AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Budget 2022 Expert Opinion : ಸರ್ಕಾರದ ಯೋಚನೆ ಯೋಜನೆ ಚೆನ್ನಾಗಿದೆ, ಜಾರಿಯಾಗೋದು ಮುಖ್ಯ: ಬಜೆಟ್​ ಬಗ್ಗೆ ತಜ್ಞರ ಅಭಿಪ್ರಾಯ ಇಲ್ಲಿದೆ

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ 10ನೇ ಬಜೆಟ್​ ಇದಾಗಿದ್ದು, ನಿರ್ಮಲಾ ಸೀತಾರಾಮನ್​ 4ನೇ ಬಾರಿಗೆ ಬಜೆಟ್​ ಮಂಡಿಸಿದ್ದಾರೆ. ಈ ಬಗ್ಗೆ ಆರ್ಥಿಕ ತಜ್ಞರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

Budget 2022 Expert Opinion : ಸರ್ಕಾರದ ಯೋಚನೆ ಯೋಜನೆ ಚೆನ್ನಾಗಿದೆ, ಜಾರಿಯಾಗೋದು ಮುಖ್ಯ: ಬಜೆಟ್​ ಬಗ್ಗೆ ತಜ್ಞರ ಅಭಿಪ್ರಾಯ ಇಲ್ಲಿದೆ
ಸಾಂದರ್ಭಿಕ ಚಿತ್ರ
Follow us
Pavitra Bhat Jigalemane
|

Updated on:Feb 01, 2022 | 2:49 PM

2022-23ನೇ ಸಾಲಿನ ಕೇಂದ್ರ ಬಜೆಟ್ (Budget 2022)​ ಮಂಡನೆಯಾಗಿದೆ. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman)​ 90 ನಿಮಿಷಗಳಲ್ಲಿ ಈ ಬಾರಿಯ ಬಜೆಟ್​ ಭಾಷಣ ಮುಗಿಸಿದ್ದಾರೆ. ಈ ಬಾರಿ ಮಂಡನೆಯಾಗಿರುವ ಬಜೆಟ್ ಗಾತ್ರ 39.54 ಲಕ್ಷ ಕೋಟಿ ರೂಪಾಯಿ. ಪ್ರಧಾನಿ ನರೇಂದ್ರ ಮೋದಿ (PM Narendra Modi) ನೇತೃತ್ವದ ಸರ್ಕಾರದ 10ನೇ ಬಜೆಟ್​ ಇದಾಗಿದ್ದು, ನಿರ್ಮಲಾ ಸೀತಾರಾಮನ್​ 4ನೇ ಬಾರಿಗೆ ಬಜೆಟ್​ ಮಂಡಿಸಿದ್ದಾರೆ. ಈ ಬಗ್ಗೆ ಆರ್ಥಿಕ ತಜ್ಞರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಆರ್ಥಿಕ ತಜ್ಞ ಕೇಶವ ಮೂರ್ತಿ

