AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸೌದಿ ರಾಜಧಾನಿಯ ಹೆಬ್ಬಾಗಿಲಿಗೆ ಬಡಿದ ಯುದ್ಧದ ಜ್ವಾಲೆ: ರಿಯಾದ್ ಏರ್‌ಪೋರ್ಟ್ ಬಳಿ ಹೌತಿಗಳ ಡ್ರೋನ್-ಕ್ಷಿಪಣಿ ಅಟ್ಯಾಕ್

ಸೌದಿ ಅರೇಬಿಯಾದ ರಿಯಾದ್ ವಿಮಾನ ನಿಲ್ದಾಣ ಮತ್ತು ಅರಾಮ್ಕೊ ತೈಲ ಘಟಕಗಳ ಬಳಿ ಯೆಮೆನ್ ಹೌತಿ ಬಂಡುಕೋರರು ನಡೆಸಿದ ಡ್ರೋನ್-ಕ್ಷಿಪಣಿ ದಾಳಿಯನ್ನು ಈ ಲೇಖನ ವಿವರಿಸುತ್ತದೆ. ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆಯನ್ನು ಇದು ಎತ್ತಿ ತೋರಿಸುತ್ತದೆ. ತೈಲ ಮೂಲಸೌಕರ್ಯಗಳ ಮೇಲಿನ ದಾಳಿ ಜಾಗತಿಕ ತೈಲ ಪೂರೈಕೆಗೆ ಬೆದರಿಕೆ ಒಡ್ಡಿದೆ. ಸೌದಿ ಸೇನೆ ಕ್ಷಿಪಣಿಗಳನ್ನು ತಡೆದಿದ್ದು, ಯುಎನ್ ಇದನ್ನು ಖಂಡಿಸಿದೆ. ಇದು ಸಂಘರ್ಷದ ತೀವ್ರತೆಯನ್ನು ಸೂಚಿಸುತ್ತದೆ.

ಸೌದಿ ರಾಜಧಾನಿಯ ಹೆಬ್ಬಾಗಿಲಿಗೆ ಬಡಿದ ಯುದ್ಧದ ಜ್ವಾಲೆ: ರಿಯಾದ್ ಏರ್‌ಪೋರ್ಟ್ ಬಳಿ ಹೌತಿಗಳ ಡ್ರೋನ್-ಕ್ಷಿಪಣಿ ಅಟ್ಯಾಕ್
ಬೆಂಕಿImage Credit source: Roylan Givens X Account
ನಯನಾ ರಾಜೀವ್
|

Updated on: Sep 20, 2026 | 1:26 PM

Share

ರಿಯಾದ್, ಸೆಪ್ಟೆಂಬರ್ 20: ಸೌದಿ ಅರೇಬಿಯಾದ ರಾಜಧಾನಿ ರಿಯಾದ್‌ನ ಪ್ರಮುಖ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಭಾರಿ ಬೆಂಕಿ ಮತ್ತು ಕಪ್ಪು ಹೊಗೆಯ ದಟ್ಟ ಮೋಡಗಳು ಆವರಿಸಿಕೊಂಡಿದ್ದು, ಸೌದಿ ರಾಜಧಾನಿಯ ಸೂಕ್ಷ್ಮ ನೆಲೆಗಳ ಮೇಲೆ ಕ್ಷಿಪಣಿ ಮತ್ತು ಡ್ರೋನ್‌ಗಳ ಮೂಲಕ ತಾವೇ ದಾಳಿ ನಡೆಸಿರುವುದಾಗಿ ಯೆಮೆನ್‌ನ ಇರಾನ್ ಬೆಂಬಲಿತ ಹೌತಿ ಬಂಡುಕೋರರು ಹೇಳಿಕೊಂಡಿದ್ದಾರೆ. ಇತ್ತೀಚಿನ ತಿಂಗಳುಗಳಲ್ಲಿ ರಿಯಾದ್ ಗುರಿಯಾಗಿಸಿ ನಡೆದ ಮೊದಲ ಪ್ರಮುಖ ನೇರ ವೈಮಾನಿಕ ದಾಳಿ ಇದಾಗಿದ್ದು, ಮಧ್ಯಪ್ರಾಚ್ಯದಲ್ಲಿ ಯುದ್ಧದ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿದೆ.

