AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

’ಇನ್ಮುಂದೆ ಅಫ್ಘಾನ್​​ನಲ್ಲಿ ಪ್ರತಿಯೊಂದು ವಿಚಾರದಲ್ಲೂ ಪವಿತ್ರ ಷರಿಯಾ ಕಾನೂನು ಅನ್ವಯ..‘-ತಾಲಿಬಾನಿಗಳಿಂದ ಅಧಿಕೃತ ಪ್ರಕಟಣೆ

ಈ ದೇಶದಲ್ಲಿ ಎಲ್ಲ ಬುದ್ಧಿವಂತ, ವೃತ್ತಿಪರ ಜನರು, ವಿದ್ವಾಂಸರು, ಪ್ರಾಧ್ಯಾಪಕರು, ವೈದ್ಯರು, ಇಂಜನಿಯರ್​ಗಳು, ವಿಜ್ಞಾನಿಗಳು, ರಾಷ್ಟ್ರದ ಉದ್ಯಮಿಗಳಿಗೆ ನಮ್ಮ ಇಸ್ಲಾಮಿಕ್​ ಎಮಿರೇಟ್​ನಿಂದ ಏನೇನೂ ಸಮಸ್ಯೆ ಮಾಡುವುದಿಲ್ಲ ಎಂದು ತಾಲಿಬಾನಿಗಳು ಭರವಸೆ ನೀಡಿದ್ದಾರೆ.

’ಇನ್ಮುಂದೆ ಅಫ್ಘಾನ್​​ನಲ್ಲಿ ಪ್ರತಿಯೊಂದು ವಿಚಾರದಲ್ಲೂ ಪವಿತ್ರ ಷರಿಯಾ ಕಾನೂನು ಅನ್ವಯ..‘-ತಾಲಿಬಾನಿಗಳಿಂದ ಅಧಿಕೃತ ಪ್ರಕಟಣೆ
ತಾಲಿಬಾನ್​ ಪ್ರಮಖ ನಾಯಕರು
TV9 Web
| Updated By: Lakshmi Hegde|

Updated on:Sep 08, 2021 | 10:03 AM

Share

ಅಫ್ಘಾನಿಸ್ತಾನ (Afghanistan)ದಲ್ಲಿ ತಾಲಿಬಾನಿಗಳು ಅಂತೂ ಸರ್ಕಾರ ರಚನೆ ಮಾಡಿದ್ದು, ಮುಲ್ಲಾ ಮೊಹಮ್ಮದ್​ ಹಸನ್​ ಅಕುಂದ್​ (Mullah Mohammad Hasan Akhund) ನೂತನ ಪ್ರಧಾನಿಯಾಗಿ ಅಧಿಕಾರಕ್ಕೆ ಏರಲಿದ್ದಾರೆ. ಒಟ್ಟಾರೆ ಹೇಳಬೇಕೆಂದರೆ ಈ ಹಿಂದೆ ವಿಶ್ವಸಂಸ್ಥೆ (United Nations) ಯಾರನ್ನೆಲ್ಲ ಜಾಗತಿಕ ಉಗ್ರರು ಎಂದು ಘೋಷಿಸಿತ್ತೋ ಅವರೆಲ್ಲ ಸೇರಿ ಒಂದು ಸರ್ಕಾರವನ್ನು ರಚಿಸಿದ್ದಾರೆ.  ಸರ್ಕಾರ ರಚನೆ ಬೆನ್ನಲ್ಲೇ ತಮ್ಮ ನೀತಿ ಹೇಗಿರಲಿದೆ ಎಂಬ ಬಗ್ಗೆಯೂ ಅವರು ಪ್ರಕಟಣೆ ಹೊರಡಿಸಿದ್ದಾರೆ.  ಇಲ್ಲಿನ ಎಲ್ಲ ಸಮಸ್ಯೆಗಳನ್ನೂ ನ್ಯಾಯ ಸಮ್ಮತವಾಗಿ ಮತ್ತು ಸಮಂಜಸವಾದ, ಸೂಕ್ತವಾದ ವಿಧಾನಗಳ ಮೂಲಕ ಬಗೆಹರಿಸುವುದೇ ನಮ್ಮ ಪ್ರಥಮ ಆದ್ಯತೆ ಎಂದು ಹೇಳಿದ್ದಾರೆ.  

ನಾವು ಕಳೆದ 20ವರ್ಷಗಳಿಂದ ಎರಡು ಬಹುದೊಡ್ಡ ಗುರಿಯನ್ನು ಇಟ್ಟುಕೊಂಡು ಹೋರಾಟ ನಡೆಸಿದ್ದೆವು. ಅದರಲ್ಲಿ ಮೊದಲನೇಯದು, ಈ ದೇಶ ಅಫ್ಘಾನಿಸ್ತಾನವನ್ನು ವಿದೇಶಿ ಅತಿಕ್ರಮಣ, ಆಕ್ರಮಣದಿಂದ ಮುಕ್ತಗೊಳಿಸಿ, ಸ್ವತಂತ್ರಗೊಳಿಸುವುದು ಮತ್ತು ಎರಡನೇಯದು, ದೇಶವನ್ನು ಸಂಪೂರ್ಣ, ಸ್ವತಂತ್ರ ಮತ್ತು ಸ್ಥಿರವಾದ ಇಸ್ಲಾಂ ಕೇಂದ್ರವನ್ನಾಗಿ ಪರಿವರ್ತಿಸುವುದು ಎಂದು ತಮ್ಮ ಪ್ರಕಟಣೆಯಲ್ಲಿ ತಾಲಿಬಾನಿಗಳು ಉಲ್ಲೇಖಿಸಿದ್ದಾರೆ.

