AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Shahzadi Rai: ಪಾಕಿಸ್ತಾನದ ಟ್ರಾನ್ಸ್​​ಜೆಂಡರ್ ರಾಜಕಾರಣಿ ಶಹಜಾದಿ ರಾಯ್ ಚೆಲುವಿಗೆ ಮನಸೋತ ನೆಟ್ಟಿಗರು

Pakistan Transgender Politician: ಪಾಕಿಸ್ತಾನದ ಶಹಜಾದಿ ರಾಯ್ ಎಂಬಾಕೆ ಇತ್ತೀಚೆಗೆ ಕರಾಚಿ ಮೆಟ್ರೋಪಾಲಿಟನ್ ಕಾರ್ಪೊರೇಷನ್ (ಕೆಎಂಸಿ) ಸಿಟಿ ಕೌನ್ಸಿಲ್‌ನ ಮೊದಲ ಟ್ರಾನ್ಸ್‌ಜೆಂಡರ್ ಸದಸ್ಯೆಯಾಗಿ ಜಗತ್ತೇ ತಿರುಗಿನೋಡುವಂತೆ ಮಾಡಿದ್ದಾರೆ.

Shahzadi Rai: ಪಾಕಿಸ್ತಾನದ ಟ್ರಾನ್ಸ್​​ಜೆಂಡರ್ ರಾಜಕಾರಣಿ ಶಹಜಾದಿ ರಾಯ್ ಚೆಲುವಿಗೆ ಮನಸೋತ ನೆಟ್ಟಿಗರು
ಶಹಜಾದಿ ರಾಯ್
ರಶ್ಮಿ ಕಲ್ಲಕಟ್ಟ
|

Updated on: Jun 16, 2023 | 1:02 PM

Share

ಕರಾಚಿ: ಸಮಾಜದಲ್ಲಿ ಎಲ್ಲರೂ ಸಮಾನರು ಎಂದು ಹೇಳುತ್ತಿದ್ದರೂ ತೃತೀಯ ಲಿಂಗಿಗಳ ಮೇಲೆ ಜನರ ತಾತ್ಸಾರದ ನೋಟ ಇದ್ದೇ ಇರುತ್ತದೆ. ಹಲವಾರು ಬಾರಿ ಟ್ರಾನ್ಸ್​​ಜೆಂಡರ್​​​ಗಳು(Transgender) ಕುಹಕ, ನಿಂದನೆ, ದೌರ್ಜನ್ಯಕ್ಕೊಳಗಾಗುತ್ತಾರೆ. ಇವರ ಜೀವನದ ಪ್ರತಿಯೊಂದು ಹೆಜ್ಜೆಯೂ ಸವಾಲಿನದ್ದಾಗಿರುತ್ತದೆ. ಸಮಾಜದಲ್ಲಿ ಎಲ್ಲರಂತೆಯೇ ನಾವು ಎಂದು ಕೂಗಿ ಹೇಳಿದರೂ ಸಮಾಜ ಅವರನ್ನು ಪ್ರತ್ಯೇಕವಾಗಿಯೇ ಕಾಣುತ್ತದೆ. ಇಂತಿರುವಾಗ ಟ್ರಾನ್ಸ್​​ಜೆಂಡರ್​​ಗಳು ಯಾವುದಾದರೊಂದು ಕ್ಷೇತ್ರದಲ್ಲಿ ಸಾಧನೆ ಮಾಡಬೇಕಾದರೆ ಹೆಚ್ಚಿನ ಪರಿಶ್ರಮ ಬೇಕೇ ಬೇಕು. ವೃತ್ತಿ ಜೀವನದಲ್ಲಿ ಅವರಿಗೆ ಅಡೆತಡೆಗಳೇ ಹೆಚ್ಚು.ಹೀಗಿರುವಾಗ ಪಾಕಿಸ್ತಾನದ (Pakistan) ಶಹಜಾದಿ ರಾಯ್  (Shahzadi Rai)ಎಂಬಾಕೆ ಇತ್ತೀಚೆಗೆ ಕರಾಚಿ ಮೆಟ್ರೋಪಾಲಿಟನ್ ಕಾರ್ಪೊರೇಷನ್ (KMC) ಸಿಟಿ ಕೌನ್ಸಿಲ್‌ನ ಮೊದಲ ಟ್ರಾನ್ಸ್‌ಜೆಂಡರ್ ಸದಸ್ಯೆಯಾಗಿ ಜಗತ್ತೇ ತಿರುಗಿನೋಡುವಂತೆ ಮಾಡಿದ್ದಾರೆ. ಇತ್ತೀಚಿನ ಪ್ರಮಾಣವಚನ ಸಮಾರಂಭದ ಫೋಟೊ,ವಿಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ಭಾರೀ ಸದ್ದು ಮಾಡಿವೆ. ರಾಯ್ ಈ ಸಾಧನೆಯನ್ನು ಸಾಧ್ಯವಾಗಿಸುವಲ್ಲಿ ಬೆಂಬಲ ನೀಡಿದ್ದು ಪಾಕಿಸ್ತಾನ್ ಪೀಪಲ್ಸ್ ಪಾರ್ಟಿ (PPP). ಇಷ್ಟೇ ಅಲ್ಲ, ಈಕೆಯ ಸೌಂದರ್ಯಕ್ಕೆ ನೆಟ್ಟಿಗರು ಫಿದಾ ಆಗಿದ್ದಾರೆ.

