AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಖಾರ್ಕೀವ್​ಗೆ ಬಂದಿಳಿದ ರಷ್ಯಾ ವಾಯುಗಾಮಿ ಪಡೆ; ಉಕ್ರೇನ್​​ನಲ್ಲಿ ತುರ್ತು ಸೇವೆಗಾಗಿ ಸಹಾಯವಾಣಿ ಪ್ರಾರಂಭ

ಉಕ್ರೇನ್​ ರಾಜ್ಯ ತುರ್ತು ಸೇವೆ ಘಟಕ  ವಾಟ್ಸ್​ಆ್ಯಪ್​ ಹೆಲ್ಪ್​​ಲೈನ್​ ಶುರು ಮಾಡಿದ್ದು, ಆ ನಂಬರ್​​ನ್ನು ಬಹಿರಂಗ ಪಡಿಸಿದೆ. ಅಲ್ಲಿನ ನಾಗರಿಕರು ತಮ್ಮ ಪರಿಸ್ಥಿತಿ, ತಾವಿರುವ ಸ್ಥಳದಲ್ಲಿ ಏನಾಗುತ್ತಿದೆ ಎಂಬುದನ್ನು ಈ ವಾಟ್ಸ್​ಆ್ಯಪ್​ ನಂಬರ್​ಗೆ ಕಳಿಸಬಹುದಾಗಿದೆ.

ಖಾರ್ಕೀವ್​ಗೆ ಬಂದಿಳಿದ ರಷ್ಯಾ ವಾಯುಗಾಮಿ ಪಡೆ; ಉಕ್ರೇನ್​​ನಲ್ಲಿ ತುರ್ತು ಸೇವೆಗಾಗಿ ಸಹಾಯವಾಣಿ ಪ್ರಾರಂಭ
ಖಾರ್ಕೀವ್​ ಚಿತ್ರಣ
Follow us
TV9 Web
| Updated By: Lakshmi Hegde

Updated on: Mar 02, 2022 | 11:33 AM

ಉಕ್ರೇನ್​ನ ಎರಡನೇ ಅತಿದೊಡ್ಡ ನಗರವಾದ ಖಾರ್ಕೀವ್​ನಲ್ಲಿ (Kharkiv) ಈಗಾಗಲೇ ರಷ್ಯಾ ದಾಳಿ ಶುರುಮಾಡಿಕೊಂಡಿದೆ. ಇದೀಗ ಅಲ್ಲಿಗೆ ರಷ್ಯಾದ ವಾಯುಗಾಮಿ ಪಡೆ ಪ್ರವೇಶ ಮಾಡಿದೆ. ಈ ಸೈನಿಕರು ಖಾರ್ಕೀವ್​​ನ ಆಸ್ಪತ್ರೆಯ ಮೇಲೆ ದಾಳಿ ಮಾಡಿದ್ದಾರೆ ಎಂದು ಉಕ್ರೇನ್​ ಸೇನೆ ಹೇಳಿದೆ. ಮಂಗಳವಾರ ಖಾರ್ಕೀವ್​​ನಲ್ಲಿ ವಸತಿ ಪ್ರದೇಶಗಳು, ಪ್ರಾದೇಶಿಕ ಆಡಳಿತ ಕಚೇರಿ ಕಟ್ಟಡಗಳ ಮೇಲೆ ಕ್ಷಿಪಣಿ ದಾಳಿ ನಡೆಸಿದೆ. ಈ ನಗರದ ಮಧ್ಯಭಾಗದಲ್ಲಿ ಸಾಕಷ್ಟು ಹಾನಿಯಾಗಿದೆ ಎಂದೂ ಮಾಹಿತಿ ನೀಡಿದೆ. ನಿನ್ನೆ ಇದೇ ಪ್ರದೇಶದಲ್ಲಿ ಭಾರತದ ಕರ್ನಾಟಕ ರಾಜ್ಯದ ಹಾವೇರಿ ಮೂಲದ ವಿದ್ಯಾರ್ಥಿ ನವೀನ್​ ರಷ್ಯಾ ಬಾಂಬ್​ ದಾಳಿಯಿಂದ ಮೃತಪಟ್ಟಿದ್ದಾನೆ. ಸದ್ಯ ರಷ್ಯಾ ಸೇನೆಯ ಪಾಲಿಗೆ ಉಕ್ರೇನ್​ನ ಕೀವ್​ ಮತ್ತು ಖಾರ್ಕೀವ್​​ಗಳು ಬಹುದೊಡ್ಡ ಟಾರ್ಗೆಟ್​ ಆಗಿವೆ.

