AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಮೋದಿಯಿಂದಾಗಿ ಭಾರತೀಯ ಹುಡುಗಿಯನ್ನು ಮದ್ವೆ ಮಾಡಿಕೊಳ್ಳಲಾಗಲಿಲ್ಲ’: ಪಾಕ್ ಇಸ್ಲಾಂ ಮುಖಂಡ ಅಳಲು

ಇದು ತುಂಬಾ ಹಳೆಯ ಘಟನೆ ಆಗಿದ್ದು, ಪ್ರಧಾನಿ ಮೋದಿ ಅವರು 2014 ರಲ್ಲಿ ಮೊದಲ ಬಾರಿಗೆ ಅಧಿಕಾರಕ್ಕೆ ಬಂದಿದ್ದರು. ಆಗ ನಾನು ಮುಂದಿನ ಚುನಾವಣೆಯಲ್ಲಿ ಮೋದಿ ಗೆಲ್ಲಲ್ಲ ಎಂದು ಯೋಚಿಸುತ್ತಿದ್ದೆ ಆದರೆ ಅವರು ಮತ್ತೆ ಗೆಲ್ಲುವ ಮೂಲಕ ಅಧಿಕಾರಕ್ಕೆ ಬಂದರು. ಹೀಗಾಗಿ ನನ್ನ ಮದುವೆ ಆಗದಿರಲು ಪ್ರಮುಖ ಕಾರಣ ಪ್ರಧಾನಿ ಮೋದಿ ಎಂದು ಅವರು ಹೇಳಿಕೊಂಡಿದ್ದಾರೆ.

'ಮೋದಿಯಿಂದಾಗಿ ಭಾರತೀಯ ಹುಡುಗಿಯನ್ನು ಮದ್ವೆ ಮಾಡಿಕೊಳ್ಳಲಾಗಲಿಲ್ಲ': ಪಾಕ್ ಇಸ್ಲಾಂ ಮುಖಂಡ ಅಳಲು
ಪ್ರಧಾನಿ ಮೋದಿ, ಮುಫ್ತಿ ತಾರಿಕ್ ಮಸೂದ್
Follow us
ಗಂಗಾಧರ​ ಬ. ಸಾಬೋಜಿ
|

Updated on: Apr 29, 2024 | 8:15 PM

ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ಕಾರಣದಿಂದಾಗಿ ಭಾರತೀಯ ಹುಡುಗಿಯನ್ನು ನಾನು ಮದುವೆಯಾಗಲು ಸಾಧ್ಯವಾಗಲಿಲ್ಲ. ಮೋದಿಯವರಿಂದಾಗಿ ನನ್ನೆಲ್ಲ ಕನಸುಗಳು ಭಗ್ನಗೊಂಡಿವೆ ಎಂದು ಪಾಕಿಸ್ತಾನದ ಇಸ್ಲಾಮಿಕ್ ವಿದ್ವಾಂಸ ಮುಫ್ತಿ ತಾರಿಕ್ ಮಸೂದ್​ (Mufti Tariq Masood) ಹೇಳಿದ್ದಾರೆ. ಸದ್ಯ ಮುಫ್ತಿ ತಾರಿಕ್ ಮಸೂದ್ ಹೇಳಿಕೆಯ ವಿಡಿಯೋ ಸೋಶಿಯಲ್​ ಮೀಡಿಯಾ ಸಾಕಷ್ಟು ವೈರಲ್​ ಆಗುತ್ತಿದೆ. 2014 ರಲ್ಲಿ ಪ್ರಧಾನಿ ಮೋದಿ ಗೆದ್ದರು. ಆ ಮೂಲಕ ನನಗೆ ಭಾರತಕ್ಕೆ ಹೋಗಲು ವೀಸಾ ಸಿಗಲಿಲ್ಲ. ನಾನು 5 ವರ್ಷಗಳ ಕಾಲ ಕಾದುಕುಳಿತೆ, ಆದರೆ ನಂತರ 2019 ರಲ್ಲಿ ಕೂಡ ಮೋದಿ ಮತ್ತೆ ಗೆದ್ದರು. ಹಿಗಾಗಿ ನನ್ನ ಕನಸುಗಳು ಛಿದ್ರವಾದವು ಎಂದು ಹೇಳಿದ್ದಾರೆ.

ಇದು ತುಂಬಾ ಹಳೆಯ ಘಟನೆ ಆಗಿದ್ದು, ಪ್ರಧಾನಿ ಮೋದಿ ಅವರು 2014 ರಲ್ಲಿ ಮೊದಲ ಬಾರಿಗೆ ಅಧಿಕಾರಕ್ಕೆ ಬಂದಿದ್ದರು. ಆಗ ನಾನು ಮುಂದಿನ ಚುನಾವಣೆಯಲ್ಲಿ ಮೋದಿ ಗೆಲ್ಲಲ್ಲ ಎಂದು ಯೋಚಿಸುತ್ತಿದ್ದೆ ಆದರೆ ಅವರು ಮತ್ತೆ ಗೆಲ್ಲುವ ಮೂಲಕ ಅಧಿಕಾರಕ್ಕೆ ಬಂದರು. ಹೀಗಾಗಿ ನನ್ನ ಮದುವೆ ಆಗದಿರಲು ಪ್ರಮುಖ ಕಾರಣ ಪ್ರಧಾನಿ ಮೋದಿ ಎಂದು ಅವರು ಹೇಳಿಕೊಂಡಿದ್ದಾರೆ.

