AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಒಮಿಕ್ರಾನ್​ ವಿರುದ್ಧ ಹೋರಾಟಕ್ಕೆ ಕೊವಿಡ್ 19 ಲಸಿಕೆ ಬೂಸ್ಟರ್​ ಡೋಸ್​ ಅಗತ್ಯ?-ಡಿ.7ಕ್ಕೆ ವಿಶ್ವ ಆರೋಗ್ಯ ಸಂಸ್ಥೆ ಸಭೆ

ಕೊರೊನಾ ಲಸಿಕೆ ಅಭಿಯಾನ ಜಾಗತಿಕವಾಗಿದೆ. ಕೆಲವು ದೇಶಗಳಲ್ಲಿ ಒಂದೇ ಡೋಸ್​ನ ಲಸಿಕೆ ನೀಡಲಾಗುತ್ತಿದ್ದರೆ, ಭಾರತ ಸೇರಿ ಒಂದಷ್ಟು ರಾಷ್ಟ್ರಗಳಲ್ಲಿ ಎರಡು ಡೋಸ್​ಗಳ ಲಸಿಕೆ ಕೊಡಲಾಗುತ್ತಿದೆ.

ಒಮಿಕ್ರಾನ್​ ವಿರುದ್ಧ ಹೋರಾಟಕ್ಕೆ ಕೊವಿಡ್ 19 ಲಸಿಕೆ ಬೂಸ್ಟರ್​ ಡೋಸ್​ ಅಗತ್ಯ?-ಡಿ.7ಕ್ಕೆ ವಿಶ್ವ ಆರೋಗ್ಯ ಸಂಸ್ಥೆ ಸಭೆ
ಸಾಂಕೇತಿಕ ಚಿತ್ರ
TV9 Web
| Updated By: Lakshmi Hegde|

Updated on: Dec 04, 2021 | 12:57 PM

Share

ವಿಶ್ವಕ್ಕೀಗ ಒಮ್ರಿಕಾನ್ (Omicron variant)​ ಭೀತಿ ಆವರಿಸಿದೆ. ದಕ್ಷಿಣ ಆಫ್ರಿಕಾದಲ್ಲಿ ಮೊದಲು ಕಾಣಿಸಿಕೊಂಡ ವೈರಸ್​ ಇದೀಗ 38ಕ್ಕೂ ಹೆಚ್ಚು ರಾಷ್ಟ್ರಗಳಿಗೆ ವ್ಯಾಪಿಸಿದೆ. ಈ ಮಧ್ಯೆ ಈಗಾಗಲೇ ಕೊಡುತ್ತಿರುವ ಕೊರೊನಾ ಲಸಿಕೆಯ ಡೋಸ್​ ಪ್ರಮಾಣ ಒಮಿಕ್ರಾನ್​ ವಿರುದ್ಧ ಹೋರಾಡಬಲ್ಲದಾ? ಅಥವಾ ಬೂಸ್ಟರ್​ ಡೋಸ್ ಬೇಕಾಗುತ್ತದೆಯಾ ಎಂಬುದು ಬಹುವಾಗಿ ಚರ್ಚೆಯಾಗುತ್ತಿರುವ ವಿಚಾರ. ಇನ್ನೂ ಈ ಬಗ್ಗೆ ಆರೋಗ್ಯ ತಜ್ಞರೂ ಕೂಡ ನಿಖರವಾಗಿ ಏನನ್ನೂ ಹೇಳುತ್ತಿಲ್ಲ.  ಹೀಗಾಗಿ ಒಮ್ರಿಕಾನ್​ ವಿರುದ್ಧ ರಕ್ಷಣೆಗೆ ಕೊವಿಡ್​ 19 ಲಸಿಕೆಗಳ ಬೂಸ್ಟರ್​ ಡೋಸ್​​ಗಳ ಅಗತ್ಯ ಮತ್ತು ಅದರ ಶಿಫಾರಸ್ಸುಗಳ ಬಗ್ಗೆ ಚರ್ಚಿಸಲು ವಿಶ್ವ ಆರೋಗ್ಯ ಸಂಸ್ಥೆ (World Health Organisation)ಯ ಕಾರ್ಯತಂತ್ರದ ಸಲಹೆಗಾರರ ಗುಂಪು (SAGE) ಡಿಸೆಂಬರ್​ 7ರಂದು ಸಭೆ ನಡೆಸಲಿದೆ. 

