AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೆಲಿಟೊಪೋಲ್​ ನಗರದ ಮೇಯರ್​ ಅಪಹರಣ; ರಷ್ಯಾ ಸೈನಿಕರನ್ನು ಐಸಿಸ್​ ಉಗ್ರರಿಗೆ ಹೋಲಿಸಿದ ಉಕ್ರೇನ್​ ಅಧ್ಯಕ್ಷ ಝೆಲೆನ್ಸ್ಕಿ

ಮೆಲಿಟೊಪೋಲ್​​ನ ಉತ್ತರಕ್ಕೆ 120 ಕಿಮೀ ದೂರದಲ್ಲಿರುವ ಝಪೋರಿಝಿಯಾದ ಪ್ರಾದೇಶಿಕ ಮಂಡಳಿಯ ಉಪ ಮುಖ್ಯಸ್ಥನನ್ನು ರಷ್ಯಾ ಸೈನಿಕರು ಈಗೊಂದು ಎರಡು ದಿನಗಳ ಹಿಂದೆ ಅಪಹರಣ ಮಾಡಿದ್ದರು ಎಂದು ಉಕ್ರೇನ್ ಸಂಸತ್ತು ತಿಳಿಸಿದೆ.

ಮೆಲಿಟೊಪೋಲ್​ ನಗರದ ಮೇಯರ್​ ಅಪಹರಣ; ರಷ್ಯಾ ಸೈನಿಕರನ್ನು ಐಸಿಸ್​ ಉಗ್ರರಿಗೆ ಹೋಲಿಸಿದ ಉಕ್ರೇನ್​ ಅಧ್ಯಕ್ಷ ಝೆಲೆನ್ಸ್ಕಿ
ವೊಲೊಡಿಮಿರ್ ಝೆಲೆನ್ಸ್ಕಿ
TV9 Web
| Edited By: |

Updated on:Mar 12, 2022 | 2:20 PM

Share

ಕೀವ್​: ಉಕ್ರೇನ್​ ದಕ್ಷಿಣ ನಗರ ಮೆಲಿಟೊಪೋಲ್​ನ ಮೇಯರ್​ರನ್ನು ಅಪರಹಣ (Melitopol was kidnapped) ಮಾಡಲಾಗಿದೆ. ಈ ನಗರವನ್ನು ರಷ್ಯಾದ ಸೈನಿಕರು ಅತಿಕ್ರಮಣ ಮಾಡಿದ್ದಾರೆ ಎಂದು ಉಕ್ರೇನ್​ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ(Volodymyr Zelensky) ಆರೋಪಿಸಿದ್ದಾರೆ.  ರಷ್ಯಾದ ಒಟ್ಟು 10 ಆಕ್ರಮಣಕಾರರು ಮೆಲಿಟೊಪೋಲ್​​ನ ಮೇಯರ್ ಇವಾನ್ ಫೆಡೋರೊವ್​ರನ್ನು ಕಿಡ್ನ್ಯಾಪ್​ ಮಾಡಿದ್ದಾಗಿ ಉಕ್ರೇನ್​ನ ಸಂಸತ್ತು ಕೂಡ ಟ್ವೀಟ್ ಮಾಡಿ ತಿಳಿಸಿತ್ತು. ರಷ್ಯಾ ಸೈನಿಕರು ತಮಗೆ ಸಹಕಾರ ನೀಡುವಂತೆ ಮೇಯರ್​ ಬಳಿ ಕೇಳಿದ್ದಾರೆ. ಆದರೆ ಅವರು ಒಪ್ಪಲಿಲ್ಲ. ಹೀಗಾಗಿ ಅವರನ್ನೇ ಅಪಹರಣ ಮಾಡಿಕೊಂಡು ಹೋಗಿದ್ದಾರೆ ಎಂದು  ಮಾಹಿತಿ ನೀಡಿತ್ತು.

ಇದಾದ ಬಳಿಕ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಕೂಡ ವಿಡಿಯೋ ಮೂಲಕ ಮೇಯರ್ ಅಪಹರಣವಾಗಿದ್ದನ್ನು ಖಚಿತಪಡಿಸಿದ್ದಾರೆ. ಫೆಡೊರೊವ್​ ಒಬ್ಬ ಧೈರ್ಯಶಾಲಿ ಮೇಯರ್​. ಅವರು ರಷ್ಯಾ ಆಕ್ರಮಣಕಾರರಿಂದ ಉಕ್ರೇನ್​​ನ್ನು ಮತ್ತು ತನ್ನ ಸಮುದಾಯವನ್ನು ರಕ್ಷಿಸಿಕೊಳ್ಳಲು ಹೋರಾಡಿದರು. ಆದರೆ ಕೊನೆಯಲ್ಲಿ ಸೈನಿಕರು ಅವರನ್ನೇ ಕಿಡ್ನ್ಯಾಪ್ ಮಾಡಿದ್ದಾರೆ. ಇದು ರಷ್ಯಾ ಸೈನಿಕರ ದುರ್ಬಲತೆಯನ್ನು ತೋರುತ್ತದೆ.  ರಷ್ಯಾ ಸೇನೆ ಥೇಟ್ ಭಯೋತ್ಪಾದಕರಂತೆ ವರ್ತಿಸುತ್ತಿದೆ. ಉಗ್ರವಾದದ ಹೊಸ ಹಂತಕ್ಕೆ ತಲುಪಿದ್ದು, ಉಕ್ರೇನ್​ನ ಸ್ಥಳೀಯ ಸಂಸ್ಥೆಯ ಅಧಿಕಾರಿಗಳನ್ನು, ಪ್ರತಿನಿಧಿಗಳನ್ನು ಅಪಹರಣ, ಹತ್ಯೆ ಮಾಡಲಾಗುತ್ತಿದೆ ಎಂದು ಝೆಲೆನ್ಸ್ಕಿ ಆರೋಪಿಸಿದ್ದಾರೆ.

ಮೆಲಿಟೊಪೋಲ್​ ಸಿಟಿಯ ಮೇಯರ್​ ಅಪಹರಣ ಒಂದು ಕ್ರೈಂ. ಇದು ಒಬ್ಬ ವ್ಯಕ್ತಿಯ, ಒಂದು ಸಮುದಾಯದ ಅಥವಾ ಉಕ್ರೇನ್​​  ವಿರುದ್ಧ  ಮಾಡಿದ ಅಪರಾಧವಲ್ಲ,  ಇಡೀ ಪ್ರಜಾಪ್ರಭುತ್ವದ ವಿರುದ್ಧ ಮಾಡಲಾದ ಕ್ರೈಂ. ಇಸ್ಲಾಮಿಕ್​ ಸ್ಟೇಟ್​ ಭಯೋತ್ಪಾದಕರ ರೀತಿಯಲ್ಲೇ ರಷ್ಯಾ ಸೈನ್ಯ ವರ್ತನೆ ಮಾಡುತ್ತಿರುವುದು ಖೇದಕರ ಎಂದು ಝೆಲೆನ್ಸ್ಕಿ ವಿಡಿಯೋ ಭಾಷಣದಲ್ಲಿ ಹೇಳಿದ್ದಾರೆ.  ಉಕ್ರೇನ್​​ನ ಅಧ್ಯಕ್ಷೀಯ ಆಡಳಿತದ ಉಪ ಮುಖ್ಯಸ್ಥ ಕಿರಿಲ್ಲೋ ಟಿಮೊಶೆಂಕೋ ಎಂಬವರು ಒಂದು ಟೆಲಿಗ್ರಾಂನಲ್ಲಿ ಒಂದು ವಿಡಿಯೋ ಪೋಸ್ಟ್ ಮಾಡಿದ್ದರು. ರಷ್ಯಾ ಸೈನಿಕರು, ಕಪ್ಪು ಬಟ್ಟೆ ಧರಿಸಿದ ವ್ಯಕ್ತಿಯೊಬ್ಬನ ತಲೆಯನ್ನು ಕಪ್ಪುಬಟ್ಟೆಯಿಂದ ಮುಚ್ಚಿಕೊಂಡು ಕಟ್ಟಡವೊಂದರಿಂದ ಕರೆದುಕೊಂಡು ಬರುವ ದೃಶ್ಯ ಅದಾಗಿತ್ತು. ಇವರೇ ಮೇಯರ್​ ಎಂದೂ ಹೇಳಲಾಗಿದೆ.

