AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಒಮಿಕ್ರಾನ್​ ಸೋಂಕಿಗೆ ಮಾರ್ಚ್​​ನಲ್ಲಿ ಸಿದ್ಧವಾಗಲಿದೆ ಲಸಿಕೆ; ಫೈಜರ್​ ಕಂಪನಿ ಸಿಇಒ ಭರವಸೆ, ಮಾಡೆರ್ನಾದಿಂದಲೂ ನಡೆಯುತ್ತಿದೆ ಪ್ರಯತ್ನ

ಇನ್ನೊಂದೆಡೆ ಮತ್ತೊಂದು ಔಷಧಿ ಕಂಪನಿ ಮಾಡೆರ್ನಾ ಕೂಡ ಒಮಿಕ್ರಾನ್​ ಸೋಂಕನ್ನು ಕೇಂದ್ರೀಕರಿಸಿ ಬೂಸ್ಟರ್ ಡೋಸ್​ ಕೊಡಬಹುದಾದ ಲಸಿಕೆ ಉತ್ಪಾದನೆಯ ಮೇಲೆ ಕೇಂದ್ರೀಕರಿಸಿದೆ ಎಂದು ಮಾಡೆರ್ನಾ ಸಿಇಒ ಸ್ಟೀಫನ್ ಬ್ಯಾನ್ಸೆಲ್ ತಿಳಿಸಿದ್ದಾರೆ. 

ಒಮಿಕ್ರಾನ್​ ಸೋಂಕಿಗೆ ಮಾರ್ಚ್​​ನಲ್ಲಿ ಸಿದ್ಧವಾಗಲಿದೆ ಲಸಿಕೆ; ಫೈಜರ್​ ಕಂಪನಿ ಸಿಇಒ ಭರವಸೆ, ಮಾಡೆರ್ನಾದಿಂದಲೂ ನಡೆಯುತ್ತಿದೆ ಪ್ರಯತ್ನ
ಸಾಂಕೇತಿಕ ಚಿತ್ರ
TV9 Web
| Edited By: |

Updated on: Jan 11, 2022 | 12:40 PM

Share

ದೆಹಲಿ: ಜಗತ್ತಿನಲ್ಲಿ ಒಮಿಕ್ರಾನ್​ ಸೋಂಕಿನ ಪ್ರಮಾಣ ಹೆಚ್ಚುತ್ತಿದೆ. ಈಗಿರುವ ಕೊವಿಡ್​ 19 ಲಸಿಕೆಗಳು ಒಮಿಕ್ರಾನ್​ ವಿರುದ್ಧ ಹೋರಾಡಲಾರವು ಎಂದು ಈಗಾಗಲೇ ತಜ್ಞರು ಹೇಳಿದ್ದಾರೆ. ಈ ಮಧ್ಯೆ ಅಮೆರಿಕದ ಫಾರ್ಮಾ ಕಂಪನಿ ಫೈಜರ್(Pfizer)​, ಮಾರ್ಚ್​ ತಿಂಗಳಷ್ಟೊತ್ತಿಗೆ ಒಮಿಕ್ರಾನ್​ ಲಸಿಕೆ (Omicron Vaccine)ಸಿದ್ಧವಾಗಲಿದೆ ಎಂದು ಹೇಳಿದೆ.  ಪ್ರಸ್ತುತ ಅಸ್ತಿತ್ವದಲ್ಲಿರುವ ಕೊವಿಡ್​ 19 ಲಸಿಕೆಗಳು ಒಮಿಕ್ರಾನ್​ ಸೋಂಕಿನ ವಿರುದ್ಧವೂ ಸಮಂಜಸವಾದ ರಕ್ಷಣೆ ನೀಡುತ್ತಿದೆ. ಆದರೆ ಒಮಿಕ್ರಾನ್​ಗೇ ನಿರ್ಧಿಷ್ಟವಾದ ಲಸಿಕೆ ಮಾರ್ಚ್​ ತಿಂಗಳಲ್ಲಿ ಸಿದ್ಧವಾಗಲಿದೆ ಎಂದು ಫೈಜರ್​ ಕಂಪನಿ ಸಿಇಒ ಅಲ್ಬರ್ಟ್​ ಬೌರ್ಲಾ ತಿಳಿಸಿದ್ದಾರೆ.  