ಪವಿತ್ರ ಷರಿಯಾ ಕಾನೂನು ಜಾರಿ ಎಲ್ಲದಕ್ಕೂ ಮಿಗಿಲಾಗಿ, ಅಫ್ಘಾನಿಸ್ತಾನದಲ್ಲಿ ನಮ್ಮ ಆಡಳಿತಕ್ಕೆ ಸಂಬಂಧಪಟ್ಟ ಎಲ್ಲ ವಿಚಾರಗಳು, ವಿಧಾನಗಳೂ, ಜನರ ಜೀವನ ಕ್ರಮಗಳು ಎಲ್ಲವೂ ಪವಿತ್ರ ಷರಿಯಾ ಕಾನೂನಿನಂತೆಯೇ ನಡೆಯಲಿವೆ. ಇನ್ನುಮುಂದೆ ಇಡೀ ಅಫ್ಘಾನಿಸ್ತಾವನ್ನು ಷರಿಯಾ ಕಾನೂನೇ ಮುನ್ನಡೆಸಲಿದೆ ಎಂದು ತಾಲಿಬಾನ್​ನ ಸುಪ್ರೀಂ ನಾಯಕನಾಗಿರುವ ಮೌಲವಿ ಹಿಬತುಲ್ಲಾ ಅಕುಂದಜಾದ ಹೊರಡಿಸಿರುವ ಈ ಪ್ರಕಟಣೆಯಲ್ಲಿ ಸ್ಪಷ್ಟವಾಗಿ ಉಲ್ಲೇಖವಾಗಿದೆ.

ಹಾಗೇ, ಈ ದೇಶದಲ್ಲಿ ಎಲ್ಲ ಬುದ್ಧಿವಂತ, ವೃತ್ತಿಪರ ಜನರು, ವಿದ್ವಾಂಸರು, ಪ್ರಾಧ್ಯಾಪಕರು, ವೈದ್ಯರು, ಇಂಜನಿಯರ್​ಗಳು, ವಿಜ್ಞಾನಿಗಳು, ರಾಷ್ಟ್ರದ ಉದ್ಯಮಿಗಳಿಗೆ ನಮ್ಮ ಇಸ್ಲಾಮಿಕ್​ ಎಮಿರೇಟ್​ನಿಂದ ಏನೇನೂ ಸಮಸ್ಯೆ ಮಾಡುವುದಿಲ್ಲ. ಅವರ ಅಗತ್ಯಗಳನ್ನು ಪೂರೈಸಿ, ಅವಕಾಶ ಒದಗಿಸಲಾಗುವುದು. ಖಂಡಿತ ಅಂಥವರಿಗೆ ಗೌರವ ಇದ್ದೇ ಇದೆ ಎಂದೂ ಭರವಸೆ ನೀಡಲಾಗಿದೆ. ಅಷ್ಟೇ ಅಲ್ಲ, ಈ ಪ್ರತಿಭಾವಂತರು ಬೇರೆಲ್ಲೂ ಪಲಾಯನ ಮಾಡದೆ, ಈ ದೇಶಕ್ಕಾಗಿಯೇ ದುಡಿಯಬೇಕು. ಅವರ ಮಾರ್ಗದರ್ಶನ, ಕೆಲಸ ನಮಗೆ ಬೇಕು ಎಂದೂ ಹೇಳಿದ್ದಾರೆ.

ಏನಿದು ಷರಿಯಾ ಕಾನೂನು? ಹೇಗಿರಲಿದೆ ಎಂಬುದನ್ನು ತಿಳಿಯಲು ಇಲ್ಲಿ ಕ್ಲಿಕ್​ ಮಾಡಿ..

ಇದನ್ನೂ ಓದಿ: ಇಲ್ಲಿ ಕೇವಲ ನಾಲ್ಕು ಗಂಟೆಗಳ ಅವಧಿಯಲ್ಲಿ ಜಾತ್ರೆ ಮುಗಿಯುತ್ತೆ, ಚರ್ಮ ಸಮಸ್ಯೆ ಇರುವವರು ದರ್ಶನ ಮಾಡದೆ ಹೋಗಲ್ಲ

Drug Case: ಸಿಸಿಬಿ ಚಾರ್ಜ್​ಶೀಟ್​ನಲ್ಲಿ ಆಂಕರ್ ಅನುಶ್ರೀ ಹೆಸರು ಉಲ್ಲೇಖ; ಅವರು ಡ್ರಗ್ಸ್ ಸೇವಿಸುತ್ತಿದ್ದರು ಎಂದು ಆರೋಪಿ ಹೇಳಿಕೆ

(Will follow Sharia law for all matters says Taliban New government)

Published On - 9:55 am, Wed, 8 September 21

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