Radha Iyengar Plumb: ಭಾರತ ಮೂಲದ ರಾಧಾ ಅಯ್ಯಂಗಾರ್ ಪ್ಲಂಬ್ ಅಮೆರಿಕದ ರಕ್ಷಣಾ ಉಪ ಕಾರ್ಯದರ್ಶಿ

ಅಮೆರಿಕ ಅಧ್ಯಕ್ಷ ಜೊ ಬಿಡೆನ್ (Joe Biden) ಆಡಳಿತವು ಪ್ಲಂಬ್ ಅವರನ್ನು ಸ್ವಾಧೀನ ಮತ್ತು ಸುಸ್ಥಿರತೆಯ ರಕ್ಷಣಾ ಉಪ ಕಾರ್ಯದರ್ಶಿಯಾಗಿ ಮಾಡಿರುವುದಾಗಿ ಯುಎಸ್ ಸೆನೆಟ್ ಹೇಳಿದೆ

Radha Iyengar Plumb: ಭಾರತ ಮೂಲದ ರಾಧಾ ಅಯ್ಯಂಗಾರ್ ಪ್ಲಂಬ್ ಅಮೆರಿಕದ ರಕ್ಷಣಾ ಉಪ ಕಾರ್ಯದರ್ಶಿ
ರಾಧಾ ಅಯ್ಯಂಗಾರ್ ಪ್ಲಂಬ್
Follow us
|

Updated on: Apr 21, 2023 | 5:34 PM

ವಾಷಿಂಗ್ಟನ್: ಅಮೆರಿಕದ ರಾಷ್ಟ್ರೀಯ ಭದ್ರತಾ ತಜ್ಞೆ ಭಾರತ ಮೂಲದ ರಾಧಾ ಅಯ್ಯಂಗಾರ್ ಪ್ಲಂಬ್ (Radha Iyengar Plumb) ಅವರನ್ನು ರಕ್ಷಣಾ ಉಪ ಕಾರ್ಯದರ್ಶಿಯನ್ನಾಗಿ (Deputy Under Secretary of Defence) ನೇಮಕ ಮಾಡಲಾಗಿದೆ. ಅಮೆರಿಕ ಅಧ್ಯಕ್ಷ ಜೊ ಬಿಡೆನ್ (Joe Biden) ಆಡಳಿತವು ಪ್ಲಂಬ್ ಅವರನ್ನು ಸ್ವಾಧೀನ ಮತ್ತು ಸುಸ್ಥಿರತೆಯ ರಕ್ಷಣಾ ಉಪ ಕಾರ್ಯದರ್ಶಿಯಾಗಿ ಮಾಡಿರುವುದಾಗಿ ಯುಎಸ್ ಸೆನೆಟ್ ಹೇಳಿದೆ. ಪ್ರಸ್ತುತ ರಕ್ಷಣಾ ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿರುವ ರಾಧಾ ಅಯ್ಯಂಗಾರ್ ಪ್ಲಂಬ್ ಅವರನ್ನು ಅಧ್ಯಕ್ಷ ಜೋ ಬಿಡೆನ್ ಆಡಳಿತ ಜೂನ್ 2022 ರಲ್ಲಿ ಪ್ರತಿಷ್ಠಿತ ಸ್ಥಾನಕ್ಕೆ ನಾಮನಿರ್ದೇಶನ ಮಾಡಿತ್ತು. 68-30 ಮತಗಳ ಮೂಲಕ, ಸೆನೆಟ್ ರಾಧಾ ಅಯ್ಯಂಗಾರ್ ಪ್ಲಂಬ್ ಅವರನ್ನು ರಕ್ಷಣಾ ಉಪ ಕಾರ್ಯದರ್ಶಿ ಎಂದು ದೃಢಪಡಿಸಿರುವುದಾಗಿ ಯುಎಸ್ ಸೆನೆಟ್ ಪಿರಿಯಾಡಿಕಲ್ ಪ್ರೆಸ್ ಗ್ಯಾಲರಿ ಮಂಗಳವಾರ ಟ್ವೀಟ್ ಮಾಡಿದೆ.

