AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಫ್ಘಾನಿಸ್ತಾನದ ಕಂದಹಾರ್​ನಲ್ಲಿ ಬಂದೂಕುಧಾರಿಗಳಿಂದ 100 ಕ್ಕೂ ಹೆಚ್ಚು ನಾಗರಿಕರ ಹತ್ಯೆ; ತಾಲೀಬಾನ್ ಕೃತ್ಯ ಎಂದ ಸರ್ಕಾರ

Kandahar: ತಮ್ಮ ಪಂಜಾಬಿ ಮೇಲಧಿಕಾರಿಗಳ (ಪಾಕಿಸ್ತಾನ) ಆದೇಶದ ಮೇರೆಗೆ ಕ್ರೂರ ಭಯೋತ್ಪಾದಕರು ಸ್ಪಿನ್ ಬೋಲ್ಡಾಕ್‌ನ ಕೆಲವು ಪ್ರದೇಶಗಳಲ್ಲಿ ಮುಗ್ಧ ಅಫ್ಘನ್ನರ ಮನೆಗಳನ್ನು ಹೊಂಚುಹಾಕಿ, ಮನೆಗಳನ್ನು ಲೂಟಿ ಮಾಡಿದರು ಮತ್ತು 100 ಅಮಾಯಕ ಜನರನ್ನು ಬಲಿಪಡೆದರು.

ಅಫ್ಘಾನಿಸ್ತಾನದ ಕಂದಹಾರ್​ನಲ್ಲಿ ಬಂದೂಕುಧಾರಿಗಳಿಂದ 100 ಕ್ಕೂ ಹೆಚ್ಚು ನಾಗರಿಕರ ಹತ್ಯೆ; ತಾಲೀಬಾನ್ ಕೃತ್ಯ ಎಂದ ಸರ್ಕಾರ
ಪ್ರಾತಿನಿಧಿಕ ಚಿತ್ರ
TV9 Web
| Edited By: |

Updated on: Jul 23, 2021 | 11:31 AM

Share

ಕಂದಾಹಾರ್: ತಾಲಿಬಾನ್ ನಿಯಂತ್ರಣದಲ್ಲಿರುವ ಅಫ್ಘಾನಿಸ್ತಾನದ ಕಂದಹಾರ್ ಪ್ರಾಂತ್ಯದ ಸ್ಪಿನ್ ಬೋಲ್ಡಾಕ್ ಜಿಲ್ಲೆಯಲ್ಲಿ 100 ಕ್ಕೂ ಹೆಚ್ಚು ಜನರನ್ನು ಅಪರಿಚಿತ ಬಂದೂಕುಧಾರಿಗಳು ಹತ್ಯೆ ಮಾಡಿದ್ದಾರೆ ಎಂದು ಟೋಲೋ ನ್ಯೂಸ್ ವರದಿ ಮಾಡಿದೆ. ಸ್ಪಿನ್ ಬೋಲ್ಡಾಕ್​ನಲ್ಲಿ ನಾಗರಿಕರ ಹತ್ಯೆಗೆ ತಾಲಿಬಾನ್ ಅನ್ನು ಅಫ್ಘಾನ್ ಆಂತರಿಕ ಸಚಿವಾಲಯ ದೂಷಿಸಿದೆ ಮತ್ತು ಯಾವುದೇ ಕಾರಣವಿಲ್ಲದೆ ಅವರನ್ನು ಕೊಲೆ ಮಾಡಲಾಗಿದೆ ಎಂದು ಟೋಲೋ ನ್ಯೂಸ್ ವರದಿ ಮಾಡಿದೆ.

