಗಿದೆ.  ತಾಲಿಬಾನ್ ಕಾಬೂಲ್ ಅನ್ನು ವಶಪಡಿಸಿಕೊಂಡ ದಿನ ಅಂದರೆ ಆಗಸ್ಟ್ 15 ರಂದು ಈ ಘಟನೆ ಸಂಭವಿಸಿದೆ. ಈ ಬೆಳವಣಿಗೆಯ ಬಗ್ಗೆ ತಿಳಿದಿರುವ ವ್ಯಕ್ತಿಗಳ ಪ್ರಕಾರ  ಭವಿಷ್ಯದಲ್ಲಿ ಭಯೋತ್ಪಾದಕರಿಗೆ ನಕಲಿ ಪಾಸ್‌ಪೋರ್ಟ್‌ಗಳನ್ನು  ಮಾಡಲು ಈ ದಾಖಲೆಗಳನ್ನು ಬಳಸಬಹುದೆಂಬ ಗಂಭೀರ ಕಾಳಜಿಯಿರುವುದರಿಂದ ಭಾರತೀಯ ವಲಸೆಯ ಏಜೆನ್ಸಿಗಳು ಭಾರತೀಯ ವೀಸಾಗಳೊಂದಿಗೆ ಅಫ್ಘಾನ್ ಪಾಸ್‌ಪೋರ್ಟ್‌ಗಳನ್ನು ವಶಪಡಿಸಿಕೊಂಡಿವೆ. ಕಾಬೂಲ್‌ನಲ್ಲಿ ಭಾರತೀಯ ವೀಸಾ ಹೊರಗುತ್ತಿಗೆ ಏಜೆನ್ಸಿಯ ಮೇಲೆ ನಡೆದ ದಾಳಿಯಲ್ಲಿ ಯಾವ ಗುಂಪು ಭಾಗಿಯಾಗಿರಬಹುದು ಎಂಬುದು ಸ್ಪಷ್ಟವಾಗಿಲ್ಲವಾದರೂ, ಉರ್ದು ಮಾತನಾಡುವವರು ಪಾಕಿಸ್ತಾನದತ್ತ ಅನುಮಾನದ ಬೆರಳು ತೋರಿಸಿದರು ಎಂದು ಹಿಂದೂಸ್ತಾನ್  ಟೈಮ್ಸ್ ವರದಿ ಮಾಡಿದೆ.

“ಭಾರತೀಯ ವೀಸಾ ಹೊಂದಿರುವ ಅಫ್ಘಾನ್ ಪಾಸ್‌ಪೋರ್ಟ್‌ಗಳನ್ನು ಭಯೋತ್ಪಾದಕರು ಪಾಸ್‌ಪೋರ್ಟ್‌ಗಳನ್ನು ನಕಲಿ ಮಾಡಲು ಬಳಸಲಾಗುತ್ತದೆ ಎಂಬ  ಬಲವಾದ ಸಾಧ್ಯತೆಯಿದೆ. ರೈಸಿನಾ ಹಿಲ್ ಮತ್ತು ಭದ್ರತಾ ಏಜೆನ್ಸಿಗಳು ಘಟನೆಯ ಬಗ್ಗೆ ಏನೂ ಹೇಳಿಲ್ಲ.

ಕಾಬೂಲ್ ವೀಕ್ಷಕರ ಪ್ರಕಾರ, ಕಾಬೂಲ್ ಅನ್ನು ತಾಲಿಬಾನ್ ವಶಪಡಿಸಿಕೊಂಡ ಒಂದು ವಾರದ ನಂತರ, ಹಲವಾರು ಗುಂಪುಗಳು ಈಗ ರಾಜಧಾನಿ ಅಫ್ಘಾನಿಸ್ತಾನದಲ್ಲಿ ಕಾರ್ಯನಿರ್ವಹಿಸುತ್ತಿದ್ದು ಅವುಗಳಿಗಾಗಿ ದೊಡ್ಡ ಪ್ರಮಾಣದ ಹುಡುಕಾಟ ನಡೆಸಲಾಗುತ್ತಿದೆ. ಕಾಬೂಲ್‌ನಲ್ಲಿ ಟ್ರಾವೆಲ್ ಏಜೆನ್ಸಿಗಳು ಮತ್ತು ಅವುಗಳ ಮಾಲೀಕರ ಹುಡುಕಾಟದಲ್ಲಿ ಈ ಗುಂಪುಗಳು ಪಾಸ್‌ಪೋರ್ಟ್‌ಗಳು ಮತ್ತು ಇತರ ಪ್ರಯಾಣ ದಾಖಲೆಗಳನ್ನು ವಶಪಡಿಸಿಕೊಳ್ಳುತ್ತಿವೆ ಎಂದು ತಿಳಿದುಬಂದಿದೆ.

