AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇರಾನಿನ ಸ್ನೇಹ, ಅಮೆರಿಕದ ನಂಟು: ಮಧ್ಯಪ್ರಾಚ್ಯದ ಶಾಂತಿ ದೂತನಾಗಿ ಪಾಕಿಸ್ತಾನ ಹೊರಹೊಮ್ಮಿದ್ಹೇಗೆ?

ಮಧ್ಯಪ್ರಾಚ್ಯದಲ್ಲಿ ಅಮೆರಿಕ-ಇರಾನ್ ನಡುವೆ ಏರ್ಪಟ್ಟ ಕದನ ವಿರಾಮದ ಹಿಂದೆ ಪಾಕಿಸ್ತಾನದ ಚಾಣಕ್ಯ ನೀತಿ ಪ್ರಮುಖ ಪಾತ್ರ ವಹಿಸಿದೆ. ಇರಾನ್‌ನೊಂದಿಗಿನ ಭೌಗೋಳಿಕ-ಧಾರ್ಮಿಕ ನಂಟು ಮತ್ತು ಅಮೆರಿಕದೊಂದಿಗಿನ ಮಿಲಿಟರಿ ಸಂಬಂಧಗಳು ಪಾಕಿಸ್ತಾನವನ್ನು ವಿಶ್ವಾಸಾರ್ಹ ಮಧ್ಯವರ್ತಿಯನ್ನಾಗಿ ಮಾಡಿವೆ. ಈ ದುರ್ಬಲ ಒಪ್ಪಂದದ ಮುಂದಿನ ಹಂತದ ಮಾತುಕತೆಗಳು ಏಪ್ರಿಲ್ 10 ರಂದು ನಡೆಯಲಿದ್ದು, ಪಾಕಿಸ್ತಾನದ ರಾಜತಾಂತ್ರಿಕ ಭವಿಷ್ಯಕ್ಕೆ ಇದು ನಿರ್ಣಾಯಕವಾಗಿದೆ.

ಇರಾನಿನ ಸ್ನೇಹ, ಅಮೆರಿಕದ ನಂಟು: ಮಧ್ಯಪ್ರಾಚ್ಯದ ಶಾಂತಿ ದೂತನಾಗಿ ಪಾಕಿಸ್ತಾನ ಹೊರಹೊಮ್ಮಿದ್ಹೇಗೆ?
ಡೊನಾಲ್ಡ್​ ಟ್ರಂಪ್, ಮೊಜ್ತಬಾ, ಮುನೀರ್ Image Credit source: Google Gemini
ನಯನಾ ರಾಜೀವ್
|

Updated on: Apr 09, 2026 | 7:24 AM

Share

ವಾಷಿಂಗ್ಟನ್, ಏಪ್ರಿಲ್ 09: ಮಧ್ಯಪ್ರಾಚ್ಯದಲ್ಲಿ ಉಲ್ಬಣಗೊಂಡಿದ್ದ ಯುದ್ಧದ ಜ್ವಾಲೆಗೆ ತಕ್ಷಣದ ವಿರಾಮ ಬಿದ್ದಿದೆ. ಇರಾನ್(Iran) ಮತ್ತು ಅಮೆರಿಕ ನಡುವೆ ಎರಡು ವಾರಗಳ ಕಾಲದ ಕದನ ವಿರಾಮ ಏರ್ಪಟ್ಟಿದ್ದು, ಈ ಐತಿಹಾಸಿಕ ಒಪ್ಪಂದದ ಹಿಂದೆ ಪಾಕಿಸ್ತಾನದ “ಚಾಣಕ್ಯ ನೀತಿ” ಕೆಲಸ ಮಾಡಿದೆ ಎಂದು ವರದಿಯಾಗಿದೆ. ಆದರೂ ಇಸ್ರೇಲ್ ಲೆಬನಾನ್ ಮೇಲೆ ದಾಳಿ ನಡೆಸಿದ್ದು, ಇದರ ಪರಿಣಾಮ ಇರಾನ್ ಮತ್ತೆ ಹಾರ್ಮುಜ್ ಜಲಸಂಧಿಯನ್ನು ಮುಚ್ಚಿದೆ.