‘ಬಜೆಟ್​ ಉತ್ತಮವಾಗಿದೆ. ಕೃಷಿ ಕ್ಷೇತ್ರಕ್ಕೆ ಹೆಚ್ಚು ಒತ್ತು ನೀಡಲಾಗಿದ್ದು, ಹಳ್ಳಿಗಳಿಗೂ ತಂತ್ರಜ್ಞಾನವನ್ನು ತಲುಪಿಸುವ ದೂರದೃಷ್ಟಿಯ ಬಜೆಟ್​ ಇದಾಗಿದೆ’ ಎಂದು ‘ಟಿವಿ9’ ಚರ್ಚೆಯ ವೇಳೆ ಆರ್ಥಿಕ ತಜ್ಞ ಕೇಶವ ಮೂರ್ತಿ ಅಭಿಪ್ರಾಯಪಟ್ಟಿದ್ದಾರೆ. ಆರೋಗ್ಯ, ಕೃಷಿ, ರಕ್ಷಣಾ ವಲಯ ಸೇರಿದಂತೆ ಜನಸಾಮಾನ್ಯರವರೆಗೂ ಬಜೆಟ್​ ತಲುಪಿದೆ. ಹೀಗಾಗಿ ಈ ಬಾರಿ ಜನಪರ ಕಾಳಜಿಯ ಬಜೆಟ್​ ಎನ್ನಬಹುದು ಎಂದಿದ್ದಾರೆ. ಇನ್ನು ಡಿಜಿಟಲ್​ ಕರೆನ್ಸಿಯ ಬಗ್ಗೆ ಮಾತನಾಡಿದ ಅವರು ಈ ಹಿಂದೆ ಕೇಂದ್ರ ಸರ್ಕಾರ ಡಿಜಿಟಲ್​ ಕರೆನ್ಸಿಗಳ ದುರುಪಯೋಗದ ಬಗ್ಗೆ ಆತಂಕ ವ್ಯಕ್ತಪಡಿಸುತ್ತು. ಇದೀಗ ಆರ್​ಬಿಐ ಮೂಲಕವೇ ಬರುತ್ತಿರುವುದರಿಂದ ಹೆಚ್ಚು ಸುರಕ್ಷಿತವಾಗಿರುತ್ತದೆ. ಹೀಗಾಗಿ ಸರ್ಕಾರದ ಈ ನಡೆ ಮುಂದಿನ ದಿನಗಳಲ್ಲಿ ಗೇಮ್​ ಚೇಂಜರ್​ ಆಗಬಹುದು. ಇದು ಮೇಕ್​ ಇನ್​ ಇಂಡಿಯಾಗೂ ಹೆಚ್ಚು ಪುಷ್ಟಿ ನೀಡುತ್ತದೆ. ಒಟ್ಟಿನಲ್ಲಿ ಈ ಬಾರಿಯ ಬಜೆಟ್​​ ಉತ್ತಮವಾಗಿದೆ ಎಂದಿದ್ದಾರೆ.

ಹಣಕಾಸು ವಿದ್ಯಮಾನಗಳ ವಿಶ್ಲೇಷಕ ಮುರಳೀಧರ್​

ಹಣಕಾಸು ವಿದ್ಯಮಾನಗಳ ವಿಶ್ಲೇಷಕ ಮುರಳೀಧರ್​ ಮಾತನಾಡಿ, ಈ ಬಾರಿಯ ಬಜೆಟ್ ಸಾಧಾರಣವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ತಮ್ಮ ಅಭಿಪ್ರಾಯವನ್ನು ವಿವರಿಸಿದ ಅವರು, ದೂರದೃಷ್ಟಿಯುಳ್ಳ ಬಜೆಟ್​ನಲ್ಲಿ ಎಲ್ಲಾ ಕ್ಷೇತ್ರಗಳನ್ನೂ ತಲುಪಲಾಗಿದೆ ಆದರೆ ಸರ್ಕಾರ ಮಾಡುವ, ಜನ ಅಥವಾ ಸಾರ್ವಜನಿಕರು ಮಾಡುವ ಕೆಲಸಗಳು ಯಾವುದು ಎನ್ನುವುದರ ಕುರಿತು ಸ್ಪಷ್ಟ ನಿಲುವು ಇಲ್ಲ. ಯೋಜನೆಗಳನ್ನು ಘೋಷಣೆ ಮಾಡುವುದರ ಜೊತೆಗೆ ಅದನ್ನು ಜನರಿಗೆ ತಲುಪುವ ರೀತಿಯಲ್ಲಿ ಅನುಷ್ಠಾನಕ್ಕೆ ತರುವುದು ಅಷ್ಟೇ ಮುಖ್ಯವಾಗಿರುತ್ತದೆ. ಆ ನಿಟ್ಟಿನಲ್ಲಿ ಈ ಬಾರಿಯ ಬಜೆಟ್​ ಚಾಲೆಂಜಿಗ್​ ಆಗಿದೆ. ಇನ್ನು ಆರ್​ಬಿಐ ತರುತ್ತಿರುವ ಡಿಜಿಟಲ್​ ಕರೆನ್ಸಿ ನಿಯಮವು ಒಂದಷ್ಟು ಗೊಂದಲಗಳನ್ನು ಒಳಗೊಂಡಿದೆ. ಬಿಟ್​ ಕಾಯಿನ್​ಗಳನ್ನು ಎರಡು ರೀತಿಯಲ್ಲಿ ಪಡೆಯಬಹುದು ಒಂದು ಖರೀದಿಸುವವರೇ ಹುಡುಕಿ ಪಡೆಯಬೇಕು, ಇನ್ನೊಂದು ರೀತಿ ಎಂದರೆ ಯಾರಲ್ಲಿ ಇರುತ್ತದೆಯೋ ಅವರಿಂದ ಪಡೆಯಬೇಕು. ಹೇಗೆ ಪಡೆದರೂ ಮಾರುಕಟ್ಟೆಯಲ್ಲಿನ ಬೆಲೆಗೇ ಪಡೆಯಬೇಕು. ಈ ಯೋಜನೆಯಲ್ಲಿ ಆರ್​ಬಿಐನ ಕೆಲಸವೇನು ಎಂಬ ಬಗ್ಗೆ ಅಂದರೆ ಆರ್​ಬಿಐ​ ರೋಲ್​ ಬಗ್ಗೆ ಸರಿಯಾದ ಸ್ಪಷ್ಟನೆ ಸಿಕ್ಕಿಲ್ಲ. ಇವೆಲ್ಲವನ್ನು ಹೊರತುಪಡಿಸಿದರೆ, ಈ ಬಾರಿಯ ಬಜೆಟ್​ನಲ್ಲಿ ರಾಜ್ಯಗಳಲ್ಲಿ ಜಾರಿಯಾಗಬೇಕಾದ ಯೋಜನೆಗಳನ್ನು ಗಮನಿಸಿ ಎಲ್ಲಾ ರಾಜ್ಯಗಳಿಗೆ ಒತ್ತು ನೀಡಲಾಗಿದೆ. ಜತೆಗೆ ಬೇರೆಬೇರೆ ದೇಶದಲ್ಲಿ ಅಳವಡಿಸಿಕೊಂಡ ಹೂಡಿಕೆ ಅಥವಾ ಫಂಡಿಂಗ್​​ ಸಿಸ್ಟಮ್​ಗಳನ್ನು ನಮ್ಮ ದೇಶದಲ್ಲಿಯೂ ಅಳವಡಿಸಿಕೊಳ್ಳಬೇಕೆಂಬ ನಿರ್ಧಾರ ಸ್ವಾಗತಾರ್ಹವಾಗಿದೆ. ಒಟ್ಟಿನಲ್ಲಿ 2022-23ರ ಬಜೆಟ್​​ ಆವರೇಜ್​ ಮಟ್ಟದಲ್ಲಿದೆ ಎಂದಿದ್ದಾರೆ.