ಈಗೊಂದು ಎರಡು ದಿನಗಳ ಹಿಂದೆ ಉಕ್ರೇನ್​ನ ಇನ್ನೊಬ್ಬ ಪ್ರಾದೇಶಿಕ ಅಧಿಕಾರಿಯನ್ನೂ ರಷ್ಯಾ ಸೇನೆ ಅಪಹರಣ ಮಾಡಿತ್ತು ಎಂಬ ವಿಚಾರವನ್ನು ಉಕ್ರೇನ್​ ಸಂಸತ್ತು ತಿಳಿಸಿದೆ. ಮೆಲಿಟೊಪೋಲ್​​ನ ಉತ್ತರಕ್ಕೆ 120 ಕಿಮೀ ದೂರದಲ್ಲಿರುವ ಝಪೋರಿಝಿಯಾದ ಪ್ರಾದೇಶಿಕ ಮಂಡಳಿಯ ಉಪ ಮುಖ್ಯಸ್ಥನನ್ನು ರಷ್ಯಾ ಸೈನಿಕರು ಅಪಹರಣ ಮಾಡಿದ್ದ, ಒಂದೆರಡು ದಿನಗಳ ಬಳಿಕ ಬಿಡುಗಡೆ ಮಾಡಿದ್ದಾರೆ. ಅದೇ ರೀತಿ ಈಗ  ಮೆಲಿಟೊಪೋಲ್ ನಗರದ ಮೇಯರ್​​ನನ್ನೂ ಅಪಹರಣ ಮಾಡಲಾಗಿದೆ ಎಂದು ಹೇಳಿದೆ. ಸದ್ಯ ರಷ್ಯಾ ಸೇನೆ ಉಕ್ರೇನ್​ನ ಕೀವ್​ ಸಮೀಪದಲ್ಲೇ ಇದೆ. ಎರಡು ದೇಶಗಳ ಶಾಂತಿ ಮಾತುಕತೆಗಳು ಫಲಿಸುವ ಯಾವ ಲಕ್ಷಣವೂ ಗೋಚರಿಸುತ್ತಿಲ್ಲ.

ಇದನ್ನೂ ಓದಿ: ಗಾಂಧಿ ಹೇಳಿದ ಧರ್ಮದ ಮಾರ್ಗದಲ್ಲಿದೆ ಬಿಜೆಪಿ, ಗಾಂಧಿ ಆಶಯ ನನಸು ಮಾಡ್ತಿದ್ದಾರೆ ಮೋದಿ: ಈಶ್ವರಪ್ಪ

