AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

5ಜಿ ಅಲ್ಲ 6ಜಿ; ಭಾರತ ಮತ್ತು ಅಮೆರಿಕದಿಂದ ಜಂಟಿಯಾಗಿ 6ಜಿ ವೈರ್ಲೆಸ್ ತಂತ್ರಜ್ಞಾನ ಅಭಿವೃದ್ಧಿ; ಮಹತ್ವದ ಬೆಳವಣಿಗೆ

ATIS, Bharat 6G Alliance Pact: ಅಮೆರಿಕದ ಎಟಿಐಎಸ್​ನ ನೆಕ್ಸ್​ಟ್ ಜಿ ಅಲಾಯನ್ಸ್ ಮತ್ತು ಭಾರತ್ 6ಜಿ ಅಲಾಯನ್ಸ್ ಸಂಘಟನೆಗಳ ಮಧ್ಯೆ ಎಂಒಯುಗೆ ಸಹಿ ಬಿದ್ದಿದೆ. 6ಜಿ ತಂತ್ರಜ್ಞಾನ ಅಭಿವೃದ್ಧಿಗೆ ಭಾರತ ಮತ್ತು ಅಮೆರಿಕ ಮಧ್ಯೆ ಸಹಭಾಗಿತ್ವ ಸಾಧಿಸಲು ಈ ಒಪ್ಪಂದ ಆರಂಭಿಕ ಹೆಜ್ಜೆಯಾಗಿದೆ. ಮುಂದಿನ ತಲೆಮಾರಿನ ಮೊಬೈಲ್ ವೈರ್ಲೆಸ್ ತಂತ್ರಜ್ಞಾನ ಅಭಿವೃದ್ಧಿಪಡಿಸಲು ಎರಡೂ ದೇಶಗಳ ಮಧ್ಯೆ ಯಾವ್ಯಾವ ರೀತಿಯಲ್ಲಿ ಸಹಕಾರ ಹೊಂದಬಹುದು ಎಂಬುದನ್ನು ಅನ್ವೇಷಿಸಲು ಈ ಒಪ್ಪಂದವಾಗಿದೆ.

5ಜಿ ಅಲ್ಲ 6ಜಿ; ಭಾರತ ಮತ್ತು ಅಮೆರಿಕದಿಂದ ಜಂಟಿಯಾಗಿ 6ಜಿ ವೈರ್ಲೆಸ್ ತಂತ್ರಜ್ಞಾನ ಅಭಿವೃದ್ಧಿ; ಮಹತ್ವದ ಬೆಳವಣಿಗೆ
ನರೇಂದ್ರ ಮೋದಿ ಮತ್ತು ಜೋ ಬೈಡನ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Sep 10, 2023 | 10:52 AM

