AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Vacuum Bomb: ಉಕ್ರೇನ್​ ಮೇಲೆ ರಷ್ಯಾದಿಂದ ವ್ಯಾಕ್ಯೂಮ್​ ಬಾಂಬ್​ ದಾಳಿ; ಮನುಷ್ಯ ದೇಹವನ್ನೇ ಆವಿ ಮಾಡುವ ಭಯಾನಕ ಸ್ಫೋಟಕ ಇದು !

ವ್ಯಾಕ್ಯೂಮ್​ ಬಾಂಬ್​​ಗಳನ್ನು ಥರ್ಮಾಬಾರಿಕ್​ ಬಾಂಬ್​​ಗಳು ಎಂದೂ ಕರೆಯಲಾಗುತ್ತದೆ. ಈ ಬಾಂಬ್​​ಗಳನ್ನು ಯಾವ ಜಾಗದಲ್ಲಿ ಎಸೆಯಲಾಗುತ್ತದೆಯೋ ಅಲ್ಲಿರುವ ವಸ್ತುಗಳು ಅಥವಾ ಜನರ ಮೇಲೆ ಅತ್ಯಂತ ಹೆಚ್ಚಿನ ಪ್ರಮಾಣದ ಉಷ್ಣತೆ ಮತ್ತು ಒತ್ತಡವನ್ನು ಸೃಷ್ಟಿಸಿ ಸ್ಫೋಟಿಸುತ್ತದೆ. 

Vacuum Bomb: ಉಕ್ರೇನ್​ ಮೇಲೆ ರಷ್ಯಾದಿಂದ ವ್ಯಾಕ್ಯೂಮ್​ ಬಾಂಬ್​ ದಾಳಿ; ಮನುಷ್ಯ ದೇಹವನ್ನೇ ಆವಿ ಮಾಡುವ ಭಯಾನಕ ಸ್ಫೋಟಕ ಇದು !
ಉಕ್ರೇನ್​ ಮೇಲೆ ವಾಕ್ಯೂಮ್​ ಬಾಂಬ್​ ದಾಳಿ ಮಾಡುತ್ತಿರುವ ರಷ್ಯಾ
TV9 Web
| Edited By: |

Updated on: Mar 02, 2022 | 8:43 AM

Share

ತಾನು ಉಕ್ರೇನ್​ ಮೇಲೆ ಯುದ್ಧ ಮಾಡುವುದಿಲ್ಲ ಎಂದು ಜಗತ್ತನ್ನು ನಂಬಿಸುತ್ತಲೇ ಬಂದ ರಷ್ಯಾ (Russia) ಕೊನೆಗೂ ಮಾಡಿದ್ದು ಅದನ್ನೇ. ತಮ್ಮ ಗುರಿ ಉಕ್ರೇನ್​​ನ್ನು (Ukraine) ವಶಪಡಿಸಿ ಕೊಳ್ಳುವುದಲ್ಲ, ಅಲ್ಲಿನ ನಾಗರಿಕರನ್ನು ಕೊಲ್ಲುವುದಲ್ಲ ಎಂದು ಹೇಳುತ್ತಲೇ ಬಂದಿದ್ದ ರಷ್ಯಾ ಇದೀಗ ಉಕ್ರೇನ್​​ನಲ್ಲಿ ಸಿಕ್ಕಸಿಕ್ಕಲ್ಲಿ ಶೆಲ್​, ಬಾಂಬ್​, ಕ್ಷಿಪಣಿ ದಾಳಿ ನಡೆಸುತ್ತಿದೆ. ಇದರಿಂದ ಸಹಜವಾಗಿಯೇ ನಾಗರಿಕರೂ ಜೀವ ಬಿಡುತ್ತಿದ್ದಾರೆ. ನಿನ್ನೆ ಕರ್ನಾಟಕದ ವಿದ್ಯಾರ್ಥಿಯೊಬ್ಬ ರಷ್ಯಾ ಬಾಂಬ್​ ದಾಳಿಗೆ ಮೃತಪಟ್ಟಿದ್ದಾರೆ. ಈ ಮಧ್ಯೆ ಯುನೈಟೆಡ್​ ಸ್ಟೇಟ್ಸ್​​ ಮತ್ತು ಮಾನವ ಹಕ್ಕು ಗ್ರೂಪ್​ಗೆ ಉಕ್ರೇನ್​ನ ರಾಯಭಾರಿ ಗಂಭೀರ ಆರೋಪ ಮಾಡಿದ್ದಾರೆ. ರಷ್ಯಾ ಕ್ಲಸ್ಟರ್​ ಬಾಂಬ್​ ಮತ್ತು ವಾಕ್ಯೂಮ್​​ ಬಾಂಬ್(ನಿರ್ವಾತ ಬಾಂಬ್​​​)​​ಗಳ ಮೂಲಕ ರಷ್ಯಾ ಮೇಲೆ ದಾಳಿ ನಡೆಸುತ್ತಿದೆ ಎಂದು ಆರೋಪಿಸಿದ್ದಾರೆ. ಈ ವಾಕ್ಯೂಮ್​ ಮತ್ತು ಕ್ಲಸ್ಟರ್​ ಬಾಂಬ್​​ಗಳಿಂದ ದಾಳಿ ಮಾಡುತ್ತಿರುವ ಕ್ರಮವನ್ನು ಅಮ್ನೆಸ್ಟಿ ಇಂಟರ್​ನ್ಯಾಶನಲ್​ ಮತ್ತು ಹ್ಯೂಮನ್​ ರೈಟ್ಸ್​ ವಾಚ್​ ಸೇರಿ ಇನ್ನೂ ಅನೇಕ ಅಂತಾರಾಷ್ಟ್ರೀಯ ಸಂಸ್ಥೆಗಳು ಖಂಡಿಸಿವೆ.