ಖಾರ್ಕೀವ್​​ ನಗರ ಇರುವುದು ರಷ್ಯಾ ಗಡಿಯಲ್ಲಿ. ಇಲ್ಲಿ ಬಹುಪಾಲು ಜನರು ರಷ್ಯನ್​ ಭಾಷೆಯನ್ನೇ ಮಾತನಾಡುತ್ತಾರೆ. ಸುಮಾರು 1.4 ಮಿಲಿಯನ್​ ಜನಸಂಖ್ಯೆಯಿದೆ. ಕಳೆದ ಗುರುವಾರ ರಷ್ಯಾ ಅಧ್ಯಕ್ಷ ಉಕ್ರೇನ್ ಮೇಲೆ ಸೇನಾ ಕಾರ್ಯಾಚರಣೆಯನ್ನು ಘೋಷಿಸಿದಾಗಿನಿಂದಲೂ ಖಾರ್ಕೀವ್​ನ್ನು ರಷ್ಯಾ ಟಾರ್ಗೆಟ್​ ಮಾಡುತ್ತಲೇ ಇದ್ದು, ಈಗೀಗ ಅಲ್ಲಿ ದಾಳಿಯ ತೀವ್ರತೆಯನ್ನು ಹೆಚ್ಚಿಸುತ್ತಿದೆ. ಇನ್ನೊಂದೆಡೆ ಉಕ್ರೇನ್​ ರಾಜಧಾನಿ ಕೀವ್​ ಕೂಡ ರಷ್ಯಾ ದಾಳಿಗೆ ತತ್ತರಿಸಿದೆ. ಕೀವ್​​ನ ಪಶ್ಚಿಮ ಭಾಗದಲ್ಲಿರುವ ಝಿಟೋಮಿರ್​ ಎಂಬಲ್ಲಿ ರಷ್ಯಾ ಸೇನೆ ನಡೆಸಿದ ಕ್ರೂಸ್​ ಕ್ಷಿಪಣಿ ದಾಳಿಗೆ ಮಗು ಸೇರಿ ನಾಲ್ವರು ಬಲಿಯಾಗಿದ್ದಾರೆ ಎಂದು ರಾಯಿಟರ್ಸ್ ವರದಿ ಮಾಡಿದೆ.

ತುರ್ತು ಸಹಾಯವಾಣಿ ಪ್ರಾರಂಭ: ರಷ್ಯಾ ಆಕ್ರಮಣದಿಂದ ತತ್ತರಿಸಿದ ಉಕ್ರೇನ್​​ಲ್ಲಿ ಇದೀಗ ತುರ್ತು ಸೇವೆಗಾಗಿ ಒಂದು ಸಹಾಯವಾಣಿ ಕಲ್ಪಿಸಲಾಗಿದೆ. ಉಕ್ರೇನ್​ ರಾಜ್ಯ ತುರ್ತು ಸೇವೆ ಘಟಕ  ವಾಟ್ಸ್​ಆ್ಯಪ್​ ಹೆಲ್ಪ್​​ಲೈನ್​ ಶುರು ಮಾಡಿದ್ದು, ಆ ನಂಬರ್​​ನ್ನು ಬಹಿರಂಗ ಪಡಿಸಿದೆ. ಉಕ್ರೇನ್​​ನ ಯಾವುದೇ ಭಾಗದಲ್ಲಿರುವ ನಾಗರಿಕರು ಆ ಸ್ಥಳದ ಪರಿಸ್ಥಿತಿ, ತಾವಿರುವ ಪರಿಸ್ಥಿತಿಗಳ ಬಗ್ಗೆ ವಾಟ್ಸ್​ಆ್ಯಪ್​​ನಲ್ಲಿ ಮಾಹಿತಿ ನೀಡಬಹುದಆಗಿದೆ.

ಇದನ್ನೂ ಓದಿ: Russia Ukraine War: ಉಕ್ರೇನ್ ಪರವಾಗಿ ನಿಲ್ಲುವುದಾಗಿ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಘೋಷಣೆ

ಮನೆಯ ದ್ವಾರಕ್ಕೆ ತೆಂಗಿನ ಕಾಯಿ ಕಟ್ಟುವುದರ ಹಿಂದಿನ ಅಧ್ಯಾತ್ಮಿಕ ರಹಸ್ಯ
ಮನೆಯ ದ್ವಾರಕ್ಕೆ ತೆಂಗಿನ ಕಾಯಿ ಕಟ್ಟುವುದರ ಹಿಂದಿನ ಅಧ್ಯಾತ್ಮಿಕ ರಹಸ್ಯ
ಚಂದ್ರ ವೃಶ್ಚಿಕ ರಾಶಿಯಲ್ಲಿ ಸಂಚಾರ: ದ್ವಾದಶ ರಾಶಿಗಳ ಫಲಾಫಲ ಹೇಗಿದೆ ನೋಡಿ
ಚಂದ್ರ ವೃಶ್ಚಿಕ ರಾಶಿಯಲ್ಲಿ ಸಂಚಾರ: ದ್ವಾದಶ ರಾಶಿಗಳ ಫಲಾಫಲ ಹೇಗಿದೆ ನೋಡಿ
ವಿಜಯೇಂದ್ರ ಕೆಳಗಿಳಿಸಿ ನನ್ನನ್ನು ಪಕ್ಷಕ್ಕೆ ಸೇರಿಸಿಕೊಳ್ಳುತ್ತಾರೆ: ಯತ್ನಾಳ್
ವಿಜಯೇಂದ್ರ ಕೆಳಗಿಳಿಸಿ ನನ್ನನ್ನು ಪಕ್ಷಕ್ಕೆ ಸೇರಿಸಿಕೊಳ್ಳುತ್ತಾರೆ: ಯತ್ನಾಳ್
ರಾಕೇಶ್ ಒಬ್ಬ ಒಳ್ಳೆಯ ಮಗ, ಸಹೋದರ ಮತ್ತು ವ್ಯಕ್ತಿ ಕೂಡ ಆಗಿದ್ದರು
ರಾಕೇಶ್ ಒಬ್ಬ ಒಳ್ಳೆಯ ಮಗ, ಸಹೋದರ ಮತ್ತು ವ್ಯಕ್ತಿ ಕೂಡ ಆಗಿದ್ದರು
ರಕ್ಷಿತಾಗೆ ರಾಕೇಶ್ ಮೇಲಿದ್ದ ವಾತ್ಸಲ್ಯ, ಪ್ರೀತಿ ಪದಗಳಲ್ಲಿ ಹೇಳಲಾಗದು
ರಕ್ಷಿತಾಗೆ ರಾಕೇಶ್ ಮೇಲಿದ್ದ ವಾತ್ಸಲ್ಯ, ಪ್ರೀತಿ ಪದಗಳಲ್ಲಿ ಹೇಳಲಾಗದು
ರಾಕೇಶ್ ಪೂಜಾರಿ ಅಂತಿಮ ದರ್ಶನ ಪಡೆದು ಕಣ್ಣೀರು ಹಾಕಿದ ನಟಿ ರಕ್ಷಿತಾ ಪ್ರೇಮ್
ರಾಕೇಶ್ ಪೂಜಾರಿ ಅಂತಿಮ ದರ್ಶನ ಪಡೆದು ಕಣ್ಣೀರು ಹಾಕಿದ ನಟಿ ರಕ್ಷಿತಾ ಪ್ರೇಮ್
ದೇವೇಗೌಡರ ಮಾರ್ಗದರ್ಶನದಲ್ಲಿ ಪಕ್ಷ ಸಂಘಟನೆ ಕೆಲಸ ಶುರುವಾಗಲಿದೆ: ನಿಖಿಲ್
ದೇವೇಗೌಡರ ಮಾರ್ಗದರ್ಶನದಲ್ಲಿ ಪಕ್ಷ ಸಂಘಟನೆ ಕೆಲಸ ಶುರುವಾಗಲಿದೆ: ನಿಖಿಲ್
ರಾಕೇಶ್ ಪೂಜಾರಿ ಸಾವಿನ ಸುದ್ದಿ ಸುಳ್ಳಾಗಬಾರದೇ ಎನಿಸುತ್ತಿದೆ: ಗೋವಿಂದೇ ಗೌಡ
ರಾಕೇಶ್ ಪೂಜಾರಿ ಸಾವಿನ ಸುದ್ದಿ ಸುಳ್ಳಾಗಬಾರದೇ ಎನಿಸುತ್ತಿದೆ: ಗೋವಿಂದೇ ಗೌಡ
ಇಂದು ಸಾಯಂಕಾಲ 5 ಗಂಟೆಗೆ ನಡೆಯಬಹುದು ಡಿಜಿಎಂಒಗಳ ಸಭೆ
ಇಂದು ಸಾಯಂಕಾಲ 5 ಗಂಟೆಗೆ ನಡೆಯಬಹುದು ಡಿಜಿಎಂಒಗಳ ಸಭೆ
ಕೇಂದ್ರ ಸಚಿವ ಕುಮಾರಸ್ವಾಮಿ ಆರೋಗ್ಯದ ಬಗ್ಗೆ ಅಪ್ಡೇಟ್ ನೀಡಿದ ನಿಖಿಲ್​
ಕೇಂದ್ರ ಸಚಿವ ಕುಮಾರಸ್ವಾಮಿ ಆರೋಗ್ಯದ ಬಗ್ಗೆ ಅಪ್ಡೇಟ್ ನೀಡಿದ ನಿಖಿಲ್​