AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಫ್ಘಾನಿಸ್ತಾನ ತ್ಯಜಿಸಲು ಸಹಾಯವಾಗುತ್ತದೆಂಬ ಕಾರಣಕ್ಕೆ ಶಿಬಿರದಲ್ಲಿದ್ದ ಯುವತಿಯರು ಅನಿವಾರ್ಯವಾಗಿ ಮದುವೆಯಾಗಬೇಕಾಯಿತು!

ಸಿ ಎನ್ ಎನ್ ವರದಿಯ ಪ್ರಕಾರ ಕೆಲ ಸ್ಥಿತಿವಂತ ಕುಟುಂಬಗಳು ಸಾವಿರಾರು ಡಾಲರ್ಗಳನ್ನು ವರದಕ್ಷಿಣೆಯ ರೂಪದಲ್ಲಿ ನೀಡಿ ತಮ್ಮ ಹೆಣ್ಣುಮಕ್ಕಳ ಮದುವೆ ಮಾಡಿಸುತ್ತಿದ್ದಾರೆ. ಕೆಲವು ಪ್ರಕರಣಗಳಲ್ಲಿ ಯುವಕರಿಗೆ ಕೇವಲ ಗಂಡನ ಹಾಗೆ ನಟಿಸಲು ಹಣ ನೀಡಲಾಗುತ್ತಿದೆ

ಅಫ್ಘಾನಿಸ್ತಾನ ತ್ಯಜಿಸಲು ಸಹಾಯವಾಗುತ್ತದೆಂಬ ಕಾರಣಕ್ಕೆ ಶಿಬಿರದಲ್ಲಿದ್ದ ಯುವತಿಯರು ಅನಿವಾರ್ಯವಾಗಿ ಮದುವೆಯಾಗಬೇಕಾಯಿತು!
ಕಾಬೂಲ್​ ನಗರ ಹೊರವಲಯದ ಶಿಬಿರಗಳು
TV9 Web
| Edited By: |

Updated on: Sep 03, 2021 | 5:57 PM

Share

ಹೇಗಾದರೂ ಮಾಡಿ ತಾಲಿಬಾನಿ ಉಗ್ರರಿಂದ ತಪ್ಪಿಸಿಕೊಳ್ಳಬೇಕೆಂಬ ಹತಾಷೆಯಲ್ಲಿ ಕಾಬೂಲ್ ನಗರದ ಹೊರವಲಯದಲ್ಲಿ ತಲೆ ಎತ್ತಿದ್ದ ವಲಸೆ ಶಿಬಿರಗಳಲ್ಲಿ ತಂಗಿದ್ದ ಹಲವಾರು ಆಫ್ಘನ್ ಮಹಿಳೆಯರು ಅನಿವಾರ್ಯವಾಗಿ ಮದುವೆಯಾಗುವ ಸ್ಥಿತಿ ನಿರ್ಮಾಣವಾಗಿತ್ತು, ಮದುವೆಯಾದರೆ ಗಂಡನ ಜೊತೆ ಹೋಗಲು ಬೇರೆ ದೇಶಕ್ಕೆ ಹೋಗಲು ಸುಲಭವಾಗುತ್ತದೆ ಎನ್ನುವ ಕಾರಣಕ್ಕೆ ಅವರು ಒಲ್ಲದ ಮನ್ಸಸ್ಸಿನಿಂದ ಮದುವೆಯಾಗುತ್ತಿದ್ದರು ಎಂದು ಸಿ ಎನ್ ಎನ್ ಸುದ್ದಿವಾಹಿನಿ ವರದಿ ಮಾಡುವ ಮೂಲಕ ಅಮೆರಿಕ ಗೃಹ ಇಲಾಖೆಯನ್ನು ಎಚ್ಚರಿಸಿದೆ. ಸದರಿ ವಿಷಯ ತನ್ನ ಗಮನಕ್ಕೆ ಬಂದ ನಂತರ ಯುಎಸ್ ಗೃಹ ಇಲಾಖೆಯು ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಈ) ಅನ್ನು ಜಾಗೃತಗೊಳಿಸಿದೆ.

