AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಏಕಾಏಕಿ ಟಿಬೆಟ್​ಗೆ ಭೇಟಿ ನೀಡಿದ ಚೀನಾ ಅಧ್ಯಕ್ಷ; ಷಿ ಜಿನ್​ಪಿಂಗ್​​ರ ಈ 3 ದಿನಗಳ ಪ್ರವಾಸದಿಂದ ಭಾರತಕ್ಕೆ ಅಪಾಯ ಎಂದ ಅಮೆರಿಕ ಸಂಸದ

ಕಳೆದ ವಾರ ಚೀನಾದ ಸರ್ವಾಧಿಕಾರಿ ಕ್ಸಿ ಜಿನ್​ಪಿಂಗ್ ಭಾರತದ ಗಡಿ ಸಮೀಪ ಇರುವ ಟಿಬೆಟ್​ಗೆ ಭೇಟಿ ಕೊಟ್ಟಿದ್ದರು. ನನಗೆ ಗೊತ್ತಿರುವ ಪ್ರಕಾರ ಕಳೆದ 30ವರ್ಷಗಳಲ್ಲಿ ಚೀನಾದ ಅಧ್ಯಕ್ಷರಾದವರು ಟಿಬೆಟ್​ಗೆ ಭೇಟಿ ಕೊಟ್ಟಿದ್ದು ಎಂದು ಅಮೆರಿಕ ಸಂಸದ ಹೇಳಿದ್ದಾರೆ.

ಏಕಾಏಕಿ ಟಿಬೆಟ್​ಗೆ ಭೇಟಿ ನೀಡಿದ ಚೀನಾ ಅಧ್ಯಕ್ಷ; ಷಿ ಜಿನ್​ಪಿಂಗ್​​ರ ಈ 3 ದಿನಗಳ ಪ್ರವಾಸದಿಂದ ಭಾರತಕ್ಕೆ ಅಪಾಯ ಎಂದ ಅಮೆರಿಕ ಸಂಸದ
ಚೀನಾ ಅಧ್ಯಕ್ಷ ಕ್ಸಿ ಜಿನ್​​ಪಿಂಗ್​
TV9 Web
| Updated By: Lakshmi Hegde|

Updated on:Jul 27, 2021 | 2:43 PM

Share

ವಾಷಿಂಗ್ಟನ್​: ಚೀನಾ ಅಧ್ಯಕ್ಷ ಷಿ ಜಿನ್​ಪಿಂಗ್ (Xi Jinping)​ ಅವರ ಕಳೆದ ವಾರದ ಟಿಬೆಟ್​ ಭೇಟಿ ಭಾರತಕ್ಕೆ ಅಪಾಯ ತಂದೊಡ್ಡಬಹುದು ಎಂದು ಅಮೆರಿಕ (America)ದ ಜನಪ್ರತಿನಿಧಿಯೊಬ್ಬರು ಹೇಳಿದ್ದಾರೆ. ಅಲ್ಲದೆ, ಅಮೆರಿಕ ಅಧ್ಯಕ್ಷ ಜೋ ಬೈಡನ್ (Jeo Biden)​ ಚೀನಾದ ಮುನ್ನುಗ್ಗುವಿಕೆಯನ್ನು ತಡೆಗಟ್ಟಲು ಯಾವ ಪ್ರಯತ್ನವನ್ನೂ ಮಾಡುತ್ತಿಲ್ಲ ಎಂದು ಆರೋಪಿಸಿದ್ದಾರೆ. ಚೀನಾ ಅಧ್ಯಕ್ಷ ಕಳೆದ ಬುಧವಾರದಿಂದ ಮೂರು ದಿನ ಟಿಬೆಟ್​ನ ನ್ಯಿಂಗ್​ಚೀ ಪ್ರವಾಸ ಕೈಗೊಂಡಿದ್ದರು. ಈ ಪ್ರದೇಶ ಅರುಣಾಚಲ ಪ್ರದೇಶದಿಂದ ತುಂಬ ಸನಿಹದಲ್ಲಿದೆ. ಚೀನಾ ಅಧ್ಯಕ್ಷ (Chinese President)ರು ಪ್ರವಾಸದ ಬಗ್ಗೆ ಮುಂಚಿತವಾಗಿ ಯಾವುದೇ ಘೋಷಣೆ ಮಾಡದೆ ಇರುವುದು ಈಗ ಹಲವು ಅನುಮಾನಗಳಿಗೆ ಕಾರಣವಾಗಿದೆ. ಇನ್ನು ಚೀನಾ ಕಮ್ಯೂನಿಸ್ಟ್​ ಪಕ್ಷದ ಪ್ರಧಾನ ಕಾರ್ಯದರ್ಶಿಯೂ ಆಗಿರುವ ಕ್ಸಿ ಜಿನ್​ಪಿಂಗ್​, ಟಿಬೆಟ್​​ನ ಮಿಲಿಟರಿ ಕಮಾಂಡ್​ ಅಧಿಕಾರಿಗಳನ್ನು ಭೇಟಿಯಾಗಿ, ಪ್ರಾದೇಶಿಕವಾಗಿ ನಡೆಯುತ್ತಿರುವ ಅಭಿವೃದ್ಧಿ ಕಾರ್ಯಗಳ ಪರಿಶೀಲನೆ ಮಾಡಿದ್ದಾರೆ.