Share

ನವದೆಹಲಿ, ಸೆಪ್ಟೆಂಬರ್ 10: ಆರನೇ ತಲೆಮಾರಿನ ಮೊಬೈಲ್ ನಿಸ್ತಂತು ತಂತ್ರಜ್ಞಾನ (6G Wireless Technology) ಎಂದು ಕರೆಯಲಾಗುವ 6ಜಿ ಅನ್ನು ಭಾರತ ಮತ್ತು ಅಮೆರಿಕ ಜಂಟಿಯಾಗಿ ಅಭಿವೃದ್ಧಿಪಡಿಸಲು ಮುಂದಾಗಿವೆ. ಜಿ20 ನಾಯಕರ ಶೃಂಗಸಭೆಯ ವೇಳೆ ಅಮೆರಿಕ ಅಧ್ಯಕ್ಷ ಜೋ ಬೈಡನ್ ಜೊತೆ ಪ್ರಧಾನಿ ನರೇಂದ್ರ ಮೋದಿ ನಡೆಸಿದ ವಿಸ್ತೃತ ಮಾತುಕತೆಗಳಲ್ಲಿ ಈ ವಿಚಾರವೂ ಪ್ರಮುಖವಾಗಿ ಇದೆ. ಇದೇ ವೇಳೆ, ಎರಡೂ ದೇಶಗಳ ನಡುವೆ 6ಜಿ ಅಭಿವೃದ್ಧಿಗೆ ತಾಳಮೇಳ ಬರುವಂತೆ ಭಾರತ್ 6ಜಿ ಕೂಟ ಹಾಗೂ ಅಮೆರಿಕದ ಎಟಿಐಎಸ್ ನೆಕ್ಸ್ಟ್ ಜಿ ಕೂಟ, ಎರಡರ ಮಧ್ಯೆ ಒಪ್ಪಂದ ಆಗಿದೆ. ವೈರ್ಲೆಸ್ 6ಜಿ ತಂತ್ರಜ್ಞಾನ ಅಭಿವೃದ್ಧಿಯಲ್ಲಿ ಸಹಯೋಗ ಸಾಧಿಸುವ ಸಾಧ್ಯತೆಗಳನ್ನು ಪರಾಮರ್ಶಿಸಲು ಈ ಒಪ್ಪಂದವಾಗಿದೆ. ಇದು ಇನ್ನೂ ಆರಂಭಿಕ ಹೆಜ್ಜೆಯಾಗಿದ್ದು, ಮುಂದಿನ ದಿನಗಳಲ್ಲಿ 6ಜಿ ತಂತ್ರಜ್ಞಾನ ಅಭಿವೃದ್ಧಿಗೆ ಎರಡೂ ದೇಶಗಳ ಮಧ್ಯೆ ನೈಜ ಹೊಂದಾಣಿಕೆ ಶುರುವಾಗುವ ಆಶಯ ಇದೆ.

ಭಾರತ್ 6ಜಿ ಅಲಾಯನ್ಸ್ (Bharat 6G Alliance) ಮತ್ತು ನೆಕ್ಸ್​ಟ್ ಜಿ ಅಲಾಯನ್ಸ್ (Next G Alliance) ಎಂಒಯುಗೆ ಸಹಿಹಾಕಿರುವ ವಿಚಾರವನ್ನು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಬಹಿರಂಗಪಡಿಸಿದ್ದಾರೆ. ಭಾರತ ಮತ್ತು ಅಮೆರಿಕ ಜಂಟಿಯಾಗಿ 6ಜಿ ತಂತ್ರಜ್ಞಾನ ಅಭಿವೃದ್ಧಿಪಡಿಸಲು ಬದ್ಧವಾಗಿವೆ ಎಂದವರು ಟ್ವೀಟ್ ಮಾಡಿದ್ದಾರೆ.

ಎಟಿಐಎಸ್ ಎಂದರೆ ಅಲಾಯನ್ಸ್ ಫಾರ್ ಟೆಲಿಕಮ್ಯೂನಿಕೇಶನ್ಸ್ ಇಂಡಸ್ಟ್ರಿ ಸಲ್ಯೂಶನ್ಸ್. ಇದು ಉತ್ತರ ಅಮೆರಿಕದ ಖಾಸಗಿ ಟೆಲಿಕಾಂ ಕಂಪನಿಗಳು ಸೇರಿ ಮಾಡಿಕೊಂಡಿರುವ ಒಂದು ಗುಂಪು. ಈ ಸಂಘಟನೆಯಿಂದ ಶುರುವಾಗಿರುವ ಯೋಜನೆಯೇ ನೆಕ್​ಸ್ಟ್ ಜಿ ಅಲಾಯನ್ಸ್. ಉತ್ತರ ಅಮೆರಿಕದಲ್ಲಿ ವೈರ್ಲೆಸ್ ತಂತ್ರಜ್ಞಾನದ ಅಭಿವೃದ್ಧಿಗೆ ಖಾಸಗಿ ವಲಯದಿಂದ ಇದನ್ನು ಆರಂಭಿಸಲಾಗಿದೆ. 6ಜಿ ತಂತ್ರಜ್ಞಾನ ಅಭಿವೃದ್ಧಿ ಈ ನಿಟ್ಟಿನಲ್ಲಿ ಇದರ ಮೊದಲ ಹೆಜ್ಜೆ. ಇಲ್ಲಿ ಉತ್ತರ ಅಮೆರಿಕ ಎಂದರೆ ಯುಎಸ್​ಎ, ಕೆನಡಾ ಇತ್ಯಾದಿ ದೇಶಗಳಿರುವ ಖಂಡ.

