AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಖಾರ್ಕೀವ್​ಗೆ ಬಂದಿಳಿದ ರಷ್ಯಾ ವಾಯುಗಾಮಿ ಪಡೆ; ಉಕ್ರೇನ್​​ನಲ್ಲಿ ತುರ್ತು ಸೇವೆಗಾಗಿ ಸಹಾಯವಾಣಿ ಪ್ರಾರಂಭ

ಉಕ್ರೇನ್​ ರಾಜ್ಯ ತುರ್ತು ಸೇವೆ ಘಟಕ  ವಾಟ್ಸ್​ಆ್ಯಪ್​ ಹೆಲ್ಪ್​​ಲೈನ್​ ಶುರು ಮಾಡಿದ್ದು, ಆ ನಂಬರ್​​ನ್ನು ಬಹಿರಂಗ ಪಡಿಸಿದೆ. ಅಲ್ಲಿನ ನಾಗರಿಕರು ತಮ್ಮ ಪರಿಸ್ಥಿತಿ, ತಾವಿರುವ ಸ್ಥಳದಲ್ಲಿ ಏನಾಗುತ್ತಿದೆ ಎಂಬುದನ್ನು ಈ ವಾಟ್ಸ್​ಆ್ಯಪ್​ ನಂಬರ್​ಗೆ ಕಳಿಸಬಹುದಾಗಿದೆ.

ಖಾರ್ಕೀವ್​ಗೆ ಬಂದಿಳಿದ ರಷ್ಯಾ ವಾಯುಗಾಮಿ ಪಡೆ; ಉಕ್ರೇನ್​​ನಲ್ಲಿ ತುರ್ತು ಸೇವೆಗಾಗಿ ಸಹಾಯವಾಣಿ ಪ್ರಾರಂಭ
ಖಾರ್ಕೀವ್​ ಚಿತ್ರಣ
TV9 Web
| Edited By: |

Updated on: Mar 02, 2022 | 11:33 AM

Share

ಉಕ್ರೇನ್​ನ ಎರಡನೇ ಅತಿದೊಡ್ಡ ನಗರವಾದ ಖಾರ್ಕೀವ್​ನಲ್ಲಿ (Kharkiv) ಈಗಾಗಲೇ ರಷ್ಯಾ ದಾಳಿ ಶುರುಮಾಡಿಕೊಂಡಿದೆ. ಇದೀಗ ಅಲ್ಲಿಗೆ ರಷ್ಯಾದ ವಾಯುಗಾಮಿ ಪಡೆ ಪ್ರವೇಶ ಮಾಡಿದೆ. ಈ ಸೈನಿಕರು ಖಾರ್ಕೀವ್​​ನ ಆಸ್ಪತ್ರೆಯ ಮೇಲೆ ದಾಳಿ ಮಾಡಿದ್ದಾರೆ ಎಂದು ಉಕ್ರೇನ್​ ಸೇನೆ ಹೇಳಿದೆ. ಮಂಗಳವಾರ ಖಾರ್ಕೀವ್​​ನಲ್ಲಿ ವಸತಿ ಪ್ರದೇಶಗಳು, ಪ್ರಾದೇಶಿಕ ಆಡಳಿತ ಕಚೇರಿ ಕಟ್ಟಡಗಳ ಮೇಲೆ ಕ್ಷಿಪಣಿ ದಾಳಿ ನಡೆಸಿದೆ. ಈ ನಗರದ ಮಧ್ಯಭಾಗದಲ್ಲಿ ಸಾಕಷ್ಟು ಹಾನಿಯಾಗಿದೆ ಎಂದೂ ಮಾಹಿತಿ ನೀಡಿದೆ. ನಿನ್ನೆ ಇದೇ ಪ್ರದೇಶದಲ್ಲಿ ಭಾರತದ ಕರ್ನಾಟಕ ರಾಜ್ಯದ ಹಾವೇರಿ ಮೂಲದ ವಿದ್ಯಾರ್ಥಿ ನವೀನ್​ ರಷ್ಯಾ ಬಾಂಬ್​ ದಾಳಿಯಿಂದ ಮೃತಪಟ್ಟಿದ್ದಾನೆ. ಸದ್ಯ ರಷ್ಯಾ ಸೇನೆಯ ಪಾಲಿಗೆ ಉಕ್ರೇನ್​ನ ಕೀವ್​ ಮತ್ತು ಖಾರ್ಕೀವ್​​ಗಳು ಬಹುದೊಡ್ಡ ಟಾರ್ಗೆಟ್​ ಆಗಿವೆ.

