AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇರಾಕ್​ ಪ್ರಧಾನಿ ಮುಸ್ತಫಾ ಅಲ್​ ಕಧಿಮಿ ನಿವಾಸದ ಮೇಲೆ ಡ್ರೋಣ್​ ದಾಳಿ; ಹತ್ಯೆ ಯತ್ನ ಎಂದ ಮಿಲಿಟರಿ

ಸದ್ಯಕ್ಕಂತೂ ಯಾವುದೇ ಸಂಘಟನೆ ಉಗ್ರಸಂಘಟನೆ, ಬಂಡುಕೋರರು ಈ ದಾಳಿಯ ಹೊಣೆ ಹೊತ್ತುಕೊಂಡಿಲ್ಲ. ಇನ್ನು ಪ್ರಧಾನಿ ನಿಲಯ ಇರುವ ಗ್ರೀನ್​ ಝೋನ್​​ನಲ್ಲಿ ವಾಸವಾಗಿರುವ ಪಾಶ್ಚಿಮಾತ್ಯ ದೇಶಗಳ ರಾಯಭಾರಿಗಳು ಸ್ಫೋಟದ ಸದ್ದು ಕೇಳಿದ್ದಾಗಿ ಹೇಳಿಕೊಂಡಿದ್ದಾರೆ. 

ಇರಾಕ್​ ಪ್ರಧಾನಿ ಮುಸ್ತಫಾ ಅಲ್​ ಕಧಿಮಿ ನಿವಾಸದ ಮೇಲೆ ಡ್ರೋಣ್​ ದಾಳಿ; ಹತ್ಯೆ ಯತ್ನ ಎಂದ ಮಿಲಿಟರಿ
ಇರಾಕ್​ ಪ್ರಧಾನಿ
TV9 Web
| Edited By: |

Updated on: Nov 07, 2021 | 10:43 AM

Share

ಇರಾಕ್ ಪ್ರಧಾನಿ ಮುಸ್ತಫಾ ಅಲ್​ ಕಧಿಮಿ ಅವರ ಬಾಗ್ದಾದ್​ ನಿವಾಸದ ಮೇಲೆ ಡ್ರೋಣ್​  ದಾಳಿ ನಡೆಸಲಾಗಿದೆ. ಇಲ್ಲಿ ಡ್ರೋಣ್​ ಮೂಲಕ ಸ್ಫೋಟಕಗಳನ್ನು ಕೆಡವಲಾಗಿದ್ದು,  ಇದು ಪ್ರಧಾನಿ ಹತ್ಯೆ ಪ್ರಯತ್ನ ಎಂದು ಇರಾಕ್​ ಸೈನ್ಯ ಹೇಳಿದೆ. ಅದೃಷ್ಟವಶಾತ್​ ಕಧಿಮಿಗೆ ಯಾವುದೇ ಹಾನಿಯೂ ಆಗಿಲ್ಲ.  ಬಾಗ್ದಾದ್​​ನಲ್ಲಿ ಪ್ರಧಾನಿ ನಿಲಯ ಭದ್ರವಾದ ಗ್ರೀನ್​ ಝೋನ್​​ನಲ್ಲಿದೆ. ಆದರೆ ಇದೀಗ ಡ್ರೋಣ್​ ದಾಳಿಯಾಗಿದೆ ಎಂದಷ್ಟೇ ಸೇನೆ ತಿಳಿಸಿದ್ದು, ಬೇರೆ ಯಾವುದೇ ಮಾಹಿತಿಯನ್ನೂ ನೀಡಿಲ್ಲ. ಇನ್ನು ಪ್ರಧಾನಿ ಕಧಿಮಿಗೆ ಯಾವುದೇ ಅಪಾಯವಾಗಿಲ್ಲ. ಅವರು ಸುರಕ್ಷಿತರಾಗಿದ್ದಾರೆ..ಜನರೂ ಶಾಂತವಾಗಿರಬೇಕು ಎಂದು ಪ್ರಧಾನಮಂತ್ರಿ ಕಚೇರಿ ಟ್ವೀಟ್​ ಮೂಲಕ ತಿಳಿಸಿದೆ.  ಆದರೂ ಈ ದಾಳಿಯಿಂದ ಕೆಲವು ಭದ್ರತಾ ಸಿಬ್ಬಂದಿ ಗಾಯಗೊಂಡಿದ್ದಾರೆ ಎಂದು ಹೇಳಲಾಗಿದೆ. 