ಏರ್‌ಪೋರ್ಟ್ ಮತ್ತು ಇಂಧನ ಟ್ಯಾಂಕ್ ಬಳಿ ಜ್ವಾಲೆ: ರಾಯಿಟರ್ಸ್ ದೃಶ್ಯಾವಳಿಗಳ ಪ್ರಕಾರ ವಿಮಾನ ನಿಲ್ದಾಣದ ಟರ್ಮಿನಲ್ ಹಾಗೂ ಹೆದ್ದಾರಿಯ ಹಿಂಭಾಗದಲ್ಲಿರುವ ಇಂಧನ ಟ್ಯಾಂಕರ್‌ಗಳ ಬಳಿಯಿಂದ ದಟ್ಟ ಕಪ್ಪು ಹೊಗೆ ಮತ್ತು ಬೆಂಕಿ ಕಾಣಿಸಿಕೊಂಡಿದೆ. ರಿಯಾದ್‌ನ ಒಲಾಯಾ ಭಾಗದಲ್ಲಿ ಭಾರಿ ಸ್ಫೋಟದ ಶಬ್ದ ಕೇಳಿಬಂದಿದೆ.

ಅರಾಮ್ಕೊ ತೈಲ ಕೇಂದ್ರದ ಮೇಲೂ ದಾಳಿ: ಯೆಮೆನ್ ರಾಜಧಾನಿ ಸನಾದ ಮೇಲೆ ನಡೆದ ದಾಳಿಗೆ ಪ್ರತೀಕಾರವಾಗಿ ರಿಯಾದ್ ಮಾತ್ರವಲ್ಲದೆ, ಕೆಂಪು ಸಮುದ್ರ ತೀರದ ಪ್ರಮುಖ ತೈಲ ರಫ್ತು ಕೇಂದ್ರವಾದ ಯಾನ್ಬುವಿನಲ್ಲಿರುವ ಸೌದಿ ಅರಾಮ್ಕೊ ಸೌಲಭ್ಯದ ಮೇಲೂ ದಾಳಿ ನಡೆಸಲಾಗಿದೆ ಎಂದು ಹೌತಿಗಳು ತಿಳಿಸಿದ್ದಾರೆ.

ಕ್ಷಿಪಣಿಗಳನ್ನು ತಡೆದ ಸೌದಿ ವಾಯು ರಕ್ಷಣೆ: ಸೌದಿ ಮಿಲಿಟರಿ ಒಕ್ಕೂಟವು ರಿಯಾದ್ ಕಡೆಗೆ ಬಂದ ಬ್ಯಾಲಿಸ್ಟಿಕ್ ಕ್ಷಿಪಣಿಯನ್ನು ಹೊಡೆದುರುಳಿಸಿರುವುದಾಗಿ ಹೇಳಿದೆ. ಜೊತೆಗೆ ಬಿಶ್, ಫರಾಸನ್, ತೈಫ್ ಮತ್ತು ಯಾನ್ಬು ಭಾಗದಲ್ಲಿ ನಾಗರಿಕರನ್ನು ಗುರಿಯಾಗಿಸಿ ನಡೆದ ದಾಳಿಗಳನ್ನು ವಾಯು ರಕ್ಷಣಾ ವ್ಯವಸ್ಥೆಯು ವಿಫಲಗೊಳಿಸಿದೆ ಎಂದು ಹೇಳಿಕೊಂಡಿದೆ.

ಅಮೆರಿಕದಿಂದ ನಾಗರಿಕರಿಗೆ ಟ್ರಾವೆಲ್ ಅಲರ್ಟ್: ದಾಳಿಯ ಬೆನ್ನಲ್ಲೇ ಯುಎಸ್ ವಿದೇಶಾಂಗ ಇಲಾಖೆಯು ಮಧ್ಯಪ್ರಾಚ್ಯದಲ್ಲಿರುವ ತನ್ನ ನಾಗರಿಕರಿಗೆ ತೀವ್ರ ಎಚ್ಚರಿಕೆ ವಹಿಸುವಂತೆ ಸೂಚಿಸಿದ್ದು, ಈ ಭಾಗಕ್ಕೆ ಪ್ರಯಾಣಿಸುವುದನ್ನು ಮರುಪರಿಶೀಲಿಸುವಂತೆ ಕಟ್ಟುನಿಟ್ಟಿನ ಸಲಹೆ ನೀಡಿದೆ.

