AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಾಕಿಸ್ತಾನ ಮೂಲದ ಸಲಿಂಗಿ ಬ್ರಿಟನ್ ಸಂಸತ್ ಸದಸ್ಯ ಇಮ್ರಾನ್ ಬಾಲಕನೊಬ್ಬನ ಮೇಲೆ ನಡೆಸಿದ ಲೈಂಗಿಕ ಹಲ್ಲೆ ಸಾಬೀತಾಗಿದೆ

ತಮ್ಮ ವಿರುದ್ಧ ಮಾಡಿದ ಆರೋಪಗಳನ್ನು ಅಲ್ಲಗಳೆದಿದ್ದ 48-ವರ್ಷ ವಯಸ್ಸಿನ ಇಮ್ರಾನ್ ಅವರನ್ನು ಕನ್ಸರ್ ವೇಟಿವ್ ಪಕ್ಷ ಸಸ್ಪೆಂಡ್ ಮಾಡಿದೆ. ಸೋಮವಾರ ತೀರ್ಪು ಹೊರಬೀಳುತ್ತಿದ್ದಂತೆ ಬ್ರಿಟನ್ ಸಂಸತ್ತಿನಲ್ಲಿ ವಿರೋಧ ಪಕ್ಷವಾಗಿರುವ ಲೇಬರ್ ಪಾರ್ಟಿಯು ಇಮ್ರಾನ್ ಕೂಡಲೇ ಸಂಸತ್ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದೆ.

ಪಾಕಿಸ್ತಾನ ಮೂಲದ ಸಲಿಂಗಿ ಬ್ರಿಟನ್ ಸಂಸತ್ ಸದಸ್ಯ ಇಮ್ರಾನ್ ಬಾಲಕನೊಬ್ಬನ ಮೇಲೆ ನಡೆಸಿದ ಲೈಂಗಿಕ ಹಲ್ಲೆ ಸಾಬೀತಾಗಿದೆ
ಪಾಕ್ ಮೂಲದ ಬ್ರಿಟನ್ ಸಂಸತ್ ಸದಸ್ಯ ಇಮ್ರಾನ್ ಅಹ್ಮದ್​ ಖಾನ್
TV9 Web
| Edited By: |

Updated on: Apr 12, 2022 | 12:19 PM

Share

ಲಂಡನ್: ಸುಮಾರು 13 ವರ್ಷಗಳ 15 ವರ್ಷ ಬಾಲಕನ ಮೇಲೆ ಮನೆಯೊಂದರಲ್ಲಿ ಲೈಂಗಿಕ ಶೋಷಣೆ ನಡೆಸಿದ ಆರೋಪ ಎದುರಿಸುತ್ತಿದ್ದ ಪಾಕಿಸ್ತಾನ ಮೂಲದ ಕನ್ಸರ್ವೇಟಿವ್ ಪಕ್ಷದ (Conservative party) ಉತ್ತರ ಇಂಗ್ಲೆಂಡ್ ಒಬ್ಬ ಸಂಸತ್ ಸದಸ್ಯ (Member of Parliament) ದೋಷಿ ಎಂದು ಸಾಬೀತಾಗಿದೆ. ಲಂಡನ್ನಿನ ಸೌತ್ವಾರ್ಕ್ ಕೋರ್ಟ್​ನಲ್ಲಿ ಒಂದು ವಾರದವರೆಗೆ ನಡೆದ ವಿಚಾರಣೆಯ ನಂತರ ಪಶ್ಚಿಮ ಯಾರ್ಕ್ ಶೈರ್ ವೇಕ್ ಫೀಲ್ಡ್ ಸಂಸತ್ ಸದಸ್ಯ ಇಮ್ರಾನ್ ಅಹ್ಮದ ಖಾನ್ (Imran Ahmed Khan) ಅವರನ್ನು ದೋಷಿ ಎಂದು ಕೋರ್ಟ್ ಪರಿಗಣಿಸಿದೆ. 2008 ರಲ್ಲಿ ಪಾರ್ಟಿಯೊಂದು ನಡೆಯುತ್ತಿದ್ದಾಗ ಸಂತ್ರಸ್ತನಿಗೆ ಬಲವಂತವಾಗಿ ಜಿನ್ ಕುಡಿಸಿದ ಇಮ್ರಾನ್ ಬಳಿಕ ಅವನನ್ನು ಮನೆಯ ಮೆಲ್ಮಹಡಿಗೆ ಎಳೆದೊಯ್ದು ಅವನ ಮೇಲೆ ಅಸಹಜ ಲೈಂಗಿಕ ಅತ್ಯಾಚಾರವೆಸಗುವ ಮುನ್ನ ನೀಲಿಚಿತ್ರಗಳನ್ನು ತೋರಿಸಿದ್ದರು ಎಂದು ನ್ಯಾಯಾಲಯಲಕ್ಕೆ ತಿಳಿಸಲಾಗಿತ್ತು.