ಈಗ ಕೊರೊನಾ ಲಸಿಕೆ ಅಭಿಯಾನ ಜಾಗತಿಕವಾಗಿದೆ. ಕೆಲವು ದೇಶಗಳಲ್ಲಿ ಒಂದೇ ಡೋಸ್​ನ ಲಸಿಕೆ ನೀಡಲಾಗುತ್ತಿದ್ದರೆ, ಭಾರತ ಸೇರಿ ಒಂದಷ್ಟು ರಾಷ್ಟ್ರಗಳಲ್ಲಿ ಎರಡು ಡೋಸ್​ಗಳ ಲಸಿಕೆ ಕೊಡಲಾಗುತ್ತಿದೆ. ಸದ್ಯಕ್ಕಂತೂ ಬೂಸ್ಟರ್​ ಡೋಸ್​​ಗಳ ಅಗತ್ಯವಿದೆ ಎಂಬುದಕ್ಕೆ ಯಾವುದೇ ಪುರಾವೆಗಳೂ ಸಿಗುತ್ತಿಲ್ಲ ಎಂದು ಆರೋಗ್ಯ ತಜ್ಞರು ಹೇಳಿದ್ದರು. ಹಾಗೇ, ಡಬ್ಲ್ಯೂಎಚ್​ಒಗೂ ಕೂಡ ಅನಿರ್ದಷ್ಟತೆಯೇ ಇತ್ತು. ಆದರೆ ಈಗ ಹರಡುತ್ತಿರುವ ಹೊಸ ಸೋಂಕು ಒಮಿಕ್ರಾನ್​ ವಿರುದ್ಧ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಬೂಸ್ಟರ್ ಡೋಸ್​ಗಳು ಬೇಕಾಗುತ್ತವಾ ಎಂಬ ಚರ್ಚೆ ವ್ಯಾಪಕವಾಗಿ ನಡೆಯುತ್ತಿದೆ.  ಅದರ ಬೆನ್ನಲ್ಲೇ ಡಬ್ಲ್ಯೂಎಚ್​ಒ ಡಿ.7ಕ್ಕೆ ಸಭೆ ನಡೆಸಲಿದ್ದು, ನಂತರವಷ್ಟೇ ಬೂಸ್ಟರ್​ ಡೋಸ್​ಗಳ ಬಗ್ಗೆ ಒಂದು ನಿಖರತೆ ಸಿಗಲಿದೆ.

