AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

KFC Agarbathi: ಕೆಎಫ್​ಸಿ ಫ್ರೈಡ್ ಚಿಕನ್ ಅಗರಬತ್ತಿ; ಸೋಷಿಯಲ್ ಮೀಡಿಯಾದಲ್ಲಿ ಜನರು ಗರಂ; ಏನಿದರ ವಿಶೇಷತೆ?

Fried Chicken Incense Sticks: ಕೆಎಫ್​ಸಿಯ ವಿಶೇಷ ಚಿಕನ್ ತಿನಿಸುಗಳಿಗೆ ಹೋಲುವಂತಿರುವ ಅಗರಬತ್ತಿಗಳನ್ನು ಕೆಎಫ್​ಸಿ ತಯಾರಿಸಿದೆ. ಈ ಊದುಬತ್ತಿಯನ್ನು ಹಚ್ಚಿದರೆ ಥೇಟ್ ಕೆಎಫ್​ಸಿ ಶೈಲಿಯ ತಿನಿಸುಗಳ ವಾಸನೆ ಬರುತ್ತದೆ.

KFC Agarbathi: ಕೆಎಫ್​ಸಿ ಫ್ರೈಡ್ ಚಿಕನ್ ಅಗರಬತ್ತಿ; ಸೋಷಿಯಲ್ ಮೀಡಿಯಾದಲ್ಲಿ ಜನರು ಗರಂ; ಏನಿದರ ವಿಶೇಷತೆ?
ಫ್ರೈಡ್ ಚಿಕನ್ ಅಗರಬತ್ತಿ
TV9 Web
| Edited By: |

Updated on:Jan 30, 2023 | 4:08 PM

Share

ನವದೆಹಲಿ: ಜನಪ್ರಿಯ ಚಿಕನ್ ಖಾದ್ಯಗಳ ಸ್ಟೋರ್ ಆಗಿರುವ ಕೆಎಫ್​ಸಿ (KFC- Kentucky Fried Chicken) ಈಗ ಮತ್ತೆ ವಿವಾದಕ್ಕೆ ಸಿಲುಕಿದೆ. ತನ್ನ ಖಾದ್ಯಗಳ ಶೈಲಿಯಲ್ಲಿ ಅಗರಬತ್ತಿಯನ್ನು ಕೆಎಫ್​ಸಿ ತಯಾರಿಸಿ, ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಟೀಕೆಗೆ ಗುರಿಯಾಗಿದೆ. ಥಾಯ್ಲೆಂಡ್ ವಿಭಾಗದ ಕೆಎಫ್​ಸಿ ಇಂಥದ್ದೊಂದು ಪ್ರಯೋಗ ಮಾಡಿದೆ.

ಅಗರಬತ್ತಿಗೂ ಚಿಕನ್​ಗೂ ಏನು ಸಂಬಂಧ ಎಂಬ ಪ್ರಶ್ನೆ ಬರಬಹುದು. ಆದರೆ, ಇಲ್ಲಿ ಕೆಎಫ್​ಸಿಯ ವಿಶೇಷ ಚಿಕನ್ ತಿನಿಸುಗಳಿಗೆ ಹೋಲುವಂತಿರುವ ಅಗರಬತ್ತಿಗಳನ್ನು ಕೆಎಫ್​ಸಿ ತಯಾರಿಸಿದೆ. ಈ ಊದುಬತ್ತಿಯನ್ನು ಹಚ್ಚಿದರೆ ಥೇಟ್ ಕೆಎಫ್​ಸಿ ಶೈಲಿಯ ತಿನಿಸುಗಳ ವಾಸನೆ ಬರುತ್ತದೆ. ನೋಡಲೂ ಕೂಡ ಕೆಎಫ್​ಸಿಯ ಡ್ರಮ್​ಸ್ಟಿಕ್ ಚಿಕನ್​ಗಳಂತೆ ಕಂಡರೂ ಈ ಅಗರಬತ್ತಿಯನ್ನು ತಿನ್ನಲು ಬರುವುದಿಲ್ಲ. ಕೇವಲ ನೋಡಲು ಮತ್ತು ಆಘ್ರಾಣಿಸಲು ಮಾತ್ರ ಇದು ಚಿಕನ್​ನಂತೆ ಇರುತ್ತದೆ.