ಬೌರ್ಲಾ ಅವರು ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿ, ಒಮಿಕ್ರಾನ್ ಸೋಂಕಿನ ವಿರುದ್ಧ ಹೋರಾಟಕ್ಕೆ ಮಾರ್ಚ್​ನಲ್ಲಿ ಲಸಿಕೆ ಸಿದ್ಧವಾಗುತ್ತದೆ. ಈ ಲಸಿಕೆಯ ಅಗತ್ಯ ನಮಗೆ ಇದೆಯೇ? ಇಲ್ಲವೇ? ಎಂಬುದು ಗೊತ್ತಿಲ್ಲ. ಅದನ್ನು ಹೇಗೆ ಬಳಸಬಹುದು ಎಂಬುದು ಸದ್ಯಕ್ಕಂತೂ ನನಗೆ ಗೊತ್ತಿಲ್ಲ. ಆದರೆ ಒಮಿಕ್ರಾನ್ ಸೋಂಕಿನ ಮೇಲೆ ಕೇಂದ್ರೀಕರಿಸಿ ಲಸಿಕೆ ತಯಾರಿಸಲಾಗುತ್ತದೆ. ಇದು ಕೇವಲ ಒಮಿಕ್ರಾನ್​ ಅಷ್ಟೇ ಅಲ್ಲ, ಇನ್ನಿತರ ಕೊವಿಡ್​ 19 ತಳಿಗಳ ಮೇಲೆ ಕೂಡ ಪ್ರಭಾವ ಬೀರಬಹುದು ಎಂದು ಹೇಳಲಾಗಿದೆ  ಎಂದು ತಿಳಿಸಿದ್ದಾರೆ.

ಒಮಿಕ್ರಾನ್ ಲಸಿಕೆ ತಯಾರಿಕೆಗೆ ಮಾಡೆರ್ನಾ ಪ್ರಯತ್ನ ಇನ್ನೊಂದೆಡೆ ಮತ್ತೊಂದು ಔಷಧಿ ಕಂಪನಿ ಮಾಡೆರ್ನಾ ಕೂಡ ಒಮಿಕ್ರಾನ್​ ಸೋಂಕನ್ನು ಕೇಂದ್ರೀಕರಿಸಿ ಬೂಸ್ಟರ್ ಡೋಸ್​ ಕೊಡಬಹುದಾದ ಲಸಿಕೆ ಉತ್ಪಾದನೆಯ ಮೇಲೆ ಕೇಂದ್ರೀಕರಿಸಿದೆ ಎಂದು ಮಾಡೆರ್ನಾ ಸಿಇಒ ಸ್ಟೀಫನ್ ಬ್ಯಾನ್ಸೆಲ್ ತಿಳಿಸಿದ್ದಾರೆ.  ವೈರಸ್​ ವಿರುದ್ಧ ಹೋರಾಟ ಮಾಡಲು ನಾವು ಅದಕ್ಕಿಂತಲೂ ಮುಂದೇ ಇರಬೇಕು. ವೈರಸ್​ ಹಿಂದಿದ್ದು, ಅದನ್ನು ಮಣಿಸಲು ಸಾಧ್ಯವಿಲ್ಲ. ಹೀಗಾಗಿ ಒಮಿಕ್ರಾನ್​ ಮತ್ತು ಇತರ ತಳಿಗಳ ವಿರುದ್ಧ ರೋಗನಿರೋಧಕ ಶಕ್ತಿ ಉತ್ತೇಜಿಸುವ ಸಲುವಾಗಿ ಬೂಸ್ಟರ್ ಡೋಸ್​ ಉತ್ಪಾದನೆ ಬಗ್ಗೆ ನಾವು ಯೋಚಿಸುತ್ತಿದ್ದೇವೆ. ಈ ಸಂಬಂಧ ಪ್ರಪಂಚಾದ್ಯಂತ ಸಾರ್ವಜನಿಕ ಆರೋಗ್ಯ ಕ್ಷೇತ್ರದ ಪ್ರಮುಖ ನಾಯಕರೊಂದಿಗೆ ಚರ್ಚಿಸುತ್ತಿದ್ದೇವೆ ಎಂದು ಇತ್ತೀಚೆಗೆ ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ.  ಕೊವಿಡ್​ 19ನ ರೂಪಾಂತರಿ ಒಮಿಕ್ರಾನ್​ ಇದೀಗ ಭರ್ಜರಿ ಪ್ರಸರಣಗೊಳ್ಳುತ್ತಿದೆ. ಇದರ ಲಕ್ಷಣಗಳು ಸೌಮ್ಯವಾಗಿದ್ದರೂ ಕೂಡ ಹರಡುವಿಕೆ ವೇಗ ಅಧಿಕವಾಗಿದೆ. ಭಾರತದಲ್ಲಿ ನಾಲ್ಕು ಸಾವಿರದ ಗಡಿ ದಾಟಿದೆ.

