AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶ್ರೀಲಂಕಾದಂತೆ ಬಾಂಗ್ಲಾದೇಶ ಬಿಕ್ಕಟ್ಟು ಅನುಭವಿಸುವುದಿಲ್ಲ: ಪ್ರಧಾನಿ ಶೇಖ್ ಹಸೀನಾ

ಇಡೀ ಜಗತ್ತು ಆರ್ಥಿಕ ಸಮಸ್ಯೆಯನ್ನು ಎದುರಿಸುತ್ತಿದೆ ಎಂದು ನಾನು ಭಾವಿಸುತ್ತೇನೆ. ನಾವೂ ಕೂಡಾ ಸಮಸ್ಯೆ ಎದುರಿಸುತ್ತಿದ್ದೇವೆ. ಕೆಲವರು ಸಮಸ್ಯೆಗಳನ್ನು ಎತ್ತುತ್ತಿದ್ದಾರೆ . ಓಹ್, ಬಾಂಗ್ಲಾದೇಶವು ಶ್ರೀಲಂಕಾದಂತಾಗುತ್ತದೆ. ಇದು,  ಅದು ಎಂದು ಹೇಳುತ್ತಾರೆ. ಆದರೆ ಅದರಂತಾಗಲ್ಲ..

ಶ್ರೀಲಂಕಾದಂತೆ ಬಾಂಗ್ಲಾದೇಶ ಬಿಕ್ಕಟ್ಟು ಅನುಭವಿಸುವುದಿಲ್ಲ: ಪ್ರಧಾನಿ ಶೇಖ್ ಹಸೀನಾ
ಶೇಖ್ ಹಸೀನಾ
TV9 Web
| Updated By: ರಶ್ಮಿ ಕಲ್ಲಕಟ್ಟ|

Updated on:Sep 04, 2022 | 1:47 PM

Share

ಢಾಕಾ: ಬಾಂಗ್ಲಾದೇಶವು (Bangladesh) ಶ್ರೀಲಂಕಾದ( Sri Lanka) ಹಾದಿಯಲ್ಲಿ ಹೋಗಬಹುದೆಂಬ ಕಳವಳವನ್ನು ತಳ್ಳಿಹಾಕಿದ ಪ್ರಧಾನಿ ಶೇಖ್ ಹಸೀನಾ (Sheikh Hasina) , ಕೋವಿಡ್ -19 ಸಾಂಕ್ರಾಮಿಕ ಮತ್ತು ಉಕ್ರೇನ್‌ನಲ್ಲಿನ ಸಂಘರ್ಷದ ಹೊರತಾಗಿಯೂ, ತನ್ನ ದೇಶದ ಆರ್ಥಿಕತೆಯು ದೃಢವಾದ ಸ್ಥಿತಿಯಲ್ಲಿದೆ. ಯಾವುದೇ ಸಾಲವನ್ನು ತೆಗೆದುಕೊಳ್ಳುವಾಗ ನಮ್ಮ ಆಡಳಿತವು ಉನ್ನತ ಮಟ್ಟದ ಶ್ರದ್ಧೆಯನ್ನು ನಡೆಸುತ್ತದೆ ಎಂದು ಹೇಳಿದ್ದಾರೆ. ಎಎನ್‌ಐ ಜತೆ ಮಾತನಾಡಿದ ಹಸೀನಾ ಪ್ರಸ್ತುತ ಇಡೀ ಜಗತ್ತು ಬಾಂಗ್ಲಾದೇಶಕ್ಕೆ ಮಾತ್ರ ಸೀಮಿತವಾಗಿಲ್ಲದ ಸವಾಲುಗಳನ್ನು ಎದುರಿಸುತ್ತಿದೆ ಎಂದು ಹೇಳಿದರು .ನಮ್ಮ ಆರ್ಥಿಕತೆ ಪ್ರಬಲವಾಗಿದೆ. ಆದರೂ, ನಾವು ಈ ಕೊವಿಡ್ -19 ಸಾಂಕ್ರಾಮಿಕವನ್ನು ಎದುರಿಸಿದ್ದೇವೆ, ಈಗ ಉಕ್ರೇನ್-ರಷ್ಯಾ ಯುದ್ಧ. ಅದು ಇಲ್ಲಿ ಪರಿಣಾಮ ಬೀರುತ್ತದೆ. ಆದರೆ ಸಾಲದ ದರದಲ್ಲಿ, ಬಾಂಗ್ಲಾದೇಶ ಯಾವಾಗಲೂ ಎಲ್ಲಾ ಸಾಲಗಳನ್ನು ಸಮಯೋಚಿತವಾಗಿ ಪಾವತಿಸುತ್ತದೆ. ಹಾಗಾಗಿ ನಮ್ಮ ಸಾಲದ ಪ್ರಮಾಣ ತೀರಾ ಕಡಿಮೆ. ಶ್ರೀಲಂಕಾಕ್ಕೆ ಹೋಲಿಸುವುದಾದರೆ ನಮ್ಮ ಆರ್ಥಿಕತ ಮತ್ತು ಅಭಿವೃದ್ಧಿ ಲೆಕ್ಕಾಚಾರದಿಂದ ಕೂಡಿದ್ದು ಎಂದು ಬಾಂಗ್ಲಾ ಪ್ರಧಾನಿ ಹೇಳಿದ್ದಾರೆ . ಆ ಕ್ರಮಗಳಿಂದಾಗಿತನ್ನ ದೇಶವು ಆರ್ಥಿಕ ರಂಗದಲ್ಲಿ ಸುರಕ್ಷಿತವಾಗಿದೆ ಎಂದಿದ್ದಾರೆ ಹಸೀನಾ. ಬಾಂಗ್ಲಾದೇಶವು ಕೈಗೊಂಡ ಯೋಜನೆಯಿಂದ ಪ್ರಯೋಜನ ಪಡೆಯುತ್ತದೆ ಎಂದು ಖಚಿತ ಮಾಡಿದ ನಂತರವೇ ಯಾವುದೇ ಸಾಲವನ್ನು ತೆಗೆದುಕೊಳ್ಳುತ್ತದೆ ಎಂದು ಅವರು ಹೇಳಿದ್ದಾರೆ.

