Sign In

By signing in or creating an account, you agree with Associated Broadcasting Company's Terms & Conditions and Privacy Policy.

ಲಂಡನ್​ನ ಬಾರ್​ಕ್ಲೇಸ್ ಕಂಪನಿಯಲ್ಲಿ 2,000 ಉದ್ಯೋಗಿಗಳ ಲೇ ಆಫ್ ಸಾಧ್ಯತೆ; 10 ಸಾವಿರ ಕೋಟಿ ರೂ ವೆಚ್ಚ ಕಡಿತಕ್ಕೆ ಯೋಜನೆ

Barclays Bank Layoffs: ಭಾರತ ಮೂಲದ ಸಿಎಸ್ ವೆಂಕಟಕೃಷ್ಣನ್ ಸಿಇಒ ಆಗಿರುವ ಬ್ರಿಟನ್​ನ ಬಾರ್ಕ್ಲೇಸ್ ಬ್ಯಾಂಕ್​ನಲ್ಲಿ 2,000 ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕುವ ಸಾಧ್ಯತೆ ಇದೆ. ಬಿಎಕ್ಸ್ ಅಥವಾ ಬ್ಯಾಂಕ್​ನ ಎಕ್ಸಿಕ್ಯೂಶನ್ ಸರ್ವಿಸಸ್ ವಿಭಾಗದಲ್ಲಿರುವ 22,500 ಉದ್ಯೋಗಿಗಳ ಪೈಕಿ ಶೇ. 10ರಷ್ಟು ಮಂದಿಗೆ ಕೆಲಸ ಹೋಗಬಹುದು. ಲಾಭಕ್ಕಾಗಿ ಪರದಾಡುತ್ತಿರುವ ಈ ಬ್ಯಾಂಕ್ ಒಟ್ಟಾರೆ ವೆಚ್ಚಕಡಿತದ ಭಾಗವಾಗಿ ಲೇ ಆಫ್ ನಡೆಯಬಹುದು ಎನ್ನಲಾಗಿದೆ.

ಲಂಡನ್​ನ ಬಾರ್​ಕ್ಲೇಸ್ ಕಂಪನಿಯಲ್ಲಿ 2,000 ಉದ್ಯೋಗಿಗಳ ಲೇ ಆಫ್ ಸಾಧ್ಯತೆ; 10 ಸಾವಿರ ಕೋಟಿ ರೂ ವೆಚ್ಚ ಕಡಿತಕ್ಕೆ ಯೋಜನೆ
ಬಾರ್ಕ್ಲೇಸ್ ಬ್ಯಾಂಕ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Nov 24, 2023 | 10:32 AM

ಲಂಡನ್, ನವೆಂಬರ್ 24: ಬ್ರಿಟನ್ ದೇಶದ ಬಾರ್​ಕ್ಲೇಸ್ ಬ್ಯಾಂಕ್ (Barclays Bank) ಹಣಕಾಸು ಸಂಕಷ್ಟಕ್ಕೆ ಸಿಲುಕುವುದನ್ನು ತಪ್ಪಿಸಿಕೊಳ್ಳಲು ಹೆಣಗಾಡುತ್ತಿದೆ. ಅದಕ್ಕಾಗಿ ವೆಚ್ಚ ಕಡಿತಕ್ಕೆ ಮುಂದಾಗಿದೆ. ರಾಯ್ಟರ್ಸ್ ವರದಿ ಪ್ರಕಾರ 1 ಬಿಲಿಯನ್ ಪೌಂಡ್​ಗಳಷ್ಟು (10,400 ಕೋಟಿ ರೂ) ವೆಚ್ಚಕಡಿತಕ್ಕೆ ಯೋಜಿಸುತ್ತಿದೆ. ಈ ನಿಟ್ಟಿನಲ್ಲಿ ಸುಮಾರು 2,000 ಉದ್ಯೋಗಿಗಳನ್ನು ಲೇ ಆಫ್ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ನಿರೀಕ್ಷಿಸಿದ ರೀತಿಯಲ್ಲಿ ವೆಚ್ಚ ಕಡಿತದ (cost cutting) ಯೋಜನೆ ಪೂರ್ಣವಾಗಿ ಜಾರಿಗೆ ತಂದರೆ 1,500ರಿಂದ 2,000 ಉದ್ಯೋಗಿಗಳು ಕೆಲಸ ಕಳೆದುಕೊಳ್ಳುವ ಭೀತಿ ಇದೆ.