ಇರಾನ್ ವಿದೇಶಾಂಗ ಸಚಿವ ಸಯ್ಯದ್ ಅಬ್ಬಾಸ್ ಅರಘ್ಚಿ, ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಮತ್ತು ಫೀಲ್ಡ್ ಮಾರ್ಷಲ್ ಅಸಿಮ್ ಮುನೀರ್ ಅವರನ್ನು ‘ನನ್ನ ಪ್ರೀತಿಯ ಸಹೋದರರು’ ಎಂದು ಕರೆದು ಕೃತಜ್ಞತೆ ಸಲ್ಲಿಸಿದ್ದಾರೆ. ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಪಾಕಿಸ್ತಾನದ ಶಾಂತಿ ಪ್ರಯತ್ನಗಳನ್ನು ಶ್ವೇತಭವನದ ಪರವಾಗಿ ಒಪ್ಪಿಕೊಂಡಿದ್ದಾರೆ. ಏಪ್ರಿಲ್ 10 ರಂದು ಪಾಕಿಸ್ತಾನದಲ್ಲಿ ಎರಡೂ ದೇಶಗಳ ನಿಯೋಗಗಳು ಮುಂದಿನ ಹಂತದ ಮಾತುಕತೆ ನಡೆಸಲಿವೆ.

ಪಾಕಿಸ್ತಾನ ಹೇಗೆ ಮಧ್ಯವರ್ತಿಯಾಯಿತು? ಒಂದು ಕಡೆ ಇರಾನ್‌ನೊಂದಿಗೆ ಹಂಚಿಕೊಂಡಿರುವ ಭೌಗೋಳಿಕ ಗಡಿ ಮತ್ತು ಧಾರ್ಮಿಕ ನಂಟು, ಇನ್ನೊಂದು ಕಡೆ ಅಮೆರಿಕದೊಂದಿಗೆ ಸುಧಾರಿಸುತ್ತಿರುವ ಮಿಲಿಟರಿ ಸಂಬಂಧಗಳು ಪಾಕಿಸ್ತಾನವನ್ನು ವಿಶ್ವಾಸಾರ್ಹ ಕೊಂಡಿಯನ್ನಾಗಿ ಮಾಡಿದೆ.

ವಿಶ್ವಾಸಕ್ಕೆ ಕಾರಣಗಳು

ಇಸ್ರೇಲ್ ಜೊತೆ ರಾಜತಾಂತ್ರಿಕ ಸಂಬಂಧವಿಲ್ಲದಿರುವುದು, ಟ್ರಂಪ್ ಅವರ ‘ಶಾಂತಿ ಮಂಡಳಿ’ಯಲ್ಲಿ ಪಾಕಿಸ್ತಾನದ ಸದಸ್ಯತ್ವವಿರುವುದು, ಇರಾನ್​ಗೆ ಅರಘ್ಚಿ ಮತ್ತು ಮುನೀರ್ ನಡುವಿನ ನಿಕಟ ಸಂಪರ್ಕವಿದೆ, ಇನ್ನು ಅಮೆರಿಕ ವಿಚಾರಕ್ಕೆ ಬಂದರೆ ಮುನೀರ್ ಅವರು ಟ್ರಂಪ್ ಅವರ ನೆಚ್ಚಿನ ಫೀಲ್ಡ್ ಮಾರ್ಷಲ್.ಪಾಕ್ ಇರಾನ್​ನ 15 ಅಂಶಗಳ ಪ್ರಸ್ತಾವನೆಯನ್ನು ತಲುಪಿಸುವಲ್ಲಿ ಮಧ್ಯಸ್ಥಿಕೆವಹಿಸಿತ್ತು. ಪಾಕಿಸ್ತಾನಕ್ಕೆ ಉನ್ನತ ಮಟ್ಟದ ಅಮೆರಿಕನ್ ಅಧಿಕಾರಿಗಳೊಂದಿಗೆ ಸತತ ಸಂಪರ್ಕವನ್ನೂ ಹೊಂದಿದ್ದಾರೆ.

ಮತ್ತಷ್ಟು ಓದಿ: ಲೆಬನಾನ್ ಮೇಲೆ ಇಸ್ರೇಲ್ ದಾಳಿ ಮುಂದುವರಿಸಿದರೆ ಕದನ ವಿರಾಮದಿಂದ ಹಿಂದೆ ಸರಿಯುತ್ತೇವೆ; ಇರಾನ್ ಎಚ್ಚರಿಕೆ