ಖಾರ್ಕೀವ್​​ ನಗರ ಇರುವುದು ರಷ್ಯಾ ಗಡಿಯಲ್ಲಿ. ಇಲ್ಲಿ ಬಹುಪಾಲು ಜನರು ರಷ್ಯನ್​ ಭಾಷೆಯನ್ನೇ ಮಾತನಾಡುತ್ತಾರೆ. ಸುಮಾರು 1.4 ಮಿಲಿಯನ್​ ಜನಸಂಖ್ಯೆಯಿದೆ. ಕಳೆದ ಗುರುವಾರ ರಷ್ಯಾ ಅಧ್ಯಕ್ಷ ಉಕ್ರೇನ್ ಮೇಲೆ ಸೇನಾ ಕಾರ್ಯಾಚರಣೆಯನ್ನು ಘೋಷಿಸಿದಾಗಿನಿಂದಲೂ ಖಾರ್ಕೀವ್​ನ್ನು ರಷ್ಯಾ ಟಾರ್ಗೆಟ್​ ಮಾಡುತ್ತಲೇ ಇದ್ದು, ಈಗೀಗ ಅಲ್ಲಿ ದಾಳಿಯ ತೀವ್ರತೆಯನ್ನು ಹೆಚ್ಚಿಸುತ್ತಿದೆ. ಇನ್ನೊಂದೆಡೆ ಉಕ್ರೇನ್​ ರಾಜಧಾನಿ ಕೀವ್​ ಕೂಡ ರಷ್ಯಾ ದಾಳಿಗೆ ತತ್ತರಿಸಿದೆ. ಕೀವ್​​ನ ಪಶ್ಚಿಮ ಭಾಗದಲ್ಲಿರುವ ಝಿಟೋಮಿರ್​ ಎಂಬಲ್ಲಿ ರಷ್ಯಾ ಸೇನೆ ನಡೆಸಿದ ಕ್ರೂಸ್​ ಕ್ಷಿಪಣಿ ದಾಳಿಗೆ ಮಗು ಸೇರಿ ನಾಲ್ವರು ಬಲಿಯಾಗಿದ್ದಾರೆ ಎಂದು ರಾಯಿಟರ್ಸ್ ವರದಿ ಮಾಡಿದೆ.

ತುರ್ತು ಸಹಾಯವಾಣಿ ಪ್ರಾರಂಭ: ರಷ್ಯಾ ಆಕ್ರಮಣದಿಂದ ತತ್ತರಿಸಿದ ಉಕ್ರೇನ್​​ಲ್ಲಿ ಇದೀಗ ತುರ್ತು ಸೇವೆಗಾಗಿ ಒಂದು ಸಹಾಯವಾಣಿ ಕಲ್ಪಿಸಲಾಗಿದೆ. ಉಕ್ರೇನ್​ ರಾಜ್ಯ ತುರ್ತು ಸೇವೆ ಘಟಕ  ವಾಟ್ಸ್​ಆ್ಯಪ್​ ಹೆಲ್ಪ್​​ಲೈನ್​ ಶುರು ಮಾಡಿದ್ದು, ಆ ನಂಬರ್​​ನ್ನು ಬಹಿರಂಗ ಪಡಿಸಿದೆ. ಉಕ್ರೇನ್​​ನ ಯಾವುದೇ ಭಾಗದಲ್ಲಿರುವ ನಾಗರಿಕರು ಆ ಸ್ಥಳದ ಪರಿಸ್ಥಿತಿ, ತಾವಿರುವ ಪರಿಸ್ಥಿತಿಗಳ ಬಗ್ಗೆ ವಾಟ್ಸ್​ಆ್ಯಪ್​​ನಲ್ಲಿ ಮಾಹಿತಿ ನೀಡಬಹುದಆಗಿದೆ.

ಇದನ್ನೂ ಓದಿ: Russia Ukraine War: ಉಕ್ರೇನ್ ಪರವಾಗಿ ನಿಲ್ಲುವುದಾಗಿ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಘೋಷಣೆ

ಸಿಂಹ ರಾಶಿಯವರ ಮೇಲೆ ರಾಹುಗ್ರಸ್ತ ಕಂಕಣ ಸೂರ್ಯಗ್ರಹಣದ ಪ್ರಭಾವ ಹೇಗಿರಲಿದೆ?
ಸಿಂಹ ರಾಶಿಯವರ ಮೇಲೆ ರಾಹುಗ್ರಸ್ತ ಕಂಕಣ ಸೂರ್ಯಗ್ರಹಣದ ಪ್ರಭಾವ ಹೇಗಿರಲಿದೆ?
ಸೇವಾ ತೀರ್ಥ; ಪ್ರಧಾನಮಂತ್ರಿ ಕಚೇರಿಯ ನೂತನ ಹೆಸರು ಅನಾವರಣಗೊಳಿಸಿದ ಮೋದಿ
ಸೇವಾ ತೀರ್ಥ; ಪ್ರಧಾನಮಂತ್ರಿ ಕಚೇರಿಯ ನೂತನ ಹೆಸರು ಅನಾವರಣಗೊಳಿಸಿದ ಮೋದಿ
ಸರಣಿ ಅಪಘಾತದಲ್ಲಿ 7 ಜನ ದುರ್ಮರಣ: ಘಟನೆಯ ಭೀಕರತೆ ಬಿಚ್ಚಿಟ್ಟ ಚಾಲಕ
ಸರಣಿ ಅಪಘಾತದಲ್ಲಿ 7 ಜನ ದುರ್ಮರಣ: ಘಟನೆಯ ಭೀಕರತೆ ಬಿಚ್ಚಿಟ್ಟ ಚಾಲಕ
ವರ್ಷದ ಮೊದಲ ಸೂರ್ಯಗ್ರಹಣ ಕರ್ಕಾಟಕ ರಾಶಿಯವರಿಗೆ ಹೇಗಿರಲಿದೆ?
ವರ್ಷದ ಮೊದಲ ಸೂರ್ಯಗ್ರಹಣ ಕರ್ಕಾಟಕ ರಾಶಿಯವರಿಗೆ ಹೇಗಿರಲಿದೆ?
ಶಿಶುಗಳ ಕಳ್ಳತನ ತಡೆಯಲು ಹೊಸ ಪ್ಲಾನ್ ಮಾಡಿದ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆ
ಶಿಶುಗಳ ಕಳ್ಳತನ ತಡೆಯಲು ಹೊಸ ಪ್ಲಾನ್ ಮಾಡಿದ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆ
ತಮಿಳುನಾಡು ಚುನಾವಣೆ: ಯಾವ ಪಕ್ಷದ ಜತೆಯೂ ಮೈತ್ರಿ ಇಲ್ಲ: ವಿಜಯ್
ತಮಿಳುನಾಡು ಚುನಾವಣೆ: ಯಾವ ಪಕ್ಷದ ಜತೆಯೂ ಮೈತ್ರಿ ಇಲ್ಲ: ವಿಜಯ್
ಮಹಾ ಶಿವರಾತ್ರಿಯಂದು ಬೆಂಗಳೂರಿನಲ್ಲಿ ಮಾಂಸ ಮಾರಾಟ ನಿಷೇಧ: ಜಿಬಿಎ ಆದೇಶ
ಮಹಾ ಶಿವರಾತ್ರಿಯಂದು ಬೆಂಗಳೂರಿನಲ್ಲಿ ಮಾಂಸ ಮಾರಾಟ ನಿಷೇಧ: ಜಿಬಿಎ ಆದೇಶ
ಫೆ.17 ರಾಹುಗ್ರಸ್ತ ಕಂಕಣ ಸೂರ್ಯಗ್ರಹಣ; ಮಿಥುನ ರಾಶಿಯ ಫಲಾಫಲ ತಿಳಿಯಿರಿ
ಫೆ.17 ರಾಹುಗ್ರಸ್ತ ಕಂಕಣ ಸೂರ್ಯಗ್ರಹಣ; ಮಿಥುನ ರಾಶಿಯ ಫಲಾಫಲ ತಿಳಿಯಿರಿ
ಚಲಿಸುತ್ತಿರುವ ರೈಲಿಂದ ಬಿದ್ದ ಮಹಿಳೆಯನ್ನು ದೇವರಂತೆ ಬಂದು ಕಾಪಾಡಿದ ಟಿಸಿ
ಚಲಿಸುತ್ತಿರುವ ರೈಲಿಂದ ಬಿದ್ದ ಮಹಿಳೆಯನ್ನು ದೇವರಂತೆ ಬಂದು ಕಾಪಾಡಿದ ಟಿಸಿ
ಆರಂಭ ಆಗಿದ್ದೇ ಒಂತರ, ಕೊನೆಯಾಗಿದ್ದೇ ಇನ್ನೊಂದು ತರ
ಆರಂಭ ಆಗಿದ್ದೇ ಒಂತರ, ಕೊನೆಯಾಗಿದ್ದೇ ಇನ್ನೊಂದು ತರ