ಇದನ್ನೂ ಓದಿ: ದೆಹಲಿಯಲ್ಲಿ G20 ಶೃಂಗಸಭೆ: ರಿಷಿ ಸುನಕ್​​​ ಸೇರಿದಂತೆ ಇತರೆ ರಾಷ್ಟ್ರ ನಾಯಕರೊಂದಿಗೆ ಪ್ರಧಾನಿ ಮೋದಿ ದ್ವಿಪಕ್ಷೀಯ ಮಾತುಕತೆ

ಇನ್ನು, ಭಾರತ್ 6ಜಿ ಅಲಾಯನ್ಸ್ ಎಂಬುದು ಭಾರತದ ಉದ್ಯಮ ವಲಯ, ರಾಷ್ಟ್ರೀಯ ಸಂಶೋಧನಾ ಸಂಸ್ಥೆಗಳು, ಶೈಕ್ಷಣಿಕ ಸಂಸ್ಥೆಗಳು ಸೇರಿ ರಚಿಸಲಾಗಿರುವ ಒಂದು ಕೂಟ. ಭಾರತೀಯ ನಾಗರಿಕರಿಗೆ ಹಾಗೂ ವಿಶ್ವಾದ್ಯಂತ ಮಂದಿಗೆ ಉನ್ನತ ಗುಣಮಟ್ಟದ ಜೀವನಾನುಭವ ಕಲ್ಪಿಸುವ ತಂತ್ರಜ್ಞಾನದ ಅಭಿವೃದ್ಧಿ ಸಾಧಿಸುವುದು ಇದರ ಉದ್ದೇಶವಾಗಿದೆ.

ಈಗ ಎಟಿಐಎಸ್​ನ ನೆಕ್ಸ್​ಟ್ ಜಿ ಕೂಟ ಮತ್ತು ಭಾರತ್ 6ಜಿ ಕೂಟದ ಮಧ್ಯೆ ಆಗಿರುವ ತಿಳಿವಳಿಕೆ ಒಪ್ಪಂದವು ಒಂದು ವಿಶ್ವಾಸಾರ್ಹ ದೂರಸಂಪರ್ಕ ವ್ಯವಸ್ಥೆ, ಉತ್ತಮ ಸರಬರಾಜು ಸರಪಳಿ, ಜಾಗತಿಕ ಡಿಜಿಟಲ್ ಒಳಗೊಳ್ಳುವಿಕೆಗೆ ಉತ್ತೇಜನ ಸಾಧಿಸುವ ಆಶಯ ಹೊಂದಿದೆ.

