AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಉಕ್ರೇನ್ ಮೇಲೆ ಯುದ್ಧ ಸಾರಿದ 4 ತಿಂಗಳ ಅವಧಿಯಲ್ಲಿ ರಷ್ಯಾದ ರಕ್ಷಣಾ ವೆಚ್ಚ ಶೇಕಡಾ 40ರಷ್ಟು ಹೆಚ್ಚಾಗಿದೆ

ಏಪ್ರಿಲ್ ತಿಂಗಳೊಂದರಲ್ಲೇ ರಷ್ಯಾ 628 ಬಿಲಿಯನ್ ರೂಬಲ್ ಗಳಷ್ಟು (ಸುಮಾರು 750 ಕೋಟಿ ರೂ.) ಹಣವನ್ನು ತನ್ನ ಸೇನೆಯ ಮೇಲೆ ಖರ್ಚು ಮಾಡಿದ್ದು ಕಳೆದ ವರ್ಷದ ಏಪ್ರಿಲ್ ಗೆ ಹೋಲಿಸಿದರೆ ಇದು ಶೇಕಡಾ 128 ರಷ್ಟು ಹೆಚ್ಚು.

ಉಕ್ರೇನ್ ಮೇಲೆ ಯುದ್ಧ ಸಾರಿದ 4 ತಿಂಗಳ ಅವಧಿಯಲ್ಲಿ ರಷ್ಯಾದ ರಕ್ಷಣಾ ವೆಚ್ಚ ಶೇಕಡಾ 40ರಷ್ಟು ಹೆಚ್ಚಾಗಿದೆ
ಯುದ್ಧಭೂಮಿಯ ದೃಶ್ಯImage Credit source: NPR
TV9 Web
| Edited By: |

Updated on: May 19, 2022 | 7:49 AM

Share

ಮಾಸ್ಕೊ:  ರಷ್ಯಾದ ಆರ್ಥಿಕ ಸಚಿವಾಲಯ (Defense Ministry) ಬುಧವಾರ ಬಿಡುಗಡೆ ಮಾಡಿರುವ ಪೂರ್ವಭಾವಿ ವರದಿಯೊಂದರ (preliminary report) ಪ್ರಕಾರ ಉಕ್ರೇನ್ (Ukraine) ಮೇಲೆ ಪೂರ್ಣ ಪ್ರಮಾಣದ ಯುದ್ಧ ಸಾರಿದ ನಂತರದ 4 ತಿಂಗಳ ಅವಧಿಯಲ್ಲಿ ಆ ದೇಶದ ರಕ್ಷಣಾ ವೆಚ್ಚ ಶೇಕಡಾ 40 ರಷ್ಟು ಹೆಚ್ಚಾಗಿದೆ. ಜನೆವರಿಯಿಂದ ಏಪ್ರಿಲ್ ವರೆಗೆ ರಷ್ಯಾ 1.17 ಟ್ರಿಲಿಯನ್ ರೂಬಲ್ಗಳನ್ನು (ರೂ. 2640 ಕೋಟಿ) ಖರ್ಚು ಮಾಡಿದ್ದು ಇದು 2022 ರ ಸಾಲಿಗೆ ಮಂಡಿಸಲಾಗಿದ್ದ ಬಜೆಟ್ ನ ಸುಮಾರು ಅರ್ಧದಷ್ಟು ಅಥವಾ ಆ ದೇಶದ ಜಿಡಿಪಿಯ ಶೇಕಡಾ 2.6 ರಷ್ಟಿದೆ.