View this post on Instagram

A post shared by Shahzadi Rai (@shahzadi_rai)

ಯಾರು ಈ ಶಹಜಾದಿ ರಾಯ್?

ಕೆಎಂಸಿ ಸಿಟಿ ಕೌನ್ಸಿಲ್‌ನ ಸದಸ್ಯೆಯಾಗುವ ಮುನ್ನ ರಾಯ್ ಜೆಂಡರ ಇಂಟರಾಕ್ಟಿವ್ ಅಲಯನ್ಸ್‌ನಲ್ಲಿ ಹಿಂಸಾಚಾರ ಪ್ರಕರಣ ವಿಭಾಗದ ವ್ಯವಸ್ಥಾಪಕರಾಗಿ ಕೆಲಸ ಮಾಡುತ್ತಿದ್ದರು. ಪಾಕಿಸ್ತಾನದಲ್ಲಿ ಖ್ವಾಜಸಿರಾ ಸಮುದಾಯದ ಹಕ್ಕುಗಳಿಗಾಗಿ ಅವರು ನಿರಂತರ ಹೋರಾಟ ನಡೆಸುತ್ತಿದ್ದರು. ರಾಯ್ ಅವರ ಅಚಲವಾದ ಬದ್ಧತೆಯು ನಾಗರಿಕ ಸಮಾಜ ಸಂಸ್ಥೆಗಳು ಮತ್ತು ಟ್ರಾನ್ಸ್ ಜೆಂಡರ್ ಕಾರ್ಯಕರ್ತರಿಂದ ವ್ಯಾಪಕ ಮೆಚ್ಚುಗೆ ಮತ್ತು ಗೌರವವನ್ನು ಗಳಿಸಿದೆ.

ಇದನ್ನೂ ಓದಿ: ಮತಾಂತರ ನಿಷೇಧ ಕಾಯ್ದೆ ರದ್ದು: ಯಾವುದೇ ಸ್ವಾಮೀಜಿ ಸ್ವಾಗತಿಸಿಲ್ಲ, ಕಾಂಗ್ರೆಸ್ ಸರ್ಕಾರ ಕರ್ನಾಟಕವನ್ನು ಮಿನಿ ಪಾಕಿಸ್ತಾನ ಮಾಡಲು ಹೊರಟಿದೆ- ಆರ್​.ಅಶೋಕ್​ ವಾಗ್ದಾಳಿ

ಶಹಜಾದಿ ರಾಯ್ ಅವರ ನೇಮಕದ ಮಹತ್ವವು ವೈಯಕ್ತಿಕ ಸಾಧನೆಯ ಕ್ಷೇತ್ರವನ್ನು ಮೀರಿ ವಿಸ್ತರಿಸಿದೆ. ಇದು ನೀತಿ-ನಿರ್ಮಾಣ ಪ್ರಕ್ರಿಯೆಯಲ್ಲಿ ಟ್ರಾನ್ಸ್​​ಜೆಂಡರ್ ವ್ಯಕ್ತಿಗಳನ್ನು ಮುಖ್ಯವಾಹಿನಿಯ ಕಡೆಗೆ ಒಂದು ನಿರ್ಣಾಯಕ ಹೆಜ್ಜೆಯನ್ನು ಪ್ರತಿನಿಧಿಸುತ್ತದೆ. ಅಧಿಕಾರ ಮತ್ತು ಪ್ರಭಾವದ ಸ್ಥಾನವನ್ನು ಆಕ್ರಮಿಸುವ ಮೂಲಕ, ರಾಯ್ ಅವರು ಅಡೆತಡೆಗಳನ್ನು ಭೇದಿಸಿದ್ದಾರೆ. ವಿವಿಧ ಹಂತಗಳಲ್ಲಿ ನಿರ್ಧಾರ ತೆಗೆದುಕೊಳ್ಳುವಲ್ಲಿ ಟ್ರಾನ್ಸ್​​ಜೆಂಡರ್ ದೃಷ್ಟಿಕೋನಗಳು ಕೂಡಾ ಇಲ್ಲಿ ಪರಿಗಣನೆಗೆ ಬರಲಿವೆ.