ಈ ಕದನ ವಿರಾಮವು ಅತ್ಯಂತ ದುರ್ಬಲವಾಗಿದ್ದು, ಯಾವುದೇ ಕ್ಷಣದಲ್ಲಿ ಮುರಿಯಬಹುದು. ಮಾತುಕತೆ ವಿಫಲವಾದರೆ ಅದರ ಹೊಣೆಗಾರಿಕೆ ಪಾಕಿಸ್ತಾನದ ಮೇಲೆ ಬೀಳುವ ಸಾಧ್ಯತೆಯಿದೆ. ಒಪ್ಪಂದವನ್ನು ಬಲವಂತವಾಗಿ ಜಾರಿಗೊಳಿಸುವ ಮಿಲಿಟರಿ ಅಥವಾ ಆರ್ಥಿಕ ಶಕ್ತಿ ಇಸ್ಲಾಮಾಬಾದ್‌ಗೆ ಇಲ್ಲ. ಯುದ್ಧ ಮುಂದುವರೆದರೆ ಇಂಧನ ಬೆಲೆ ಏರಿಕೆ ಮತ್ತು ಅಫ್ಘಾನಿಸ್ತಾನ ಗಡಿಯ ಬಿಕ್ಕಟ್ಟು ಪಾಕಿಸ್ತಾನವನ್ನು ಮತ್ತಷ್ಟು ಹೈರಾಣಾಗಿಸಬಹುದು.

ಪಾಕಿಸ್ತಾನವು ಸದ್ಯಕ್ಕೆ ಜಾಗತಿಕ ವೇದಿಕೆಯಲ್ಲಿ ದೊಡ್ಡ ಮಟ್ಟದ ರಾಜತಾಂತ್ರಿಕ ಅಂಕಗಳನ್ನು ಗಳಿಸಿದೆ. ಆದರೆ, ಇಸ್ಲಾಮಾಬಾದ್ ಮಾತುಕತೆಯು ಕೇವಲ ತಾತ್ಕಾಲಿಕ ವಿರಾಮವೋ ಅಥವಾ ಶಾಶ್ವತ ಶಾಂತಿಯೋ ಎಂಬುದು ಏಪ್ರಿಲ್ 10 ರಂದು ನಿರ್ಧಾರವಾಗಲಿದೆ. ಅಮೆರಿಕ ಮತ್ತು ಇರಾನ್ ನಡುವಿನ ಕದನ ವಿರಾಮವು ಅತ್ಯಂತ ದುರ್ಬಲವಾಗಿದ್ದು, ಮುಂಬರುವ ದಿನಗಳು ವಾಷಿಂಗ್ಟನ್ ಮತ್ತು ಟೆಹ್ರಾನ್ ಮಾತುಕತೆಗಳನ್ನು ಹೇಗೆ ಮುಂದಕ್ಕೆ ಕೊಂಡೊಯ್ಯುತ್ತವೆ ಎಂಬುದನ್ನು ತೋರಿಸುತ್ತವೆ.

ಆದ್ದರಿಂದ ಪಾಕಿಸ್ತಾನವು ಮಧ್ಯವರ್ತಿಯಾಗಿ ಹೊರಹೊಮ್ಮುವ ಮೂಲಕ ರಾಜತಾಂತ್ರಿಕ ಅಂಕಗಳನ್ನು ಗಳಿಸಬಹುದು, ಆದರೆ ಈ ಒಪ್ಪಂದದ ಕುಸಿತವು ಅದರ ವಿಶ್ವಾಸಾರ್ಹತೆಗೆ ದೊಡ್ಡ ಹೊಡೆತವಾಗುತ್ತದೆ. ತನ್ನದೇ ಆದ ಆರ್ಥಿಕ ಮತ್ತು ಗಡಿ ಬಿಕ್ಕಟ್ಟುಗಳ ನಡುವೆಯೂ, ಪಾಕಿಸ್ತಾನವು ಎರಡೂ ಕಡೆಯವರೊಂದಿಗೆ ಸಮಾನ ದೂರ ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಗಿದ್ದು ಈ ರಾಜತಾಂತ್ರಿಕ ವಿಜಯಕ್ಕೆ ಕಾರಣವಾಯಿತು.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us
Nayana Rajeev
Nayana Rajeev