ಸದ್ಯಕ್ಕಂತೂ ಯಾವುದೇ ಸಂಘಟನೆ ಉಗ್ರಸಂಘಟನೆ, ಬಂಡುಕೋರರು ಈ ದಾಳಿಯ ಹೊಣೆ ಹೊತ್ತುಕೊಂಡಿಲ್ಲ. ಇನ್ನು ಪ್ರಧಾನಿ ನಿಲಯ ಇರುವ ಗ್ರೀನ್​ ಝೋನ್​​ನಲ್ಲಿ ವಾಸವಾಗಿರುವ ಪಾಶ್ಚಿಮಾತ್ಯ ದೇಶಗಳ ರಾಯಭಾರಿಗಳು ಸ್ಫೋಟದ ಸದ್ದು ಕೇಳಿದ್ದಾಗಿ ಹೇಳಿಕೊಂಡಿದ್ದಾರೆ.  ಕಳೆದ ತಿಂಗಳು ಇಲ್ಲಿ ನಡೆದ ಸಾರ್ವತ್ರಿಕ ಚುನಾವಣೆ ಫಲಿತಾಂಶವನ್ನು ಇರಾನ್​ ಬೆಂಬಲಿತ ಶಸ್ತ್ರಸಜ್ಜಿತ ಗುಂಪುಗಳು ಬಲವಾಗಿ ವಿರೋಧಿಸಿವೆ. ಈ ಫಲಿತಾಂಶದಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿವೆ.  ಚುನಾವಣೆಯ ನಂತರ ಅಧಿಕಾರ ಕಳೆದುಕೊಂಡವರೇ ಈ ಗುಂಪಿನವರಾಗಿದ್ದು, ಭಾರಿ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ಹೊಂದಿವೆ. ಆದರೆ ಸದ್ಯಕ್ಕೇನೂ ಇವರು ದಾಳಿ ಹೊಣೆ ಹೊತ್ತಿಲ್ಲ.

ಇದನ್ನೂ ಓದಿ: ಅಪ್ಪು ಮೇಲೆ ಜನರಿಟ್ಟ ಅಭಿಮಾನಕ್ಕೆ ಸಾಟಿ ಇಲ್ಲ; ಪುನೀತ್​ ಸಮಾಧಿ ಬಳಿ ಜನಸಾಗರ ಇನ್ನೂ ಕಮ್ಮಿ ಆಗಿಲ್ಲ

