
ಟೊರೊಂಟೊ, ಆಗಸ್ಟ್ 31: “ಹಿಂದೂ ಧರ್ಮವು ಇಡೀ ಜಗತ್ತನ್ನು ಒಂದುಗೂಡಿಸುವ ಶಕ್ತಿಯೇ ಹೊರತು ಸಮಾಜವನ್ನು ವಿಭಜಿಸುವ ಶಕ್ತಿಯಲ್ಲ. ಭಾರತೀಯ ಪರಂಪರೆಯಲ್ಲಿ ಇತರರಿಗೆ ಸಹಾಯ ಮಾಡುವುದು ಮತ್ತು ಜಗತ್ತನ್ನು ಕುಟುಂಬವೆಂದು ಕಾಣುವುದು ಡಿಎನ್ಎಯಲ್ಲೇ ಬೇರೂರಿದೆ” ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಸರಸಂಘ ಚಾಲಕ ಮೋಹನ್ ಭಾಗವತ್(Mohan Bhagwat) ಹೇಳಿದ್ದಾರೆ.
ಕೆನಡಾದ ಟೊರೊಂಟೊದಲ್ಲಿ ‘ಕೆನಡಿಯನ್ ಹಿಂದೂಸ್ ಫಾರ್ ಔಟ್ರೀಚ್, ರಿಲೇಶನ್ಸ್ ಅಂಡ್ ಡೈಲಾಗ್’ (CHORD) ಆಯೋಜಿಸಿದ್ದ ಸಮಾವೇಶವನ್ನುದ್ದೇಶಿಸಿ ಅವರು ಮಾತನಾಡಿದರು.
ಸೀಮಿತ ಚೌಕಟ್ಟಲ್ಲ: ‘ಹಿಂದೂ’ ಎಂಬ ಪದವನ್ನು ಕೇವಲ ಒಂದು ನಿರ್ದಿಷ್ಟ ಭಾಷೆ, ಪೂಜಾ ವಿಧಾನ ಅಥವಾ ಜೀವನಶೈಲಿಗೆ ಸೀಮಿತಗೊಳಿಸಲು ಸಾಧ್ಯವಿಲ್ಲ. ಹಿಂದೂ ತತ್ವಜ್ಞಾನವು ಪ್ರತಿಯೊಂದು ವೈವಿಧ್ಯತೆಯನ್ನು ಗೌರವಿಸುತ್ತದೆ ಮತ್ತು ಸ್ವೀಕರಿಸುತ್ತದೆ.
ಮತ್ತಷ್ಟು ಓದಿ: ವೈವಿಧ್ಯತೆಯಲ್ಲಿ ಏಕತೆಯೇ ಭಾರತ ಮತ್ತು ಅಮೆರಿಕದ ಡಿಎನ್ಎ: ಮೋಹನ್ ಭಾಗವತ್
ವೈವಿಧ್ಯತೆಯೇ ಅಲಂಕಾರ: ಸಮಾಜದಲ್ಲಿ ನೂರಾರು ಭಾಷೆಗಳು, ಜಾತಿಗಳು ಮತ್ತು ಧರ್ಮಗಳಿರುವುದು ಸಹಜ. ಆದರೆ ಆ ಎಲ್ಲಾ ವೈವಿಧ್ಯತೆಯ ಆಧಾರವಾಗಿರುವ ಆಂತರಿಕ ಏಕತೆಯೇ ಅಂತಿಮ ಸತ್ಯ ಎಂದು ಭಾಗವತ್ ವಿಶ್ಲೇಷಿಸಿದರು.
ಆಕ್ರಮಣ ಮಾಡದ ದೇಶ: ಭಾರತದ ಪೂರ್ವಜರು ಮೆಕ್ಸಿಕೋದಿಂದ ಸೈಬೀರಿಯಾವರೆಗೆ, ಹಿಮಾಲಯದಿಂದ ಆಗ್ನೇಯ ಏಷ್ಯಾದವರೆಗೆ ಸಂಚರಿಸಿದರೂ ಯಾವುದೇ ಭೂಪ್ರದೇಶವನ್ನು ವಶಪಡಿಸಿಕೊಳ್ಳಲಿಲ್ಲ. ಬದಲಿಗೆ ಆಯುರ್ವೇದ, ಖಗೋಳಶಾಸ್ತ್ರ ಮತ್ತು ನಾಗರಿಕತೆಯ ಜ್ಞಾನವನ್ನು ಮಾತ್ರ ಧಾರೆ ಎರೆದರು.