ಯುನೈಟೆಡ್ ಸ್ಟೇಟ್ಸ್‌ನಲ್ಲಿನ ಉಕ್ರೇನ್ ರಾಯಭಾರಿ ಒಕ್ಸಾನಾ ಮಾರ್ಕರೋವಾ ಮಾತನಾಡಿ, ಮಾಸ್ಕೋ ವಾಕ್ಯೂಮ್​ ಬಾಂಬ್​​ ಎಂದು ಕರೆಯಲ್ಪಡುವ ಥರ್ಮೋಬಾರಿಕ್​ ಶಸ್ತ್ರಾಸ್ತ್ರವನ್ನು ಉಕ್ರೇನ್​ ಮೇಲೆ ಪ್ರಯೋಗ ಮಾಡುತ್ತಿದೆ. ರಷ್ಯಾ ಉಕ್ರೇನ್​ಗೆ ಮಾಡಲು ಹೊರಟಿರುವ ಹಾನಿ ಬಹುದೊಡ್ಡದು ಎಂದು ಆರೋಪಿಸಿದ್ದಾರೆ. ಮಾನವ ಹಕ್ಕು ಸಂಸ್ಥೆ ಆಮ್ನೆಸ್ಟಿ ಕೂಡ ಇದನ್ನು ಖಂಡಿಸಿದ್ದು, ರಷ್ಯಾದ ಫೋರ್ಸ್​​ಗಳು ಉಕ್ರೇನ್​ ವಿರುದ್ಧ ದಾಳಿ ಮಾಡಲು ನಿಷೇಧಿತ ಕ್ಲಸ್ಟರ್​ ಯುದ್ಧಸಾಮಗ್ರಿಗಳನ್ನು ಬಳಸುತ್ತಿರುವಂತೆ ತೋರುತ್ತಿದೆ. ಉಕ್ರೇನ್​​ನ ಈಶಾನ್ಯದಲ್ಲಿರುವ ಒಂದು ಪ್ರೀಸ್ಕೂಲ್​ (ಅಂಗನವಾಡಿ)ನಲ್ಲಿ ನಾಗರಿಕರು ಆಶ್ರಯ ಪಡೆದಿದ್ದರು. ಹಾಗಿದ್ದಾಗ್ಯೂ ಅಲ್ಲಿ ಉಕ್ರೇನ್​  ದಾಳಿ ನಡೆಸಿದೆ ಎಂದು ಹೇಳಿದೆ.

ಏನಿದು ವ್ಯಾಕ್ಯೂಮ್​ ಬಾಂಬ್​

ರಷ್ಯಾ ಉಕ್ರೇನ್​ ಮೇಲೆ ನಿರ್ವಾತ ಬಾಂಬ್​​ಗಳ ಮೂಲಕ ದಾಳಿ ಮಾಡುತ್ತಿದೆ ಎಂಬ ಆರೋಪ ಕೇಳಿಬಂದ ಬೆನ್ನಲ್ಲೇ, ಹೀಗಂದರೆ ಏನು? ಯಾವ ರೀತಿ ಕಾರ್ಯ ನಿರ್ವಹಿಸುತ್ತವೆ ಎಂಬ ಕುತೂಹಲ ಹೆಚ್ಚಿದೆ. ಈ ವಾಕ್ಯೂಮ್​ ಅಥವಾ ನಿರ್ವಾತ ಬಾಂಬ್​​ ಬಗ್ಗೆ ಇಲ್ಲಿದೆ ನೋಡಿ ಮಾಹಿತಿ..