ವಿಡಿಯೋ

ಟರ್ಕಿ-ಪಾಕಿಸ್ತಾನ-ಸೌದಿ ತ್ರಿಪಕ್ಷೀಯ ರಕ್ಷಣಾ ಒಪ್ಪಂದ: ಹೌತಿ ದಾಳಿ ತೀವ್ರಗೊಂಡ ಹಿನ್ನೆಲೆಯಲ್ಲಿ ಸೌದಿ ಅರೇಬಿಯಾಕ್ಕೆ ಅಗತ್ಯವಿರುವ ತಾಂತ್ರಿಕ ಹಾಗೂ ರಕ್ಷಣಾ ಬೆಂಬಲ ನೀಡಲು ತಾವು ಬದ್ಧರಾಗಿರುವುದಾಗಿ ಟರ್ಕಿ ವಿದೇಶಾಂಗ ಸಚಿವ ಹಕನ್ ಫಿಡಾನ್ ಘೋಷಿಸಿದ್ದಾರೆ. ಕಳೆದ ತಿಂಗಳಷ್ಟೇ ಸೌದಿ, ಟರ್ಕಿ ಮತ್ತು ಪಾಕಿಸ್ತಾನ ನಡುವೆ ‘ಯಾವುದೇ ಒಂದು ದೇಶದ ಮೇಲಿನ ದಾಳಿಯನ್ನು ಮೂರೂ ದೇಶಗಳ ಮೇಲಿನ ದಾಳಿ’ ಎಂದು ಪರಿಗಣಿಸುವ ಮಹತ್ವದ ಪರಸ್ಪರ ರಕ್ಷಣಾ ಒಪ್ಪಂದ ಏರ್ಪಟ್ಟಿದೆ.

ಜಾಗತಿಕ ತೈಲ ಸಾಗಣೆಗೆ ಆತಂಕ: ಹಾರ್ಮುಜ್ ಜಲಸಂಧಿಯ ಬಿಕ್ಕಟ್ಟಿನ ನಡುವೆ, ಗಲ್ಫ್ ತೈಲ ರಫ್ತಿಗೆ ಪರ್ಯಾಯವಾಗಿದ್ದ ಕೆಂಪು ಸಮುದ್ರದ ಜಲಮಾರ್ಗ ಮತ್ತು ಯಾನ್ಬು ತೈಲ ಟರ್ಮಿನಲ್‌ಗಳ ಮೇಲೂ ಹೌತಿಗಳು ದಾಳಿ ಮುಂದುವರೆಸಿರುವುದು ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಪೂರೈಕೆಗೆ ಭಾರೀ ಬೆದರಿಕೆಯೊಡ್ಡಿದೆ.