ತಮ್ಮ ವಿರುದ್ಧ ಮಾಡಿದ ಆರೋಪಗಳನ್ನು ಅಲ್ಲಗಳೆದಿದ್ದ 48-ವರ್ಷ ವಯಸ್ಸಿನ ಇಮ್ರಾನ್ ಅವರನ್ನು ಕನ್ಸರ್ವೇಟಿವ್ ಪಕ್ಷ ಸಸ್ಪೆಂಡ್ ಮಾಡಿದೆ. ಸೋಮವಾರ ತೀರ್ಪು ಹೊರಬೀಳುತ್ತಿದ್ದಂತೆ ಬ್ರಿಟನ್ ಸಂಸತ್ತಿನಲ್ಲಿ ವಿರೋಧ ಪಕ್ಷವಾಗಿರುವ ಲೇಬರ್ ಪಾರ್ಟಿಯು ಇಮ್ರಾನ್ ಕೂಡಲೇ ಸಂಸತ್ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದೆ.

ಇಮ್ರಾನ್ ಅಹ್ಮದ್ ಖಾನ್ ಕೂಡಲೇ ರಾಜೀನಾಮೆ ಸಲ್ಲಿಸಿದಲ್ಲಿ ಮರು ಚುನಾವಣೆ ನಡೆಯುವುದು ಸಾಧ್ಯವಾಗುತ್ತದೆ ಮತ್ತು ವೇಕ್ ಫೀಲ್ಡ್ ಜನ ಒಬ್ಬ ಯೋಗ್ಯ ಅಭ್ಯರ್ಥಿಯನ್ನು ಆರಿಸಬಹುದು ಎಂದು ಲೇಬರ್ ಪಕ್ಷದ ವಕ್ತಾರೊಬ್ಬರು ಹೇಳಿದ್ದಾರೆ. ಈಗ 29 ವರ್ಷದವರಾಗಿರುವ ಸಂತ್ರಸ್ತ ಆ ಅಕ್ರಮಣದಿಂದ ತಾನು ಆಘಾತ ಮತ್ತು ಭೀತಿಗೊಳಗಾಗಿದ್ದೆ ಅಂತ ಹೇಳಿದ್ದರು.

2019 ರ ಬ್ರಿಟನ್ ಸಾರ್ವತ್ರಿಕ ಚುನಾವಣೆಯಲ್ಲಿ ಖಾನ್ ಸ್ಪಧಿಸಿದ್ದಾಗ ಹೆಸರಿಸಲಾಗದ ಈ ಸಂತ್ರಸ್ತ ಲೇಬರ್ ಪಕ್ಷವನ್ನು ಸಂಪರ್ಕಿಸಿದ್ದರು, ಪಕ್ಷ ಯಾವುದೇ ಕ್ರಮ ತೆಗೆದುಕೊಳ್ಳದೆ ಹೋದಾಗ ಮತ್ತು ಖಾನ್ ಸಂಸತ್ತಿಗೆ ಆಯ್ಕೆಯಾದ ಬಳಿಕ ಸಂತ್ರಸ್ತ ಪೊಲೀಸರಿಗೆ ದೂರು ಸಲ್ಲಿಸಿದರು.