ಈ ಬಗ್ಗೆ ಮಾತನಾಡಿದ ಅಮೆರಿಕ ರಿಪಬ್ಲಿಕನ್​ ಪಕ್ಷದ ಸಂಸದ ಡೆವಿನ್ ನುನ್ಸ್​, ಕಳೆದ ವಾರ ಚೀನಾದ ಸರ್ವಾಧಿಕಾರಿ ಷಿ ಜಿನ್​ಪಿಂಗ್ ಭಾರತದ ಗಡಿ ಸಮೀಪ ಇರುವ ಟಿಬೆಟ್​ಗೆ ಭೇಟಿ ಕೊಟ್ಟಿದ್ದರು. ನನಗೆ ಗೊತ್ತಿರುವ ಪ್ರಕಾರ ಕಳೆದ 30ವರ್ಷಗಳಲ್ಲಿ ಚೀನಾದ ಅಧ್ಯಕ್ಷರಾದವರು ಟಿಬೆಟ್​ಗೆ ಭೇಟಿ ಕೊಟ್ಟಿದ್ದು ಇದೇ ಮೊದಲು. ಖಂಡಿತ ಅವರ ಭೇಟಿ ಭಾರತಕ್ಕೆ ಅಪಾಯದ ಬೆದರಿಕೆಯಾಗಲಿದೆ. ಇನ್ನು ಈ ಪ್ರದೇಶದಲ್ಲಿ ಬ್ರಹ್ಮಪುತ್ರಾ ನದಿಗೆ (ಈ ನದಿಗೆ ಟಿಬೆಟಿಯನ್ ಭಾಷೆಯಲ್ಲಿ ಯಾರ್ಲುಂಗ್ ತ್ಸಾಂಗ್ಪೋ ಎಂದು ಕರೆಯುತ್ತಾರೆ) ಅಣೆಕಟ್ಟು ಕಟ್ಟುವ ದೊಡ್ಡ ಯೋಜನೆಯನ್ನು ಚೀನಾ ಹಾಕಿಕೊಂಡಿದ್ದು, ಇದರಿಂದ ಭಾರತಕ್ಕೆ ತೊಂದರೆಯಾಗುವ ಸಾಧ್ಯತೆ ಹೆಚ್ಚಾಗಿದೆ ಎಂದು ಹೇಳಿದ್ದಾರೆ.

