AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Aadhaar matching deferred: ಆಧಾರ್ ಜತೆ ಉದ್ಯೋಗಿ ಮಾಹಿತಿ ತಾಳೆ ಆಗಲು ಸೆ.​1ಕ್ಕೆ ಗಡುವು ಮುಂದೂಡಿದ ಇಪಿಎಫ್​ಒ

ಜೂನ್ 1, 2021ರಿಂದ ಅನ್ವಯ ಆಗುವಂತೆ ಆಧಾರ್​ ಜತೆಗೆ ಸಿಬ್ಬಂದಿಯ ಮಾಹಿತಿ ತಾಳೆ ಆಗಬೇಕು ಎಂಬ ನಿಯಮವನ್ನು ಕಡ್ಡಾಯಗೊಳಿಸಿದ್ದ ಇಪಿಎಫ್​ಒ ಅದನ್ನು ಸೆಪ್ಟೆಂಬರ್ 1ನೇ ತಾರೀಕಿಗೆ ಮುಂದೂಡಿದೆ.

Aadhaar matching deferred: ಆಧಾರ್ ಜತೆ ಉದ್ಯೋಗಿ ಮಾಹಿತಿ ತಾಳೆ ಆಗಲು ಸೆ.​1ಕ್ಕೆ ಗಡುವು ಮುಂದೂಡಿದ ಇಪಿಎಫ್​ಒ
ಪ್ರಾತಿನಿಧಿಕ ಚಿತ್ರ
TV9 Web
| Edited By: |

Updated on:Jun 15, 2021 | 11:12 PM

Share

ಲಕ್ಷಾಂತರ ಮಂದಿ ಸಂಘಟಿತ ವಲಯದ ಕೆಲಸಗಾರರಿಗೆ ನಿರಾಳ ಆಗುವಂಥ ಸುದ್ದಿ ಹೊರಬಿದ್ದಿದೆ. ಕಾರ್ಮಿಕರ ಭವಿಷ್ಯ ನಿಧಿ ಒಕ್ಕೂಟವು (ಇಪಿಎಫ್​ಒ) ಮಂಗಳವಾರದಂದು ಮಹತ್ತರ ಘೋಷಣೆ ಮಾಡಿ, ಸಿಬ್ಬಂದಿಯ ದಾಖಲೆಯ ಜತೆಗೆ ಕಡ್ಡಾಯವಾಗಿ ಆಧಾರ್​ ತಾಳೆಯಾಗಬೇಕು ಎಂಬ ನಿಯಮವನ್ನು ಮುಂದೂಡಿದೆ. ಈ ಹೊಸ ನಿಯಮ ಜಾರಿ ಬಗ್ಗೆ ಮತ್ತೊಮ್ಮೆ ಅವಲೋಕಿಸುವಂತೆ ಕೋರಿ, ಆರೆಸ್ಸೆಸ್ ಜತೆಗೆ ಗುರುತಿಸಿಕೊಂಡಿರುವ ಸಂಸ್ಥೆಯು ಕಾರ್ಮಿಕ ಸಚಿವಾಲಯಕ್ಕೆ ಪತ್ರ ಬರೆದಿತ್ತು. ಈ ಹಿಂದೆ ನೀಡಿದ್ದ ನಿರ್ದೇಶನದ ಅನುಸಾರ, ಇಪಿಎಫ್​ಒದಿಂದ ಆಧಾರ್​ ವ್ಯಾಲಿಡೇಟ್ ಮಾಡಲು ತಿಳಿಸಲಾಗಿತ್ತು. ಇದರರ್ಥ ಏನೆಂದರೆ, ಹೆಸರು, ಜನ್ಮದಿನಾಂಕ, ಲಿಂಗ ಎಲ್ಲವೂ ಸರಿಯಾಗಿ ತಾಳೆ ಆಗಬೇಕು. ಆಗಷ್ಟೇ ಕಾರ್ಮಿಕ ಭವಿಷ್ಯ ನಿಧಿ ತಿಂಗಳ ಕೊಡುಗೆ ನೀಡಲು ಅವಕಾಶ ಮಾಡಿಕೊಡುತ್ತಿತ್ತು. ಈ ನಡೆಯಿಂದಾಗಿ ಲಕ್ಷಾಂತರ ಸಂಖ್ಯೆಯಲ್ಲಿ ಇರುವ, ಕಡಿಮೆ ಆದಾಯದ ಸಂಘಟಿತ ವಲಯದ ಸಿಬ್ಬಂದಿಗೆ ದಾಖಲೆಗಳು ಹೊಂದಾಣಿಕೆ ಆಗದೆ ಪಿಎಫ್​ ಪಾವತಿ ಮಾಡಲು ಆಗಲಿಲ್ಲ.