ಬಾರ್ಕ್ಲೇಸ್ ಬ್ಯಾಂಕ್​ನ ಬ್ಯಾಕ್ ಅಫೀಸ್ ಕೆಲಸಗಳಲ್ಲಿ ಹೆಚ್ಚು ಕತ್ತರಿ ಬೀಳಬಹುದು ಎಂದು ತನ್ನ ಸುದ್ದಿಮೂಲವನ್ನು ಉಲ್ಲೇಖಿಸಿ ರಾಯ್ಟರ್ಸ್ ವರದಿ ಮಾಡಿದೆ. ಬಿಎಕ್ಸ್ ಎಂದು ಕರೆಯಲಾಗುವ ಬಾರ್ಕ್ಲೇಸ್ ಎಕ್ಸಿಕ್ಯೂಶನ್ ಸರ್ವಿಸಸ್ ವಿಭಾಗದಲ್ಲಿ ಉದ್ಯೋಗನಷ್ಟ ಕೇಂದ್ರೀಕೃತವಾಗಿರಲಿದೆ. ಬ್ಯಾಂಕ್​ನ ಕಾಸ್ಟ್ ಕಟ್ಟಿಂಗ್ ಯೋಜನೆಯಲ್ಲಿ ಇದೂ ಒಂದು ಪ್ರಮುಖ ಭಾಗವಾಗಿದೆ. ಗಮನಿಸಬೇಕಾದ ಸಂಗತಿ ಎಂದರೆ, ಕಾಸ್ಟ್ ಕಟ್ಟಿಂಗ್ ಆಗಲೀ ಅಥವಾ ಲೇ ಆಫ್ ಆಗಲೀ ಒಮ್ಮೆಗೇ ಜಾರಿಯಾಗುವುದಿಲ್ಲ. ಹಲವು ವರ್ಷಗಳ ಕಾಲಾವಧಿಯಲ್ಲಿ ಹಂತ ಹಂತವಾಗಿ ಇದು ಅನುಷ್ಠಾನಕ್ಕೆ ಬರುತ್ತದೆ ಎಂಬುದು ಸದ್ಯಕ್ಕೆ ಸಿಕ್ಕಿರುವ ಮಾಹಿತಿ.

ಇದನ್ನೂ ಓದಿ: ಖಾನ್ ಮಾರ್ಕೆಟ್ ಭಾರತದ ಅತ್ಯಂತ ದುಬಾರಿ ರೀಟೇಲ್ ಮಾರುಕಟ್ಟೆ; ಬೇರೆ ಕಡೆ ಹೇಗೆ?

ಬಿಎಕ್ಸ್ ಅಥವಾ ಬಾರ್ಕ್ಲೇಸ್ ಎಕ್ಸಿಕ್ಯೂಷನ್ ಸರ್ವಿಸಸ್​ನಲ್ಲಿ ಸಿಬ್ಬಂದಿ ಸಂಖ್ಯೆ ಮತ್ತು ವೆಚ್ಚ ಇತ್ತೀಚಿನ ವರ್ಷಗಳಲ್ಲಿ ಗಣನೀಯವಾಗಿ ಹೆಚ್ಚಾಗಿದೆ. ಈ ವಿಭಾಗದಲ್ಲಿ ಒಟ್ಟು ಸಿಬ್ಬಂದಿವರ್ಗ 22,300 ತಲುಪಿದೆ. ಒಟ್ಟಾರೆ ಬಾರ್ಕ್ಲೇ ಸಿಬ್ಬಂದಿ ಪೈಕಿ ಈ ವಿಭಾಗದಲ್ಲೇ ಕಾಲುಭಾಗದಷ್ಟಿದ್ದಾರೆ. ಇವರಿಗೆ ಕಂಪನಿ ಮಾಡುತ್ತಿರುವ ವಾರ್ಷಿಕ ವೆಚ್ಚ 2 ಬಿಲಿಯನ್ ಪೌಂಡ್ (21,000 ಕೋಟಿ ರೂ) ಎನ್ನಲಾಗುತ್ತಿದೆ.

