AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Google: ಗೂಗಲ್ ವಿರುದ್ಧ ಐತಿಹಾಸಿಕ ತೀರ್ಪು ನೀಡಿದ ಭಾರತ ಮೂಲದ ಅಮೆರಿಕನ್ ನ್ಯಾಯಮೂರ್ತಿ ಅಮಿತ್ ಮೆಹ್ತಾ

ಸರ್ಚ್ ಮತ್ತು ಪಠ್ಯ ಜಾಹೀರಾತು ಮಾರುಕಟ್ಟೆಗಳಲ್ಲಿ ಸುಂದರ್ ಪಿಚ್ಚೈ ನೇತೃತ್ವದ ಗೂಗಲ್ ಅಕ್ರಮ ಏಕಸ್ವಾಮ್ಯವನ್ನು ಹೊಂದಿದೆ ಎಂದು ಭಾರದ ಮೂಲದ ಅಮೆರಿಕನ್ ನ್ಯಾಯಮೂರ್ತಿ ತೀರ್ಪು ನೀಡಿದ್ದಾರೆ. ನ್ಯಾಯಾಧೀಶರು ನಿರ್ಧರಿಸಿದ್ದಾರೆ. ಈ ನಿರ್ಧಾರವು ಟೆಕ್ ಉದ್ಯಮದ ನಿಯಂತ್ರಣದಲ್ಲಿ ಮಹತ್ವದ ಪಾತ್ರ ವಹಿಸಿದೆ. ಇದು ಟೆಕ್ ದೈತ್ಯ ಸಂಸ್ಥೆಯಾದ ಗೂಗಲ್ ವಿರುದ್ಧದ ಮೊದಲ ಏಕಸ್ವಾಮ್ಯ ವಿರೋಧಿ ತೀರ್ಪಾಗಿದೆ.

Google: ಗೂಗಲ್ ವಿರುದ್ಧ ಐತಿಹಾಸಿಕ ತೀರ್ಪು ನೀಡಿದ ಭಾರತ ಮೂಲದ ಅಮೆರಿಕನ್ ನ್ಯಾಯಮೂರ್ತಿ ಅಮಿತ್ ಮೆಹ್ತಾ
ಗೂಗಲ್
ಸುಷ್ಮಾ ಚಕ್ರೆ
|

Updated on: Aug 06, 2024 | 10:57 PM

Share

ನವದೆಹಲಿ: ಅಕ್ರಮ ಏಕಸ್ವಾಮ್ಯವನ್ನು ಸೃಷ್ಟಿಸಲು ಮತ್ತು ವಿಶ್ವಾದ್ಯಂತ ಡೀಫಾಲ್ಟ್ ಸರ್ಚ್ ಇಂಜಿನ್ ಆಗಲು ಶತಕೋಟಿ ಡಾಲರ್‌ಗಳನ್ನು ಬಳಸಿಕೊಂಡು ಗೂಗಲ್ ಆಂಟಿಟ್ರಸ್ಟ್ ಕಾನೂನುಗಳನ್ನು ಉಲ್ಲಂಘಿಸಿದೆ ಎಂದು ಯುನೈಟೆಡ್ ಸ್ಟೇಟ್ಸ್ ನ್ಯಾಯಮೂರ್ತಿ ಅಮಿತ್ ಮೆಹ್ತಾ ಸೋಮವಾರ ಐತಿಹಾಸಿಕ ತೀರ್ಪು ನೀಡಿದ್ದಾರೆ. 2020ರಲ್ಲಿ ಪ್ರಾರಂಭವಾದ ಈ ಪ್ರಕರಣವು, ಪ್ರವೇಶಕ್ಕೆ ಅಡೆತಡೆಗಳನ್ನು ಸೃಷ್ಟಿಸುವ ಮೂಲಕ ಮತ್ತು ಸ್ವಯಂ-ಸಮರ್ಥನೀಯ ಪ್ರತಿಕ್ರಿಯೆ ಲೂಪ್ ಅನ್ನು ಉತ್ತೇಜಿಸುವ ಮೂಲಕ ಸರ್ಚ್ ಮಾರುಕಟ್ಟೆಯಲ್ಲಿ ಗೂಗಲ್ ತನ್ನ ಪ್ರಾಬಲ್ಯವನ್ನು ಉಳಿಸಿಕೊಂಡಿದೆ ಎಂದು ವಾದಿಸಿದೆ. ಗೂಗಲ್​ನ ಈ ಅಭ್ಯಾಸಗಳು ಏಕಸ್ವಾಮ್ಯದ ಕ್ರಮಗಳನ್ನು ನಿಷೇಧಿಸುವ ಶೆರ್ಮನ್ ಕಾಯಿದೆಯ ವಿಭಾಗ 2 ಅನ್ನು ಉಲ್ಲಂಘಿಸಿದೆ ಎಂದು ನ್ಯಾಯಾಲಯವು ತೀರ್ಮಾನಿಸಿದೆ.