ವ್ಯಾಕ್ಯೂಮ್​ ಬಾಂಬ್​​ಗಳನ್ನು ಥರ್ಮಾಬಾರಿಕ್​ ಬಾಂಬ್​​ಗಳು ಎಂದೂ ಕರೆಯಲಾಗುತ್ತದೆ. ಈ ಬಾಂಬ್​​ಗಳನ್ನು ಯಾವ ಜಾಗದಲ್ಲಿ ಎಸೆಯಲಾಗುತ್ತದೆಯೋ ಅಲ್ಲಿರುವ ವಸ್ತುಗಳು ಅಥವಾ ಜನರ ಮೇಲೆ ಅತ್ಯಂತ ಹೆಚ್ಚಿನ ಪ್ರಮಾಣದ ಉಷ್ಣತೆ ಮತ್ತು ಒತ್ತಡವನ್ನು ಸೃಷ್ಟಿಸಿ ಸ್ಫೋಟಿಸುತ್ತದೆ.  ಇದು ಅತ್ಯಂತ ಭಯಾನಕ ಬಾಂಬ್​ ಎನ್ನಿಸಿಕೊಳ್ಳಲು ಕಾರಣ, ಸ್ಫೋಟಗೊಂಡಲ್ಲಿ ಇರುವ ಮಾನವರ ದೇಹವನ್ನು ಆವಿ ಮಾಡುವ ಶಕ್ತಿಯನ್ನು ಹೊಂದಿರುತ್ತದೆ. ವ್ಯಾಕ್ಯೂಮ್​ ಬಾಂಬ್​ ಸ್ಫೋಟಗೊಳ್ಳುವ ಜಾಗದ ಸುತ್ತಮುತ್ತ ಇರುವ ಆಮ್ಲಜನಕವನ್ನು ಹೀರಿಕೊಳ್ಳುತ್ತದೆ. ಇದರಿಂದಾಗಿ ಅತ್ಯಂತ ಹೆಚ್ಚಿನ ತಾಪಮಾನದೊಂದಿಗೆ ಸ್ಫೋಟಗೊಳ್ಳುತ್ತದೆ. ಸಾಮಾನ್ಯ ಬಾಂಬ್​​ಗಳು ಸ್ಫೋಟವಾದಾಗ ಉಂಟಾಗುವ ಸ್ಫೋಟ ತರಂಗಗಳಿಗಿಂತಲೂ, ವ್ಯಾಕ್ಯೂಮ್​ ಬಾಂಬ್​ ಸ್ಫೋಟದ ತರಂಗಗಳು ಹೆಚ್ಚಿನ ಅವಧಿವರೆಗೆ ಇರುತ್ತವೆ.

ಇದನ್ನೂ ಓದಿ: Russia-Ukraine War: ಕೀವ್​​ನಲ್ಲಿರುವ ಟಿವಿ ಟವರ್​ ಮೇಲೆ ರಷ್ಯಾ ಬಾಂಬ್​​ ದಾಳಿ; 5 ಮಂದಿ ಸಾವು, ಚಾನಲ್​​ಗಳೆಲ್ಲ ಸ್ಥಗಿತ