ಚೀಫ್ ಆಫ್ ಸ್ಟಾಫ್ ಆಗಿ ನೇಮಕಗೊಳ್ಳುವ ಮೊದಲು, ಪ್ಲಂಬ್ ಗೂಗಲ್‌ನಲ್ಲಿ ಟ್ರಸ್ಟ್ ಮತ್ತು ಸುರಕ್ಷತೆಗಾಗಿ ಸಂಶೋಧನೆ ಮತ್ತು ಇನ್​​ಸೈಟ್ ನಿರ್ದೇಶಕರಾಗಿದ್ದರು. ಈ ಹಿಂದೆ ಫೇಸ್‌ಬುಕ್‌ನಲ್ಲಿ ನೀತಿ ವಿಶ್ಲೇಷಣೆಯ ಜಾಗತಿಕ ಮುಖ್ಯಸ್ಥರಾಗಿಯೂ ಅವರು ಸೇವೆ ಸಲ್ಲಿಸಿದ್ದರು. ಪ್ಲಂಬ್ ಅವರು ಈ ಹಿಂದೆ RAND ಕಾರ್ಪೊರೇಶನ್‌ನಲ್ಲಿ ಹಿರಿಯ ಅರ್ಥಶಾಸ್ತ್ರಜ್ಞರಾಗಿದ್ದರು, ಅಲ್ಲಿ ಅವರು ರಕ್ಷಣಾ ಇಲಾಖೆಯಾದ್ಯಂತ ಸಿದ್ಧತೆ ಮತ್ತು ಭದ್ರತಾ ಪ್ರಯತ್ನಗಳ ಮಾಪನ ಮತ್ತು ಮೌಲ್ಯಮಾಪನವನ್ನು ಸುಧಾರಿಸುವತ್ತ ಗಮನಹರಿಸಿದರು.

ಅವರು ರಕ್ಷಣಾ ಇಲಾಖೆ, ಇಂಧನ ಇಲಾಖೆ ಮತ್ತು ಶ್ವೇತಭವನದ ರಾಷ್ಟ್ರೀಯ ಭದ್ರತಾ ಮಂಡಳಿಯಲ್ಲಿ ರಾಷ್ಟ್ರೀಯ ಭದ್ರತಾ ವಿಷಯಗಳ ಕುರಿತು ಹಲವಾರು ಹಿರಿಯ ಸಿಬ್ಬಂದಿ ಸ್ಥಾನಗಳನ್ನು ಹೊಂದಿದ್ದರು. ತನ್ನ ವೃತ್ತಿಜೀವನದ ಆರಂಭದಲ್ಲಿ ಅವರು ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್‌ನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿದ್ದರು ಮತ್ತು ಹಾರ್ವರ್ಡ್‌ನಲ್ಲಿ ತಮ್ಮ ಪೋಸ್ಟ್‌ಡಾಕ್ಟರಲ್ ಕೆಲಸವನ್ನು ಮಾಡಿದರು.

ಪ್ಲಂಬ್ ಪ್ರಿನ್ಸ್‌ಟನ್ ವಿಶ್ವವಿದ್ಯಾಲಯದಿಂದ ಅರ್ಥಶಾಸ್ತ್ರದಲ್ಲಿ Ph.D ಮತ್ತುಎಂ.ಎಸ್ ಮಾಡಿದ್ದಾರೆ. ಅವರು ಮ್ಯಾಸಚೂಸೆಟ್ಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಿಂದ ಬಿ.ಎಸ್ ಮಾಡಿದ್ದಾರೆ ಎಂದು ಕಳೆದ ವರ್ಷ ಜೂನ್‌ನಲ್ಲಿ ಶ್ವೇತಭವನವು ಬಿಡುಗಡೆ ಮಾಡಿದ ಅವರ ಪ್ರೊಫೈಲ್ ನಲ್ಲಿ ಹೇಳಿದೆ. ಅವರು ರಕ್ಷಣಾ ಇಲಾಖೆ, ಇಂಧನ ಇಲಾಖೆ ಮತ್ತು ಶ್ವೇತಭವನದ ರಾಷ್ಟ್ರೀಯ ಭದ್ರತಾ ಮಂಡಳಿಯಲ್ಲಿ ರಾಷ್ಟ್ರೀಯ ಭದ್ರತಾ ವಿಷಯಗಳ ಕುರಿತು ಹಲವಾರು ಹಿರಿಯ ಸಿಬ್ಬಂದಿ ಸ್ಥಾನಗಳನ್ನು ಹೊಂದಿದ್ದರು.