ಎಟಿಐಎಸ್ ಸಂಸ್ಥೆ ಭಾರತೀಯ ಸಂಘಟನೆ ಜೊತೆ ಮಾತ್ರವಲ್ಲ, ವಿಶ್ವದ ವಿವಿಧ ದೇಶಗಳ ಸಂಘಟನೆಗಳ ಜೊತೆ ಸಹಭಾಗಿತ್ವಕ್ಕೆ ಮುಂದಾಗಿದೆ. ಕೊರಿಯಾದ 5ಜಿ ಫೋರಂ, ಜಪಾನ್ ಮತ್ತು ಯೂರೋಪ್​ನ ವಿವಿಧ ಸಂಘಟನೆಗಳ ಜೊತೆ ಒಪ್ಪಂದ ಮಾಡಿಕೊಂಡಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
Vijaya Sarathy SN
Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ಭೀಕರ ಬಿರುಗಾಳಿಗೆ ಶೀಟ್​ ಸಮೇತ ಗಾಳಿಯಲ್ಲಿ ಹಾರಿದ ವ್ಯಕ್ತಿ
ಭೀಕರ ಬಿರುಗಾಳಿಗೆ ಶೀಟ್​ ಸಮೇತ ಗಾಳಿಯಲ್ಲಿ ಹಾರಿದ ವ್ಯಕ್ತಿ
ಮಾಧುಸ್ವಾಮಿ ದಿಢೀರ್ ಪ್ರತ್ಯಕ್ಷ:ಸ್ವಪಕ್ಷದ ನಾಯಕರ ನಡೆಗೆ ಬಹಿರಂಗ ಅಸಮಾಧಾನ
ಮಾಧುಸ್ವಾಮಿ ದಿಢೀರ್ ಪ್ರತ್ಯಕ್ಷ:ಸ್ವಪಕ್ಷದ ನಾಯಕರ ನಡೆಗೆ ಬಹಿರಂಗ ಅಸಮಾಧಾನ
ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​
ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?
ನಾಯಂಡಹಳ್ಳಿ ಗೋದಾಮಿನಲ್ಲಿ ಅಗ್ನಿ ಅನಾಹುತ: ಧಗ ಧಗಿಸಿದ ವಸ್ತುಗಳು
ನಾಯಂಡಹಳ್ಳಿ ಗೋದಾಮಿನಲ್ಲಿ ಅಗ್ನಿ ಅನಾಹುತ: ಧಗ ಧಗಿಸಿದ ವಸ್ತುಗಳು
ಬುರ್ಖಾ ಧರಿಸಿ ಬಂದು ಚಿನ್ನದಂಗಡಿ ಮಾಲೀಕನ ಕಣ್ಣಿಗೆ ಖಾರದಪುಡಿ ಎರಚಿದ ಮಹಿಳೆ
ಬುರ್ಖಾ ಧರಿಸಿ ಬಂದು ಚಿನ್ನದಂಗಡಿ ಮಾಲೀಕನ ಕಣ್ಣಿಗೆ ಖಾರದಪುಡಿ ಎರಚಿದ ಮಹಿಳೆ
ಮೋದಿ ರೀತಿ ಬೆಂಗಾವಲು ಪಡೆ ವಾಹನ ಕಡಿಮೆ ಮಾಡ್ತಾರಾ ಸಿಎಂ? ಹೇಳಿದ್ದೇನು ನೋಡಿ
ಮೋದಿ ರೀತಿ ಬೆಂಗಾವಲು ಪಡೆ ವಾಹನ ಕಡಿಮೆ ಮಾಡ್ತಾರಾ ಸಿಎಂ? ಹೇಳಿದ್ದೇನು ನೋಡಿ
ಅಜ್ಜನ ಹೆಸರ ಮೇಲೆ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ ಸಮರ್ಥ್ ಶಾಮನೂರು!
ಅಜ್ಜನ ಹೆಸರ ಮೇಲೆ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ ಸಮರ್ಥ್ ಶಾಮನೂರು!
ದಿಲೀಪ್​​ರ ಉಳಿಸಿಕೊಳ್ಳಲು ಪತ್ನಿ ಮಾಡಿದ ಪ್ರಯತ್ನಗಳ ವಿವರಿಸಿದ ಆಟೋ ಚಾಲಕ
ದಿಲೀಪ್​​ರ ಉಳಿಸಿಕೊಳ್ಳಲು ಪತ್ನಿ ಮಾಡಿದ ಪ್ರಯತ್ನಗಳ ವಿವರಿಸಿದ ಆಟೋ ಚಾಲಕ