AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

27 ವರ್ಷಗಳ ಹಿಂದಿನ ಹೆಪ್ಪುಗಟ್ಟಿದ ಭ್ರೂಣಕ್ಕೆ ಈಗ ಬಂತು ಜೀವ!

1992ರ ಅಕ್ಟೋಬರ್​ನಲ್ಲಿ ಹೆಪ್ಪುಗಟ್ಟಿದ ಭ್ರೂಣದಿಂದ ಒಂದು ತಿಂಗಳ ಹಿಂದೆಯಷ್ಟೇ ಮೊಲ್ಲಿ ಜನಿಸಿದಳು. 3 ಕೆ.ಜಿ ತೂಕ ಹೊಂದಿರುವ ಮೊಲ್ಲಿ ಈಗಾಗಲೇ ಇತಿಹಾಸವ ನಿರ್ಮಿಸಿದ್ದಾಳೆ. ಹೆಪ್ಪುಗಟ್ಟಿದ ಸ್ಥಿತಿಯಲ್ಲಿ ಪತ್ತೆಯಾದ ಭ್ರೂಣ 27 ವರ್ಷಗಳ ಕಾಲ ಹಾಗೆ ಇದ್ದು, ನಂತರ ಜನ್ಮ ಪಡೆದಿರುವುದರಿಂದ ವಿಶ್ವ ದಾಖಲೆ ಮಾಡಿದೆ.

27 ವರ್ಷಗಳ ಹಿಂದಿನ ಹೆಪ್ಪುಗಟ್ಟಿದ ಭ್ರೂಣಕ್ಕೆ ಈಗ ಬಂತು ಜೀವ!
ಮೊಲ್ಲಿ ಗಿಬ್ಸನ್ ಮತ್ತು ಕುಟುಂಬ
preethi shettigar
| Edited By: |

Updated on: Dec 03, 2020 | 11:37 AM

Share

ವಾಷಿಂಗ್ಟನ್: ಅಚ್ಚರಿಗಳು ಆಧುನಿಕ ಕಾಲದಲ್ಲಿ ಒಂದರ ಮೇಲೆ ಒಂದರಂತೆ ನಡೆಯುತ್ತಲೇ ಇವೆ. ಇದಕ್ಕೆ ಮತ್ತೊಂದು ಸಾಕ್ಷಿ ಟೀನಾ ಮತ್ತು ಬೆನ್ ಗಿಬ್ಸನ್​ಗೆ ಜನಿಸಿರುವ ಮಗು. ಮೊಲ್ಲಿ ಗಿಬ್ಸನ್ ಎಂದು ಹೆಸರಿಡಲಾದ ಒಂದು ತಿಂಗಳಿನ ಈ ಮಗುವಿನ ವಿಶೇಷವೆಂದರೆ 27 ವರ್ಷಗಳಲ್ಲಿ ಯಾವಾಗಬೇಕಾದರೂ ಈ ಮಗು ಜನಿಸಬಹುದಿತ್ತು. ಅದು ಹೇಗೆ ಎಂದು ಹುಬ್ಬೇರಿಸುವವರಿಗೆ ಉತ್ತರ ಇಲ್ಲಿದೆ.

ಅಮೆರಿಕಾದ ಟೀನಾ ಮತ್ತು ಬೆನ್ ಗಿಬ್ಸನ್ ಹಲವು ವರ್ಷಗಳಿಂದ ಮಗುವಿಗಾಗಿ ದೇವರಲ್ಲಿ ಪ್ರತಿನಿತ್ಯ ಪ್ರಾರ್ಥನೆಯನ್ನು ಸಲ್ಲಿಸುತ್ತಿದ್ದರು. ಟೀನಾ ತನ್ನ ಬಂಜೆತನದಿಂದಾಗಿ ಬೇಸತ್ತು ಹೋಗಿದ್ದರು. ಆದರೆ ಈಗ ಈ ದಂಪತಿಗೆ ಇಬ್ಬರು ಮಕ್ಕಳಿದ್ದು, ಕುಟುಂಬದಲ್ಲಿ ಸಂತೋಷ ಸೃಷ್ಟಿಯಾಗಿದೆ. ವೈದ್ಯಕೀಯ ಲೋಕದಲ್ಲಿನ ಈ ಪ್ರಗತಿಗೆ ದಂಪತಿ ಧನ್ಯವಾದ ಹೇಳಿದ್ದಾರೆ.