ಚಾರ್ಟೆಡ್​ ಅಕೌಂಟೆಂಟ್​ ಗುರುರಾಜ್​ ಆಚಾರ್ಯ

ಇನ್ನು ಚಾರ್ಟೆಡ್​ ಅಕೌಂಟೆಂಟ್​ ಆಗಿರುವ ಗುರುರಾಜ್​ ಆಚಾರ್ಯ ಅವರು ಮಾತಾನಾಡಿ ತೆರಿಗೆ ನಿಯಮಗಳ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ. ಕೆಲವೊಮ್ಮೆ ಆದಾಯ ತೆರಿಗೆಗಳನ್ನು ಫೈಲ್​ ಮಾಡುವಾಗ ವಿದೇಶಿ ಬಂಡವಾಳ ಹೂಡಿಕೆ ಮಾಡಿದಂತಹ ಸಂದರ್ಭಗಳಲ್ಲಿ ತೆರಿಗೆ ಸಲ್ಲಿಕೆಯಲ್ಲಿ ತಪ್ಪಾಗುತ್ತದೆ. ಅಂತಹ ಸಂದರ್ಭಗಳಲ್ಲಿ ಅದನ್ನು ಸರಿಪಡಿಸುವ ನಿಟ್ಟಿನಲ್ಲಿ ನೀಡಿರುವ 2 ವರ್ಷಗಳ ಅವಧಿ ಸರಿಯಾದ ಕ್ರಮ ಎನಿಸಿದೆ. ದೂರದೃಷ್ಟಿಯಿಂದ ಘೋಷಿಸಿರುವ ಯೋಜನೆಗಳು ಆರ್ಥಿಕತೆಯ ಪುನಶ್ಚೇತನಕ್ಕೆ ನಾಂದಿಯಾಗಲಿವೆ. ಆದರೆ ಇದು ಜನರಿಗೆ ತಲುಪುವಂತಾದರೆ ಎಲ್ಲ ರೀತಿಯಲ್ಲಿಯೂ ಉತ್ತಮ ಎಂದು ಹೇಳಿದ್ದಾರೆ. ಇನ್ನು ಈ ಬಾರಿಯ ಅತಿ ಮುಖ್ಯ ಘೋಷಣೆಗಳಲ್ಲಿ ಒಂದಾದ ಡಿಜಿಟಲ್​ ಕರೆನ್ಸಿ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ಆರ್​ಬಿಐ ಸ್ವತಃ ಜವಾಬ್ದಾರಿ ತೆಗೆದುಕೊಂಡಿರುವುದು ಸ್ವಾಗತಾರ್ಹ ಸಂಗತಿ. ಕ್ರಿಪ್ಟೋ ಕರೆನ್ಸಿ ಬಗ್ಗೆ ಸಾರ್ವಜನಿಕರಿಗೂ ಅರ್ಥವಾಗಿದೆ. ಡಿಜಿಟಲ್​ ಕರೆನ್ಸಿ ನೀರಿನೊಳಗೆ ಸಿಗುವ ಮುತ್ತಿನಂತೆ. ಕಂಪ್ಯೂಟರ್​ ಎಕ್ಸ್​ಪರ್ಟ್ಸ್​ಗಳು ಅದನ್ನು ಹುಡುಕಬೇಕು. ಆಗ ಮಾತ್ರ ಯಾವುದು ಉತ್ತಮ ಎನ್ನುವುದು ತಿಳಿಯುತ್ತದೆ. ಈ ಬಾರಿ ಒಟ್ಟು 39.54 ಲಕ್ಷ ಕೋಟಿ ರೂ.ಗಳ ಬಜೆಟ್​ ಮಂಡನೆಯಾಗಿದೆ. ಒಟ್ಟಾರೆಯಾಗಿ ಈ ಬಾರಿ ಬಜೆಟ್​ ನೀರೀಕ್ಷಿತ ಮಟ್ಟದಲ್ಲಿ ಇರದಿದ್ದರೂ, ಘೋಷಣೆಯಾದ ಯೋಜನೆಗಳು ಉತ್ತಮವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಒಟ್ಟಾರೆಯಾಗಿ ದೂರದೃಷ್ಟಿಯುಳ್ಳ 2022-23ರ ಕೇಂದ್ರ ಬಜೆಟ್​  ಕೊರೊನಾ ಕಾಲದಲ್ಲೂ ದೇಶದ ಆರ್ಥಿಕತೆಯನ್ನು ಮೇಲೆತ್ತುವ ನಿರೀಕ್ಷೆಯಿಟ್ಟುಕೊಂಡಿದೆ. ದೇಶವನ್ನು ತಂತ್ರಜ್ಞಾನದ ಮೂಲಕ ಅಭಿವೃದ್ಧಿ ಮಾಡುವ ಗುರಿ ಹೊಂದಿರುವ  ಸರ್ಕಾರದ ಯೊಜನೆಗಳು ಡಿಜಿಟಲೀಕರಣವನ್ನು ಮೂಲ ಮಂತ್ರವನ್ನಾಗಿಸಿಕೊಂಡಿದೆ. ಜನಪರ ಕಾಳಜಿಯುಳ್ಳ  ಬಜೆಟ್​ ಯಾವ ರೀತಿಯಲ್ಲಿ ಅನುಷ್ಠಾನಕ್ಕೆ ಬರಲಿದ ಎನ್ನುವುದನ್ನು ಮುಂದಿನ ದಿನಗಳಲ್ಲಿ ನೋಡಬೇಕಿದೆ.