ಆರಂಭದಲ್ಲಿ, ಸಚಿವಾಲಯವು 2022 ಸಾಲಿಗೆ ಶೇಕಡಾ 1 ಅಥವಾ 1.3 ಟ್ರಿಲಿಯನ್ ರೂಬಲ್ಗಳ ಹೆಚ್ಚುವರಿ ಬಜೆಟ್ ಮುನ್ಸೂಚನೆ ನೀಡಿತ್ತು. ಆದರೆ ಈಗ ಕನಿಷ್ಠ 1.6 ಟ್ರಿಲಿಯನ್ ರೂಬಲ್ಗಳ ಕೊರತೆಯನ್ನು ಎದುರಸಲಿದ್ದು, ಅದು ಪಾಶ್ಚಿಮಾತ್ಯ ರಾಷ್ಟ್ರಗಳ ಅಭೂತಪೂರ್ವ ಆರ್ಥಿಕ ನಿರ್ಬಂಧಗಳ ಪರಿಣಾಮವನ್ನು ಎದುರಿಸಲು ಬೆಂಬಲ ಪಾವತಿಗಳಿಗೆ ಅವಕಾಶ ನೀಡುತ್ತದೆ.

ಕೊರತೆಯನ್ನು ನೀಗಿಸಲು ಸರ್ಕಾರವು ತೈಲ ಮತ್ತು ಅನಿಲ ಆದಾಯದಿಂದ ನಿರ್ಮಿಸಲಾದ ರಷ್ಯಾದ ರಾಷ್ಟ್ರೀಯ ಸಂಪತ್ತು ನಿಧಿಯನ್ನು (ಎನ್ ಡಬ್ಲ್ಯೂ ಎಫ್) ಬಳಸುವುದರ ಜೊತೆಗೆ ಫೆಬ್ರುವರಿ 24 ರಂದು ಉಕ್ರೇನ್ ಮೇಲೆ ಯುದ್ಧ ಆರಂಭಿಸಿದ ಬಳಿಕ ತೀವ್ರ ಸ್ವರೂಪದಲ್ಲಿ ಕುಸಿದಿರುವ ಶೇರು ಮತ್ತು ಬಾಂಡ್​ಗಳ ಮೌಲ್ಯ ಬೆಂಬಲಿಸಲು ಸಹ ಉಪಯೋಗಿಸುತ್ತದೆ.

ಎನ್ ಡಬ್ಲ್ಯೂ ಎಫ್ ಮೊತ್ತದ ಸ್ವಲ್ಪ ಭಾಗವನ್ನು ಆರ್ಥಿಕ ಮಾರುಕಟ್ಟೆಗಳಲ್ಲಿ ತೊಡಗಿಸಲಾಗಿದೆ ಮತ್ತು ಫೆಬ್ರುವರಿ ಆರಂಭದ ದಿನಗಳು ಮತ್ತು ಏಪ್ರಿಲ್ ಆವಧಿಯ ನಡುವೆ ಅದರ ಮೌಲ್ಯವು 20 ಬಿಲಿಯನ್ ಡಾಲರ್ ಕುಸಿದು 155 ಬಿಲಿಯನ್ ಡಾಲರ್ ಗಳಿಗೆ ಬಂದಿದೆ ಎಂದು ಸೋಮವಾರ ಬಿಡುಗಡೆ ಮಾಡಲಾದ ವರದಿ ಸೂಚಿಸುತ್ತದೆ.

ಏಪ್ರಿಲ್ ತಿಂಗಳೊಂದರಲ್ಲೇ ರಷ್ಯಾ 628 ಬಿಲಿಯನ್ ರೂಬಲ್ ಗಳಷ್ಟು (ಸುಮಾರು 750 ಕೋಟಿ ರೂ.) ಹಣವನ್ನು ತನ್ನ ಸೇನೆಯ ಮೇಲೆ ಖರ್ಚು ಮಾಡಿದ್ದು ಕಳೆದ ವರ್ಷದ ಏಪ್ರಿಲ್ ಗೆ ಹೋಲಿಸಿದರೆ ಇದು ಶೇಕಡಾ 128 ರಷ್ಟು ಜಾಸ್ತಿ. ಈ ವರ್ಷದಲ್ಲಿ ಮೊದಲ ಬಾರಿಗೆ ಮಾಸಿಕ ಬಜೆಟ್ ಕೊರತೆ ಉಂಟಾಗುವುದಕ್ಕೆ ಅದು ಕಾರಣವಾಗಿದೆ.