1992ರ ಅಕ್ಟೋಬರ್​ನಲ್ಲಿ ಹೆಪ್ಪುಗಟ್ಟಿದ ಭ್ರೂಣದಿಂದ ಒಂದು ತಿಂಗಳ ಹಿಂದೆಯಷ್ಟೇ ಮೊಲ್ಲಿ ಜನಿಸಿದಳು. 3 ಕೆ.ಜಿ ತೂಕ ಹೊಂದಿರುವ ಮೊಲ್ಲಿ ಈಗಾಗಲೇ ಇತಿಹಾಸವನ್ನು ನಿರ್ಮಿಸಿದ್ದಾಳೆ. ಹೆಪ್ಪುಗಟ್ಟಿದ ಸ್ಥಿತಿಯಲ್ಲಿದ್ದ ಭ್ರೂಣ 27 ವರ್ಷಗಳ ಕಾಲ ಹಾಗೆಯೇ ಇದ್ದು, ನಂತರ ಜನ್ಮ ಪಡೆದಿರುವುದರಿಂದ ವಿಶ್ವ ದಾಖಲೆ ಮಾಡಿದೆ.

ಮೊಲ್ಲಿ ಸಹೋದರಿ ಎಮ್ಮಾ 2017ರಲ್ಲಿ ದಾಖಲೆ ಬರೆದಿದ್ದರು, ಸದ್ಯ ಮೊಲ್ಲಿ ಅಕ್ಕನ ದಾಖಲೆ ಮುರಿದು ಹೊಸ ದಾಖಲೆಯನ್ನು ಸೃಷ್ಟಿಸಿದ್ದಾರೆ ಎಂದು ಸಿಎನ್​ಎನ್​ ವರದಿ ತಿಳಿಸಿದೆ.

ಇಷ್ಟು ದಿನಗಳ ಕಾಲ ಮಗುವಿನ ನಿರೀಕ್ಷೆಯಲ್ಲಿ ಇದ್ದೆವು. ಈಗ ನಾವು ಮಗುವನ್ನು ಪಡೆದಿದ್ದೇವೆ. ಆ ಸನ್ನಿವೇಶವನ್ನು ನಾವು ಪ್ರತಿ ಕ್ಷಣ ನೆನಸುತ್ತಿದ್ದೇವೆ ಎಂದು ಟೀನಾ ಹೇಳಿದರು.

ಟೀನಾ ಮತ್ತು ಬೆನ್ ಗಿಬ್ಸನ್ ಭ್ರೂಣ ದತ್ತು ಪಡೆಯುವಿಕೆ ಪ್ರಕ್ರಿಯೆಯ ಮೂಲಕ ಪೋಷಕರಾದವರು. ಹೆಪ್ಪುಗಟ್ಟಿದ ಭ್ರೂಣಗಳನ್ನು ಸಂಗ್ರಹಿಸುವ ಲಾಭೋದ್ದೇಶವಿಲ್ಲದ ನಾಕ್ಸ್​ವಿಲ್ಲೆಯಲ್ಲಿನ ರಾಷ್ಟ್ರೀಯ ಭ್ರೂಣ ದಾನ ಕೇಂದ್ರದ (NEDC) ಸಹಾಯದಿಂದ ಇದು ಸಂಭವಿಸಿತು.

ಇದು ಖಂಡಿತವಾಗಿಯೂ ವರ್ಷಗಳ ಹಿಂದೆ ಬಳಸಿದ ತಂತ್ರಜ್ಞಾನ ಮತ್ತು ಭವಿಷ್ಯದ ಬಳಕೆಗಾಗಿ ಭ್ರೂಣಗಳನ್ನು ಅನಿರ್ದಿಷ್ಟ ಸಮಯದೊಳಗೆ ಸಂರಕ್ಷಿಸುವ ಸಾಮರ್ಥ್ಯವನ್ನು ಪ್ರತಿಬಿಂಬಿಸುತ್ತದೆ ಎಂದು ಎನ್​ಇಡಿಸಿಯ ನಿರ್ದೇಶಕ ಕರೋಲ್ ಸೊಮರ್ಫೆಲ್ಟ್ ಉಲ್ಲೇಖಿಸಿದ್ದಾರೆ.