ಭಾರತದಲ್ಲೂ ಕೂಡ ಕೊರೊನಾ ಲಸಿಕೆ ಬೂಸ್ಟರ್​ ಡೋಸ್​ಗಳ ನೀಡಿಕೆ ಬಗ್ಗೆ ಚರ್ಚೆ ನೀಡುತ್ತಿದೆ. ಆದರೆ ಇದುವರೆಗೆ ಬೂಸ್ಟರ್​ ಡೋಸ್​ ನೀಡಿಕೆಯ ಅಗತ್ಯ ಕಂಡುಬಂದಿಲ್ಲ ಎಂದು ನೀತಿ ಆಯೋಗದ ಸದಸ್ಯ ವಿ.ಕೆ.ಪೌಲ್ ಸೇರಿ ವಿವಿಧ ಪ್ರಮುಖ ಆರೋಗ್ಯ ತಜ್ಞರು ಹೇಳಿದ್ದರು. ಆದರೆ ದೇಶದಲ್ಲಿ 40 ವರ್ಷ ಮೇಲ್ಪಟ್ಟವರಿಗೆ ಕೊವಿಡ್​ 19 ಲಸಿಕೆ ಬೂಸ್ಟರ್ ಡೋಸ್​ ನೀಡುವ ಬಗ್ಗೆ ಪರಿಗಣಿಸಬೇಕು ಎಂದು ಭಾರತೀಯ SARS-CoV-2 ಜೀನೋಮಿಕ್ಸ್ ಕನ್ಸೋರ್ಟಿಯಂ (ಜಿನೋಮ್​ ಸಿಕ್ವೆನ್ಸಿಂಗ್​​ನ್ನು ಕೈಗೊಳ್ಳುವ ಪ್ರಯೋಗಾಲಯಗಳ ಒಕ್ಕೂಟ-ಐಎನ್​​ಎಸ್​ಎಸಿಒಜಿ) ಹೇಳಿದೆ.  ಹಾಗೊಮ್ಮೆ ವಿಶ್ವ ಆರೋಗ್ಯ ಸಂಸ್ಥೆಯ ಸಭೆಯ ಬಳಿಕ ಪ್ರತಿಯೊಬ್ಬರೂ ಬೂಸ್ಟರ್ ಡೋಸ್ ಅಥವಾ ಮೂರನೇ ಡೋಸ್​ ಲಸಿಕೆ ಪಡೆಯಬೇಕು ಎಂದು ಹೇಳಿದರೆ, ನಮ್ಮ ದೇಶದಲ್ಲೂ ಕೂಡ ಸರ್ಕಾರಗಳು ಮುಂದಿನ ಕ್ರಮದ ಬಗ್ಗೆ ಚರ್ಚಿಸಲಿವೆ.