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More
ನಟಿ ಶ್ರುತಿ ಪ್ರಕಾಶ್‌ಗೆ ಡೈಮಂಡ್ ಉಂಗುರ ತೊಡಿಸಿ ಪ್ರಪೋಸ್ ಮಾಡಿದ ಕರಣ್
ನಟಿ ಶ್ರುತಿ ಪ್ರಕಾಶ್‌ಗೆ ಡೈಮಂಡ್ ಉಂಗುರ ತೊಡಿಸಿ ಪ್ರಪೋಸ್ ಮಾಡಿದ ಕರಣ್
ಕಾಣೆಯಾದ ಹುಡುಗಿಯನ್ನು ಹುಡುಕಲು ಗಾಡಿಯಲ್ಲಿ ಡೀಸೆಲ್ ಇಲ್ಲ ಎಂದ ಪೊಲೀಸ್
ಕಾಣೆಯಾದ ಹುಡುಗಿಯನ್ನು ಹುಡುಕಲು ಗಾಡಿಯಲ್ಲಿ ಡೀಸೆಲ್ ಇಲ್ಲ ಎಂದ ಪೊಲೀಸ್
ಕೈದಿಗಳಿಗೆ ಅಲೋಕ್ ಕುಮಾರ್ ಬಿಗ್ ಶಾಕ್: ಜೈಲುಗಳಲ್ಲಿ ಭಾರಿ ಬದಲಾವಣೆ
ಕೈದಿಗಳಿಗೆ ಅಲೋಕ್ ಕುಮಾರ್ ಬಿಗ್ ಶಾಕ್: ಜೈಲುಗಳಲ್ಲಿ ಭಾರಿ ಬದಲಾವಣೆ
3 ದಿನಗಳಿಂದ ವಿದ್ಯುತ್​​ ಕಡಿತ: ಹೆಸ್ಕಾಂ ವಿರುದ್ಧ ಸಾರ್ವಜನಿಕರ ಪ್ರತಿಭಟನೆ
3 ದಿನಗಳಿಂದ ವಿದ್ಯುತ್​​ ಕಡಿತ: ಹೆಸ್ಕಾಂ ವಿರುದ್ಧ ಸಾರ್ವಜನಿಕರ ಪ್ರತಿಭಟನೆ
ಹಿರಿಯೂರು ಉಪಚುನಾವಣೆ ಮೇಲೆ ಜೆಡಿಎಸ್​​ ಕಣ್ಣು: ದಳಪತಿಗಳ ಲೆಕ್ಕಾಚಾರವೇನು?
ಹಿರಿಯೂರು ಉಪಚುನಾವಣೆ ಮೇಲೆ ಜೆಡಿಎಸ್​​ ಕಣ್ಣು: ದಳಪತಿಗಳ ಲೆಕ್ಕಾಚಾರವೇನು?
ಗುರು ಸಂಚಾರದಿಂದ ಮಿಥುನ ರಾಶಿಯವರಿಗೆ ಆರ್ಥಿಕ ವೃದ್ಧಿ ಮತ್ತು ಶುಭ ಯೋಗ ಶುರು
ಗುರು ಸಂಚಾರದಿಂದ ಮಿಥುನ ರಾಶಿಯವರಿಗೆ ಆರ್ಥಿಕ ವೃದ್ಧಿ ಮತ್ತು ಶುಭ ಯೋಗ ಶುರು
ಪ್ರವಾಸಿಗರ ಕ್ಯಾಮೆರಾಗೆ ಬಿಂದಾಸ್ ಪೋಸ್ ನೀಡಿದ ಜೋಡಿ ಹುಲಿಗಳು!
ಪ್ರವಾಸಿಗರ ಕ್ಯಾಮೆರಾಗೆ ಬಿಂದಾಸ್ ಪೋಸ್ ನೀಡಿದ ಜೋಡಿ ಹುಲಿಗಳು!
ವಸ್ತುಗಳನ್ನು ಮನೆಗೆ ಕೊಡಲು ಬಂದ ಡೆಲಿವರಿ ಬಾಯ್ ಮಾಡಿದ್ದೇನು ನೋಡಿ
ವಸ್ತುಗಳನ್ನು ಮನೆಗೆ ಕೊಡಲು ಬಂದ ಡೆಲಿವರಿ ಬಾಯ್ ಮಾಡಿದ್ದೇನು ನೋಡಿ
ವನ್ಯಜೀವಿ ಛಾಯಾಗ್ರಾಹಕಿಯಾದ ಸೋನಲ್ ಮೊಂತೆರೋ
ವನ್ಯಜೀವಿ ಛಾಯಾಗ್ರಾಹಕಿಯಾದ ಸೋನಲ್ ಮೊಂತೆರೋ
ಸಂಜೆಯಾದರೆ ರಸ್ತೆಗಿಳಿಯುವ ಈ ಒಂಟಿ ಸಲಗಕ್ಕೆ ವಾಹನಗಳೇ ಟಾರ್ಗೆಟ್!
ಸಂಜೆಯಾದರೆ ರಸ್ತೆಗಿಳಿಯುವ ಈ ಒಂಟಿ ಸಲಗಕ್ಕೆ ವಾಹನಗಳೇ ಟಾರ್ಗೆಟ್!