Published On - 2:16 pm, Sat, 12 March 22

Follow Us
ಬಿಜೆಪಿ ಶಾಸಕರೇ ಅವರ ವಿರುದ್ಧ ಇದ್ದಾರೆ ಎಂದ ಸುರ್ಜೇವಾಲಾ
ಬಿಜೆಪಿ ಶಾಸಕರೇ ಅವರ ವಿರುದ್ಧ ಇದ್ದಾರೆ ಎಂದ ಸುರ್ಜೇವಾಲಾ
ಜೈಲಲ್ಲಿ ಪವಿತ್ರಾ ಗೌಡಗೆ ಕೆಲಸ ಮಾಡಿಕೊಡಲು ಆಳುಗಳು ಇದ್ದಾರೆ: ಸಂಧ್ಯಾ ಆರೋಪ
ಜೈಲಲ್ಲಿ ಪವಿತ್ರಾ ಗೌಡಗೆ ಕೆಲಸ ಮಾಡಿಕೊಡಲು ಆಳುಗಳು ಇದ್ದಾರೆ: ಸಂಧ್ಯಾ ಆರೋಪ
ವಡೋದರಾದಲ್ಲಿ 4 ಕೋಟಿಗೂ ಅಧಿಕ ಮೌಲ್ಯದ ಅಕ್ರಮ ಆಲ್ಕೋಹಾಲ್ ಬಾಟಲಿಗಳ ಧ್ವಂಸ
ವಡೋದರಾದಲ್ಲಿ 4 ಕೋಟಿಗೂ ಅಧಿಕ ಮೌಲ್ಯದ ಅಕ್ರಮ ಆಲ್ಕೋಹಾಲ್ ಬಾಟಲಿಗಳ ಧ್ವಂಸ
ಪರಿಷತ್‌ ಚುನಾವಣೆ: ಗೆಲುವು ಬೆನ್ನಲ್ಲೇ ತಿಪ್ಪಣ್ಣಪ್ಪ ಕಮಕನೂರು ಭಾವುಕ
ಪರಿಷತ್‌ ಚುನಾವಣೆ: ಗೆಲುವು ಬೆನ್ನಲ್ಲೇ ತಿಪ್ಪಣ್ಣಪ್ಪ ಕಮಕನೂರು ಭಾವುಕ
ಸಚಿನ್ ಕ್ರಿಕೆಟ್ ದೇವರಾದರೆ, ವೈಭವ್ ದೇವರ ಮಗ
ಸಚಿನ್ ಕ್ರಿಕೆಟ್ ದೇವರಾದರೆ, ವೈಭವ್ ದೇವರ ಮಗ
ಬಿಜೆಪಿ ಅಭ್ಯರ್ಥಿಗಳಿಗೆ ಕಷ್ಟ ಆಗಿದ್ಯಾಕೆ? ರಘು ಕೌಟಿಲ್ಯ ಏನಂದ್ರು ನೋಡಿ
ಬಿಜೆಪಿ ಅಭ್ಯರ್ಥಿಗಳಿಗೆ ಕಷ್ಟ ಆಗಿದ್ಯಾಕೆ? ರಘು ಕೌಟಿಲ್ಯ ಏನಂದ್ರು ನೋಡಿ
ಪರಿಷತ್​​ ಚುನಾವಣೆ ಫಲಿತಾಂಶ: ಕಾಂಗ್ರೆಸ್​​ ನಾಯಕರಿಂದ ಸುದ್ದಿಗೋಷ್ಠಿ
ಪರಿಷತ್​​ ಚುನಾವಣೆ ಫಲಿತಾಂಶ: ಕಾಂಗ್ರೆಸ್​​ ನಾಯಕರಿಂದ ಸುದ್ದಿಗೋಷ್ಠಿ
ಸಂಪೂರ್ಣ ಬತ್ತಿದ ಕಾವೇರಿ: ಮೈಸೂರು, ಬೆಂಗಳೂರಲ್ಲಿ ಕುಡಿಯುವ ನೀರಿಗೂ ಬರ?
ಸಂಪೂರ್ಣ ಬತ್ತಿದ ಕಾವೇರಿ: ಮೈಸೂರು, ಬೆಂಗಳೂರಲ್ಲಿ ಕುಡಿಯುವ ನೀರಿಗೂ ಬರ?
ಮಾಜಿ ಸಂಸದೆ ಸುಮಲತಾ ಅಂಬರೀಶ್ ಬಗ್ಗೆ ರೇವಣ್ಣ ಅಚ್ಚರಿಯ ಹೇಳಿಕೆ
ಮಾಜಿ ಸಂಸದೆ ಸುಮಲತಾ ಅಂಬರೀಶ್ ಬಗ್ಗೆ ರೇವಣ್ಣ ಅಚ್ಚರಿಯ ಹೇಳಿಕೆ
ಪರಿಷತ್ ಚುನಾವಣೆ: ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದ ಕಾಂಗ್ರೆಸ್​ ನಾಯಕರು
ಪರಿಷತ್ ಚುನಾವಣೆ: ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದ ಕಾಂಗ್ರೆಸ್​ ನಾಯಕರು