ಇಪಿಎಫ್​ಒದಿಂದ ಸುತ್ತೋಲೆ ಮೂಲಕ ನಿರ್ದೇಶನ ನೀಡಿ, ಈ ಹಿಂದೆ ತಿಳಿಸಿದಂತೆ ಆಧಾರ್ ತಾಳೆ ಜೂನ್​ 1ರಿಂದ ಕಡ್ಡಾಯ ಅಲ್ಲ. ಇದು ಸೆಪ್ಟೆಂಬರ್ 1ರಿಂದ ಅನ್ವಯ ಆಗಲಿದೆ. ಸೆಪ್ಟೆಂಬರ್​ 1ರಿಂದ ಎಲ್ಲ ಉದ್ಯೋಗದಾತರು ಈ ತೀರ್ಮಾನ ಜಾರಿಗೆ ಸಿದ್ಧವಿದ್ದಾರೆ ಎಂಬುದನ್ನು ಖಾತ್ರಿ ಪಡಿಸಬೇಕು ಎಂದು ಎಲ್ಲ ಕ್ಷೇತ್ರೀಯ ಕಚೇರಿಗಳಿಗೆ ತಿಳಿಸಿದೆ. ಉದ್ಯೋಗಿಯ ಮಾಹಿತಿಯೊಂದಿಗೆ ಆಧಾರ್ ಕಡ್ಡಾಯವಾಗಿ ತಾಳೆಯಾಗಬೇಕು ಎನ್ನಲಾಗಿತ್ತು. ಇದರಿಂದಾಗಿ ಲಕ್ಷಾಂತರ ಮಂದಿ ಇಪಿಎಫ್​ಒ ಬಾಕಿ ಪಾವತಿಸಲು ಆಗಿರಲಿಲ್ಲ ಎಂದು ಬಿಎಂಎಸ್​ ಶನಿವಾರ ತಿಳಿಸಿತ್ತು. ಆ ನಂತರ ಸಂಘಟನೆಯಿಂದ ಕೇಂದ್ರ ಕಾರ್ಮಿಕ ಸಚಿವರಿಗೆ ಪತ್ರ ಬರೆಯಲಾಗಿತ್ತು. ಹೊಸದಾಗಿ ಹೊರಡಿಸಲಾದ ಆಧಾರ್ ವ್ಯಾಲಿಡೇಷನ್ ನಿಯಮ ಮತ್ತೊಮ್ಮೆ ಪರಿಶೀಲಿಸಿ, ಇಪಿಎಫ್​ಒ ಪಾವತಿಸಲು ಅನುಕೂಲ ಮಾಡಿಕೊಡುವಂತೆ ಮನವಿ ಮಾಡಿತ್ತು.

ಆಧಾರ್ ಸಂಖ್ಯೆಯೊಂದಿಗೆ ಇಪಿಎಫ್ ಪಾವತಿಸಲು ಉದ್ಯೋಗದಾತರಿಗೆ ಅವಕಾಶ ನೀಡಬೇಕು. ಇತರ ಮಾಹಿತಿಗಳು ಆಧಾರ್ ಜತೆ ತಾಳೆ ಆಗಬೇಕು ಎಂದು ಕಡ್ಡಾಯ ಮಾಡಬಾರದು. ಜೂನ್ 1ರಿಂದ ಜಾರಿಗೆ ಬಂದಿರುವ ನಿಯಮದಿಂದಾಗಿ, ಉದ್ಯೋಗಿಗಳಿಂದ ಕಡಿತವಾದ ನಿಧಿಯ ದುರುಪಯೋಗ ಆಗುವ ಸಾಧ್ಯತೆ ಇದೆ ಮತ್ತು ಕೊಡುಗೆಯಲ್ಲಿ ಮಧ್ಯೆ ತಡೆ ಬಂದರೆ ಇದರಿಂದ ಪೆನ್ಷನ್ ಹಾಗೂ ಇನ್ಷೂರೆನ್ಸ್ ಅರ್ಹತೆಗೆ ಸಮಸ್ಯೆ ಆಗುತ್ತದೆ ಎನ್ನಲಾಗಿತ್ತು. ಇಪಿಎಫ್​ಒಗೆ ಹತ್ತಿರಹತ್ತಿರ 6 ಕೋಟಿ ಸಕ್ರಿಯ ಚಂದಾದಾರರಿದ್ದಾರೆ. ನಿವೃತ್ತಿ ಫಂಡ್​ ಮೊತ್ತ 14 ಲಕ್ಷ ಕೋಟಿ ರೂಪಾಯಿಯನ್ನು ಇದು ನಿರ್ವಹಿಸುತ್ತದೆ.

ಇದನ್ನೂ ಓದಿ: Personal finance: ವ್ಯಕ್ತಿಯು ಮೃತಪಟ್ಟ ನಂತರ ಆಧಾರ್, ಪ್ಯಾನ್ ಕಾರ್ಡ್, ಪಾಸ್​ಪೋರ್ಟ್, ಡ್ರೈವಿಂಗ್ ಲೈಸೆನ್ಸ್ ಏನು ಮಾಡಬೇಕು?

