ನೌಕಾಪಡೆಯ ಹಡಗುಗಳು ಸನ್ನದ್ಧ, ಗಡಿಯಲ್ಲಿ ಸೇನೆ ಸಜ್ಜು; ಭಾರತದ ದಾಳಿಗೆ ಹೆದರಿ ಯುದ್ಧಕ್ಕೆ ಸಿದ್ಧತೆ ನಡೆಸಿದೆ ಪಾಕಿಸ್ತಾನ

India-Pakistan Tensions: ಪಹಲ್ಗಾಮ್ ದಾಳಿಯ ನಂತರ ಭಾರತ ಪಾಕಿಸ್ತಾನದ ವಿರುದ್ಧ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳುವ ಎಚ್ಚರಿಕೆ ನೀಡಿದೆ. ಈ ನಡುವೆ ಪ್ರಧಾನಿ ನರೇಂದ್ರ ಮೋದಿ ಒಂದರ ಹಿಂದೊಂದರಂತೆ ಉನ್ನತ ಮಟ್ಟದ ಸಭೆ ನಡೆಸುತ್ತಿರುವುದರಿಂದ ಭಯಭೀತವಾಗಿರುವ ಪಾಕಿಸ್ತಾನ ಭಾರತ ತನ್ನ ಮೇಲೆ ಯಾವುದೇ ಕ್ಷಣದಲ್ಲಿ ಬೇಕಾದರೂ ಯುದ್ಧ ಘೋಷಿಸುವ ಆತಂಕದಲ್ಲಿದೆ. ಹೀಗಾಗಿ, ಗಡಿಯಲ್ಲಿ ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳುತ್ತಿದೆ. ಭಾರತದ ಸೇನಾ ಕ್ರಮಕ್ಕೆ ಹೆದರಿ ಪಾಕಿಸ್ತಾನ ಗಡಿಯಲ್ಲಿ ಸೈನಿಕರನ್ನು ಹೆಚ್ಚಿನ ಸಂಖ್ಯೆಯಲ್ಲಿ ನಿಯೋಜನೆ ಮಾಡಿದೆ. ಕಳೆದ 6 ದಿನಗಳಿಂದ ನಿಯಂತ್ರಣ ರೇಖೆ (LoC) ಮತ್ತು ಜಮ್ಮು ಮತ್ತು ಕಾಶ್ಮೀರದ ಅಂತರರಾಷ್ಟ್ರೀಯ ಗಡಿಯಲ್ಲಿ ಪಾಕಿಸ್ತಾನ ಸೇನೆ ಪದೇ ಪದೇ ಕದನ ವಿರಾಮ ಉಲ್ಲಂಘಿಸುತ್ತಿರುವ ಹಿನ್ನೆಲೆಯಲ್ಲಿ ಭಾರತ ಎಚ್ಚರಿಕೆ ನೀಡಿತ್ತು.

ನೌಕಾಪಡೆಯ ಹಡಗುಗಳು ಸನ್ನದ್ಧ, ಗಡಿಯಲ್ಲಿ ಸೇನೆ ಸಜ್ಜು; ಭಾರತದ ದಾಳಿಗೆ ಹೆದರಿ ಯುದ್ಧಕ್ಕೆ ಸಿದ್ಧತೆ ನಡೆಸಿದೆ ಪಾಕಿಸ್ತಾನ
India Pakistan Border

