AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Auto Tips: ಬೇಸಿಗೆಯಲ್ಲಿ ಕಾರಿನ ಟೈರ್‌ ಸ್ಫೋಟಗೊಳ್ಳದಿರಲು ಏನು ಮಾಡಬೇಕು?: ಇಲ್ಲಿದೆ ಟಿಪ್ಸ್

Car Tire Tips Summer: ಬೇಸಿಗೆಯಲ್ಲಿ ಕಾರನ್ನು ಓವರ್‌ಲೋಡ್ ಮಾಡಬೇಡಿ. ಇದು ಟೈರ್‌ಗಳ ಮೇಲೆ ಹೆಚ್ಚುವರಿ ಬಲವನ್ನು ಬೀರುತ್ತದೆ. ಟೈರ್ ಜೋಡಣೆ ಮತ್ತು ಸಮತೋಲನವನ್ನು ನಿಯಮಿತವಾಗಿ ಮಾಡಬೇಕು. ಐದು ವರ್ಷಗಳಿಗಿಂತ ಹಳೆಯದಾದ ಟೈರ್‌ಗಳನ್ನು ಬಳಸುವುದು ಪ್ರಯಾಣಕ್ಕೆ ಅಪಾಯಕಾರಿ. ಅದಕ್ಕಾಗಿಯೇ ಅವುಗಳನ್ನು ಬೇಗನೆ ಬದಲಾಯಿಸಿ.

Auto Tips: ಬೇಸಿಗೆಯಲ್ಲಿ ಕಾರಿನ ಟೈರ್‌ ಸ್ಫೋಟಗೊಳ್ಳದಿರಲು ಏನು ಮಾಡಬೇಕು?: ಇಲ್ಲಿದೆ ಟಿಪ್ಸ್
Car Tire Summer
Follow us
Vinay Bhat
|

Updated on:May 02, 2025 | 3:20 PM

ಬೆಂಗಳೂರು (ಮೇ. 02): ಬೇಸಿಗೆಯ ದಿನಗಳಲ್ಲಿ ಕಾರಿನ ಟೈರ್‌ಗಳ (Car Tire) ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು. ಈ ಸಂದರ್ಭ ಟೈರ್ ಒತ್ತಡವು ವೇಗವಾಗಿ ಬದಲಾಗುತ್ತದೆ. ಹೆಚ್ಚಿನ ಸೂರ್ಯನ ಬೆಳಕು ಮತ್ತು ಏರುತ್ತಿರುವ ತಾಪಮಾನವು ಕಾರಿನ ಟೈರ್‌ಗಳಿಗೆ ಹಾನಿಯನ್ನುಂಟುಮಾಡಬಹುದು. ಟೈರ್ ಒತ್ತಡದಲ್ಲಿನ ಹೆಚ್ಚಳ ಮತ್ತು ಇಳಿಕೆಯನ್ನು ನೀವು ನಿರ್ಲಕ್ಷಿಸಿದರೆ, ಟೈರ್‌ಗಳಿಗೆ ಹಾನಿಯಾಗುವ ಸಾಧ್ಯತೆಗಳಿವೆ. ಅಲ್ಲದೆ, ಅಪಘಾತಗಳ ಸಾಧ್ಯತೆಯೂ ಹೆಚ್ಚಾಗುತ್ತದೆ. ಹಾಗಾದರೆ ಈ ಸುಡು ಬಿಸಿಲಿನಲ್ಲಿ ಟೈರ್‌ಗಳು ಸ್ಫೋಟಗೊಳ್ಳದಂತೆ ಅದರ ಕುರಿತ ಕಾಳಜಿ ಹೇಗೆ ವಹಿಸಬೇಕು ಎಂಬುದನ್ನು ನೋಡೋಣ.

ಬೇಸಿಗೆಯಲ್ಲಿ ಒತ್ತಡ ಏಕೆ ಹೆಚ್ಚಾಗುತ್ತದೆ?