ಸುದ್ದಿ ಸಂಸ್ಥೆಗಳು ವಿಷಯವನ್ನು ಖಚಿತಪಡಿಸಿಕೊಳ್ಳಲು ಸಂಪರ್ಕಿಸಿದಾಗ ಸಚಿವಾಲಯವು ಪ್ರತಿಕ್ರಿಯಿಸಲು ನಿರಾಕರಿಸಿತು.

ಪಾಶ್ವಿಮಾತ್ಯರ ಪ್ರಾಬಲ್ಯವನ್ನು ಕಡಿಮೆ ಮಾಡಲು ಮತ್ತು ರಷ್ಯನ್ ಭಾಷೆ ಮಾತಾಡುವ ಜನರ ಮೇಲೆ ನಡೆಯುವ ಶೋಷಣೆಯನ್ನು ನಿಲ್ಲಿಸಲು ಉಕ್ರೇನ್ ಮೇಲೆ ಯುದ್ಧ ಸಾರುವುದು ಅನಿವಾರ್ಯವಾಗಿತ್ತು ಎಂದು ತನ್ನ ಆಕ್ರಮಣವನ್ನು ರಷ್ಯಾ ಸಮರ್ಥಿಸಿಕೊಳ್ಳುತ್ತಿದೆ.

ಅದರೆ ಯುದ್ಧ ಆರಂಭಗೊಂಡ ಬಳಿಕ ಸಾವಿರಾರು ನಾಗರಿಕರು ಕೊಲ್ಲಲ್ಪಟ್ಟಿದ್ದಾರೆ ಮತ್ತು ಸುಮಾರು ಒಂದೂವರೆ ಕೋಟಿ ಉಕ್ರೇನಿಯನ್ನರು ಬೇರೆ ದೇಶಗಳಿಗೆ ಪಲಾಯನ ಮಾಡಿದ್ದಾರೆ.

ರಷ್ಯಾದ ವಾದವನ್ನು ಕೇವಲ ಬೊಗಳೆ ಎಂದಿರುವ ಉಕ್ರೇನ್, ಬಿರುಸು ರಾಷ್ಟ್ರವಾದ, ರಷ್ಯನ್ ಭಾಷೆ ಮಾತಾಡುವವರ ಹಿತಾಸಕ್ತಿಯನ್ನು ಕಾಪಾಡುವುದು ಎಲ್ಲ ಸುಳ್ಳು ಘೋಷಣೆಗಳು, ಅದು ಕೇವಲ ತನ್ನ ಸಾರ್ವಭೌಮತ್ವ ಸ್ಥಾಪಿಸಲು ಯುದ್ಧ ನಡೆಸುತ್ತಿದೆ ಅಂತ ಹೇಳಿದೆ.

ಇದನ್ನೂ ಓದಿ:   Russia Ukraine War: ಮರಿಯುಪೋಲ್ ಪ್ರತಿರೋಧ ಮುಕ್ತಾಯ ಎಂದ ಉಕ್ರೇನ್, ಭವಿಷ್ಯದ ಆಹಾರ ಬಿಕ್ಕಟ್ಟಿಗೆ G7 ಕಾರಣ ಎಂದ ರಷ್ಯಾ

ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಗಂಡನ ಬಗ್ಗೆ ಬಿಗ್ ಬಾಸ್​ನಲ್ಲಿ ಚೈತ್ರಾ ಕುಂದಾಪುರ ಹೇಳಿದ್ದು ಸುಳ್ಳು: ತಂದೆ
ಗಂಡನ ಬಗ್ಗೆ ಬಿಗ್ ಬಾಸ್​ನಲ್ಲಿ ಚೈತ್ರಾ ಕುಂದಾಪುರ ಹೇಳಿದ್ದು ಸುಳ್ಳು: ತಂದೆ
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್