ಮತ್ತಷ್ಟು ವಿದೇಶ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ
ಮೋದಿಯಿಂದ ನಾಳೆ ಉದ್ಘಾಟನೆಯಾಗಲಿದೆ ಅಸ್ಸಾಂನ ಅತಿದೊಡ್ಡ ವಿಮಾನ ನಿಲ್ದಾಣ
ಮೋದಿಯಿಂದ ನಾಳೆ ಉದ್ಘಾಟನೆಯಾಗಲಿದೆ ಅಸ್ಸಾಂನ ಅತಿದೊಡ್ಡ ವಿಮಾನ ನಿಲ್ದಾಣ
ಶಾಲೆಗೆ ಬರುವ ಮಕ್ಕಳನ್ನ ಗಾರೆ ಕೆಲಸಕ್ಕಚ್ಚಿದ ಮೇಸ್ಟ್ರು, ವಿಡಿಯೋ ವೈರಲ್
ಶಾಲೆಗೆ ಬರುವ ಮಕ್ಕಳನ್ನ ಗಾರೆ ಕೆಲಸಕ್ಕಚ್ಚಿದ ಮೇಸ್ಟ್ರು, ವಿಡಿಯೋ ವೈರಲ್
ಸಂಸತ್ ಅಧಿವೇಶನ ಮುಕ್ತಾಯ; ಮೋದಿ ಸೇರಿ ಎಲ್ಲ ಸಂಸದರಿಗೆ ಸ್ಪೀಕರ್ ಟೀ ಪಾರ್ಟಿ
ಸಂಸತ್ ಅಧಿವೇಶನ ಮುಕ್ತಾಯ; ಮೋದಿ ಸೇರಿ ಎಲ್ಲ ಸಂಸದರಿಗೆ ಸ್ಪೀಕರ್ ಟೀ ಪಾರ್ಟಿ
ಬಾಲಕನನ್ನು ಫುಟ್ಬಾಲ್​​ನಂತೆ ಒದ್ದ ಜಿಮ್ ಟ್ರೈನರ್​​ನ ಮತ್ತಷ್ಟು ಕೃತ್ಯಗಳು
ಬಾಲಕನನ್ನು ಫುಟ್ಬಾಲ್​​ನಂತೆ ಒದ್ದ ಜಿಮ್ ಟ್ರೈನರ್​​ನ ಮತ್ತಷ್ಟು ಕೃತ್ಯಗಳು
ವಕ್ಫ್ ಆಸ್ತಿಗಾಗಿ ಸಂಘರ್ಷ: 11 ಎಕರೆ ಜಮೀನಿಗಾಗಿ ಕುಟುಂಬಗಳ‌ ಮಧ್ಯೆ ಬಡಿದಾಟ
ವಕ್ಫ್ ಆಸ್ತಿಗಾಗಿ ಸಂಘರ್ಷ: 11 ಎಕರೆ ಜಮೀನಿಗಾಗಿ ಕುಟುಂಬಗಳ‌ ಮಧ್ಯೆ ಬಡಿದಾಟ
ದೇವಿ ದರ್ಶನ ಬಳಿಕ ಡಿಸಿಎಂ ಸ್ಫೋಟಕ ಹೇಳಿಕೆ: ಸಂಚಲನ ಮೂಡಿಸಿದ ಡಿಕೆಶಿ ಸಂದೇಶ
ದೇವಿ ದರ್ಶನ ಬಳಿಕ ಡಿಸಿಎಂ ಸ್ಫೋಟಕ ಹೇಳಿಕೆ: ಸಂಚಲನ ಮೂಡಿಸಿದ ಡಿಕೆಶಿ ಸಂದೇಶ