Updated on: Apr 30, 2025 | 7:55 PM

ನವದೆಹಲಿ, ಏಪ್ರಿಲ್ 30: ಕಳೆದ ವಾರ 26 ಜನರನ್ನು ಬಲಿ ತೆಗೆದುಕೊಂಡ ಪಹಲ್ಗಾಮ್ ಭಯೋತ್ಪಾದಕ ದಾಳಿಗೆ (Pahalgam Terror Attack) ಭಾರತೀಯ ಸೇನೆ ಪ್ರತೀಕಾರ ತೀರಿಸಿಕೊಳ್ಳುವ ಸಾಧ್ಯತೆ ಮತ್ತು ನಿರೀಕ್ಷೆಯಿದೆ. ಹೀಗಾಗಿ, ಕಂಗಾಲಾಗಿರುವ ಪಾಕಿಸ್ತಾನ ಭಾರತದೊಂದಿಗಿನ ತನ್ನ ಗಡಿಯಲ್ಲಿ ತನ್ನ ಸೇನೆಯನ್ನು ಸಜ್ಜುಗೊಳಿಸಲು ಪ್ರಾರಂಭಿಸಿದೆ. ಹಾಗೇ, ಉಭಯ ದೇಶಗಳ ನಡುವಿನ ಉದ್ವಿಗ್ನತೆ ಹೆಚ್ಚುತ್ತಿರುವಂತೆ ತನ್ನ ನೌಕಾಪಡೆಯನ್ನು ಸನ್ನದ್ಧವಾಗಿರಿಸಿದೆ ಎಂದು ಮೂಲಗಳು ತಿಳಿಸಿವೆ. ಕಳೆದ 6 ದಿನಗಳಲ್ಲಿ ನಿಯಂತ್ರಣ ರೇಖೆ (LoC) ಮತ್ತು ಜಮ್ಮು ಮತ್ತು ಕಾಶ್ಮೀರದ ಅಂತರರಾಷ್ಟ್ರೀಯ ಗಡಿಯಲ್ಲಿ ಪಾಕಿಸ್ತಾನ ಸೇನೆ ಪದೇ ಪದೇ ಕದನ ವಿರಾಮ ಉಲ್ಲಂಘಿಸುತ್ತಿರುವ ಹಿನ್ನೆಲೆಯಲ್ಲಿ ಇದು ಸಂಭವಿಸಿದೆ.

ಪಹಲ್ಗಾಮ್ ದಾಳಿಯ ನಂತರ ಭಾರತ ಮತ್ತು ಪಾಕಿಸ್ತಾನದ ನಡುವಿನ ಉದ್ವಿಗ್ನತೆ ಹೆಚ್ಚಾಗುತ್ತಿದ್ದಂತೆ, ಪಾಕಿಸ್ತಾನಿ ಸೇನೆಯು ಸಂಭಾವ್ಯ ಭಾರತೀಯ ದಾಳಿಗಳಿಗೆ ಸಜ್ಜಾಗಲು ಪ್ರಾರಂಭಿಸಿದೆ. ಯಾವುದೇ ಸಂಭಾವ್ಯ ಭಾರತೀಯ ಚಲನೆಯನ್ನು ನಿಭಾಯಿಸಲು ಸಾಧ್ಯವಾಗುವಂತೆ ಪಾಕಿಸ್ತಾನಿ ಸೇನೆಯು ತನ್ನ ಯುದ್ಧನೌಕೆಗಳು ಮತ್ತು ಜಲಾಂತರ್ಗಾಮಿಗಳು ಸೇರಿದಂತೆ ನೌಕಾಪಡೆಯ ಹಡಗುಗಳನ್ನು ಸಮುದ್ರದಲ್ಲಿನ ಆಯಾ ಬಂದರುಗಳಲ್ಲಿ ಇರಿಸಿದೆ ಎಂದು ಸುದ್ದಿ ಸಂಸ್ಥೆ ANI ವರದಿ ಮಾಡಿದೆ.

ಇದನ್ನೂ ಓದಿ: ಉಗ್ರರ ಹುಟ್ಟಡಗಿಸಲು ಸಶಸ್ತ್ರ ಪಡೆಗಳಿಗೆ ಪೂರ್ತಿ ಸ್ವಾತಂತ್ರ್ಯ ನೀಡಿದ ಪ್ರಧಾನಿ ಮೋದಿ

ಇದನ್ನೂ ಓದಿ
ರಾಜ್ಯಸಭೆಯಲ್ಲಿ ಅಸಂಸದೀಯ ಹೇಳಿಕೆಗೆ ಮಲ್ಲಿಕಾರ್ಜುನ ಖರ್ಗೆ ಕ್ಷಮೆಯಾಚನೆ
ಬಸ್‌ ತಡೆದು ನಡು ರಸ್ತೆಯಲ್ಲಿ ಪಾನಮತ್ತ ಮಹಿಳೆಯ ಕಿರಿಕ್; ವಿಡಿಯೋ ವೈರಲ್‌
ಛತ್ತೀಸ್​ಗಢ ಮಾಜಿ ಸಿಎಂ ಭೂಪೇಶ್ ಬಘೇಲ್ ಮನೆ ಸೇರಿ ಹಲವೆಡೆ ಇಡಿ ದಾಳಿ
ಮೊಬೈಲ್​ನಲ್ಲಿ ಮಾತನಾಡುತ್ತಾ ಬಾವಿಗೆ ಬಿದ್ದು ವಿದ್ಯಾರ್ಥಿ ಸಾವು