ಸಿ ಎನ್ ಎನ್ ವರದಿಯ ಪ್ರಕಾರ ಕೆಲ ಸ್ಥಿತಿವಂತ ಕುಟುಂಬಗಳು ಸಾವಿರಾರು ಡಾಲರ್ಗಳನ್ನು ವರದಕ್ಷಿಣೆಯ ರೂಪದಲ್ಲಿ ನೀಡಿ ತಮ್ಮ ಹೆಣ್ಣುಮಕ್ಕಳ ಮದುವೆ ಮಾಡಿಸುತ್ತಿದ್ದಾರೆ. ಕೆಲವು ಪ್ರಕರಣಗಳಲ್ಲಿ ಯುವಕರಿಗೆ ಕೇವಲ ಗಂಡನ ಹಾಗೆ ನಟಿಸಲು ಹಣ ನೀಡಲಾಗುತ್ತಿದೆ ಇಲ್ಲವೇ ಪುಸಲಾಯಿಸಲಾಗುತ್ತಿದೆ. ಇದು ವಲಸೆ ಹೋಗಲು ಜನ ತಂಗಿರುವ ಶಿಬಿರಗಳಲ್ಲಿ ಮಾನವ ಕಳ್ಳಸಾಗಣೆಯ ನಡೆದಿರಬಹುದಾದ ಆತಂಕ ಮೂಡಿಸಿದೆ.

ಈ ವಿಷಯವನ್ನು ಯುನೈಟೆಡ್ ಅರಬ್ ಎಮಿರೇಟ್ಸ್ ನಲ್ಲಿರುವ ರಾಜತಂತ್ರಜ್ಞರ ಗಮನಕ್ಕೆ ತರಲಾಗಿದೆ. ಮತ್ತು ಈ ಪದ್ಧತಿ ಶಿಬಿರಗಳಲ್ಲಿ ಯಾವ ಹಂತ ತಲುಪಿತ್ತು ಅನ್ನುವುದರ ಬಗ್ಗೆ ಖಚಿತ ಮಹಿತಿ ಇಲ್ಲದಿರುವುದರಿಂದ, ಈ ಡಿಪ್ಲೊಮ್ಯಾಟ್​ಗಳು, ಮಾನವ ಕಳ್ಳಸಾಗಣೆಗೆ ಬಲಿಯಾದವರನ್ನು ಗುರುತಿಸಲು ತಾವು ಮಾರ್ಗದರ್ಶನ ನೀಡಿ ಸಹಾಯ ಮಾಡುವುದಾಗಿ ಹೇಳಿದ್ದಾರೆ.

ಹಾಗೆ ನೋಡಿದರೆ, ಅಫ್ಘಾನಿಸ್ತಾನದಿಂದ ಬೇರೆ ದೇಶಗಳಿಗೆ ಪಲಾಯನಗೈಯುವ ಪ್ರಕ್ರಿಯೆ ಈಗ ಪೂರ್ಣಗೊಂಡಿದೆ ಮತ್ತು ದೇಶದಲ್ಲಿ ತಾಲಿಬಾನ್ ಹೊಸ ಸರ್ಕಾರ ರಚಿಸುವುದಕ್ಕೆ ಕ್ಷಣಗಣನೆ ಶುರುವಾಗಿದೆ. ವಲಸೆ ಹೊರಟವರು ಒಂದೋ ಪ್ರಯಾಣದಲ್ಲಿದ್ದಾರೆ ಇಲ್ಲವೇ ತಾವು ತಲುಪಬೇಕೆಂದಿದ್ದ ಸ್ಥಳ ಮುಟ್ಟಿಯಾಗಿದೆ. ಅನೇಕ ಮಹಿಳೆಯರು ಯುಏಈ ತಲುಪಿದ್ದಾರೆಂದು ವರದಿ ತಿಳಿಸಿದೆ. ಮೂರನೇ ದೇಶಗಳು ಪ್ರಯಾಣಕ್ಕೆ ಸಂಬಂಧಿಸಿದ ಪ್ರಕ್ರಿಯೆ ಪೂರ್ತಿಗೊಂಡ ನಂತರ ಅವರು ಅಮೆರಿಕಾಗೆ ಪ್ರಯಾಣ ಬೆಳಸಲಿದ್ದಾರೆ.