Published On - 2:48 pm, Tue, 1 February 22

ಸಿಂಧೂರದ ಮಹತ್ವ ಹಾಗೂ ಇದರ ಹಿಂದಿನ ರಹಸ್ಯವೇನು ಗೊತ್ತಾ?
ಸಿಂಧೂರದ ಮಹತ್ವ ಹಾಗೂ ಇದರ ಹಿಂದಿನ ರಹಸ್ಯವೇನು ಗೊತ್ತಾ?
ಇಂದಿನ ದ್ವಾದಶ ರಾಶಿಗಳ ಫಲಾನುಫಲಗಳ ಬಗ್ಗೆ ಸಂಕ್ಷಿಪ್ತ ವಿವರ ಇಲ್ಲಿದೆ
ಇಂದಿನ ದ್ವಾದಶ ರಾಶಿಗಳ ಫಲಾನುಫಲಗಳ ಬಗ್ಗೆ ಸಂಕ್ಷಿಪ್ತ ವಿವರ ಇಲ್ಲಿದೆ
ಪಾಕ್​ ಡ್ರೋನ್​ ಆಕಾಶದಲ್ಲೇ ಉಡೀಸ್: ಭಯಾನಕ ಸೌಂಡ್​ಗೆ ಬೆಚ್ಚಿಬಿದ್ದ ಜಮ್ಮು
ಪಾಕ್​ ಡ್ರೋನ್​ ಆಕಾಶದಲ್ಲೇ ಉಡೀಸ್: ಭಯಾನಕ ಸೌಂಡ್​ಗೆ ಬೆಚ್ಚಿಬಿದ್ದ ಜಮ್ಮು
ಭಾರತೀಯ ಸೇನೆಯಿಂದ ಅಗ್ನಿವೀರರಿಗೆ ಕಠಿಣ ತರಬೇತಿ
ಭಾರತೀಯ ಸೇನೆಯಿಂದ ಅಗ್ನಿವೀರರಿಗೆ ಕಠಿಣ ತರಬೇತಿ
ಭಟಿಂಡಾ ಸೇನಾನೆಲೆ ಮೇಲೆ ದಾಳಿಯ ವಿಫಲಯತ್ನ ಪಾಕ್ ನಡೆಸಿದೆ: ವ್ಯೋಮಿಕಾ ಸಿಂಗ್
ಭಟಿಂಡಾ ಸೇನಾನೆಲೆ ಮೇಲೆ ದಾಳಿಯ ವಿಫಲಯತ್ನ ಪಾಕ್ ನಡೆಸಿದೆ: ವ್ಯೋಮಿಕಾ ಸಿಂಗ್
ತೆಲುಗಿನಲ್ಲಿ ಕನ್ನಡದ ನಟರಿಗೆ ಹೆಚ್ಚು ಸಂಬಳ ಸಿಗುತ್ತಾ? ಚಂದು ಗೌಡ ಉತ್ತರ
ತೆಲುಗಿನಲ್ಲಿ ಕನ್ನಡದ ನಟರಿಗೆ ಹೆಚ್ಚು ಸಂಬಳ ಸಿಗುತ್ತಾ? ಚಂದು ಗೌಡ ಉತ್ತರ
ಪಾಕಿಸ್ತಾನದಿಂದ ಮತ್ತೆ ಕದನ ವಿರಾಮ ಉಲ್ಲಂಘನೆ; ಉರಿಯಲ್ಲಿ ಗುಂಡಿನ ದಾಳಿ
ಪಾಕಿಸ್ತಾನದಿಂದ ಮತ್ತೆ ಕದನ ವಿರಾಮ ಉಲ್ಲಂಘನೆ; ಉರಿಯಲ್ಲಿ ಗುಂಡಿನ ದಾಳಿ
ಪಾಕ್ ಸೇನೆಯಿಂದ ಅವಿರತ ಶೆಲ್ಲಿಂಗ್, ರಜೌರಿ ಪ್ರಾಂತ್ಯ ಉದ್ವಿಗ್ನ
ಪಾಕ್ ಸೇನೆಯಿಂದ ಅವಿರತ ಶೆಲ್ಲಿಂಗ್, ರಜೌರಿ ಪ್ರಾಂತ್ಯ ಉದ್ವಿಗ್ನ
ಪಾಕಿಸ್ತಾನದ ಕಂತ್ರಿ ಬುದ್ಧಿ ಬಿಚ್ಚಿಟ್ಟ ಬೆಳಗಾವಿ ಸೊಸೆ ಕರ್ನಲ್ ಸೋಫಿಯಾ
ಪಾಕಿಸ್ತಾನದ ಕಂತ್ರಿ ಬುದ್ಧಿ ಬಿಚ್ಚಿಟ್ಟ ಬೆಳಗಾವಿ ಸೊಸೆ ಕರ್ನಲ್ ಸೋಫಿಯಾ
ಭಾರತದಲ್ಲಿ ಮುಸಲ್ಮಾನರೂ ಪ್ರಧಾನಿ ಮೋದಿ ಜೊತೆ ನಿಂತಿದ್ದಾರೆ: ಸೂಲಿಬೆಲೆ
ಭಾರತದಲ್ಲಿ ಮುಸಲ್ಮಾನರೂ ಪ್ರಧಾನಿ ಮೋದಿ ಜೊತೆ ನಿಂತಿದ್ದಾರೆ: ಸೂಲಿಬೆಲೆ