ವಿಡಿಯೋ
#WATCH | Canada | RSS Sarsanghchalak, Mohan Bhagwat arrives at the “Hindu Vishwa Bandhu – Embrace the World in Friendship” event, organized by Canadian Hindus for Outreach, Relations and Dialogue (CHORD) in Toronto pic.twitter.com/t29ObHd6g4
— ANI (@ANI) August 30, 2026
ನಿರಾಶ್ರಿತರಿಗೆ ಸದಾ ಆಶ್ರಯ: ಎರಡನೇ ಮಹಾಯುದ್ಧದಲ್ಲಿ ಪೋಲಿಷ್ ನಿರಾಶ್ರಿತರಿಗೆ ಜಾಮ್ನಗರದ ಮಹಾರಾಜರು ಆಶ್ರಯ ನೀಡಿದ್ದನ್ನು ಸ್ಮರಿಸಿದ ಅವರು, ಪಾರ್ಸಿಗಳು, ಯಹೂದಿಗಳು, ಮುಸ್ಲಿಮರು ಮತ್ತು ಕ್ರಿಶ್ಚಿಯನ್ನರಿಗೆ ಭಾರತ ಸದಾ ಸುರಕ್ಷಿತ ನೆಲೆ ಒದಗಿಸಿದೆ ಎಂದರು.
ಕೇಳದಿದ್ದರೂ ನೆರವು ನೀಡುವ ಗುಣ: ವಿಶ್ವದ ಯಾವುದೇ ಮೂಲೆಯಲ್ಲಿ ಬಿಕ್ಕಟ್ಟು ಎದುರಾದರೂ ಭಾರತ ಕೇಳದೆ ಸಹಾಯಹಸ್ತ ಚಾಚುತ್ತದೆ. ಇತ್ತೀಚಿನ ಯುದ್ಧ ಪೀಡಿತ ಪ್ರದೇಶಗಳಿಂದ ಭಾರತೀಯರಲ್ಲದೆ 7ಕ್ಕೂ ಹೆಚ್ಚು ವಿದೇಶಿ ಪ್ರಜೆಗಳನ್ನು ರಕ್ಷಿಸಿರುವುದೇ ಇದಕ್ಕೆ ಸಾಕ್ಷಿ.
ವಿಡಿಯೋ
#WATCH | Toronto, Canada | RSS Chief Mohan Bhagwat says, “When I say Hindu, the word Hindu cannot be defined by any specific language, through any specific worship, or through any living style. All these are there. These are the diversities of human beings. Hindus respect and… pic.twitter.com/oIOHOrH3gZ
— ANI (@ANI) August 31, 2026
ಹಿಂದೂಗಳ ಜಾಗೃತಿ: ಮುಕ್ತ ಮನಸ್ಸಿನ ಸಮಾಜ ನಿರ್ಮಾಣಕ್ಕಾಗಿ ‘ವಸುಧೈವ ಕುಟುಂಬಕಂ’ ಪರಿಕಲ್ಪನೆ ಅನಿವಾರ್ಯವಾಗಿದ್ದು, ಹಿಂದೂಗಳು ಜಾಗೃತರಾದರೆ ಇಡೀ ಜಗತ್ತೇ ಜಾಗೃತಗೊಳ್ಳಲಿದೆ ಎಂದು ಅವರು ನುಡಿದರು.
ಈ ಬೃಹತ್ ಸಮಾವೇಶದಲ್ಲಿ ಕೆನಡಾದ ೮ ಪ್ರಾಂತ್ಯಗಳಿಂದ 2,500 ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸಿದ್ದರು. ಕೆನಡಾದ ಮಾಜಿ ರಕ್ಷಣಾ ಸಚಿವ ಹಾಗೂ ಆಲ್ಬರ್ಟಾದ ಮಾಜಿ ಪ್ರೀಮಿಯರ್ ಜೇಸನ್ ಕೆನ್ನಿ ಸೇರಿದಂತೆ ಹಲವು ಅಂತಾರಾಷ್ಟ್ರೀಯ ಗಣ್ಯರು ಸಮಾರಂಭದಲ್ಲಿ ಉಪಸ್ಥಿತರಿದ್ದರು.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