ಪಾಕಿಸ್ತಾನ ಮುಂದಿನ 24ರಿಂದ 36 ಗಂಟೆಗಳಲ್ಲಿ ಭಾರತ ಮಿಲಿಟರಿ ದಾಳಿ ನಡೆಸಬಹುದು ಎಂದು ಆತಂಕಗೊಂಡಿದೆ. ಏಪ್ರಿಲ್ 22ರ ಪಹಲ್ಗಾಮ್ ದಾಳಿಗೆ ಪ್ರತಿಕ್ರಿಯಿಸಲು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಭಾರತೀಯ ಸಶಸ್ತ್ರ ಪಡೆಗಳಿಗೆ “ಸಂಪೂರ್ಣ ಕಾರ್ಯಾಚರಣೆ ಸ್ವಾತಂತ್ರ್ಯ” ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಪಾಕಿಸ್ತಾನಕ್ಕೆ ಆತಂಕ ಮತ್ತಷ್ಟು ಹೆಚ್ಚಾಗಿದೆ. ಭಾರತದಲ್ಲಿ ನಡೆಯುವ ಎಲ್ಲ ವಿದ್ಯಮಾನಗಳ ಮೇಲೂ ಪಾಕಿಸ್ತಾನ ಕಣ್ಣಿಟ್ಟಿದೆ. ಹೀಗಾಗಿ, ಯುದ್ಧದ ವಿಷಯದಲ್ಲಾಗಲಿ ಅಥವಾ ಪಾಕಿಸ್ತಾನದ ವಿರುದ್ಧ ತೆಗೆದುಕೊಳ್ಳುವ ಕ್ರಮದ ಬಗ್ಗೆಯಾಗಲಿ ಭಾರತ ಸರ್ಕಾರದ ಸಚಿವರು ಅಥವಾ ಅಧಿಕಾರಿಗಳು ಹೆಚ್ಚಿನ ಮಾಹಿತಿಯನ್ನು ಮಾಧ್ಯಮಗಳಿಗೆ ಬಿಟ್ಟುಕೊಟ್ಟಿಲ್ಲ.

ಭಾರತ ಪಾಕಿಸ್ತಾನದ ಮೇಲೆ ವೈಮಾನಿಕ ದಾಳಿ ನಡೆಸುವ ಸಾಧ್ಯತೆಯಿದೆ ಎಂಬ ಆತಂಕದಲ್ಲಿ ಪಾಕಿಸ್ತಾನ ವಾಯುಪಡೆಯು ಹಾರಾಟ ಕಾರ್ಯಾಚರಣೆಗಳನ್ನು ಶೇ. 50ಕ್ಕಿಂತಲೂ ಹೆಚ್ಚು ಕಡಿತಗೊಳಿಸಿದೆ ಮತ್ತು ವಾಯುಪ್ರದೇಶದಲ್ಲಿ ಯಾವುದೇ ಗೊಂದಲವನ್ನು ತಪ್ಪಿಸಲು ಅಗತ್ಯ ಕಾರ್ಯಾಚರಣೆಗಳನ್ನು ಮಾತ್ರ ನಡೆಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ. ಮೂಲ ಆಧಾರಿತ ಮಾಹಿತಿಯ ಪ್ರಕಾರ, ಪಾಕಿಸ್ತಾನಿ ಸೇನೆಯು ಸಂಭಾವ್ಯ ಭಾರತೀಯ ವಾಯುದಾಳಿಗಳನ್ನು ಪತ್ತೆಹಚ್ಚಲು ಸಿಯಾಲ್‌ಕೋಟ್ ವಲಯದ ಸ್ಥಳಗಳಿಗೆ ತನ್ನ ರಾಡಾರ್ ವ್ಯವಸ್ಥೆಗಳನ್ನು ಸ್ಥಳಾಂತರಿಸುತ್ತಿದೆ. ಫಿರೋಜ್‌ಪುರ ವಲಯದ ಎದುರಿನ ಭಾರತೀಯ ಚಲನವಲನಗಳನ್ನು ಪತ್ತೆಹಚ್ಚಲು ಪಾಕಿಸ್ತಾನಿ ಸೇನೆಯ ಎಲೆಕ್ಟ್ರಾನಿಕ್ ಯುದ್ಧ ತುಕಡಿಗಳನ್ನು ಸಹ ನಿಯೋಜಿಸಲಾಗುತ್ತಿದೆ.