ಇದನ್ನೂ ಓದಿ:  ನಾಪತ್ತೆಯಾಗಿದ್ದ ದಕ್ಷಿಣ ಆಫ್ರಿಕಾ ಪ್ರಯಾಣಿಕರನ್ನು ಪತ್ತೆ ಮಾಡಿದ ಬಿಬಿಎಂಪಿ

ಟೈಟ್​ ಆಗಿ ಪಬ್​ನಲ್ಲಿ ಗಲಾಟೆ ಮಾಡಿದ್ದ ಇನ್ಸ್‌ಪೆಕ್ಟರ್ ಅಮಾನತು
ಟೈಟ್​ ಆಗಿ ಪಬ್​ನಲ್ಲಿ ಗಲಾಟೆ ಮಾಡಿದ್ದ ಇನ್ಸ್‌ಪೆಕ್ಟರ್ ಅಮಾನತು
ಗವಿಸಿದ್ದಪ್ಪ ಕೊಲೆಗೆ ಮತ್ತೊಂದು ಟ್ವಿಸ್ಟ್: ಸ್ಫೋಟಕ ಅಂಶ ಬಿಚ್ಚಿಟ್ಟ ತಾಯಿ
ಗವಿಸಿದ್ದಪ್ಪ ಕೊಲೆಗೆ ಮತ್ತೊಂದು ಟ್ವಿಸ್ಟ್: ಸ್ಫೋಟಕ ಅಂಶ ಬಿಚ್ಚಿಟ್ಟ ತಾಯಿ
ಆತ್ಮಹತ್ಯೆಗೆ ಯತ್ನಿಸಿದವನಿಗೆ ಕೊನೆ ಕ್ಷಣದಲ್ಲಿ ಹುಟ್ಟಿತು ಬದುಕಬೇಕೆಂಬ ಆಸೆ
ಆತ್ಮಹತ್ಯೆಗೆ ಯತ್ನಿಸಿದವನಿಗೆ ಕೊನೆ ಕ್ಷಣದಲ್ಲಿ ಹುಟ್ಟಿತು ಬದುಕಬೇಕೆಂಬ ಆಸೆ
ಪ್ರವಾಹದಲ್ಲಿ ಸಿಲುಕಿದ್ದ ಶಾಲಾ ಮಕ್ಕಳನ್ನು ಕಾಪಾಡಿದ ಮುಂಬೈ ಪೊಲೀಸರು
ಪ್ರವಾಹದಲ್ಲಿ ಸಿಲುಕಿದ್ದ ಶಾಲಾ ಮಕ್ಕಳನ್ನು ಕಾಪಾಡಿದ ಮುಂಬೈ ಪೊಲೀಸರು
ಮನೆಗೆ ಬಂದ ಶುಭಾಂಶು ಶುಕ್ಲಾಗೆ ಪ್ರಧಾನಿ ಮೋದಿಯಿಂದ ಅಪ್ಪುಗೆಯ ಸ್ವಾಗತ
ಮನೆಗೆ ಬಂದ ಶುಭಾಂಶು ಶುಕ್ಲಾಗೆ ಪ್ರಧಾನಿ ಮೋದಿಯಿಂದ ಅಪ್ಪುಗೆಯ ಸ್ವಾಗತ
ಜೈಲು ಚೆಕ್ ಪೋಸ್ಟ್ ಬಳಿ ವಿಜಯಲಕ್ಷ್ಮಿ ದರ್ಶನ್​ ಕಾರು ತಡೆದ ಜೈಲು ಸಿಬ್ಬಂದಿ
ಜೈಲು ಚೆಕ್ ಪೋಸ್ಟ್ ಬಳಿ ವಿಜಯಲಕ್ಷ್ಮಿ ದರ್ಶನ್​ ಕಾರು ತಡೆದ ಜೈಲು ಸಿಬ್ಬಂದಿ
ಧರ್ಮಸ್ಥಳ ಪ್ರಕರಣ ತನಿಖೆಯಲ್ಲಿ ಏನೇನಾಯ್ತು? ಗೃಹ ಸಚಿವ ಕೊಟ್ಟ ಮಾಹಿತಿ
ಧರ್ಮಸ್ಥಳ ಪ್ರಕರಣ ತನಿಖೆಯಲ್ಲಿ ಏನೇನಾಯ್ತು? ಗೃಹ ಸಚಿವ ಕೊಟ್ಟ ಮಾಹಿತಿ
ದರ್ಶನ್ ಇಲ್ಲದಿದ್ದರೂ ಈ ವರ್ಷವೇ ಬಿಡುಗಡೆ ಆಗುತ್ತಾ ‘ದಿ ಡೆವಿಲ್’ ಸಿನಿಮಾ?
ದರ್ಶನ್ ಇಲ್ಲದಿದ್ದರೂ ಈ ವರ್ಷವೇ ಬಿಡುಗಡೆ ಆಗುತ್ತಾ ‘ದಿ ಡೆವಿಲ್’ ಸಿನಿಮಾ?
ಅಲೆಗಳ ಅಬ್ಬರಕ್ಕೆ ಕಡಲ ತೀರಕ್ಕೆ ಬಂದ ಡಾಲ್ಫಿನ್ ಮೀನು
ಅಲೆಗಳ ಅಬ್ಬರಕ್ಕೆ ಕಡಲ ತೀರಕ್ಕೆ ಬಂದ ಡಾಲ್ಫಿನ್ ಮೀನು
ರಮ್ಯಾಗೆ ಅಶ್ಲೀಲ ಸಂದೇಶ ಕಳುಹಿಸಿದ ಎಲ್ಲರಿಗೂ ಇದೆ ಮಾರಿ ಹಬ್ಬ
ರಮ್ಯಾಗೆ ಅಶ್ಲೀಲ ಸಂದೇಶ ಕಳುಹಿಸಿದ ಎಲ್ಲರಿಗೂ ಇದೆ ಮಾರಿ ಹಬ್ಬ