“ಇಡೀ ಜಗತ್ತು ಆರ್ಥಿಕ ಸಮಸ್ಯೆಯನ್ನು ಎದುರಿಸುತ್ತಿದೆ ಎಂದು ನಾನು ಭಾವಿಸುತ್ತೇನೆ. ನಾವೂ ಕೂಡಾ ಸಮಸ್ಯೆ ಎದುರಿಸುತ್ತಿದ್ದೇವೆ. ಕೆಲವರು ಸಮಸ್ಯೆಗಳನ್ನು ಎತ್ತುತ್ತಿದ್ದಾರೆ . ಓಹ್, ಬಾಂಗ್ಲಾದೇಶವು ಶ್ರೀಲಂಕಾದಂತಾಗುತ್ತದೆ. ಇದು,  ಅದು ಎಂದು ಹೇಳುತ್ತಾರೆ. ಆದರೆ ಅದರಂತಾಗಲ್ಲ ಎಂದು ನಾನು ಭರವಸೆ ನೀಡಬಲ್ಲೆ. ಏಕೆಂದರೆ ನಾವು ನಮ್ಮ ಎಲ್ಲಾ ಅಭಿವೃದ್ಧಿ ಯೋಜನೆಗಳು, ನಾವು ಏನು ಸಿದ್ಧಪಡಿಸುತ್ತೇವೆ ಮತ್ತು ಕಾರ್ಯಗತಗೊಳಿಸುತ್ತೇವೆ, ಅದರ ಫಲಿಶಾಶ ಹೇಗಿರುತ್ತದೆ? ಜನರು ಹೇಗೆ ಫಲಾನುಭವಿಗಳಾಗುತ್ತಾರೆ? ಎಂಬುದನ್ನು ಯೋಚಿಸುತ್ತೇವೆ. ಹಾಗೆ ಇಲ್ಲ್ಲದಿದ್ದರೆ ನಾನು ಯಾವುದೇ ಯೋಜನೆಯನ್ನು (ಹಣಕ್ಕಾಗಿ) ತೆಗೆದುಕೊಳ್ಳುವುದಿಲ್ಲ ಎಂದು ಹಸೀನಾ ಹೇಳಿದ್ದಾರೆ.