ಕೆಎಫ್​ಸಿಯ ಥಾಯ್ಲೆಂಡ್ ವಿಭಾಗವು ಈ ಫ್ರೈಡ್ ಚಿಕನ್ ಅಗರಬತ್ತಿಯ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿತು. ಆದರೆ ಸಾಮಾಜಿಕ ಜಾಲತಾಣದಲ್ಲಿ ಜನರ ಟೀಕೆಗೆ ಗುರಿಯಾಗಿದೆ. ಅದಾದ ಬಳಿಕ ಈ ಪೋಸ್ಟ್ ಅನ್ನು ಕೆಎಫ್​ಸಿ ಅಳಿಸಿಹಾಕಿತು.

ಇದರ ತಯಾರಿಕೆ ಹೇಗೆ?

ಕೆಎಫ್​ಸಿ ಸಂಸ್ಥೆಯದ್ದೇ ಆದ ವಿಶೇಷ ರಿಸಿಪಿ ಇದೆ. ಇದರಲ್ಲಿ 11 ಸಸ್ಯ ಮತ್ತು ಮಸಾಲೆಗಳನ್ನೊಳಗೊಂಡ ರಿಸಿಪಿ ಅದು. ಅದೇ ರೀತಿಯ ಫ್ಲೇವರ್ ಬರುವಂತೆ ಅಗರಬತ್ತಿಯನ್ನು ತಯಾರಿಸುವುದು ಕೆಎಫ್​ಸಿಗೆ ಸವಾಲಿನ ಕೆಲಸವಾಗಿತ್ತು. ಅದಕ್ಕಾಗಿ ಕೆಎಫ್​ಸಿ ಸೆಂಟ್ ವಿಭಾಗವು ಕೆಲ ತಜ್ಞ ಸಂಸ್ಥೆಗಳ ಜೊತೆ ಸೇರಿ ಈ ಕಾರ್ಯ ಮಾಡಿದೆ.

ಅಂದಹಾಗೆ ಈ ಕೆಎಫ್​ಸಿ ಫ್ರೈಡ್ ಚಿಕನ್ ಅಗರಬತ್ತಿಯು ಮಾರಾಟಕ್ಕಿಲ್ಲ. ಸೌರಮಾನ ಹೊಸ ವರ್ಷದ ಸ್ಪರ್ಧೆಯಲ್ಲಿ ಗೆದ್ದವರಿಗೆ ಬಹುಮಾನವಾಗಿ ಕೊಡಲು ಮಾತ್ರ ಇದರ ತಯಾರಿಕೆ ಮಾಡಲಾಗಿತ್ತು. ಯಾರಿಗೆ ಗೊತ್ತು, ಈ ಅಗರಬತ್ತಿ ಜನರಿಗೆ ಇಷ್ಟವಾಗಿಬಿಟ್ಟಿದ್ದರೆ ಕೆಎಫ್​ಸಿ ಕೌಂಟರುಗಳಲ್ಲಿ ಇದನ್ನು ಮಾರಾಟಕ್ಕಿಡಲಾಗುತ್ತಿತ್ತೇನೋ