ಹಗಲಿನಲ್ಲಿ ತಾಪಮಾನ ಹೆಚ್ಚಾದಾಗ ಗಾಳಿಯೂ ಬಿಸಿಯಾಗುತ್ತದೆ. ಟೈರಿನ ಒಳಗಿನ ಗಾಳಿ ಬಿಸಿಯಾಗಿ ಹಿಗ್ಗುತ್ತದೆ. ಇದು ಒತ್ತಡವನ್ನು ಹೆಚ್ಚಿಸುತ್ತದೆ. ಬಳಿಕ ಟೈರ್ ಹಾನಿ ಮತ್ತು ಸಿಡಿಯುವ ಸಾಧ್ಯತೆ ಇರುತ್ತದೆ. ಬೇಸಿಗೆಯಲ್ಲಿ ಪ್ರತಿ 10C ತಾಪಮಾನ ಹೆಚ್ಚಳಕ್ಕೆ, ಟೈರ್ ಸರಿಸುಮಾರು 1-2 PSI ರಷ್ಟು ಹೆಚ್ಚಾಗುತ್ತದೆ. ನಿಮ್ಮ ಟೈರ್ ಒತ್ತಡ ಸಾಮಾನ್ಯವಾಗಿ 25 PSI ಆಗಿದ್ದರೆ, ಬಲವಾದ ಸೂರ್ಯನ ಬೆಳಕಿನಲ್ಲಿ ಅದು 30 PSI ಅಥವಾ ಅದಕ್ಕಿಂತ ಹೆಚ್ಚು ತಲುಪಬಹುದು.

ಇದನ್ನೂ ಓದಿ
Image
50000 ಡೌನ್ ಪೇಮೆಂಟ್‌ನೊಂದಿಗೆ ಫಾರ್ಚೂನರ್ ಖರೀದಿಸಿ: ಎಷ್ಟು EMI ಕಟ್ಟಬೇಕು?
Image
ಸ್ಕೂಟಿ ಪ್ರಿಯರು ಫುಲ್ ಫಿದಾ: ಹೋಂಡಾದ ಹೊಸ ಡಿಯೋ 125 ಸ್ಕೂಟರ್ ಬಿಡುಗಡೆ
Image
ಕಳೆದ ಒಂದು ವರ್ಷದಲ್ಲಿ ಭಾರತದಲ್ಲಿ ಸೇಲ್ ಆದ SUVಗಳು ಎಷ್ಟು ಲಕ್ಷ ಗೊತ್ತೇ?
Image
ಈ ಕಾರಿಗಾಗಿ 15 ವರ್ಷಗಳಿಂದ ಕಾಯುತ್ತಿದ್ದಾರೆ ಜನರು: ಇನ್ನೂ ಬಿಡುಗಡೆ ಆಗಿಲ್ಲ

ಬೇಸಿಗೆಯಲ್ಲಿ ನಿಮ್ಮ ಟೈರ್ ಒತ್ತಡವನ್ನು ಪರಿಶೀಲಿಸಿ

ಬೇಸಿಗೆಯಲ್ಲಿ ಕಾರಿನ ಟೈರ್ ಒತ್ತಡವನ್ನು ನಿಯಮಿತವಾಗಿ ಪರಿಶೀಲಿಸಬೇಕು. ದೀರ್ಘ ಪ್ರಯಾಣದ ಸಮಯದಲ್ಲಿ ಆಗಾಗ್ಗೆ ಟೈರ್ ಒತ್ತಡವನ್ನು ಪರಿಶೀಲಿಸಿ. ಪ್ರಯಾಣದ ಆರಂಭದಲ್ಲಿ ಒತ್ತಡವನ್ನು ಪರಿಶೀಲಿಸುದು ಉತ್ತಮ.

ಟೈರ್ ಆರೈಕೆ ಅತ್ಯಗತ್ಯ

ಬೇಸಿಗೆಯಲ್ಲಿ ಕಾರನ್ನು ಓವರ್‌ಲೋಡ್ ಮಾಡಬೇಡಿ. ಇದು ಟೈರ್‌ಗಳ ಮೇಲೆ ಹೆಚ್ಚುವರಿ ಬಲವನ್ನು ಬೀರುತ್ತದೆ. ಟೈರ್ ಜೋಡಣೆ ಮತ್ತು ಸಮತೋಲನವನ್ನು ನಿಯಮಿತವಾಗಿ ಮಾಡಬೇಕು. ಐದು ವರ್ಷಗಳಿಗಿಂತ ಹಳೆಯದಾದ ಟೈರ್‌ಗಳನ್ನು ಬಳಸುವುದು ಪ್ರಯಾಣಕ್ಕೆ ಅಪಾಯಕಾರಿ. ಅದಕ್ಕಾಗಿಯೇ ಅವುಗಳನ್ನು ಬೇಗನೆ ಬದಲಾಯಿಸಿ.

50 ಸಾವಿರ ಡೌನ್ ಪೇಮೆಂಟ್‌ನೊಂದಿಗೆ ಫಾರ್ಚೂನರ್ ಖರೀದಿಸಿ: ಪ್ರತಿ ತಿಂಗಳು ಎಷ್ಟು ಇಎಂಐ ಕಟ್ಟಬೇಕು?