“ಗೂಗಲ್ ಏಕಸ್ವಾಮ್ಯ ಹೊಂದಿದೆ. ಅದು ತನ್ನ ಏಕಸ್ವಾಮ್ಯವನ್ನು ಕಾಪಾಡಿಕೊಳ್ಳಲು ಒಂದಾಗಿ ಕಾರ್ಯನಿರ್ವಹಿಸಿದೆ” ಎಂದು ಯುಎಸ್ ಜಿಲ್ಲಾ ನ್ಯಾಯಾಧೀಶ ಅಮಿತ್ ಮೆಹ್ತಾ ಗೂಗಲ್ ವಿರುದ್ಧದ ಮಹತ್ವದ ತೀರ್ಪು ನೀಡಿದರು.

ಇದನ್ನೂ ಓದಿ: Tulu In Google Translator: ತುಳುವರಿಗೊಂದು ಸಂತಸದ ಸುದ್ದಿ; ಗೂಗಲ್‌ ಟ್ರಾನ್ಸ್‌ಲೇಟರ್‌ ಪಟ್ಟಿಗೆ ಸೇರಿದ ತುಳು ಭಾಷೆ

ಆನ್‌ಲೈನ್ ಸರ್ಚ್ ಮಾರುಕಟ್ಟೆಯ ಶೇ. 90ರಷ್ಟು ಮತ್ತು ಸ್ಮಾರ್ಟ್‌ಫೋನ್ ಹುಡುಕಾಟ ಮಾರುಕಟ್ಟೆಯ ಶೇ. 95ರಷ್ಟನ್ನು ಗೂಗಲ್ ನಿಯಂತ್ರಿಸುತ್ತದೆ ಎಂದು ನ್ಯಾಯಾಧೀಶ ಅಮಿತ್ ಮೆಹ್ತಾ ಹೇಳಿದ್ದಾರೆ. ಈ ಪ್ರಕರಣದ ಮುಂದಿನ ಹಂತವು ಸುದೀರ್ಘವಾದ ಕಾನೂನು ಪ್ರಕ್ರಿಯೆಗಳು ಮತ್ತು ಮೇಲ್ಮನವಿಗಳನ್ನು ಒಳಗೊಂಡಿರುತ್ತದೆ. ಇದು 2026ರವರೆಗೆ ವಿಸ್ತರಿಸಬಹುದು.