ಸಲಿಂಗಿಯಾಗಿರುವ ಖಾನ್ ಸಂತ್ರಸ್ತನ ಮೇಲೆ ಲೈಂಗಿಕ ಅತ್ಯಾಚಾರ ನಡೆಸಿದ ಅರೋಪವನ್ನು ಅಲ್ಲಗಳೆದಿದ್ದರು ಮತ್ತು ಈ ಹದಿಹರೆಯದ ಕೆಥೋಲಿಕ್ ಹುಡುಗ ತನ್ನ ಲೈಂಗಿಕತೆ ಬಗ್ಗೆ ವಿಪರೀತ ಅನಿಸುವಷ್ಟು ವಿಮುಖನಾದಾಗ ಕೇವಲ ಅವನ ಮೊಣಕೈಯನ್ನು ಮುಟ್ಟಿದ್ದಾಗಿ ಹೇಳಿದ್ದರು.

ಆಗ 34 ವರ್ಷದವನಾಗಿದ್ದ ಖಾನ್, ನೀಲಿ ಚಿತ್ರಗಳ ವಿಷಯ ಚರ್ಚೆಗೆ ಬಂದ ಬಳಿಕ ಉದಾಸೀನನಾಗಿದ್ದ ಹುಡುಗನಿಗೆ ಸಂತೈಸಿ ನೆರವಾಗುವ ಪ್ರಯತ್ನ ಮಾಡಿದಾಗ ಅವನು ಕೋಣೆಯೊಂದನ್ನು ಹೊಕ್ಕು ಬೋಲ್ಟ್ ಹಾಕಿಕೊಂಡ ಎಂದು ಖಾನ್ ಹೇಳಿದ್ದರು. ಖಾನ್ಗೆ ಶಿಕ್ಷೆಯ ಪ್ರಮಾಣವನ್ನು ನ್ಯಾಯಾಲಯ ಕೆಲದಿನಗಳ ನಂತರ ಘೋಷಿಸಲಿದೆ.

ಒಂದು ಪಕ್ಷ ಒಂದು ವರ್ಷಕ್ಕಿಂತ ಹೆಚ್ಚಿನ ಅವಧಿಯ ಶಿಕ್ಷೆಯನ್ನು ನ್ಯಾಯಾಲಯ ವಿಧಿಸಿದರೆ, ಅವರನ್ನು ಸಂಸತ್ ಸದಸ್ಯನ ಸ್ಥಾನದಿಂದ ಕೂಡಲೇ ಪದಚ್ಯುತಗೊಳಿಸಲಾಗುವುದು ಮತ್ತು ವೇಕ್ ಫೀಲ್ಡ್​ನಲ್ಲಿ ಉಪ-ಚುನಾವಣೆ ನಡೆಯುವುದ ಅನಿವಾರ್ಯ ಆಗಿಬಿಡುತ್ತದೆ.

ಶಿಕ್ಷೆಯ ಪ್ರಮಾಣ 12 ತಿಂಗಳುಗಳಿಗಿಂತ ಕಡಿಮೆಯಿದ್ದರೆ, ಮೇಲ್ಮನವಿ ಪ್ರಕ್ರಿಯೆಗಳು ಪೂರ್ಣಗೊಂಡ ನಂತರ ಕ್ಷೇತ್ರದ ಮತದಾರರು ಮರುಸ್ಥಾಪನೆ ವಿಧಾನ ಜಾರಿಗೊಳಿಸಿ ಉಪಚುನಾವಣೆಯನ್ನು ನಡೆಸುವಂತೆ ಆಗ್ರಹಿಸಬಹುದು.

ಇದನ್ನೂ ಓದಿ:  Shehbaz Sharif: ಪಾಕಿಸ್ತಾನದ ನೂತನ ಪ್ರಧಾನಿಯಾಗಿ ಶೆಹಬಾಜ್ ಷರೀಫ್ ಅವಿರೋಧ ಆಯ್ಕೆ