ಸಾರಜನಕ ಅನಿಲವನ್ನು ಬಳಸಿ

ಬೇಸಿಗೆಯಲ್ಲಿ ನಿಮ್ಮ ಟೈರ್‌ಗಳಿಗೆ ಗಾಳಿ ತುಂಬಿಸುವಾಗ ಸಾರಜನಕ ಅನಿಲವನ್ನು ತುಂಬಲು ಮರೆಯಬೇಡಿ. ಸಾರಜನಕವು ಒಂದು ಶೀತ ಅನಿಲ. ಇದು ಹೆಚ್ಚಿನ ತಾಪಮಾನದಲ್ಲಿ ಟೈರ್ ತಾಪಮಾನವನ್ನು ಸಮತೋಲನಗೊಳಿಸಲು ಸಹಾಯ ಮಾಡುತ್ತದೆ. ಇದು ಗಾಳಿಯ ಹರಡುವುಕೆಯನ್ನು ತಡೆಯುತ್ತದೆ. ಟೈರ್ ಸಿಡಿಯುವ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ.

ವೇಗ ನಿಯಂತ್ರಣ

ಬೇಸಿಗೆ ರಜೆಯಲ್ಲಿ ಜನರು ಟ್ರಿಪ್ ಹೋಗಲು ಇಷ್ಟಪಡುತ್ತಾರೆ. ಅಂತಹ ಪರಿಸ್ಥಿತಿಯಲ್ಲಿ, ಹೆದ್ದಾರಿಗಳು ಮತ್ತು ಎಕ್ಸ್‌ಪ್ರೆಸ್‌ವೇಗಳಲ್ಲಿ ಅತಿ ವೇಗವಾಗಿ ಚಾಲನೆ ಮಾಡುವುದರಿಂದ ಸಮಯವನ್ನು ಉಳಿಸಬಹುದು. ಆದರೆ ಇದು ಟೈರ್‌ಗಳನ್ನು ಬೇಗನೆ ಬಿಸಿ ಮಾಡುತ್ತದೆ. ಇದು ಅವು ಸಿಡಿಯುವ ಸಾಧ್ಯತೆಗಳನ್ನು ಹೆಚ್ಚಿಸುತ್ತದೆ. ಇದು ದೊಡ್ಡ ಅಪಘಾತಕ್ಕೆ ಕಾರಣವಾಗಬಹುದು. ಅದಕ್ಕಾಗಿಯೇ ನೀವು ಕಾರನ್ನು ಮಧ್ಯಮ ವೇಗದಲ್ಲಿ ಓಡಿಸಬೇಕು.

ರೆಸ್ಟ್ ತೆಗೆದುಕೊಳ್ಳಬೇಕು

ದೀರ್ಘ ಪ್ರಯಾಣದ ಸಮಯದಲ್ಲಿ, ಪ್ರತಿ 100-150 ಕಿಲೋಮೀಟರ್‌ಗಳಿಗೆ ಒಮ್ಮೆ ಗಾಡಿಯನ್ನು ನಿಲ್ಲಿಸಿ. ನೀವು ಕಾರಿಗೆ ವಿಶ್ರಾಂತಿ ನೀಡುವುದು ಮುಖ್ಯ. ಇದು ಟೈರ್‌ಗಳು ಮತ್ತು ಎಂಜಿನ್ ತಣ್ಣಗಾಗಲು ಸಮಯವನ್ನು ನೀಡುತ್ತದೆ. ಎರಡರ ತಾಪಮಾನವನ್ನು ಕಡಿಮೆ ಮಾಡುತ್ತದೆ.

ಅಟೋಮೊಬೈಲ್​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:19 pm, Fri, 2 May 25