ತಮ್ಮ ಪಂಜಾಬಿ ಮೇಲಧಿಕಾರಿಗಳ (ಪಾಕಿಸ್ತಾನ) ಆದೇಶದ ಮೇರೆಗೆ ಕ್ರೂರ ಭಯೋತ್ಪಾದಕರು ಸ್ಪಿನ್ ಬೋಲ್ಡಾಕ್‌ನ ಕೆಲವು ಪ್ರದೇಶಗಳಲ್ಲಿ ಮುಗ್ಧ ಅಫ್ಘನ್ನರ ಮನೆಗಳನ್ನು ಹೊಂಚುಹಾಕಿ, ಮನೆಗಳನ್ನು ಲೂಟಿ ಮಾಡಿದರು ಮತ್ತು 100 ಅಮಾಯಕ ಜನರನ್ನು ಬಲಿಪಡೆದರು. ಇದು ಕ್ರೂರ ಶತ್ರುವಿನ ನೈಜ ಮುಖವನ್ನು ಅನಾವರಣಗೊಳಿಸುತ್ತದೆಎಂದು ಆಂತರಿಕ ಸಚಿವಾಲಯದ ವಕ್ತಾರ ಮಿರ್ವಾಯಿಸ್ ಸ್ಟಾನೆಕ್ಜೈ ಅವರು ಹೇಳಿರುವುದಾಗಿ ಟೋಲೊ ನ್ಯೂಸ್ ವರದಿ ಮಾಡಿದೆ.

“ಅವರು (ತಾಲಿಬಾನ್) ತಮ್ಮ ಯಜಮಾನರ ಆದೇಶದ ಮೇರೆಗೆ ಈ ಕೃತ್ಯಗಳನ್ನು ನಡೆಸುತ್ತಾರೆ, ಜನಾಂಗೀಯ ಯುದ್ಧದ ಬಣ್ಣವನ್ನು ತಮ್ಮ ಪ್ರಾಕ್ಸಿ ಯುದ್ಧಕ್ಕೆ ನೀಡಲು ಅವರು ಬಯಸುತ್ತಾರೆ” ಎಂದು ಸ್ಟಾನೆಕ್ಜೈ ಹೇಳಿದ್ದಾರೆ.

ಸ್ಪಿನ್ ಬೋಲ್ಡಾಕ್​​ನಲ್ಲಿ ಹಲವಾರು ನಾಗರಿಕರ ಮೃತದೇಹಗಳು ಇನ್ನೂ ನೆಲದ ಮೇಲೆ ಬಿದ್ದಿವೆ ಎಂದು ಅಫಘಾನ್ ಭದ್ರತಾ ಸಂಸ್ಥೆಗಳು ತಿಳಿಸಿವೆ. “ಅವರು (ತಾಲಿಬಾನ್) ಸಾರ್ವಜನಿಕರ ಮೂಲಸೌಕರ್ಯಗಳ ನಾಶ ಸೇರಿದಂತೆ ನಾಗರಿಕರ ಮತ್ತು ಸರ್ಕಾರಿ ಕಚೇರಿಗಳ ಮನೆಗಳನ್ನು ಲೂಟಿ ಮಾಡಿದ್ದಾರೆ” ಎಂದು ರಕ್ಷಣಾ ಸಚಿವಾಲಯದ ವಕ್ತಾರ ರೋಹುಲ್ಲಾ ಅಹ್ಮದ್ಜಾಯಿ ಹೇಳಿದ್ದಾರೆ. “ಅವರು ನಾಗರಿಕರನ್ನು ಸಹ ಹತ್ಯೆ ಮಾಡಿದ್ದಾರೆ” ಎಂದಿದ್ದಾರೆ ಅಹ್ಮದ್ಜಾಯಿ.

ಆದಾಗ್ಯೂ, ತಾಲಿಬಾನ್ ವಕ್ತಾರ ಜಬಿಹುಲ್ಲಾ ಮುಜಾಹಿದ್ ಈ ಆರೋಪಗಳನ್ನು ತಿರಸ್ಕರಿಸಿದ್ದಾರೆ. ಕಳೆದ ವಾರ ತಾಲಿಬಾನ್ ಸ್ಪಿನ್ ಬೋಲ್ಡಾಕ್ ಅನ್ನು ವಶಪಡಿಸಿಕೊಂಡಿದೆ. ಫ್ರಾನ್ಸ್ 24 ಬಿಡುಗಡೆ ಮಾಡಿದ ವಿಡಿಯೊ ತುಣುಕಿನಲ್ಲಿ, ತಾಲಿಬಾನ್ ಸದಸ್ಯರು ಪಟ್ಟಣದಾದ್ಯಂತ ಅಡ್ಡಾಡುವುದು, ಮನೆಗಳನ್ನು ಲೂಟಿ ಮಾಡುವುದು ಮತ್ತು ಪ್ರದೇಶದಿಂದ ಪರಾರಿಯಾಗಿದ್ದ ಸರ್ಕಾರಿ ಅಧಿಕಾರಿಗಳ ವಾಹನಗಳನ್ನು ವಶಪಡಿಸಿಕೊಳ್ಳುವುದು ಕಂಡುಬಂದಿದೆ.