ಎರಡು ದಶಕಗಳ ನಂತರ ತಾಲಿಬಾನ್ ಅಧಿಕಾರಕ್ಕೆ ಮರಳುತ್ತಿರುವುದು ಅಫ್ಘಾನಿಸ್ತಾನದ ಮಹಿಳೆಯರಲ್ಲಿ ಭೀತಿಯನ್ನುಂಟು ಮಾಡಿದೆ. 1996 ರಿಂದ 2001 ರವರೆಗೆ ಅವರು ನಡೆಸಿದ ಅಧಿಕಾರಾವಧಿಯಲ್ಲಿ ತಾಲಿಬಾನಿಗಳು ಮಹಿಳೆಯರ ಹಕ್ಕುಗಳನ್ನು ಸಂಪೂರ್ಣವಾಗಿ ಹತ್ತಿಕ್ಕಿದ್ದರು. ಆದರೆ, ಈ ಬಾರಿ ಶರಿಯ ಕಾನೂನಿನಲ್ಲಿ ಪ್ರತಿಪಾದಿಸಿರುವಂತೆ ಅವರ ಹಕ್ಕುಗಳನ್ನು ಸಂರಕ್ಷಿಸಲಾಗುವುದು ಎಂದು ತಾಲಿಬಾನಿಗಳು ಭರವಸೆ ನೀಡಿದ್ದಾರೆ.

ಆದರೆ, ಗಮನಿಸಿಬೇಕಾದ ಸಂಗತಿಯೆಂದರೆ ಅವರು ಈಗಾಗಲೇ, ಸಹ-ಶಿಕ್ಷಣ ಪದ್ಧತಿ, ಪುರುಷರ ಜೊತೆಯಿಲ್ಲದೆ ಪ್ರಯಾಣ ಮಾಡುವುದನ್ನು ಬ್ಯಾನ್ ಮಾಡಿದ್ದಾರೆ.

ಕಳೆದ ಕೆಲವು ವಾರಗಳಲ್ಲಿ ಪತ್ರಕರ್ತರು ಸೇರಿದಂತೆ ಕಲೆಯೊಂದಿಗೆ ಸಂಬಂಧವಿಟ್ಟುಕೊಂಡಿದ್ದ ನೂರಾರು ಮಹಿಳೆಯರು ಅಪ್ಘಾನಿಸ್ತಾನವನ್ನು ತ್ಯಜಿಸಿದ್ದಾರೆ. ರಿಪೋರ್ಟರ್ಸ್ ವಿದೌಟ್ ಬಾರ್ಡರ್ಸ್ ಮಾಡಿರುವ ಒಂದು ವರದಿಯ ಪ್ರಕಾರ ಅಫ್ಘಾನಿಸ್ತಾನದ ಮಹಿಳಾ ಪತ್ರಕರ್ತೆಯರು ಇದ್ದಕ್ಕಿದ್ದಂತೆ ಕಾಣೆಯಾಗುತ್ತಿದ್ದಾರೆ ಮತ್ತು ತಾಲಿಬಾನ ಅಫ್ಘಾನಿಸ್ತಾನವನ್ನು ವಶಪಡಿಸಿಕೊಳ್ಳುವ ಮೊದಲು 700 ರಷ್ಟಿದ್ದ ಅವರ ಸಂಖ್ಯೆ ಇಗ 100 ಕ್ಕೆ ಇಳಿದಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

ಇದನ್ನೂ ಓದಿ:  ಕಾಬೂಲ್ ವಿಮಾನ ನಿಲ್ದಾಣ ಈಗ ತಾಲಿಬಾನ್ ಸುಪರ್ದಿಯಲ್ಲಿದೆ: ಏರ್​ಪೋರ್ಟ್​ ನಿರ್ವಹಣೆಯ ಕೌಶಲ ತಾಲಿಬಾನ್​ಗೆ ಇದೆಯೇ?

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