Follow Us
ಬೆಂಗಳೂರಿನ ಬ್ಯಾಡರಹಳ್ಳಿಯಲ್ಲಿ ಐದನೇ ಬಾರಿ ಚಿರತೆ ಪ್ರತ್ಯಕ್ಷ!
ಬೆಂಗಳೂರಿನ ಬ್ಯಾಡರಹಳ್ಳಿಯಲ್ಲಿ ಐದನೇ ಬಾರಿ ಚಿರತೆ ಪ್ರತ್ಯಕ್ಷ!
ತಾಯಿ ನಮ್ಮನ್ನಗಲಿದ್ದಾರೆ ಎನ್ನುವುದು ನೆನಸಿಕೊಳ್ಳಲಿಕ್ಕೂ ಸಾಧ್ಯವಿಲ್ಲ: hdk
ತಾಯಿ ನಮ್ಮನ್ನಗಲಿದ್ದಾರೆ ಎನ್ನುವುದು ನೆನಸಿಕೊಳ್ಳಲಿಕ್ಕೂ ಸಾಧ್ಯವಿಲ್ಲ: hdk
37 ಟಿಎಂಸಿ ಸಾಮರ್ಥ್ಯದ ಹೇಮಾವತಿಯಲ್ಲಿ ಉಳಿದಿದ್ದು ಕೇವಲ 24 ಟಿಎಂಸಿ
37 ಟಿಎಂಸಿ ಸಾಮರ್ಥ್ಯದ ಹೇಮಾವತಿಯಲ್ಲಿ ಉಳಿದಿದ್ದು ಕೇವಲ 24 ಟಿಎಂಸಿ
ಕಾವೇರಿ ಜಲ ವಿವಾದ: ಸಂಕಷ್ಟ ಸೂತ್ರ ಪಾಲಿಸುವಂತೆ CWRC ಸಲಹೆ
ಕಾವೇರಿ ಜಲ ವಿವಾದ: ಸಂಕಷ್ಟ ಸೂತ್ರ ಪಾಲಿಸುವಂತೆ CWRC ಸಲಹೆ
ಭೋಪಾಲ್‌ನಲ್ಲಿ ಹಿಂಸಾಚಾರಕ್ಕೆ ತಿರುಗಿದ ರೈತರ ಪ್ರತಿಭಟನೆ
ಭೋಪಾಲ್‌ನಲ್ಲಿ ಹಿಂಸಾಚಾರಕ್ಕೆ ತಿರುಗಿದ ರೈತರ ಪ್ರತಿಭಟನೆ
ಕುತೂಹಲಕಾರಿ ಘಟ್ಟ ತಲುಪಿದ ಸಂಪುಟ ವಿಸ್ತರಣೆ ಕಸರತ್ತು
ಕುತೂಹಲಕಾರಿ ಘಟ್ಟ ತಲುಪಿದ ಸಂಪುಟ ವಿಸ್ತರಣೆ ಕಸರತ್ತು
ರಾಜ್ಯದ ಜಲ ಪ್ರದೇಶ ನೋಡಲು ತಮಿಳುನಾಡು ಸಿಎಂಗೆ ಹೆಲಿಕಾಪ್ಟರ್ ವ್ಯವಸ್ಥೆ
ರಾಜ್ಯದ ಜಲ ಪ್ರದೇಶ ನೋಡಲು ತಮಿಳುನಾಡು ಸಿಎಂಗೆ ಹೆಲಿಕಾಪ್ಟರ್ ವ್ಯವಸ್ಥೆ
ಸಿನಿಮಾಕ್ಕೆ ‘ಲವ್ ಕಾಕ್ಟೆಲ್’ ಎಂದು ಹೆಸರಿಟ್ಟಿದ್ದೇಕೆ? ಹರೀಶ್ ರಾಜ್ ಉತ್ತರ
ಸಿನಿಮಾಕ್ಕೆ ‘ಲವ್ ಕಾಕ್ಟೆಲ್’ ಎಂದು ಹೆಸರಿಟ್ಟಿದ್ದೇಕೆ? ಹರೀಶ್ ರಾಜ್ ಉತ್ತರ
ಅಂಗವಿಕಲನಂತೆ ನಟಿಸಿ ಮೊಬೈಲ್ ಕದಿಯುತ್ತಿದ್ದ ಉತ್ತರ ಪ್ರದೇಶದ ಭಿಕ್ಷುಕ ಸೆರೆ
ಅಂಗವಿಕಲನಂತೆ ನಟಿಸಿ ಮೊಬೈಲ್ ಕದಿಯುತ್ತಿದ್ದ ಉತ್ತರ ಪ್ರದೇಶದ ಭಿಕ್ಷುಕ ಸೆರೆ
ಕಾವೇರಿ ವಿವಾದ ನಡುವೆಯೂ ವಿಜಯ್ ಸ್ವಾಗತಕ್ಕೆ ವಿಧಾನಸೌಧದಲ್ಲಿ ಭರದ ಸಿದ್ಧತೆ!
ಕಾವೇರಿ ವಿವಾದ ನಡುವೆಯೂ ವಿಜಯ್ ಸ್ವಾಗತಕ್ಕೆ ವಿಧಾನಸೌಧದಲ್ಲಿ ಭರದ ಸಿದ್ಧತೆ!