ಆಗಸ್ಟ್ 16 ರಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಮತ್ತು ರಾಷ್ಟ್ರೀಯ ಭದ್ರತಾ ತಂಡಗಳು ಸ್ಥಳಾಂತರ ಕಾರ್ಯವನ್ನು ಆರಂಭಿಸಿದಾಗ ಪ್ರತಿಯೊಬ್ಬ ಪ್ರಯಾಣಿಕನು ತನ್ನ ಹಿಂದಿನ ಮತ್ತು ಪ್ರಯಾಣದ ದಾಖಲೆಗಳನ್ನು ಪರೀಕ್ಷಿಸಬೇಕೆಂದು ಭಾರತೀಯ ಗೃಹ ಸಚಿವಾಲಯವು ಎಚ್ಚರಿಕೆ ನೀಡಿತ್ತು. ಕಾಬೂಲ್‌ನಲ್ಲಿರುವ ಭಾರತೀಯ ಮಿಷನ್ ಭಾರತೀಯ ವೀಸಾಗಳನ್ನು ನೀಡಿದ ಆಫ್ಘನ್ನರ ಹೆಸರನ್ನು ಮತ್ತು ವಿತರಣೆಗಾಗಿ ಹೊರಗುತ್ತಿಗೆ ಸಂಸ್ಥೆಗೆ ನೀಡಿರುವ ತನ್ನ ಡೇಟಾವನ್ನು ಹುಡುಕುತ್ತಿದೆ. ಡೇಟಾವನ್ನು ಹುಡುಕಲಾಗುತ್ತಿದೆ ಮತ್ತು ಹೆಸರುಗಳನ್ನು ಗುರುತಿಸಲಾಗುತ್ತಿದೆ ಇದರಿಂದ ಆ ಭಾರತೀಯ ವೀಸಾಗಳನ್ನು ರದ್ದುಗೊಳಿಸಬಹುದು ಎಂದು ಪ್ರಸ್ತುತ ಏಜೆನ್ಸಿ ಹೇಳಿದೆ.

ಇದನ್ನೂ ಓದಿ: ಅಫ್ಘಾನಿಸ್ತಾನದ ಮಾಜಿ ಸಚಿವ ಸಯ್ಯದ್ ಸಾದತ್​ ಈಗ ಜರ್ಮನಿಯಲ್ಲಿ ಪಿಜ್ಜಾ ಡೆಲಿವರಿ ಬಾಯ್

ಇದನ್ನೂ ಓದಿ:  ಕಾಬೂಲ್​ನಿಂದ ಒಂದೇ ದಿನದಲ್ಲಿ 21,600 ಜನರನ್ನು ಸ್ಥಳಾಂತರಿಸಿದ ಅಮೆರಿಕ

(Urdu speaking persons attack Kabul office seize Afghan passports with Indian visas on August 15)

