Sign In

By signing in or creating an account, you agree with Associated Broadcasting Company's Terms & Conditions and Privacy Policy.

Shahzadi Rai: ಪಾಕಿಸ್ತಾನದ ಟ್ರಾನ್ಸ್​​ಜೆಂಡರ್ ರಾಜಕಾರಣಿ ಶಹಜಾದಿ ರಾಯ್ ಚೆಲುವಿಗೆ ಮನಸೋತ ನೆಟ್ಟಿಗರು

Pakistan Transgender Politician: ಪಾಕಿಸ್ತಾನದ ಶಹಜಾದಿ ರಾಯ್ ಎಂಬಾಕೆ ಇತ್ತೀಚೆಗೆ ಕರಾಚಿ ಮೆಟ್ರೋಪಾಲಿಟನ್ ಕಾರ್ಪೊರೇಷನ್ (ಕೆಎಂಸಿ) ಸಿಟಿ ಕೌನ್ಸಿಲ್‌ನ ಮೊದಲ ಟ್ರಾನ್ಸ್‌ಜೆಂಡರ್ ಸದಸ್ಯೆಯಾಗಿ ಜಗತ್ತೇ ತಿರುಗಿನೋಡುವಂತೆ ಮಾಡಿದ್ದಾರೆ.

Shahzadi Rai: ಪಾಕಿಸ್ತಾನದ ಟ್ರಾನ್ಸ್​​ಜೆಂಡರ್ ರಾಜಕಾರಣಿ ಶಹಜಾದಿ ರಾಯ್ ಚೆಲುವಿಗೆ ಮನಸೋತ ನೆಟ್ಟಿಗರು
ಶಹಜಾದಿ ರಾಯ್
Follow us
ರಶ್ಮಿ ಕಲ್ಲಕಟ್ಟ
|

Updated on: Jun 16, 2023 | 1:02 PM

ಕರಾಚಿ: ಸಮಾಜದಲ್ಲಿ ಎಲ್ಲರೂ ಸಮಾನರು ಎಂದು ಹೇಳುತ್ತಿದ್ದರೂ ತೃತೀಯ ಲಿಂಗಿಗಳ ಮೇಲೆ ಜನರ ತಾತ್ಸಾರದ ನೋಟ ಇದ್ದೇ ಇರುತ್ತದೆ. ಹಲವಾರು ಬಾರಿ ಟ್ರಾನ್ಸ್​​ಜೆಂಡರ್​​​ಗಳು(Transgender) ಕುಹಕ, ನಿಂದನೆ, ದೌರ್ಜನ್ಯಕ್ಕೊಳಗಾಗುತ್ತಾರೆ. ಇವರ ಜೀವನದ ಪ್ರತಿಯೊಂದು ಹೆಜ್ಜೆಯೂ ಸವಾಲಿನದ್ದಾಗಿರುತ್ತದೆ. ಸಮಾಜದಲ್ಲಿ ಎಲ್ಲರಂತೆಯೇ ನಾವು ಎಂದು ಕೂಗಿ ಹೇಳಿದರೂ ಸಮಾಜ ಅವರನ್ನು ಪ್ರತ್ಯೇಕವಾಗಿಯೇ ಕಾಣುತ್ತದೆ. ಇಂತಿರುವಾಗ ಟ್ರಾನ್ಸ್​​ಜೆಂಡರ್​​ಗಳು ಯಾವುದಾದರೊಂದು ಕ್ಷೇತ್ರದಲ್ಲಿ ಸಾಧನೆ ಮಾಡಬೇಕಾದರೆ ಹೆಚ್ಚಿನ ಪರಿಶ್ರಮ ಬೇಕೇ ಬೇಕು. ವೃತ್ತಿ ಜೀವನದಲ್ಲಿ ಅವರಿಗೆ ಅಡೆತಡೆಗಳೇ ಹೆಚ್ಚು.ಹೀಗಿರುವಾಗ ಪಾಕಿಸ್ತಾನದ (Pakistan) ಶಹಜಾದಿ ರಾಯ್  (Shahzadi Rai)ಎಂಬಾಕೆ ಇತ್ತೀಚೆಗೆ ಕರಾಚಿ ಮೆಟ್ರೋಪಾಲಿಟನ್ ಕಾರ್ಪೊರೇಷನ್ (KMC) ಸಿಟಿ ಕೌನ್ಸಿಲ್‌ನ ಮೊದಲ ಟ್ರಾನ್ಸ್‌ಜೆಂಡರ್ ಸದಸ್ಯೆಯಾಗಿ ಜಗತ್ತೇ ತಿರುಗಿನೋಡುವಂತೆ ಮಾಡಿದ್ದಾರೆ. ಇತ್ತೀಚಿನ ಪ್ರಮಾಣವಚನ ಸಮಾರಂಭದ ಫೋಟೊ,ವಿಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ಭಾರೀ ಸದ್ದು ಮಾಡಿವೆ. ರಾಯ್ ಈ ಸಾಧನೆಯನ್ನು ಸಾಧ್ಯವಾಗಿಸುವಲ್ಲಿ ಬೆಂಬಲ ನೀಡಿದ್ದು ಪಾಕಿಸ್ತಾನ್ ಪೀಪಲ್ಸ್ ಪಾರ್ಟಿ (PPP). ಇಷ್ಟೇ ಅಲ್ಲ, ಈಕೆಯ ಸೌಂದರ್ಯಕ್ಕೆ ನೆಟ್ಟಿಗರು ಫಿದಾ ಆಗಿದ್ದಾರೆ.