ಷಿ ಜಿನ್​ಪಿಂಗ್ ​ ಅವರು ನ್ಯಿಂಗ್​ ಚೀಗೆ ಭೇಟಿ ನೀಡಿದ್ದಾಗ, ಬ್ರಹ್ಮಪುತ್ರಾ ನದಿಯ ಜಲಾನಯನ ಪ್ರದೇಶದಲ್ಲಿನ ಪರಿಸರ ಸಂರಕ್ಷಣೆಯನ್ನು ಪರಿಶೀಲಿಸುವ ಸಲುವಾಗಿ ನ್ಯಾಂಗ್​ ನದಿಯ ಸೇತುವೆ ಬಳಿಯೂ ತೆರಳಿದ್ದರು. ಟಿಬೆಟ್​​ ಬಳಿ ಬ್ರಹ್ಮಪುತ್ರಾ ನದಿಗೆ, 14ನೇ ಪಂಚವಾರ್ಷಿಕ ಯೋಜನೆಯಡಿ ದೊಡ್ಡದಾದ ಅಣೆಕಟ್ಟು ನಿರ್ಮಾಣಕ್ಕೆ ಚೀನಾ ಈ ವರ್ಷ ಅನುಮೋದನೆ ನೀಡಿದ್ದು, ಇದರಿಂದ ಭಾರತ ಮತ್ತು ಬಾಂಗ್ಲಾದೇಶಗಳಿಗೆ ಸಹಜವಾಗಿಯೇ ಕಳವಳ ಉಂಟಾಗಿದೆ. ಅದರಲ್ಲೂ ಕಳೆದ ವಾರ ಷಿ ಜಿನ್​ಪಿಂಗ್​ ಟಿಬೆಟ್​ಗೆ ಭೇಟಿ ಕೊಟ್ಟಿದ್ದು ಇನ್ನಷ್ಟು ಕುತೂಹಲಕ್ಕೆ ಕಾರಣವಾಗಿದೆ. ಇದರ ಬಗ್ಗೆ ನುನ್ಸ್ ಅಸಮಾಧಾನ ವ್ಯಕ್ತಪಡಿಸಿದ್ದು, ಚೀನಾದ ಸರಹದ್ದು ದಾಟುವಿಕೆಯ ಪ್ರವೃತ್ತಿ ಹೆಚ್ಚುತ್ತಿದೆ. ಅದನ್ನು ನಿಯಂತ್ರಿಸಬೇಕು. ಆದರೆ ಅಮೆರಿಕ ಅಧ್ಯಕ್ಷ ಜೋ ಬೈಡನ್​ ಕೂಡ ಗಮನ ಹರಿಸುತ್ತಿಲ್ಲ ಎಂದಿದ್ದಾರೆ.

ಇದನ್ನೂ ಓದಿ: ವೇಟ್​ಲಿಫ್ಟಿಂಗ್​ ಮಾಡಿದ ಪುಟ್ಟ ಬಾಲಕಿ! ಮೀರಾಬಾಯಿ ಚಾನು ಅವರ ಪ್ರತಿಕ್ರಿಯೆ ಏನಿತ್ತು ನೋಡಿ

Chinese President Xi Jinping Tibet Visit is threat to India Says US Lawmaker

Published On - 12:40 pm, Tue, 27 July 21

ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆಶಿ ತಂಡದ ಡಿನ್ನರ್​​ ಮೀಟಿಂಗ್​​ ಬಗ್ಗೆ ಸೋಮಶೇಖರ್​​ ಬಿಗ್​​ ಅಪ್ಡೇಟ್​​
ಡಿಕೆಶಿ ತಂಡದ ಡಿನ್ನರ್​​ ಮೀಟಿಂಗ್​​ ಬಗ್ಗೆ ಸೋಮಶೇಖರ್​​ ಬಿಗ್​​ ಅಪ್ಡೇಟ್​​
ಕಾಂಗ್ರೆಸ್​ನ ನೂರಕ್ಕೂ ಹೆಚ್ಚು ಶಾಸಕರು ಡಿಕೆಶಿ ತೆಕ್ಕೆಗೆ?
ಕಾಂಗ್ರೆಸ್​ನ ನೂರಕ್ಕೂ ಹೆಚ್ಚು ಶಾಸಕರು ಡಿಕೆಶಿ ತೆಕ್ಕೆಗೆ?
ಕಷ್ಟಪಟ್ಟಿದ್ದ ಡಿಕೆಶಿಗೆ ಕೊನೆಗೂ ಫಲ, ಅಧಿವೇಶನದ ಬಳಿಕ ಶುಭಸುದ್ದಿ?
ಕಷ್ಟಪಟ್ಟಿದ್ದ ಡಿಕೆಶಿಗೆ ಕೊನೆಗೂ ಫಲ, ಅಧಿವೇಶನದ ಬಳಿಕ ಶುಭಸುದ್ದಿ?