ಹೊಸ ವರ್ಷದ ಸಂಭ್ರಮದಲ್ಲೇ ಕರಾವಳಿ ಜಿಲ್ಲೆಗಳಿಗೆ ಸಿಹಿ ಸುದ್ದಿ ನೀಡಿದ ಡಿಕೆಶಿ
ಹೊಸ ವರ್ಷದ ಸಂಭ್ರಮದಲ್ಲೇ ಕರಾವಳಿ ಜಿಲ್ಲೆಗಳಿಗೆ ಸಿಹಿ ಸುದ್ದಿ ನೀಡಿದ ಡಿಕೆಶಿ
RSS ಅನ್ನು ಅಲ್ ಖೈದಾಗೆ ಹೋಲಿಸಿ ವಿವಾದ ಸೃಷ್ಟಿಸಿದ ಕಾಂಗ್ರೆಸ್ ನಾಯಕ
RSS ಅನ್ನು ಅಲ್ ಖೈದಾಗೆ ಹೋಲಿಸಿ ವಿವಾದ ಸೃಷ್ಟಿಸಿದ ಕಾಂಗ್ರೆಸ್ ನಾಯಕ
ಒಂದೇ ಓವರ್​ನಲ್ಲಿ 22 ರನ್ ಚಚ್ಚಿದ ರಿಚಾ ಘೋಷ್
ಒಂದೇ ಓವರ್​ನಲ್ಲಿ 22 ರನ್ ಚಚ್ಚಿದ ರಿಚಾ ಘೋಷ್
ಡ್ರಗ್ಸ್ ಫ್ಯಾಕ್ಟರಿ ಪತ್ತೆ: ನಮ್ಮ ಪೊಲೀಸರ ಬಗ್ಗೆ ಗೃಹ ಸಚಿವರು ಏನಂದ್ರು?
ಡ್ರಗ್ಸ್ ಫ್ಯಾಕ್ಟರಿ ಪತ್ತೆ: ನಮ್ಮ ಪೊಲೀಸರ ಬಗ್ಗೆ ಗೃಹ ಸಚಿವರು ಏನಂದ್ರು?
ಬೆಂಕಿ ಹೊತ್ತಿಕೊಂಡ ಅಪಾರ್ಟ್​​ಮೆಂಟ್​​ನೊಳಗೆ ಸಿಲುಕಿದ್ದ ನಾಯಿಯ ರಕ್ಷಣೆ
ಬೆಂಕಿ ಹೊತ್ತಿಕೊಂಡ ಅಪಾರ್ಟ್​​ಮೆಂಟ್​​ನೊಳಗೆ ಸಿಲುಕಿದ್ದ ನಾಯಿಯ ರಕ್ಷಣೆ
ಹೊಸ ವರ್ಷಾಚರಣೆ ಮಾಡುವವರ ಅನುಕೂಲಕ್ಕೆ QR Code: ಏನಿದು? ಏನೆಲ್ಲಾ ಅನುಕೂಲ?
ಹೊಸ ವರ್ಷಾಚರಣೆ ಮಾಡುವವರ ಅನುಕೂಲಕ್ಕೆ QR Code: ಏನಿದು? ಏನೆಲ್ಲಾ ಅನುಕೂಲ?
ಶ್ರೀಲಂಕಾ ವಿರುದ್ಧ ಸತತ 3ನೇ ಅರ್ಧಶತಕ ಸಿಡಿಸಿದ ಶಫಾಲಿ
ಶ್ರೀಲಂಕಾ ವಿರುದ್ಧ ಸತತ 3ನೇ ಅರ್ಧಶತಕ ಸಿಡಿಸಿದ ಶಫಾಲಿ
ಮನ್ ಕಿ ಬಾತ್ ವೀಕ್ಷಿಸಿದವರಿಗೆ ಬರಿಯಾನಿ ಭಾಗ್ಯ
ಮನ್ ಕಿ ಬಾತ್ ವೀಕ್ಷಿಸಿದವರಿಗೆ ಬರಿಯಾನಿ ಭಾಗ್ಯ
ಸ್ಕೈ ಗೋಲ್ಡ್‌ ಅಂಡ್‌ ಡೈಮಂಡ್ಸ್ ದರೋಡೆ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಐಜಿಪಿ
ಸ್ಕೈ ಗೋಲ್ಡ್‌ ಅಂಡ್‌ ಡೈಮಂಡ್ಸ್ ದರೋಡೆ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಐಜಿಪಿ
ಮೈಸೂರಿನಲ್ಲಿ ಹಾಡಹಗಲೇ ಸಿನಿಮೀ ಸ್ಟೈಲ್‌ನಲ್ಲಿ ಚಿನ್ನದಂಗಡಿ ದರೋಡೆ
ಮೈಸೂರಿನಲ್ಲಿ ಹಾಡಹಗಲೇ ಸಿನಿಮೀ ಸ್ಟೈಲ್‌ನಲ್ಲಿ ಚಿನ್ನದಂಗಡಿ ದರೋಡೆ