View this post on Instagram

A post shared by Shahzadi Rai (@shahzadi_rai)

ಯಾರು ಈ ಶಹಜಾದಿ ರಾಯ್?

ಕೆಎಂಸಿ ಸಿಟಿ ಕೌನ್ಸಿಲ್‌ನ ಸದಸ್ಯೆಯಾಗುವ ಮುನ್ನ ರಾಯ್ ಜೆಂಡರ ಇಂಟರಾಕ್ಟಿವ್ ಅಲಯನ್ಸ್‌ನಲ್ಲಿ ಹಿಂಸಾಚಾರ ಪ್ರಕರಣ ವಿಭಾಗದ ವ್ಯವಸ್ಥಾಪಕರಾಗಿ ಕೆಲಸ ಮಾಡುತ್ತಿದ್ದರು. ಪಾಕಿಸ್ತಾನದಲ್ಲಿ ಖ್ವಾಜಸಿರಾ ಸಮುದಾಯದ ಹಕ್ಕುಗಳಿಗಾಗಿ ಅವರು ನಿರಂತರ ಹೋರಾಟ ನಡೆಸುತ್ತಿದ್ದರು. ರಾಯ್ ಅವರ ಅಚಲವಾದ ಬದ್ಧತೆಯು ನಾಗರಿಕ ಸಮಾಜ ಸಂಸ್ಥೆಗಳು ಮತ್ತು ಟ್ರಾನ್ಸ್ ಜೆಂಡರ್ ಕಾರ್ಯಕರ್ತರಿಂದ ವ್ಯಾಪಕ ಮೆಚ್ಚುಗೆ ಮತ್ತು ಗೌರವವನ್ನು ಗಳಿಸಿದೆ.

ಇದನ್ನೂ ಓದಿ: ಮತಾಂತರ ನಿಷೇಧ ಕಾಯ್ದೆ ರದ್ದು: ಯಾವುದೇ ಸ್ವಾಮೀಜಿ ಸ್ವಾಗತಿಸಿಲ್ಲ, ಕಾಂಗ್ರೆಸ್ ಸರ್ಕಾರ ಕರ್ನಾಟಕವನ್ನು ಮಿನಿ ಪಾಕಿಸ್ತಾನ ಮಾಡಲು ಹೊರಟಿದೆ- ಆರ್​.ಅಶೋಕ್​ ವಾಗ್ದಾಳಿ

ಶಹಜಾದಿ ರಾಯ್ ಅವರ ನೇಮಕದ ಮಹತ್ವವು ವೈಯಕ್ತಿಕ ಸಾಧನೆಯ ಕ್ಷೇತ್ರವನ್ನು ಮೀರಿ ವಿಸ್ತರಿಸಿದೆ. ಇದು ನೀತಿ-ನಿರ್ಮಾಣ ಪ್ರಕ್ರಿಯೆಯಲ್ಲಿ ಟ್ರಾನ್ಸ್​​ಜೆಂಡರ್ ವ್ಯಕ್ತಿಗಳನ್ನು ಮುಖ್ಯವಾಹಿನಿಯ ಕಡೆಗೆ ಒಂದು ನಿರ್ಣಾಯಕ ಹೆಜ್ಜೆಯನ್ನು ಪ್ರತಿನಿಧಿಸುತ್ತದೆ. ಅಧಿಕಾರ ಮತ್ತು ಪ್ರಭಾವದ ಸ್ಥಾನವನ್ನು ಆಕ್ರಮಿಸುವ ಮೂಲಕ, ರಾಯ್ ಅವರು ಅಡೆತಡೆಗಳನ್ನು ಭೇದಿಸಿದ್ದಾರೆ. ವಿವಿಧ ಹಂತಗಳಲ್ಲಿ ನಿರ್ಧಾರ ತೆಗೆದುಕೊಳ್ಳುವಲ್ಲಿ ಟ್ರಾನ್ಸ್​​ಜೆಂಡರ್ ದೃಷ್ಟಿಕೋನಗಳು ಕೂಡಾ ಇಲ್ಲಿ ಪರಿಗಣನೆಗೆ ಬರಲಿವೆ.