ಈ ತೀರ್ಪಿನ ನಂತರ ಗೂಗಲ್ ಮೂಲ ಸಂಸ್ಥೆಯಾದ ಆಲ್ಫಾಬೆಟ್‌ನ ಷೇರುಗಳು ಶೇ. 4.5ರಷ್ಟು ಕುಸಿದವು. 2023ರಲ್ಲಿ ಆಲ್ಫಾಬೆಟ್‌ನ ಒಟ್ಟು ಮಾರಾಟದಲ್ಲಿ ಗೂಗಲ್ ಜಾಹೀರಾತು ಶೇ. 77ರಷ್ಟಿತ್ತು ಎಂಬುದು ಗಮನಿಸಬೇಕಾದ ಅಂಶ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಒಂದೇ ಓವರ್​ನಲ್ಲಿ 28 ರನ್ ಸಿಡಿಸಿದ ಕಿಶನ್
ಒಂದೇ ಓವರ್​ನಲ್ಲಿ 28 ರನ್ ಸಿಡಿಸಿದ ಕಿಶನ್
ಏರ್ಪೋರ್ಟ್​ನಲ್ಲೇ ಭೈರತಿ ಬಸವರಾಜ್​​ರನ್ನ​ ವಶಕ್ಕೆ ಪಡೆದ ಪೊಲೀಸರು
ಏರ್ಪೋರ್ಟ್​ನಲ್ಲೇ ಭೈರತಿ ಬಸವರಾಜ್​​ರನ್ನ​ ವಶಕ್ಕೆ ಪಡೆದ ಪೊಲೀಸರು
ವಿಷ್ಣುವರ್ಧನ್ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಸಮಾರಂಭ ಆಯೋಜಿಸಲು ಮನವಿ
ವಿಷ್ಣುವರ್ಧನ್ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಸಮಾರಂಭ ಆಯೋಜಿಸಲು ಮನವಿ
ಇದು ಜಗತ್ತಿನ ದುಬಾರಿ ಅಣಬೆ: ಬೆಲೆ ಕೇಳಿದ್ರೆ ಶಾಕ್​​ ಆಗೋದು ಗ್ಯಾರಂಟಿ
ಇದು ಜಗತ್ತಿನ ದುಬಾರಿ ಅಣಬೆ: ಬೆಲೆ ಕೇಳಿದ್ರೆ ಶಾಕ್​​ ಆಗೋದು ಗ್ಯಾರಂಟಿ
ಕಾಫಿ ಬಿಲ್​ ಕೇಳಿದ್ದಕ್ಕೆ ಪಿಸಿಗಳಿಂದ ಹೋಟೆಲ್​ ಸಿಬ್ಬಂದಿ ಮೇಲೆ ಹಲ್ಲೆ
ಕಾಫಿ ಬಿಲ್​ ಕೇಳಿದ್ದಕ್ಕೆ ಪಿಸಿಗಳಿಂದ ಹೋಟೆಲ್​ ಸಿಬ್ಬಂದಿ ಮೇಲೆ ಹಲ್ಲೆ
ಜಯಸೂರ್ಯರ 17 ವರ್ಷಗಳ ಹಳೆಯ ದಾಖಲೆ ಮುರಿದ ಓಮನ್ ಆಟಗಾರ
ಜಯಸೂರ್ಯರ 17 ವರ್ಷಗಳ ಹಳೆಯ ದಾಖಲೆ ಮುರಿದ ಓಮನ್ ಆಟಗಾರ
ರಾಜ್ಯ ಸರ್ಕಾರಕ್ಕೆ 1 ಸಾವಿರ ದಿನ: 6ನೇ ಗ್ಯಾರಂಟಿ ಜಾರಿ ಮಾಡ್ತೇವೆ; ಡಿಕೆಶಿ
ರಾಜ್ಯ ಸರ್ಕಾರಕ್ಕೆ 1 ಸಾವಿರ ದಿನ: 6ನೇ ಗ್ಯಾರಂಟಿ ಜಾರಿ ಮಾಡ್ತೇವೆ; ಡಿಕೆಶಿ
ಮುಸ್ಲಿಂ ಯುವಕನ ಜೊತೆ ಹಿಂದೂ ಹುಡುಗಿ ಪರಾರಿ: ಯುವತಿ ತಂದೆಯ ಸ್ಫೋಟಕ ಹೇಳಿಕೆ
ಮುಸ್ಲಿಂ ಯುವಕನ ಜೊತೆ ಹಿಂದೂ ಹುಡುಗಿ ಪರಾರಿ: ಯುವತಿ ತಂದೆಯ ಸ್ಫೋಟಕ ಹೇಳಿಕೆ
ಚಂದನ್ ಹತ್ಯೆ: ಮೊಬೈಲ್‌ನಲ್ಲಿ ಮಗನ ಅಂತಿಮ ದರ್ಶನ ನೋಡಿ ಕಣ್ಣೀರಿಟ್ಟ ತಂದೆ
ಚಂದನ್ ಹತ್ಯೆ: ಮೊಬೈಲ್‌ನಲ್ಲಿ ಮಗನ ಅಂತಿಮ ದರ್ಶನ ನೋಡಿ ಕಣ್ಣೀರಿಟ್ಟ ತಂದೆ
ಪಿಡಬ್ಲ್ಯೂಡಿ ಮುಖ್ಯ ಇಂಜಿನಿಯರ್​​ಗೆ ಶಾಕ್​​ ಕೊಟ್ಟ ಲೋಕಾಯುಕ್ತ
ಪಿಡಬ್ಲ್ಯೂಡಿ ಮುಖ್ಯ ಇಂಜಿನಿಯರ್​​ಗೆ ಶಾಕ್​​ ಕೊಟ್ಟ ಲೋಕಾಯುಕ್ತ