ಭಾರತದ ಮೂಲದ ವೆಂಕಟ್ ಸಿಇಒ

ಬಾರ್ಕ್ಲೇಸ್ ಬ್ಯಾಂಕ್​ಗೆ ಭಾರತ ಮೂಲದ ಸಿಎಸ್ ವೆಂಕಟಕೃಷ್ಣನ್ ಅವರು ಸಿಇಒ ಆಗಿರುವುದು ವಿಶೇಷ. ಬ್ಯಾಂಕ್ ಸಾಕಷ್ಟು ವ್ಯಾವಹಾರಿಕ ನಷ್ಟ ಅನುಭವಿಸಿದ ಸಂದರ್ಭದಲ್ಲಿ ಚುಕ್ಕಾಣಿ ಹಿಡಿದಿರುವ ಅವರ ಮುಂದೆ ಸಾಕಷ್ಟು ಸವಾಲುಗಳಿವೆ. ಯೂರೋಪ್​ನ ಬೃಹತ್ ಬ್ಯಾಂಕ್​ಗಳೆನಿಸಿದ ಡ್ಯೂಷೆ ಬ್ಯಾಂಕ್, ಯುಬಿಎಸ್, ಬಿಎನ್​ಪಿ ಪರಿಬಾಸ್ ಮೊದಲಾದ ಸಂಸ್ಥೆಗಳ ಜೊತೆ ಪೈಪೋಟಿ ನಡೆಸಿ ಲಾಭದ ಹಳಿಗೆ ಮರಳಬೇಕಾಗಿರುವ ಬಾರ್ಕ್ಲೇಸ್ ಬ್ಯಾಂಕ್​ಗೆ ಈಗ ವೆಚ್ಚ ಕಡಿತ ಅನಿವಾರ್ಯ ಎನ್ನಲಾಗಿದೆ.

ಇದನ್ನೂ ಓದಿ: RBI: 2,000 ರೂ ನೋಟು ಇನ್ನೂ ಇದೆಯಾ? ಆರ್​ಬಿಐ ಕಚೇರಿಗೆ ಹೋಗದೇ ಹಣ ವಿನಿಮಯ ಸಾಧ್ಯ; ಇಲ್ಲಿದೆ ಮಾರ್ಗ

ಬಾರ್ಕ್ಲೇಸ್ ಬ್ಯಾಂಕ್​ನಲ್ಲಿ ಹೆಚ್ಚೂಕಡಿಮೆ 90,000 ಸಮೀಪದಷ್ಟು ಉದ್ಯೋಗಿಗಳ ಸಂಖ್ಯೆ ಇದೆ. ಈ ಪೈಕಿ 22,000ಕ್ಕೂ ಹೆಚ್ಚು ಮಂದಿ ಉದ್ಯೋಗಿಗಳು ಬಿಎಕ್ಸ್ ಡಿವಿಶನ್​ಗಳಲ್ಲಿ ಇದ್ದಾರೆ. ಈ ಡಿವಿಶನ್​ನಲ್ಲಿ ಶೇ. 10ರಷ್ಟು ಉದ್ಯೋಗಿಗಳಿಗೆ ಕೆಲಸ ಹೋಗುವ ಭೀತಿ ಇದೆ. ಇದರ ಜೊತೆಗೆ ಬ್ಯಾಂಕ್​ನ ಇನ್ನಷ್ಟು ವೆಚ್ಚಕಡಿತದ ಪ್ಲಾನ್​ಗಳೇನು ಎಂಬುದು ಗೊತ್ತಾಗಿಲ್ಲ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 10:25 am, Fri, 24 November 23