Published On - 4:08 pm, Mon, 30 January 23

Follow Us
‘ಆ ದಿನಗಳು’ ಸಿನಿಮಾ ನೆನೆದ ನಿರ್ದೇಶಕ ಕೆಎಂ ಚೈತನ್ಯ: ವಿಡಿಯೋ
‘ಆ ದಿನಗಳು’ ಸಿನಿಮಾ ನೆನೆದ ನಿರ್ದೇಶಕ ಕೆಎಂ ಚೈತನ್ಯ: ವಿಡಿಯೋ
ವಿನೋದ್ ಪ್ರಭಾಕರ್​​ಗೆ ಆಗಿದ್ದೇನು: ಮಾಹಿತಿ ನೀಡಿದ ಸಹ ನಟ ವಿಜಯ್ ಗೌಡ
ವಿನೋದ್ ಪ್ರಭಾಕರ್​​ಗೆ ಆಗಿದ್ದೇನು: ಮಾಹಿತಿ ನೀಡಿದ ಸಹ ನಟ ವಿಜಯ್ ಗೌಡ
ಮುಸ್ಲಿಂ ಸಮುದಾಯದ ಮತ್ತಿಬ್ಬರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ಚರ್ಚೆ
ಮುಸ್ಲಿಂ ಸಮುದಾಯದ ಮತ್ತಿಬ್ಬರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ಚರ್ಚೆ
ಅಡ್ಡಮತದಾನ ಮಾಡಿದವರಿಗೆ ತಕ್ಕ ಶಾಸ್ತಿ: ಹೈಕಮಾಂಡ್ ಗುಟ್ಟು ಬಿಚ್ಚಿಟ್ಟ ಅಶೋಕ್
ಅಡ್ಡಮತದಾನ ಮಾಡಿದವರಿಗೆ ತಕ್ಕ ಶಾಸ್ತಿ: ಹೈಕಮಾಂಡ್ ಗುಟ್ಟು ಬಿಚ್ಚಿಟ್ಟ ಅಶೋಕ್
ಪೋರ್ಟರ್, ರ‍್ಯಾಪಿಡೋ ಆ್ಯಪ್​​ಗಳ ವಿರುದ್ಧ ಬೀದಿಗಿಳಿದ ಗೂಡ್ಸ್ ವಾಹನ ಚಾಲಕರು
ಪೋರ್ಟರ್, ರ‍್ಯಾಪಿಡೋ ಆ್ಯಪ್​​ಗಳ ವಿರುದ್ಧ ಬೀದಿಗಿಳಿದ ಗೂಡ್ಸ್ ವಾಹನ ಚಾಲಕರು
ಯುಎಇ ದೇಶಕ್ಕೆ ರಫ್ತಾಗಲಿವೆ ಬ್ರಹ್ಮೋಸ್, ಆಕಾಶ್ ಕ್ಷಿಪಣಿಗಳು!
ಯುಎಇ ದೇಶಕ್ಕೆ ರಫ್ತಾಗಲಿವೆ ಬ್ರಹ್ಮೋಸ್, ಆಕಾಶ್ ಕ್ಷಿಪಣಿಗಳು!
ಬೆಂಗಳೂರು ರಸ್ತೆ ಅಭಿವೃದ್ಧಿ ಅನುದಾನದ ಬಗ್ಗೆ ತೇಜಸ್ವಿ ಸೂರ್ಯ ವಾಗ್ದಾಳಿ
ಬೆಂಗಳೂರು ರಸ್ತೆ ಅಭಿವೃದ್ಧಿ ಅನುದಾನದ ಬಗ್ಗೆ ತೇಜಸ್ವಿ ಸೂರ್ಯ ವಾಗ್ದಾಳಿ
ಮುಮ್ಮಡಿ ನಿರ್ವಾಣ ಸ್ವಾಮೀಜಿ ಅಂತಿಮ ದರ್ಶನದ ವೇಳೆ ಸಿಎಂ ಡಿಕೆಶಿ ಭಾವುಕ
ಮುಮ್ಮಡಿ ನಿರ್ವಾಣ ಸ್ವಾಮೀಜಿ ಅಂತಿಮ ದರ್ಶನದ ವೇಳೆ ಸಿಎಂ ಡಿಕೆಶಿ ಭಾವುಕ
ಧರ್ಮಸ್ಥಳದಲ್ಲಿ ಶಾಸಕರ ಆಣೆ ಪ್ರಮಾಣ ನಿರ್ಧಾರದಿಂದ ಹಿಂದೆ ಸರಿದ ಬಿಜೆಪಿ
ಧರ್ಮಸ್ಥಳದಲ್ಲಿ ಶಾಸಕರ ಆಣೆ ಪ್ರಮಾಣ ನಿರ್ಧಾರದಿಂದ ಹಿಂದೆ ಸರಿದ ಬಿಜೆಪಿ
‘ಹೀರೋಗಳು ವರ್ಷಕ್ಕೆ ಒಂದಾದರೂ ಸಿನಿಮಾ ಕೊಡಬೇಕು, ಆಗ ಇಂಡಸ್ಟ್ರಿ ಉಳಿಯುತ್ತೆ’
‘ಹೀರೋಗಳು ವರ್ಷಕ್ಕೆ ಒಂದಾದರೂ ಸಿನಿಮಾ ಕೊಡಬೇಕು, ಆಗ ಇಂಡಸ್ಟ್ರಿ ಉಳಿಯುತ್ತೆ’