ಮುಫ್ತಿ ತಾರಿಕ್ ಮಸೂದ್ ವೈರಲ್​ ವಿಡಿಯೋ

ಪ್ರಧಾನಿ ಮೋದಿ ಅವರು ಈಗಾಗಲೇ ಎರಡು ಭಾರಿ ಗೆಲ್ಲುವ ಮೂಲಕ ನಾನು 10 ವರ್ಷ ಕಾಯ್ದಿದ್ದೇನೆ. ಇದೀಗ ಮತ್ತೊಮ್ಮೆ ಅಧಿಕಾರಕ್ಕೆ ಬಂದರೆ ನಾನಿಲ್ಲಿ ಕಾಯುತ್ತಾ ಕೂರಬೇಕಾಗುತ್ತದೆ ಎಂದಿದ್ದಾರೆ.

ಮುಫ್ತಿ ತಾರಿಕ್ ಮಸೂದ್ ಯಾರೀತ?

ಮುಫ್ತಿ ತಾರಿಕ್ ಮಸೂದ್ ಓರ್ವ ಪಾಕಿಸ್ತಾನದ ಇಸ್ಲಾಮಿಕ್ ವಿದ್ವಾಂಸ. ಜೊತೆಗೆ ಪುರುಷರು ಬಹು ಪತ್ನಿತ್ವವನ್ನು ಹೊಂದಬೇಕು ಎಂಬ ಕಲ್ಪನೆಯನ್ನು ಸಹ ಬೆಂಬಲಿಸುತ್ತಾರೆ. ಈಗಾಗಲೇ ಮುಫ್ತಿ ತಾರಿಕ್ ಮಸೂದ್​ ಸ್ವತಃ ತಾನು ನಾಲ್ಕು ಮದುವೆ ಮಾಡಿಕೊಂಡಿದ್ದು, 16 ಮಕ್ಕಳನ್ನು ಹೊಂದಿದ್ದಾರೆ. ತನ್ನ ಪಾಕಿಸ್ತಾನದ ಅನುಯಾಯಿಗಳಿಗೂ ಮುಫ್ತಿ ತಾರಿಕ್ ಮಸೂದ್ ಹೆಚ್ಚು ಹೆಚ್ಚು ಮದುವೆ ಮತ್ತು ಮಕ್ಕಳನ್ನು ಹೊಂದುವ ಸಲಹೆ ನೀಡುವುದನ್ನು ಕಾಣಬಹುದಾಗಿದೆ.

ಇದನ್ನೂ ಓದಿ: ಖಲಿಸ್ತಾನ್ ಜಿಂದಾಬಾದ್ ಘೋಷಣೆ ಮಧ್ಯೆ, ಸಿಖ್ಖರಿಗೆ ಸ್ವಾತಂತ್ರ್ಯ ರಕ್ಷಣೆಯ ಭರವಸೆ ಕೊಟ್ಟ ಕೆನಡಾ ಪ್ರಧಾನಿ

ಪಾಕಿಸ್ತಾನಿ ಯೂಟ್ಯೂಬರ್​ಗೆ ಮುಫ್ತಿ ತಾರಿಕ್ ಮಸೂದ್ ನೀಡಿದ ಸಂದರ್ಶನದಲ್ಲಿ ತಮ್ಮ ಕುಟುಂಬದ ಬಗ್ಗೆ ಹೇಳಿಕೊಂಡಿದ್ದು, ನಾಲ್ಕು ಪತ್ನಿಯರು ಮತ್ತು 16 ಮಕ್ಕಳು ಎಲ್ಲರೂ ಪ್ರತ್ಯೇಕ ಮನೆಯಲ್ಲಿ ವಾಸಿಸುತ್ತಿದ್ದಾರೆ.  ಆದರೆ ದಾಂಪತ್ಯ ಜೀವನ ಹೇಗಿದೆ ಎಂಬ ಯೂಟ್ಯೂಬರ್​ನ ಪ್ರಶ್ನೆಗೆ ಉತ್ತರಿಸಿದ್ದು, ತಮ್ಮ ಮೊದಲ ಹೆಂಡತಿಯೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಲು ಸಾಧ್ಯವಾಗಲಿಲ್ಲ. ಸಾಕಷ್ಟು ಸಮಯ ನಾವು ಜಗಳದಲ್ಲಿ ಕಳೆದಿರುವುದಾಗಿ ಹೇಳಿಕೊಂಡಿದ್ದಾರೆ.

ವಿದೇಶಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ ಕೊಪ್ಪಳದ 96 ವರ್ಷದ ಭೀಮವ್ವ ಶಿಳ್ಳೆಕ್ಯಾತರ
ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ ಕೊಪ್ಪಳದ 96 ವರ್ಷದ ಭೀಮವ್ವ ಶಿಳ್ಳೆಕ್ಯಾತರ
ಸ್ಪಿನ್ ಲೆಜೆಂಡ್ ಆರ್​. ಅಶ್ವಿನ್​ಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ
ಸ್ಪಿನ್ ಲೆಜೆಂಡ್ ಆರ್​. ಅಶ್ವಿನ್​ಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ
ಕಪ್ಪು ಬಾವುಟ ಪ್ರದರ್ಶಿಶಿದ ಮಹಿಳೆಯರ ವಿರುದ್ಧ ಕೇಸ್ ದಾಖಲಾಗಿದೆ: ಐಜಿಪಿ
ಕಪ್ಪು ಬಾವುಟ ಪ್ರದರ್ಶಿಶಿದ ಮಹಿಳೆಯರ ವಿರುದ್ಧ ಕೇಸ್ ದಾಖಲಾಗಿದೆ: ಐಜಿಪಿ
Pahalgam Attack: ಪ್ರವಾಸಿಗರೊಬ್ಬರ ಕ್ಯಾಮರಾದಲ್ಲಿ ದಾಳಿ ಭೀಕರ ದೃಶ್ಯ!
Pahalgam Attack: ಪ್ರವಾಸಿಗರೊಬ್ಬರ ಕ್ಯಾಮರಾದಲ್ಲಿ ದಾಳಿ ಭೀಕರ ದೃಶ್ಯ!
ಸಿಎಂ ವರ್ತನೆಯಿಂದ ಅಧಿಕಾರಿ ಮಾನಸಿಕ ಕ್ಷೋಭೆಗೊಳಗಾಗಿರುತ್ತಾರೆ: ಶೆಟ್ಟರ್
ಸಿಎಂ ವರ್ತನೆಯಿಂದ ಅಧಿಕಾರಿ ಮಾನಸಿಕ ಕ್ಷೋಭೆಗೊಳಗಾಗಿರುತ್ತಾರೆ: ಶೆಟ್ಟರ್
ಪ್ರಧಾನಿ ಹೇಳಿದಂತೆ ಪಾಕ್​ ಅನ್ನು ನುಗ್ಗಿ ವೈರಿಗಳನ್ನು ಸದೆಬಡಿಯಬೇಕು: ಅರುಣ್
ಪ್ರಧಾನಿ ಹೇಳಿದಂತೆ ಪಾಕ್​ ಅನ್ನು ನುಗ್ಗಿ ವೈರಿಗಳನ್ನು ಸದೆಬಡಿಯಬೇಕು: ಅರುಣ್
ಇದು ಮನವಿ ಅಲ್ಲ ಎಚ್ಚರಿಕೆ ಮತ್ತು ಕಾಂಗ್ರೆಸ್ ಪಕ್ಷದ ಪ್ರತಿಜ್ಞೆ ಎಂದ ಡಿಕೆಶಿ
ಇದು ಮನವಿ ಅಲ್ಲ ಎಚ್ಚರಿಕೆ ಮತ್ತು ಕಾಂಗ್ರೆಸ್ ಪಕ್ಷದ ಪ್ರತಿಜ್ಞೆ ಎಂದ ಡಿಕೆಶಿ
ಪ್ರವಾದಿ, ಬಸವಣ್ಣ ಬಗ್ಗೆ ಯತ್ನಾಳ್​ಗೇನು ಗೊತ್ತು: ಕಾಶಪ್ಪನವರ್, ಶಾಸಕ
ಪ್ರವಾದಿ, ಬಸವಣ್ಣ ಬಗ್ಗೆ ಯತ್ನಾಳ್​ಗೇನು ಗೊತ್ತು: ಕಾಶಪ್ಪನವರ್, ಶಾಸಕ
ಸಿಎಂ ಸಿದ್ದರಾಮಯ್ಯ ಪಾಕಿಸ್ತಾನಕ್ಕೆ ನಿಜವಾದ ರಾಯಭಾರಿ!: ಆರ್ ಅಶೋಕ್
ಸಿಎಂ ಸಿದ್ದರಾಮಯ್ಯ ಪಾಕಿಸ್ತಾನಕ್ಕೆ ನಿಜವಾದ ರಾಯಭಾರಿ!: ಆರ್ ಅಶೋಕ್
ಮುಸ್ಲಿಮರ ಓಟಿಗೆ ಮಾರಿಕೊಂಡ ಕಾಂಗ್ರೆಸ್ ಸರ್ಕಾರ: ತೇಜಸ್ವಿ ಸೂರ್ಯ ವಾಗ್ದಾಳಿ
ಮುಸ್ಲಿಮರ ಓಟಿಗೆ ಮಾರಿಕೊಂಡ ಕಾಂಗ್ರೆಸ್ ಸರ್ಕಾರ: ತೇಜಸ್ವಿ ಸೂರ್ಯ ವಾಗ್ದಾಳಿ