ಇದನ್ನೂ ಓದಿ: ಕದನ ವಿರಾಮ ಉಲ್ಲಂಘನೆಗಳ ವಿರುದ್ಧ ಪಾಕಿಸ್ತಾನಕ್ಕೆ ಭಾರತ ಎಚ್ಚರಿಕೆ

ಇತ್ತೀಚೆಗೆ, ಪಾಕಿಸ್ತಾನವು ಅಂತಾರಾಷ್ಟ್ರೀಯ ಗಡಿಯಿಂದ ಕೇವಲ 58 ಕಿಮೀ ದೂರದಲ್ಲಿರುವ ಚೋರ್ ಕಂಟೋನ್ಮೆಂಟ್‌ನಲ್ಲಿ ಟಿಪಿಎಸ್ -77 ರಾಡಾರ್ ಸೈಟ್ ಅನ್ನು ಸ್ಥಾಪಿಸಿತು. ಟಿಪಿಎಸ್ -77 ಮಲ್ಟಿ-ರೋಲ್ ರಾಡಾರ್ (ಎಂಆರ್ಆರ್) ಹೆಚ್ಚು ಸಮರ್ಥ ರಾಡಾರ್ ವ್ಯವಸ್ಥೆಯಾಗಿದ್ದು, ಇದನ್ನು ಪರಿಸ್ಥಿತಿ ಅರಿವು ಮತ್ತು ವಾಯು ಸಂಚಾರ ಮೇಲ್ವಿಚಾರಣೆಗಾಗಿ ವಿಶ್ವಾದ್ಯಂತ ಬಳಸಲಾಗುತ್ತದೆ. ಅಲ್ಲದೆ, ಪಿಎಎಫ್‌ನ ವಿಮಾನಗಳು ಕರಾಚಿಯಿಂದ ಲಾಹೋರ್ ಮತ್ತು ಉತ್ತರದ ರಾವಲ್ಪಿಂಡಿ ಬಳಿಯ ನೆಲೆಗಳಿಗೆ ಹೊರಟಿರುವುದು ಕಂಡುಬಂದಿದೆ ಎಂದು ಫ್ಲೈಟ್‌ರಾಡರ್ 24 ರ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ ಸ್ಕ್ರೀನ್‌ಶಾಟ್‌ಗಳು ತೋರಿಸಿವೆ.

ಇದೆಲ್ಲದರ ನಡುವೆ, ರಫೇಲ್‌ಗಳು ಸೇರಿದಂತೆ ದೇಶದ ಮುಂಚೂಣಿಯ ಯುದ್ಧ ವಿಮಾನಗಳು ಮತ್ತು ಅದರ ಉನ್ನತ ಪೈಲಟ್‌ಗಳು ಆಕ್ರಮಣ್ (ದಾಳಿ) ಎಂಬ ದೊಡ್ಡ ಪ್ರಮಾಣದ ಮಿಲಿಟರಿ ವ್ಯಾಯಾಮದಲ್ಲಿ ಭಾಗವಹಿಸಿದ್ದರಿಂದ ಭಾರತವು ತನ್ನ ಮಿಲಿಟರಿ ಬಲವನ್ನು ಹೆಚ್ಚಿಸುತ್ತಿದೆ ಮತ್ತು ಭಾರತದ ನೌಕಾಪಡೆಯು ತನ್ನ ಕಾರ್ಯಾಚರಣೆಯ ಸಿದ್ಧತೆಯನ್ನು ಪ್ರದರ್ಶಿಸಿದೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:53 pm, Wed, 30 April 25