(EPFO deferred employees details mandatory matching with Aadhaar to September 1st, 2021. Here is the latest updates)

Published On - 11:09 pm, Tue, 15 June 21

Follow Us
440 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಪೈಕಿ 428 ರಲ್ಲಿ ಪ್ರಾಂಶುಪಾಲರೇ ಇಲ್ಲ
440 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಪೈಕಿ 428 ರಲ್ಲಿ ಪ್ರಾಂಶುಪಾಲರೇ ಇಲ್ಲ
ದೆಹಲಿಯಲ್ಲಿರುವ ಪಾಕ್ ಹೈಕಮಿಷನ್ ಹೊರಗಿನ ಬ್ಯಾರಿಕೇಡ್‌ಗಳ ತೆರವು
ದೆಹಲಿಯಲ್ಲಿರುವ ಪಾಕ್ ಹೈಕಮಿಷನ್ ಹೊರಗಿನ ಬ್ಯಾರಿಕೇಡ್‌ಗಳ ತೆರವು
ಚಿಕ್ಕಮಗಳೂರು: 3000 ಅಡಿ ಪ್ರಪಾತದ ಅಂಚಿನಲ್ಲಿ ಥಾರ್ ಜೀಪ್ ಓಡಿಸಿ ಹುಚ್ಚಾಟ
ಚಿಕ್ಕಮಗಳೂರು: 3000 ಅಡಿ ಪ್ರಪಾತದ ಅಂಚಿನಲ್ಲಿ ಥಾರ್ ಜೀಪ್ ಓಡಿಸಿ ಹುಚ್ಚಾಟ
ರಾಜ್ಯಾದ್ಯಂತ ಮೆಡಿಕಲ್ ಸ್ಟೋರ್‌ಗಳ ಪರಿಶೀಲನೆಗೆ ಮಹತ್ವದ ಆದೇಶ
ರಾಜ್ಯಾದ್ಯಂತ ಮೆಡಿಕಲ್ ಸ್ಟೋರ್‌ಗಳ ಪರಿಶೀಲನೆಗೆ ಮಹತ್ವದ ಆದೇಶ
ವಿಶೇಷ ಭೂಸ್ವಾಧೀನಾಧಿಕಾರಿ ಮನೆಯಲ್ಲಿ ಕೋಟಿಗಟ್ಟಲೆ ಆಸ್ತಿ ಪತ್ತೆ!
ವಿಶೇಷ ಭೂಸ್ವಾಧೀನಾಧಿಕಾರಿ ಮನೆಯಲ್ಲಿ ಕೋಟಿಗಟ್ಟಲೆ ಆಸ್ತಿ ಪತ್ತೆ!
ವರಮಹಾಲಕ್ಷ್ಮೀ ಹಬ್ಬದ ಖರೀದಿಗೆ ಮಾರ್ಕೆಟ್‌ನಲ್ಲಿ ಜನಸಾಗರ: ಟ್ರಾಫಿಕ್ ಜಾಮ್
ವರಮಹಾಲಕ್ಷ್ಮೀ ಹಬ್ಬದ ಖರೀದಿಗೆ ಮಾರ್ಕೆಟ್‌ನಲ್ಲಿ ಜನಸಾಗರ: ಟ್ರಾಫಿಕ್ ಜಾಮ್
ಈ ರಾಶಿಯವರಿಗೆ ಗಜಕೇಸರಿ ಯೋಗ, ವೃಶ್ಚಿಕಕ್ಕೆ ಧನಯೋಗ
ಈ ರಾಶಿಯವರಿಗೆ ಗಜಕೇಸರಿ ಯೋಗ, ವೃಶ್ಚಿಕಕ್ಕೆ ಧನಯೋಗ
ಕಿಸೆಯಿಂದ ಫೋನ್ ಹೊರತೆಗೆಯುತ್ತಿದ್ದಂತೆ ಸ್ಪೋಟ
ಕಿಸೆಯಿಂದ ಫೋನ್ ಹೊರತೆಗೆಯುತ್ತಿದ್ದಂತೆ ಸ್ಪೋಟ
ಅಸ್ಸಾಂನಲ್ಲಿ ಆನೆಗಳ ಹಿಂಡು ರೈಲ್ವೆ ಹಳಿ ದಾಟುವವರೆಗೂ ಕಾದು ನಿಂತ ರೈಲು
ಅಸ್ಸಾಂನಲ್ಲಿ ಆನೆಗಳ ಹಿಂಡು ರೈಲ್ವೆ ಹಳಿ ದಾಟುವವರೆಗೂ ಕಾದು ನಿಂತ ರೈಲು
ರಾಮನಗರ: ವೃಷಭಾವತಿ‌ ನದಿಯಲ್ಲಿ ಕಂತೆ ಕಂತೆ ನೋಟುಗಳು ಪತ್ತೆ; ವಿಡಿಯೋ ನೋಡಿ
ರಾಮನಗರ: ವೃಷಭಾವತಿ‌ ನದಿಯಲ್ಲಿ ಕಂತೆ ಕಂತೆ ನೋಟುಗಳು ಪತ್ತೆ; ವಿಡಿಯೋ ನೋಡಿ