Follow Us
ಚಾಮರಾಜನಗರವನ್ನು 'ಕಾಡುಗಳ್ಳ ಮುಕ್ತ' ಮಾಡಲು ಸರ್ಕಾರದ ಬಿಗ್ ಪ್ಲಾನ್
ಚಾಮರಾಜನಗರವನ್ನು 'ಕಾಡುಗಳ್ಳ ಮುಕ್ತ' ಮಾಡಲು ಸರ್ಕಾರದ ಬಿಗ್ ಪ್ಲಾನ್
ಬ್ರಿಕ್ಸ್​ ವೇದಿಕೆಯಲ್ಲಿ ಗಮನಸೆಳೆದ ರಾಮೇಶ್ವರಂ ದೇವಾಲಯದ ಸ್ಕ್ರೀನ್
ಬ್ರಿಕ್ಸ್​ ವೇದಿಕೆಯಲ್ಲಿ ಗಮನಸೆಳೆದ ರಾಮೇಶ್ವರಂ ದೇವಾಲಯದ ಸ್ಕ್ರೀನ್
ಇನ್ಸ್‌ಪೆಕ್ಟರ್ ಧನಂಜಯ್‌ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ
ಇನ್ಸ್‌ಪೆಕ್ಟರ್ ಧನಂಜಯ್‌ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಐದನೇ ವರ್ಷದ ಗಣೇಶೋತ್ಸವಕ್ಕೆ ಸಿದ್ಧತೆ
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಐದನೇ ವರ್ಷದ ಗಣೇಶೋತ್ಸವಕ್ಕೆ ಸಿದ್ಧತೆ
ಸದ್ಯದಲ್ಲೇ ಸಚಿವ ಸತೀಶ್ ಜಾರಕಿಹೊಳಿಗೆ ಮತ್ತೊಂದು ಶಾಕ್!
ಸದ್ಯದಲ್ಲೇ ಸಚಿವ ಸತೀಶ್ ಜಾರಕಿಹೊಳಿಗೆ ಮತ್ತೊಂದು ಶಾಕ್!
ಗಗನ್​-ತಾಂಡವ್ ರಾಮ್​​ಗೆ ಕ್ಲಾಸ್; ದೊಡ್ಡ ಸೂಚನೆ ಕೊಟ್ಟ ಸುದೀಪ್
ಗಗನ್​-ತಾಂಡವ್ ರಾಮ್​​ಗೆ ಕ್ಲಾಸ್; ದೊಡ್ಡ ಸೂಚನೆ ಕೊಟ್ಟ ಸುದೀಪ್
ಕೊಪ್ಪಳ ಸರ್ಕಾರಿ ಆಸ್ಪತ್ರೆಯಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ: ರೋಗಿಗಳ ಪರದಾಟ!
ಕೊಪ್ಪಳ ಸರ್ಕಾರಿ ಆಸ್ಪತ್ರೆಯಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ: ರೋಗಿಗಳ ಪರದಾಟ!
ಮುದ್ದಾದ ಮಗಳಿದ್ರೂ ಪ್ರಿಯಕರನ ಹಿಂದೆ ಬಿದ್ದು ಗಂಡನ ಕಥೆ ಮುಗಿಸಿದ ಹೆಂಡ್ತಿ!
ಮುದ್ದಾದ ಮಗಳಿದ್ರೂ ಪ್ರಿಯಕರನ ಹಿಂದೆ ಬಿದ್ದು ಗಂಡನ ಕಥೆ ಮುಗಿಸಿದ ಹೆಂಡ್ತಿ!
ಹಾಸನ: ಬೆಂಗಳೂರು-ಮಂಗಳೂರು ಹೆದ್ದಾರಿಯಲ್ಲಿ ಪೆಟ್ರೋಲ್ ಟ್ಯಾಂಕರ್ ಪಲ್ಟಿ
ಹಾಸನ: ಬೆಂಗಳೂರು-ಮಂಗಳೂರು ಹೆದ್ದಾರಿಯಲ್ಲಿ ಪೆಟ್ರೋಲ್ ಟ್ಯಾಂಕರ್ ಪಲ್ಟಿ
ಶಾರ್ಟ್​ ಸರ್ಕ್ಯೂಟ್​ಗೆ ಸಿಲಿಂಡರ್​ ಸ್ಫೋಟ; 21 ಲಕ್ಷ ರೂ. ಕಳೆದುಕೊಂಡ ಮಾಲೀಕ
ಶಾರ್ಟ್​ ಸರ್ಕ್ಯೂಟ್​ಗೆ ಸಿಲಿಂಡರ್​ ಸ್ಫೋಟ; 21 ಲಕ್ಷ ರೂ. ಕಳೆದುಕೊಂಡ ಮಾಲೀಕ