ಮತ್ತಷ್ಟು ವಿದೇಶ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಬ್ಯಾಟರ್ ಬಿದ್ದು ಒದ್ದಾಡಿದರೂ ತಿರುಗಿ ಕೂಡ ನೋಡದ ಜಸ್​ಪ್ರೀತ್ ಬುಮ್ರಾ
ಬ್ಯಾಟರ್ ಬಿದ್ದು ಒದ್ದಾಡಿದರೂ ತಿರುಗಿ ಕೂಡ ನೋಡದ ಜಸ್​ಪ್ರೀತ್ ಬುಮ್ರಾ
ಇದೆಂತಹ ವರ್ತನೆ... ಮೌನಾಚರಣೆ ವೇಳೆಯೂ ಹಾರ್ದಿಕ್ ಪಾಂಡ್ಯ ಹುಚ್ಚಾಟ
ಇದೆಂತಹ ವರ್ತನೆ... ಮೌನಾಚರಣೆ ವೇಳೆಯೂ ಹಾರ್ದಿಕ್ ಪಾಂಡ್ಯ ಹುಚ್ಚಾಟ
ಬೆಂಗಳೂರು ತಲುಪಿದ ಕನ್ನಡಿಗರ ಪಾರ್ಥಿವ ಶರೀರ, ಅಂತಿಮ ನಮನ ಸಲ್ಲಿಕೆ
ಬೆಂಗಳೂರು ತಲುಪಿದ ಕನ್ನಡಿಗರ ಪಾರ್ಥಿವ ಶರೀರ, ಅಂತಿಮ ನಮನ ಸಲ್ಲಿಕೆ
ಮನೆ ಗೋಡೆಲಿ, ಕಿಟಕಿಗಳಲ್ಲಿ ಜೇನುಗೂಡು ಕಟ್ಟಿದ್ರೆ ಏನರ್ಥ? ಇಲ್ಲಿದೆ ಮಾಹಿತಿ
ಮನೆ ಗೋಡೆಲಿ, ಕಿಟಕಿಗಳಲ್ಲಿ ಜೇನುಗೂಡು ಕಟ್ಟಿದ್ರೆ ಏನರ್ಥ? ಇಲ್ಲಿದೆ ಮಾಹಿತಿ
ಈ ದಿನದ ವಿಶೇಷವೇನು? ನಿಮ್ಮ ರಾಶಿ ಭವಿಷ್ಯವೇನು? ಇಲ್ಲಿದೆ ನೋಡಿ
ಈ ದಿನದ ವಿಶೇಷವೇನು? ನಿಮ್ಮ ರಾಶಿ ಭವಿಷ್ಯವೇನು? ಇಲ್ಲಿದೆ ನೋಡಿ
ಕಾಶ್ಮೀರದಲ್ಲಿ ಸಿಲುಕಿರುವ ಕನ್ನಡಿಗರಿಗೆ ಸೂಕ್ತ ವ್ಯವಸ್ಥೆ: ಪ್ರಲ್ಹಾದ್ ಜೋಶಿ
ಕಾಶ್ಮೀರದಲ್ಲಿ ಸಿಲುಕಿರುವ ಕನ್ನಡಿಗರಿಗೆ ಸೂಕ್ತ ವ್ಯವಸ್ಥೆ: ಪ್ರಲ್ಹಾದ್ ಜೋಶಿ
ಹನಿಮೂನ್ ಟ್ರಿಪ್​ನಲ್ಲಿ ಹೆಂಡ್ತಿಯೊಂದಿಗಿನ ವಿನಯ್ ನರ್ವಾಲ್​​​ ಕೊನೆ ರೀಲ್ಸ್
ಹನಿಮೂನ್ ಟ್ರಿಪ್​ನಲ್ಲಿ ಹೆಂಡ್ತಿಯೊಂದಿಗಿನ ವಿನಯ್ ನರ್ವಾಲ್​​​ ಕೊನೆ ರೀಲ್ಸ್
ಕಾಶ್ಮೀರಕ್ಕೆ ಉಗ್ರರು ಹೇಗೆ ಬಂದ್ರು? ಅಲ್ಲಿನ ಜನರಿಗೆ ಅನಿರುದ್ಧ್ ಪ್ರಶ್ನೆ
ಕಾಶ್ಮೀರಕ್ಕೆ ಉಗ್ರರು ಹೇಗೆ ಬಂದ್ರು? ಅಲ್ಲಿನ ಜನರಿಗೆ ಅನಿರುದ್ಧ್ ಪ್ರಶ್ನೆ
ಪಹಲ್ಗಾಮ್​ ಭೂಲೋಕದ ಸ್ವರ್ಗ ಎನ್ನುವುದ್ಹೇಕೆ? ಈ ವಿಡಿಯೋ ನೋಡಿ
ಪಹಲ್ಗಾಮ್​ ಭೂಲೋಕದ ಸ್ವರ್ಗ ಎನ್ನುವುದ್ಹೇಕೆ? ಈ ವಿಡಿಯೋ ನೋಡಿ
ಮಂಜುನಾಥ್ ಪಾರ್ಥೀವ ಶರೀರ ಬೆಳಗಿನ ಜಾವ 3 ಗಂಟೆಗೆ ಬೆಂಗಳೂರು ಬರುವ ನಿರೀಕ್ಷೆ
ಮಂಜುನಾಥ್ ಪಾರ್ಥೀವ ಶರೀರ ಬೆಳಗಿನ ಜಾವ 3 ಗಂಟೆಗೆ ಬೆಂಗಳೂರು ಬರುವ ನಿರೀಕ್ಷೆ