ಮತ್ತಷ್ಟು ವಿದೇಶ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಗಣೇಶ ವಿಸರ್ಜನೆ ವೇಳೆ ನೀರಿನಲ್ಲಿ ಮುಳುಗಿ ಇಬ್ಬರು ಯುವಕರು ಸಾವು
ಗಣೇಶ ವಿಸರ್ಜನೆ ವೇಳೆ ನೀರಿನಲ್ಲಿ ಮುಳುಗಿ ಇಬ್ಬರು ಯುವಕರು ಸಾವು
ಹಾಸನ: ಕೆರೆಯಲ್ಲಿ ಈಜಾಡಿ ಕಾಫಿ ತೋಟಕ್ಕೆ ಲಗ್ಗೆ ಇಟ್ಟ ಕಾಡಾನೆಗಳು
ಹಾಸನ: ಕೆರೆಯಲ್ಲಿ ಈಜಾಡಿ ಕಾಫಿ ತೋಟಕ್ಕೆ ಲಗ್ಗೆ ಇಟ್ಟ ಕಾಡಾನೆಗಳು
ಬಿವಿವಿ ಸಂಘದ ಮೆಡಿಕಲ್ ಕಾಲೇಜ್ ಆವರಣದಲ್ಲಿ ಓಣಂ ಸಂಭ್ರಮ, ವಿಡಿಯೋ ನೋಡಿ
ಬಿವಿವಿ ಸಂಘದ ಮೆಡಿಕಲ್ ಕಾಲೇಜ್ ಆವರಣದಲ್ಲಿ ಓಣಂ ಸಂಭ್ರಮ, ವಿಡಿಯೋ ನೋಡಿ
ಪಿತೃಪಕ್ಷದ ಮಹತ್ವ ತಿಳಿಯಲು ಈ ವಿಡಿಯೋದಲ್ಲಿ ನೋಡಿ
ಪಿತೃಪಕ್ಷದ ಮಹತ್ವ ತಿಳಿಯಲು ಈ ವಿಡಿಯೋದಲ್ಲಿ ನೋಡಿ
Nithya Bhavishya: ಈ ರಾಶಿಯವರಿಗೆ ಸ್ವ ಉದ್ಯೋಗವು ಇಂದು ಕೈ ಹಿಡಿಯುವುದು
Nithya Bhavishya: ಈ ರಾಶಿಯವರಿಗೆ ಸ್ವ ಉದ್ಯೋಗವು ಇಂದು ಕೈ ಹಿಡಿಯುವುದು
ಗುಜರಾತ್ ಪ್ರವಾಹದಲ್ಲಿ ಸಿಲುಕಿದ ಕಾರು ಹತ್ತಿ ಕುಳಿತು ಹರಟೆ ಹೊಡೆದ ದಂಪತಿ
ಗುಜರಾತ್ ಪ್ರವಾಹದಲ್ಲಿ ಸಿಲುಕಿದ ಕಾರು ಹತ್ತಿ ಕುಳಿತು ಹರಟೆ ಹೊಡೆದ ದಂಪತಿ
ಕಾಂಗ್ರೆಸ್​-JDS ಮೈತ್ರಿ: ಬಹುಮತ ಇಲ್ಲದಿದ್ರೂ ಅಧ್ಯಕ್ಷ ಸ್ಥಾನ ಕೈ ವಶಕ್ಕೆ
ಕಾಂಗ್ರೆಸ್​-JDS ಮೈತ್ರಿ: ಬಹುಮತ ಇಲ್ಲದಿದ್ರೂ ಅಧ್ಯಕ್ಷ ಸ್ಥಾನ ಕೈ ವಶಕ್ಕೆ
ದರ್ಶನ್​ ಜಾಮೀನು ಅರ್ಜಿ ಸಲ್ಲಿಸೋದು ಯಾವಾಗ? ಉತ್ತರ ನೀಡಿದ ಲಾಯರ್​
ದರ್ಶನ್​ ಜಾಮೀನು ಅರ್ಜಿ ಸಲ್ಲಿಸೋದು ಯಾವಾಗ? ಉತ್ತರ ನೀಡಿದ ಲಾಯರ್​
ಗಣಪತಿ ವಿಸರ್ಜನೆ ಬಳಿಕ ಈಜಲು ಹೊಳೆಗೆ ಹಾರಿದ ಯುವಕರು
ಗಣಪತಿ ವಿಸರ್ಜನೆ ಬಳಿಕ ಈಜಲು ಹೊಳೆಗೆ ಹಾರಿದ ಯುವಕರು
ಭಾಗ್ಯಲಕ್ಷ್ಮೀ ಬಾಂಡ್ ಹಣ ಹಾಕುವ ಬಗ್ಗೆ ಮಹತ್ವದ ಮಾಹಿತಿ ಹಂಚಿಕೊಂಡ ಸಚಿವೆ
ಭಾಗ್ಯಲಕ್ಷ್ಮೀ ಬಾಂಡ್ ಹಣ ಹಾಕುವ ಬಗ್ಗೆ ಮಹತ್ವದ ಮಾಹಿತಿ ಹಂಚಿಕೊಂಡ ಸಚಿವೆ