ವಿಶ್ವಸಂಸ್ಥೆ ಭದ್ರತಾ ಮಂಡಳಿ ಖಂಡನೆ: ಸೌದಿ ಅರೇಬಿಯಾದ ನಾಗರಿಕ ಮೂಲಸೌಕರ್ಯಗಳು ಮತ್ತು ತೈಲ ನೆಲೆಗಳ ಮೇಲೆ ಹೌತಿಗಳು ನಡೆಸುತ್ತಿರುವ ನಿರಂತರ ದಾಳಿಗಳನ್ನು ವಿಶ್ವಸಂಸ್ಥೆಯ ಭದ್ರತಾ ಮಂಡಳಿ ತೀವ್ರವಾಗಿ ಖಂಡಿಸಿದ್ದು, ತಕ್ಷಣವೇ ಹಿಂಸಾಚಾರ ನಿಲ್ಲಿಸುವಂತೆ ತಾಕೀತು ಮಾಡಿದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us
ಇಸ್ಲಾಂಪೇಟೆಯಲ್ಲಿ ಮತ್ತೆ ಗಣಪತಿ ಮೆರವಣಿಗೆಗೆ ಶಾಸಕ ಕೃಷ್ಣಾನಾಯಕ್ ಚಾಲನೆ!
ಇಸ್ಲಾಂಪೇಟೆಯಲ್ಲಿ ಮತ್ತೆ ಗಣಪತಿ ಮೆರವಣಿಗೆಗೆ ಶಾಸಕ ಕೃಷ್ಣಾನಾಯಕ್ ಚಾಲನೆ!
ಹುಬ್ಬಳ್ಳಿ ಕೆಎಂಸಿ ಆಸ್ಪತ್ರೆಯಲ್ಲಿ ಭ್ರಷ್ಟಾಚಾರ: ಇಬ್ಬರು ಅಮಾನತು
ಹುಬ್ಬಳ್ಳಿ ಕೆಎಂಸಿ ಆಸ್ಪತ್ರೆಯಲ್ಲಿ ಭ್ರಷ್ಟಾಚಾರ: ಇಬ್ಬರು ಅಮಾನತು
ಸೌಂದರ್ಯಾ ಬಗ್ಗೆ ಕೆಟ್ಟದಾಗಿ ಮಾತನಾಡಿದ ಮಂಜನಿಗೆ ಬುದ್ಧಿ ಕಲಿಸಿದ ಕಿಚ್ಚ
ಸೌಂದರ್ಯಾ ಬಗ್ಗೆ ಕೆಟ್ಟದಾಗಿ ಮಾತನಾಡಿದ ಮಂಜನಿಗೆ ಬುದ್ಧಿ ಕಲಿಸಿದ ಕಿಚ್ಚ
ಬೆಂಗಳೂರಿನಲ್ಲಿ ಹೋಟೆಲ್​ ಬಳಿ ನಿಂತಿದ್ದ ಆಡಿ ಕಾರಿನಲ್ಲಿ ಮೃತದೇಹ ಪತ್ತೆ
ಬೆಂಗಳೂರಿನಲ್ಲಿ ಹೋಟೆಲ್​ ಬಳಿ ನಿಂತಿದ್ದ ಆಡಿ ಕಾರಿನಲ್ಲಿ ಮೃತದೇಹ ಪತ್ತೆ
ತುಂಗಭದ್ರಾ ಡ್ಯಾಂನಿಂದ ನೀರು ಕಳ್ಳತನ ಮಾಡುತ್ತಿರುವ ಕಾರ್ಖಾನೆಗಳು
ತುಂಗಭದ್ರಾ ಡ್ಯಾಂನಿಂದ ನೀರು ಕಳ್ಳತನ ಮಾಡುತ್ತಿರುವ ಕಾರ್ಖಾನೆಗಳು
ಕರ್ನಾಟಕದ ಹಲವು ಜೈಲುಗಳಲ್ಲಿ ಬರೋಬ್ಬರಿ 410 ಮೊಬೈಲ್‌ ಸೀಜ್
ಕರ್ನಾಟಕದ ಹಲವು ಜೈಲುಗಳಲ್ಲಿ ಬರೋಬ್ಬರಿ 410 ಮೊಬೈಲ್‌ ಸೀಜ್
ತಡರಾತ್ರಿ ಮಳೆಗೆ ತತ್ತರಿಸಿದ ಬೆಂಗಳೂರು!
ತಡರಾತ್ರಿ ಮಳೆಗೆ ತತ್ತರಿಸಿದ ಬೆಂಗಳೂರು!
ವಾರ ಭವಿಷ್ಯ: ಗ್ರಹಗಳ ಸ್ಥಾನಪಲ್ಲಟ, ದ್ವಾದಶ ರಾಶಿಗಳ ಮೇಲೆ ಪ್ರಭಾವ
ವಾರ ಭವಿಷ್ಯ: ಗ್ರಹಗಳ ಸ್ಥಾನಪಲ್ಲಟ, ದ್ವಾದಶ ರಾಶಿಗಳ ಮೇಲೆ ಪ್ರಭಾವ
ರವಿ ಕನ್ಯಾ ರಾಶಿಯಲ್ಲಿ, ಚಂದ್ರ ಧನು ರಾಶಿಯಲ್ಲಿ ಸಂಚಾರ: ದಿನ ಭವಿಷ್ಯ ಇಲ್ಲಿದ
ರವಿ ಕನ್ಯಾ ರಾಶಿಯಲ್ಲಿ, ಚಂದ್ರ ಧನು ರಾಶಿಯಲ್ಲಿ ಸಂಚಾರ: ದಿನ ಭವಿಷ್ಯ ಇಲ್ಲಿದ
ಮನೆ ಕಟ್ಟುವವರಿಗೆ ಗುಡ್​ನ್ಯೂಸ್: ನಿಮಿಷಗಳಲ್ಲಿ ಸಿಗಲಿದೆ ಪ್ಲಾನ್ ಅಪ್ರೂವಲ್
ಮನೆ ಕಟ್ಟುವವರಿಗೆ ಗುಡ್​ನ್ಯೂಸ್: ನಿಮಿಷಗಳಲ್ಲಿ ಸಿಗಲಿದೆ ಪ್ಲಾನ್ ಅಪ್ರೂವಲ್