ಶ್ರೀಲಂಕಾದ ಆರ್ಥಿಕತೆಯು ಕುಸಿಯಿತು ಮತ್ತು ಚೀನಾದಂತಹ ದೇಶಗಳು ಮಹತ್ವಾಕಾಂಕ್ಷೆಯ ಯೋಜನೆಗಳಲ್ಲಿ ವಿಸ್ತರಿಸಿದ ಸಾಲಗಳು ಒಂದು ಸಮಂಜಸವಾದ ಆದಾಯವನ್ನು ನೀಡದಿರುವುದು ಸೋಲಿಗೆ ಕಾರಣವಾದ ಅಂಶಗಳಾಗಿವೆ ಎಂದು ಅನೇಕ ತಜ್ಞರು ನಂಬಿದ್ದಾರೆ. ಅಭಿವೃದ್ಧಿಶೀಲ ರಾಷ್ಟ್ರಗಳು ವಿಶೇಷವಾಗಿ ದುರ್ಬಲವಾಗಿರುವ ಸಾಲದ ಬಲೆಗಳು ಎಂದು ಅನೇಕ ತಜ್ಞರು ಅಂತಹ ಸಾಲಗಳನ್ನು ಉಲ್ಲೇಖಿಸುತ್ತಾರೆ. ಹಸೀನಾ, ಬಾಂಗ್ಲಾದೇಶ ತನ್ನ ವ್ಯವಹಾರಗಳನ್ನು ನಿರ್ವಹಿಸುವ ವಿಧಾನದ ಬಗ್ಗೆ ಒಳನೋಟಗಳನ್ನು ಹಂಚಿಕೊಂಡಿದ್ದಾರೆ.

ಅಭಿವೃದ್ಧಿಗಾಗಿ ನಾವು ಲೆಕ್ಕಾಚಾರವನ್ನು ಹೊಂದಿದ್ದುನಾವು ನಮ್ಮ ಯೋಜನೆಗಳನ್ನು ಕೈಗೆತ್ತಿಕೊಳ್ಳುವಾಗ, ನಾವು ಇದೇ ರೀತಿಯ ಪರಿಸ್ಥಿತಿಯನ್ನು ಎದುರಿಸುವುದಿಲ್ಲ ಎಂದು ನಾನು ಭಾವಿಸುತ್ತೇನೆ.ಅಷ್ಟೇ ಅಲ್ಲ, ನೀತಿ ವಿಷಯದಲ್ಲಿ, ಕೋವಿಡ್ 19 ರೋಗ ಆರಂಭವಾದಾಗ, ನಾನು ನಮ್ಮ ಜನರನ್ನು ಕರೆದು ನಾವು ಗ್ರಾಮ ಮಟ್ಟದವರೆಗೆ ಎಲ್ಲಾ ರೀತಿಯ ಬೆಂಬಲ ಮತ್ತು ಒಳಹರಿವುಗಳನ್ನು ಒದಗಿಸಿದ್ದೇವೆ. ನಮ್ಮ ಜನರು ಅವರು ಬೆಳೆಯಬಹುದಾದ ಹೆಚ್ಚು ಆಹಾರ ಪದಾರ್ಥಗಳನ್ನು ಬೆಳೆಯಲು ಪ್ರೋತ್ಸಾಹಿಸುತ್ತೇವೆ, ನೀವು ಏನು ಮಾಡಬೇಕು ಎನ್ನುತ್ತಿದ್ದೀರೋ ನಾನು ಯಾವಾಗಲೂ ಅವರನ್ನು ಬೆಂಬಲಿಸಿದೆ. ನಾವು ಇತರರ ಮೇಲೆ ಅವಲಂಬಿತರಾಗದಂತೆ ನಿಮ್ಮ ಆಹಾರವನ್ನು ನೀವು ಬೆಳೆಯಬೇಕು ಎಂದು ಹೇಳಿದೆ. ಆದಾಗ್ಯೂ, ಉಕ್ರೇನ್‌ನಲ್ಲಿನ ಸಂಘರ್ಷವು ತನ್ನ ದೇಶಕ್ಕೆ ಕೆಲವು ಸಮಸ್ಯೆಗಳನ್ನು ತಂದಿದೆ ಎಂದು ಹಸೀನಾ ಹೇಳಿದ್ದಾರೆ. ಇದು ಅದರ ಬಗ್ಗೆ ನಿಸ್ಸಂದೇಹವಾಗಿ ಕೆಟ್ಟ ಪರಿಣಾಮವನ್ನು ಬೀರುತ್ತದೆ, ವಿಶೇಷವಾಗಿ ನಾವು ಇತರ ದೇಶಗಳಿಂದ ಆಮದು ಮಾಡಿಕೊಳ್ಳುವ ವಸ್ತುಗಳ ಮೇಲೆ ಪರಿಣಾಮ ಬೀರಲಿದೆ ಎಂದು ಅವರು ಹೇಳಿದರು.

Published On - 1:11 pm, Sun, 4 September 22