ಇದನ್ನೂ ಓದಿ: ಪ್ರಿಯಕರನಿಗಾಗಿ ಪತಿಯ ಕೊಲೆ ಮಾಡಿ ಮೂರ್ಛೆ ರೋಗದಿಂದ ಸಾವು ಎಂದು ಕತೆ ಕಟ್ಟಿದ್ದ ಖರ್ತನಾಕ್ ಲೇಡಿಯ ಬಂಧನ

ಕಪ್ಪು ಚಿರತೆಯ ಜೊತೆ ನೀರು ಕುಡಿದ ಚಿರತೆ; ಭದ್ರಾ ಅಭಯಾರಣ್ಯದ ವಿಡಿಯೋ ವೈರಲ್
ಕಪ್ಪು ಚಿರತೆಯ ಜೊತೆ ನೀರು ಕುಡಿದ ಚಿರತೆ; ಭದ್ರಾ ಅಭಯಾರಣ್ಯದ ವಿಡಿಯೋ ವೈರಲ್
‘WTC ಉತ್ಸವ’ ಆಯೋಜಕರ ಮೇಲೆ ಗರಂ ಆದ ‘ಕಾಮಿಡಿ ಕಿಲಾಡಿಗಳು’ ಮಂಥನಾ
‘WTC ಉತ್ಸವ’ ಆಯೋಜಕರ ಮೇಲೆ ಗರಂ ಆದ ‘ಕಾಮಿಡಿ ಕಿಲಾಡಿಗಳು’ ಮಂಥನಾ
ಒಂದೇ ಓವರ್​ನಲ್ಲಿ 28 ರನ್ ಸಿಡಿಸಿದ ಕಿಶನ್
ಒಂದೇ ಓವರ್​ನಲ್ಲಿ 28 ರನ್ ಸಿಡಿಸಿದ ಕಿಶನ್
ಏರ್ಪೋರ್ಟ್​ನಲ್ಲೇ ಭೈರತಿ ಬಸವರಾಜ್​​ರನ್ನ​ ವಶಕ್ಕೆ ಪಡೆದ ಪೊಲೀಸರು
ಏರ್ಪೋರ್ಟ್​ನಲ್ಲೇ ಭೈರತಿ ಬಸವರಾಜ್​​ರನ್ನ​ ವಶಕ್ಕೆ ಪಡೆದ ಪೊಲೀಸರು
ವಿಷ್ಣುವರ್ಧನ್ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಸಮಾರಂಭ ಆಯೋಜಿಸಲು ಮನವಿ
ವಿಷ್ಣುವರ್ಧನ್ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಸಮಾರಂಭ ಆಯೋಜಿಸಲು ಮನವಿ
ಇದು ಜಗತ್ತಿನ ದುಬಾರಿ ಅಣಬೆ: ಬೆಲೆ ಕೇಳಿದ್ರೆ ಶಾಕ್​​ ಆಗೋದು ಗ್ಯಾರಂಟಿ
ಇದು ಜಗತ್ತಿನ ದುಬಾರಿ ಅಣಬೆ: ಬೆಲೆ ಕೇಳಿದ್ರೆ ಶಾಕ್​​ ಆಗೋದು ಗ್ಯಾರಂಟಿ
ಕಾಫಿ ಬಿಲ್​ ಕೇಳಿದ್ದಕ್ಕೆ ಪಿಸಿಗಳಿಂದ ಹೋಟೆಲ್​ ಸಿಬ್ಬಂದಿ ಮೇಲೆ ಹಲ್ಲೆ
ಕಾಫಿ ಬಿಲ್​ ಕೇಳಿದ್ದಕ್ಕೆ ಪಿಸಿಗಳಿಂದ ಹೋಟೆಲ್​ ಸಿಬ್ಬಂದಿ ಮೇಲೆ ಹಲ್ಲೆ
ಜಯಸೂರ್ಯರ 17 ವರ್ಷಗಳ ಹಳೆಯ ದಾಖಲೆ ಮುರಿದ ಓಮನ್ ಆಟಗಾರ
ಜಯಸೂರ್ಯರ 17 ವರ್ಷಗಳ ಹಳೆಯ ದಾಖಲೆ ಮುರಿದ ಓಮನ್ ಆಟಗಾರ
ರಾಜ್ಯ ಸರ್ಕಾರಕ್ಕೆ 1 ಸಾವಿರ ದಿನ: 6ನೇ ಗ್ಯಾರಂಟಿ ಜಾರಿ ಮಾಡ್ತೇವೆ; ಡಿಕೆಶಿ
ರಾಜ್ಯ ಸರ್ಕಾರಕ್ಕೆ 1 ಸಾವಿರ ದಿನ: 6ನೇ ಗ್ಯಾರಂಟಿ ಜಾರಿ ಮಾಡ್ತೇವೆ; ಡಿಕೆಶಿ
ಮುಸ್ಲಿಂ ಯುವಕನ ಜೊತೆ ಹಿಂದೂ ಹುಡುಗಿ ಪರಾರಿ: ಯುವತಿ ತಂದೆಯ ಸ್ಫೋಟಕ ಹೇಳಿಕೆ
ಮುಸ್ಲಿಂ ಯುವಕನ ಜೊತೆ ಹಿಂದೂ ಹುಡುಗಿ ಪರಾರಿ: ಯುವತಿ ತಂದೆಯ ಸ್ಫೋಟಕ ಹೇಳಿಕೆ