ಚಿತ್ತರಂಜನ್ ಸರ್ಕಲ್ ಬಳಿ ಕಸದ ಬುಟ್ಟಿಗೆ ನವಜಾತ ಶಿಶು ಎಸೆದುಹೋದ ಪಾಪಿ ತಾಯಿ

ಸ್ಫೋಟಕ ಬ್ಯಾಟರ್​ಗಳನ್ನು ಪೆವಿಲಿಯನ್​ಗಟ್ಟಿದ ಶ್ರೇಯಾಂಕ
ಸ್ಫೋಟಕ ಬ್ಯಾಟರ್​ಗಳನ್ನು ಪೆವಿಲಿಯನ್​ಗಟ್ಟಿದ ಶ್ರೇಯಾಂಕ
ಪೊಲೀಸ್ ಠಾಣೆಗೆ ಬೆಂಕಿ ಹಚ್ಚುತ್ತೇನೆ; ಬಜರಂಗದಳದ ವ್ಯಕ್ತಿಯಿಂದ ಬೆದರಿಕೆ
ಪೊಲೀಸ್ ಠಾಣೆಗೆ ಬೆಂಕಿ ಹಚ್ಚುತ್ತೇನೆ; ಬಜರಂಗದಳದ ವ್ಯಕ್ತಿಯಿಂದ ಬೆದರಿಕೆ
ಬಸ್​​ನಲ್ಲಿ 240 ಗ್ರಾಂ ಚಿನ್ನ ಕದ್ದಾಕೆ ಸಿಕ್ಕಿಬಿದ್ದಿದ್ಹೇಗೆ ಗೊತ್ತಾ?
ಬಸ್​​ನಲ್ಲಿ 240 ಗ್ರಾಂ ಚಿನ್ನ ಕದ್ದಾಕೆ ಸಿಕ್ಕಿಬಿದ್ದಿದ್ಹೇಗೆ ಗೊತ್ತಾ?
ಹಠವಾದಿ, ಛಲಗಾರ್ತಿ, ಕಿಚ್ಚು ಇತ್ಯಾದಿ; ಅಶ್ವಿನಿ ಗೌಡಗೆ ಸಿಕ್ಕ ಬಿರುದು ನೋಡಿ
ಹಠವಾದಿ, ಛಲಗಾರ್ತಿ, ಕಿಚ್ಚು ಇತ್ಯಾದಿ; ಅಶ್ವಿನಿ ಗೌಡಗೆ ಸಿಕ್ಕ ಬಿರುದು ನೋಡಿ
ಸಿದ್ದರಾಮಯ್ಯ ಅಧಿಕಾರದಿಂದ ಇಳಿಯೋದು ಯಾವಾಗ?: ಕೋಡಿಮಠ ಶ್ರೀ ಸ್ಪೋಟಕ ಭವಿಷ್ಯ
ಸಿದ್ದರಾಮಯ್ಯ ಅಧಿಕಾರದಿಂದ ಇಳಿಯೋದು ಯಾವಾಗ?: ಕೋಡಿಮಠ ಶ್ರೀ ಸ್ಪೋಟಕ ಭವಿಷ್ಯ
ಕೂಲಿ ಕಾರ್ಮಿಕ ಮಹಿಳೆ ಜತೆ ಲವ್ವಿಡವ್ವಿ: ಗುತ್ತಿಗೆದಾರನನ್ನ ಕೊಚ್ಚಿ ಕೊಂದ್ರು
ಕೂಲಿ ಕಾರ್ಮಿಕ ಮಹಿಳೆ ಜತೆ ಲವ್ವಿಡವ್ವಿ: ಗುತ್ತಿಗೆದಾರನನ್ನ ಕೊಚ್ಚಿ ಕೊಂದ್ರು
ನಮ್ಮಿಂದ ತಪ್ಪಾಗಿದೆ ಕ್ಷಮಿಸಿ: ಕನ್ನಡಿಗರ ಕ್ಷಮೆಯಾಚಿಸಿದ ಬೆಂಗಳೂರಿನ ಕಂಪನಿ
ನಮ್ಮಿಂದ ತಪ್ಪಾಗಿದೆ ಕ್ಷಮಿಸಿ: ಕನ್ನಡಿಗರ ಕ್ಷಮೆಯಾಚಿಸಿದ ಬೆಂಗಳೂರಿನ ಕಂಪನಿ
ರಿಜ್ವಾನ್ ಬ್ಯಾಟಿಂಗ್‌ ಅರ್ಧಕ್ಕೆ ನಿಲ್ಲಿಸಿ ವಾಪಸ್ ಕರೆಸಿಕೊಂಡ ನಾಯಕ
ರಿಜ್ವಾನ್ ಬ್ಯಾಟಿಂಗ್‌ ಅರ್ಧಕ್ಕೆ ನಿಲ್ಲಿಸಿ ವಾಪಸ್ ಕರೆಸಿಕೊಂಡ ನಾಯಕ
ಸಿದ್ರಾಮಯ್ಯ ಮೈಸೂರು, ಡಿಕೆಶಿ ಕನಕಪುರ ಇದ್ದಂಗೆ ನಮ್ಗೆ ಆಗ್ಬೇಕು ಎಂದ ಖರ್ಗೆ
ಸಿದ್ರಾಮಯ್ಯ ಮೈಸೂರು, ಡಿಕೆಶಿ ಕನಕಪುರ ಇದ್ದಂಗೆ ನಮ್ಗೆ ಆಗ್ಬೇಕು ಎಂದ ಖರ್ಗೆ
ಲಕ್ಕುಂಡಿಯಲ್ಲಿ ಸಿಕ್ಕ ನಿಧಿಗೆ ವಾರಸುದಾರರು ಯಾರು? ಕಾಯ್ದೆ ಹೇಳೋದೇನು?
ಲಕ್ಕುಂಡಿಯಲ್ಲಿ ಸಿಕ್ಕ ನಿಧಿಗೆ ವಾರಸುದಾರರು ಯಾರು? ಕಾಯ್ದೆ ಹೇಳೋದೇನು?