ರಶೀದ್ ಖಾನ್ ವಿರುದ್ಧ ಬೌಂಡರಿಗಳ ಮಳೆಗರೆದ ಲಿವಿಂಗ್‌ಸ್ಟೋನ್
ರಶೀದ್ ಖಾನ್ ವಿರುದ್ಧ ಬೌಂಡರಿಗಳ ಮಳೆಗರೆದ ಲಿವಿಂಗ್‌ಸ್ಟೋನ್
ರಸ್ತೆಯಲ್ಲಿ ಹೋಗುತ್ತಿದ್ದವರ ಮೇಲೆ ಗೂಳಿ ದಾಳಿ; ಶಾಕಿಂಗ್ ವಿಡಿಯೋ ಇಲ್ಲಿದೆ
ರಸ್ತೆಯಲ್ಲಿ ಹೋಗುತ್ತಿದ್ದವರ ಮೇಲೆ ಗೂಳಿ ದಾಳಿ; ಶಾಕಿಂಗ್ ವಿಡಿಯೋ ಇಲ್ಲಿದೆ
ಬೀದರ್ ಜಡ್ಜ್​​ ಮನೆಯಲ್ಲಿಯೇ ಕಳ್ಳತನ ಮಾಡಿದ ಖತರ್ನಾಕ್ ಖದೀಮರು
ಬೀದರ್ ಜಡ್ಜ್​​ ಮನೆಯಲ್ಲಿಯೇ ಕಳ್ಳತನ ಮಾಡಿದ ಖತರ್ನಾಕ್ ಖದೀಮರು
ಕರ್ನಾಟಕದಲ್ಲಿ 30,000 ಎಕರೆ ವಕ್ಫ್ ಭೂಮಿ ವಿದೇಶಿ ಕಂಪನಿಗಳಿಗೆ ಗುತ್ತಿಗೆ;ಶಾ
ಕರ್ನಾಟಕದಲ್ಲಿ 30,000 ಎಕರೆ ವಕ್ಫ್ ಭೂಮಿ ವಿದೇಶಿ ಕಂಪನಿಗಳಿಗೆ ಗುತ್ತಿಗೆ;ಶಾ
ಸಿರಾಜ್ ಮಾರಕ ದಾಳಿಗೆ ತತ್ತರಿಸಿದ ಆರ್​ಸಿಬಿ
ಸಿರಾಜ್ ಮಾರಕ ದಾಳಿಗೆ ತತ್ತರಿಸಿದ ಆರ್​ಸಿಬಿ
ನನಗೆ ನ್ಯಾಯ ಬೇಕೆಂದು ವಿಧಾನಸೌಧ ಮುಂದೆ ಆತ್ಮಹತ್ಯೆಗೆ ಯತ್ನಿಸಿದ ಯುವಕ
ನನಗೆ ನ್ಯಾಯ ಬೇಕೆಂದು ವಿಧಾನಸೌಧ ಮುಂದೆ ಆತ್ಮಹತ್ಯೆಗೆ ಯತ್ನಿಸಿದ ಯುವಕ
ಮುಖ್ಯಮಂತ್ರಿ ಸಿದ್ದರಾಮಯ್ಯರಿಂದ ಕರ್ನಾಟಕ ಭವನದ ಉದ್ಘಾಟನೆ
ಮುಖ್ಯಮಂತ್ರಿ ಸಿದ್ದರಾಮಯ್ಯರಿಂದ ಕರ್ನಾಟಕ ಭವನದ ಉದ್ಘಾಟನೆ
ಸುಪ್ರೀಂ ಕೋರ್ಟ್ ಗಾರ್ಡನ್​ನಿಂದಲೇ ಗುಲಾಬಿ ಹೂವು ಕದ್ದ ಚಾಲಾಕಿ ಮಹಿಳೆ ಹೇಳಿದ
ಸುಪ್ರೀಂ ಕೋರ್ಟ್ ಗಾರ್ಡನ್​ನಿಂದಲೇ ಗುಲಾಬಿ ಹೂವು ಕದ್ದ ಚಾಲಾಕಿ ಮಹಿಳೆ ಹೇಳಿದ
ವ್ಯಕ್ತಿ ಮುಖ್ಯವಲ್ಲ, ರಾಜ್ಯದ ಜನ ಮತ್ತು ಪಕ್ಷದ ಭವಿಷ್ಯ ಮುಖ್ಯ: ಬಿಪಿ ಹರೀಶ್
ವ್ಯಕ್ತಿ ಮುಖ್ಯವಲ್ಲ, ರಾಜ್ಯದ ಜನ ಮತ್ತು ಪಕ್ಷದ ಭವಿಷ್ಯ ಮುಖ್ಯ: ಬಿಪಿ ಹರೀಶ್
ವಕ್ಫ್ ತಿದ್ದುಪಡಿ ಮಸೂದೆ ಪಾಸಾಗಿದ್ದಕ್ಕೂ ಶಿವಕುಮಾರ್ ನೋ ಕಾಮೆಂಟ್ಸ್
ವಕ್ಫ್ ತಿದ್ದುಪಡಿ ಮಸೂದೆ ಪಾಸಾಗಿದ್ದಕ್ಕೂ ಶಿವಕುಮಾರ್ ನೋ ಕಾಮೆಂಟ್ಸ್