ಬುದ್ಧಿ ಕಲಿಯುತ್ತಿಲ್ಲ ಗಿಲ್ಲಿ, ಕಾವ್ಯಾಗಾಗಿ ಸ್ಪಂದನಾಗೆ ಅನ್ಯಾಯ
ಬುದ್ಧಿ ಕಲಿಯುತ್ತಿಲ್ಲ ಗಿಲ್ಲಿ, ಕಾವ್ಯಾಗಾಗಿ ಸ್ಪಂದನಾಗೆ ಅನ್ಯಾಯ
ಖಾಸಗಿ ಬಸ್​​ಗಳ ನಡುವೆ ರೇಸ್​​: ಕೂದಲೆಳೆ ಅಂತರದಲ್ಲಿ ತಪ್ಪಿದ ದೊಡ್ಡ ಅನಾಹುತ
ಖಾಸಗಿ ಬಸ್​​ಗಳ ನಡುವೆ ರೇಸ್​​: ಕೂದಲೆಳೆ ಅಂತರದಲ್ಲಿ ತಪ್ಪಿದ ದೊಡ್ಡ ಅನಾಹುತ
ಕೇರಳ ಸರ್ಕಾರಕ್ಕೆ ಎಚ್ಚರಿಕೆ ಕೊಟ್ಟ ಡಿಸಿಎಂ ಡಿಕೆ ಶಿವಕುಮಾರ್
ಕೇರಳ ಸರ್ಕಾರಕ್ಕೆ ಎಚ್ಚರಿಕೆ ಕೊಟ್ಟ ಡಿಸಿಎಂ ಡಿಕೆ ಶಿವಕುಮಾರ್
ವಿದ್ಯಾರ್ಥಿಗಳ ಕೈಯಲ್ಲಿ ಕಾರು ತೊಳೆಸಿದ ಶಿಕ್ಷಕ
ವಿದ್ಯಾರ್ಥಿಗಳ ಕೈಯಲ್ಲಿ ಕಾರು ತೊಳೆಸಿದ ಶಿಕ್ಷಕ
ತೆಲಂಗಾಣದ ಹಾಸ್ಟೆಲ್​ನಲ್ಲಿ ವಿದ್ಯಾರ್ಥಿನಿಯ ಮೇಲೆ ವಾರ್ಡನ್ ದರ್ಪ
ತೆಲಂಗಾಣದ ಹಾಸ್ಟೆಲ್​ನಲ್ಲಿ ವಿದ್ಯಾರ್ಥಿನಿಯ ಮೇಲೆ ವಾರ್ಡನ್ ದರ್ಪ
ಮಾಳು, ಸೂರಜ್ ಎಲಿಮಿನೇಷನ್ ಬಗ್ಗೆ ರಕ್ಷಿತಾಗೆ ಮೊದಲೇ ಗೊತ್ತಿತ್ತು?
ಮಾಳು, ಸೂರಜ್ ಎಲಿಮಿನೇಷನ್ ಬಗ್ಗೆ ರಕ್ಷಿತಾಗೆ ಮೊದಲೇ ಗೊತ್ತಿತ್ತು?
ಹೊಸ ವರ್ಷಕ್ಕೆ ಶುಭಸುದ್ದಿ: ಫಲಾನುಭವಿಗಳ ಖಾತೆಗೆ ಬಂದ ಗೃಹಲಕ್ಷ್ಮಿ
ಹೊಸ ವರ್ಷಕ್ಕೆ ಶುಭಸುದ್ದಿ: ಫಲಾನುಭವಿಗಳ ಖಾತೆಗೆ ಬಂದ ಗೃಹಲಕ್ಷ್ಮಿ
ಡಿಕಾಕ್ ಸಿಡಿಲಬ್ಬರ... ಸನ್​ರೈಸರ್ಸ್ ತಂಡಕ್ಕೆ ಬೋನಸ್ ಪಾಯಿಂಟ್
ಡಿಕಾಕ್ ಸಿಡಿಲಬ್ಬರ... ಸನ್​ರೈಸರ್ಸ್ ತಂಡಕ್ಕೆ ಬೋನಸ್ ಪಾಯಿಂಟ್
ಹೊಸ ವರ್ಷ ಸ್ವಾಗತಕ್ಕೆ ಬೆಂಗಳೂರು ಸಜ್ಜು: ಪಬ್​ಗಳಲ್ಲಿ ಹೇಗಿದೆ ಸುರಕ್ಷತೆ?
ಹೊಸ ವರ್ಷ ಸ್ವಾಗತಕ್ಕೆ ಬೆಂಗಳೂರು ಸಜ್ಜು: ಪಬ್​ಗಳಲ್ಲಿ ಹೇಗಿದೆ ಸುರಕ್ಷತೆ?
ಮಂತ್ರಾಲಯದ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ವೈಕುಂಠ ಏಕಾದಶಿ
ಮಂತ್ರಾಲಯದ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ವೈಕುಂಠ ಏಕಾದಶಿ