ಬೆಂಗಳೂರಿನಲ್ಲಿ ಮತ್ತೆ ಮಳೆ: ವೀಕೆಂಡ್​ನಲ್ಲಿ ಸಿಲಿಕಾನ್​ ಸಿಟಿ ಕೂಲ್​ ಕೂಲ್
ಬೆಂಗಳೂರಿನಲ್ಲಿ ಮತ್ತೆ ಮಳೆ: ವೀಕೆಂಡ್​ನಲ್ಲಿ ಸಿಲಿಕಾನ್​ ಸಿಟಿ ಕೂಲ್​ ಕೂಲ್
ತುಮಕೂರು: ಹಾಡಹಗಲೇ ಕಾರಿನ ಗಾಜು ಒಡೆದು 1 ಲಕ್ಷ ರೂ. ಕಳವು
ತುಮಕೂರು: ಹಾಡಹಗಲೇ ಕಾರಿನ ಗಾಜು ಒಡೆದು 1 ಲಕ್ಷ ರೂ. ಕಳವು
ದರ್ಶನ್ ಮನೆ ಪಕ್ಕವೇ ನಾಗಶೇಖರ್ ಮನೆ; ಹೇಗಿದೆ ಇಬ್ಬರ ನಡುವಿನ ನಂಟು?
ದರ್ಶನ್ ಮನೆ ಪಕ್ಕವೇ ನಾಗಶೇಖರ್ ಮನೆ; ಹೇಗಿದೆ ಇಬ್ಬರ ನಡುವಿನ ನಂಟು?
ಅವರೇ ದೊಡ್ಡವರು, ನಾನು ಕೆಟ್ಟವನು, ಕಾಲವೇ ನಿರ್ಧರಿಸಲಿ: ನಿರ್ದೇಶಕ ನಾಗಶೇಖರ್
ಅವರೇ ದೊಡ್ಡವರು, ನಾನು ಕೆಟ್ಟವನು, ಕಾಲವೇ ನಿರ್ಧರಿಸಲಿ: ನಿರ್ದೇಶಕ ನಾಗಶೇಖರ್
17 ಕೋಟಿ ರೂ. ಮಾಹಿತಿ ಇಲ್ಲ: ಮತ್ತೊಂದು ಬಾಂಬ್ ಸಿಡಿಸಿದ ಬಿಆರ್ ಪಾಟೀಲ್
17 ಕೋಟಿ ರೂ. ಮಾಹಿತಿ ಇಲ್ಲ: ಮತ್ತೊಂದು ಬಾಂಬ್ ಸಿಡಿಸಿದ ಬಿಆರ್ ಪಾಟೀಲ್
ಗಂಡು ಮಕ್ಕಳಿಗೆ ಬಸ್ ನಲ್ಲಿ ಹತ್ತಲು ಆಗುತ್ತಿಲ್ಲ, ಪರಿಸ್ಥಿತಿ ಕೆಟ್ಟದಾಗಿದೆ
ಗಂಡು ಮಕ್ಕಳಿಗೆ ಬಸ್ ನಲ್ಲಿ ಹತ್ತಲು ಆಗುತ್ತಿಲ್ಲ, ಪರಿಸ್ಥಿತಿ ಕೆಟ್ಟದಾಗಿದೆ
ಹೌಸಿಂಗ್ ಬೋರ್ಡ್ ಕಲೆಕ್ಷನ್ ಬೋರ್ಡ್, ಮನಿ ಕೊಟ್ರೆ ಮನೆ: ಅಶೋಕ್ ವ್ಯಂಗ್ಯ
ಹೌಸಿಂಗ್ ಬೋರ್ಡ್ ಕಲೆಕ್ಷನ್ ಬೋರ್ಡ್, ಮನಿ ಕೊಟ್ರೆ ಮನೆ: ಅಶೋಕ್ ವ್ಯಂಗ್ಯ
ಮಾದಪ್ಪನಾಣೆಗೂ ಡಿಕೆ ಶಿವಕುಮಾರ್ ಸಿಎಂ ಆಗುತ್ತಾರೆ:ಸಂಚಲನ ಮೂಡಿಸಿದ ಕೈ ಶಾಸಕ
ಮಾದಪ್ಪನಾಣೆಗೂ ಡಿಕೆ ಶಿವಕುಮಾರ್ ಸಿಎಂ ಆಗುತ್ತಾರೆ:ಸಂಚಲನ ಮೂಡಿಸಿದ ಕೈ ಶಾಸಕ
ಮನೆಗೆ ನುಗ್ಗಿ ವ್ಯಕ್ತಿಗೆ ಗುಂಡು ಹಾರಿಸಿ, ಹೆಂಡತಿ, ಮಕ್ಕಳ ಅಪಹರಣ
ಮನೆಗೆ ನುಗ್ಗಿ ವ್ಯಕ್ತಿಗೆ ಗುಂಡು ಹಾರಿಸಿ, ಹೆಂಡತಿ, ಮಕ್ಕಳ ಅಪಹರಣ
ಭಾರಿ ಗಾತ್ರದ ಜಿಂಕೆಯನ್ನ ಬೇಟೆಯಾಡಿದ ಚಿರತೆ: ವಿಡಿಯೋ ನೋಡಿ
ಭಾರಿ ಗಾತ್ರದ ಜಿಂಕೆಯನ್ನ ಬೇಟೆಯಾಡಿದ ಚಿರತೆ: ವಿಡಿಯೋ ನೋಡಿ