ಕಂದಹಾರ್ ಸೇರಿದಂತೆ ತಾಲಿಬಾನ್ ದಂಗೆಕೋರರ ವಿರುದ್ಧ ಹೋರಾಡುವ ಅಪ್ಘಾನ್ ಸರ್ಕಾರಿ ಪಡೆಗಳಿಗೆ ಬೆಂಬಲವಾಗಿ ಅಮೆರಿಕ ಮಿಲಿಟರಿ ಈ ವಾರ ಹಲವಾರು ವೈಮಾನಿಕ ದಾಳಿಗಳನ್ನು ನಡೆಸಿದೆ ಎಂದು ಪೆಂಟಗನ್ ಪತ್ರಿಕಾ ಕಾರ್ಯದರ್ಶಿ ಜಾನ್ ಕಿರ್ಬಿ ಗುರುವಾರ ಹೇಳಿದ್ದಾರೆ. “ಕಳೆದ ಹಲವಾರು ದಿನಗಳಲ್ಲಿ ನಾವು ಎಎನ್‌ಎಸ್‌ಎಫ್ ಅನ್ನು ಬೆಂಬಲಿಸಲು ವೈಮಾನಿಕ ದಾಳಿಯ ಮೂಲಕ ಕಾರ್ಯನಿರ್ವಹಿಸಿದ್ದೇವೆ” ಎಂದು ಕಿರ್ಬಿ ಅಪ್ಘಾನ್ ರಾಷ್ಟ್ರೀಯ ರಕ್ಷಣಾ ಮತ್ತು ಭದ್ರತಾ ಪಡೆಗಳಿಗೆ ಸಂಕ್ಷಿಪ್ತ ರೂಪವನ್ನು ಬಳಸಿದ್ದಾರೆ ಎಂದು ಹೇಳಿದರು.

ಕಂದಹಾರ್ ಪ್ರದೇಶದಲ್ಲಿ ನೌಕಾಪಡೆಯ ಎಫ್‌ಎ -18 ವೈಮಾನಿಕ ದಾಳಿಯ ಸುದ್ದಿ ವರದಿಗಳ ಬಗ್ಗೆ ವರದಿಗಾರರ ಪ್ರಶ್ನೆಗೆ ಅವರು ಉತ್ತರಿಸುತ್ತಿದ್ದರು.

ಬುಧವಾರ ಮತ್ತು ಗುರುವಾರ ಅಮೆರಿಕ ಅಪ್ಘಾನ್ ಪಡೆಗಳಿಗೆ ಬೆಂಬಲವಾಗಿ ನಾಲ್ಕಕ್ಕೂ ಹೆಚ್ಚು ವೈಮಾನಿಕ ದಾಳಿ ನಡೆಸಿದೆ ಎಂದು ಮತ್ತೊಬ್ಬ ರಕ್ಷಣಾ ಅಧಿಕಾರಿ ಹೇಳಿದ್ದಾರೆ.

ಇದನ್ನೂ ಓದಿ: Danish Siddiqui ದೆಹಲಿಯ ಜಾಮಿಯಾ ಮಿಲಿಯಾ ಇಸ್ಲಾಮಿಯಾ ಸ್ಮಶಾನದಲ್ಲಿ ಡ್ಯಾನಿಶ್ ಸಿದ್ಧಿಕಿ ಅಂತ್ಯ ಸಂಸ್ಕಾರ

(More than 100 people were reportedly killed in Afghanistan’s Kandahar Afghan Ministry of Interior blames the Taliban)

ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಭಾರತದ ಸ್ಫೋಟಕ ದಾಂಡಿಗ ನಾಯಕ
ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಭಾರತದ ಸ್ಫೋಟಕ ದಾಂಡಿಗ ನಾಯಕ
ಕನ್ಯಾ ರಾಶಿಯ ಮೇಲೆ ರಾಹುಗ್ರಸ್ತ ಸೂರ್ಯಗ್ರಹಣದ ಪ್ರಭಾವ ಹೇಗಿರಲಿದೆ?
ಕನ್ಯಾ ರಾಶಿಯ ಮೇಲೆ ರಾಹುಗ್ರಸ್ತ ಸೂರ್ಯಗ್ರಹಣದ ಪ್ರಭಾವ ಹೇಗಿರಲಿದೆ?
ಮಹಾಶಿವರಾತ್ರಿ ಎಫೆಕ್ಟ್​​: ಹೂ, ಹಣ್ಣುಗಳ ದರ ಗಗನಕ್ಕೆ; ಗ್ರಾಹಕರು ಕಂಗಾಲು
ಮಹಾಶಿವರಾತ್ರಿ ಎಫೆಕ್ಟ್​​: ಹೂ, ಹಣ್ಣುಗಳ ದರ ಗಗನಕ್ಕೆ; ಗ್ರಾಹಕರು ಕಂಗಾಲು
ಮಹದೇಶ್ವರ ಬೆಟ್ಟದ ಜಾತ್ರೆ ಹೊತ್ತಲೇ ಭೀಕರ ಅಪಘಾತ
ಮಹದೇಶ್ವರ ಬೆಟ್ಟದ ಜಾತ್ರೆ ಹೊತ್ತಲೇ ಭೀಕರ ಅಪಘಾತ
300ಕ್ಕೂ ಹೆಚ್ಚು ಬಾಳೆ ಗಿಡಗಳನ್ನ ಕಡಿದ ದುಷ್ಕರ್ಮಿಗಳು
300ಕ್ಕೂ ಹೆಚ್ಚು ಬಾಳೆ ಗಿಡಗಳನ್ನ ಕಡಿದ ದುಷ್ಕರ್ಮಿಗಳು
ಹಂಪಿ ಉತ್ಸವಕ್ಕೆ ಸಜ್ಜಾದ ಭವ್ಯ ವೇದಿಕೆ: 50 ಸಾವಿರ ಜನರಿಗೆ ಆಸನದ ವ್ಯವಸ್ಥೆ
ಹಂಪಿ ಉತ್ಸವಕ್ಕೆ ಸಜ್ಜಾದ ಭವ್ಯ ವೇದಿಕೆ: 50 ಸಾವಿರ ಜನರಿಗೆ ಆಸನದ ವ್ಯವಸ್ಥೆ
ಸಿಂಹ ರಾಶಿಯವರ ಮೇಲೆ ರಾಹುಗ್ರಸ್ತ ಕಂಕಣ ಸೂರ್ಯಗ್ರಹಣದ ಪ್ರಭಾವ ಹೇಗಿರಲಿದೆ?
ಸಿಂಹ ರಾಶಿಯವರ ಮೇಲೆ ರಾಹುಗ್ರಸ್ತ ಕಂಕಣ ಸೂರ್ಯಗ್ರಹಣದ ಪ್ರಭಾವ ಹೇಗಿರಲಿದೆ?
ಸೇವಾ ತೀರ್ಥ; ಪ್ರಧಾನಮಂತ್ರಿ ಕಚೇರಿಯ ನೂತನ ಹೆಸರು ಅನಾವರಣಗೊಳಿಸಿದ ಮೋದಿ
ಸೇವಾ ತೀರ್ಥ; ಪ್ರಧಾನಮಂತ್ರಿ ಕಚೇರಿಯ ನೂತನ ಹೆಸರು ಅನಾವರಣಗೊಳಿಸಿದ ಮೋದಿ
ಸರಣಿ ಅಪಘಾತದಲ್ಲಿ 7 ಜನ ದುರ್ಮರಣ: ಘಟನೆಯ ಭೀಕರತೆ ಬಿಚ್ಚಿಟ್ಟ ಚಾಲಕ
ಸರಣಿ ಅಪಘಾತದಲ್ಲಿ 7 ಜನ ದುರ್ಮರಣ: ಘಟನೆಯ ಭೀಕರತೆ ಬಿಚ್ಚಿಟ್ಟ ಚಾಲಕ
ವರ್ಷದ ಮೊದಲ ಸೂರ್ಯಗ್ರಹಣ ಕರ್ಕಾಟಕ ರಾಶಿಯವರಿಗೆ ಹೇಗಿರಲಿದೆ?
ವರ್ಷದ ಮೊದಲ ಸೂರ್ಯಗ್ರಹಣ ಕರ್ಕಾಟಕ ರಾಶಿಯವರಿಗೆ ಹೇಗಿರಲಿದೆ?