AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರತ್ ಟ್ಯಾಕ್ಸಿಗೆ 500 ರೂ ನೀಡಿದರೆ ನೀವೇ ಡ್ರೈವರ್, ನೀವೇ ಮಾಲೀಕರು; ಈ ಕಂಪನಿಯ ಬ್ಯುಸಿನೆಸ್ ಮಾಡಲ್ ಹೇಗೆ?

Bharat Taxi business model explained: ಸಹಕಾರಿ ತತ್ವದಲ್ಲಿ ಭಾರತದ ಮೊದಲ ಟ್ಯಾಕ್ಸಿ ಕಂಪನಿ ಎನಿಸಿದ ಭಾರತ್ ಟ್ಯಾಕ್ಸಿಯ ಸೇವೆ ಆರಂಭವಾಗಿದೆ. ಚಾಲಕರು 500 ರೂ ಷೇರು ಖರೀದಿಸಿ ಈ ಪ್ಲಾಟ್​ಫಾರ್ಮ್​ಗೆ ಜೋಡಿತವಾಗಬಹುದು. ಪ್ರತೀ ರೈಡ್​ನಲ್ಲಿ ಗ್ರಾಹಕರಿಂದ ಸಿಗುವ ಎಲ್ಲಾ ಹಣವೂ ಚಾಲಕರಿಗೆ ಹೋಗುತ್ತದೆ. ಊಬರ್, ಓಲಾ ರೀತಿ ಪ್ಲಾಟ್​ಫಾರ್ಮ್ ಫೀ, ಕಮಿಷನ್ ಅನ್ನು ನೀಡುವ ಅಗತ್ಯವಿಲ್ಲ.

ಭಾರತ್ ಟ್ಯಾಕ್ಸಿಗೆ 500 ರೂ ನೀಡಿದರೆ ನೀವೇ ಡ್ರೈವರ್, ನೀವೇ ಮಾಲೀಕರು; ಈ ಕಂಪನಿಯ ಬ್ಯುಸಿನೆಸ್ ಮಾಡಲ್ ಹೇಗೆ?
ಭಾರತ್ ಟ್ಯಾಕ್ಸಿ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Feb 24, 2026 | 2:58 PM

Share

ನವದೆಹಲಿ, ಫೆಬ್ರುವರಿ 24: ಕೇಂದ್ರ ಸಹಕಾರ ಸಚಿವ ಅಮಿತ್ ಶಾ ಅವರು ನಿನ್ನೆ ಸೋಮವಾರ (ಫೆ. 23) ಭಾರತ್ ಟ್ಯಾಕ್ಸಿ (Bhara Taxi) ಸೇವೆಗೆ ಚಾಲನೆ ನೀಡಿದ್ದಾರೆ. ಅಮೂಲ್ ನೇತೃತ್ವದಲ್ಲಿ ವಿವಿಧ ಸಹಕಾರಿ ಸಂಸ್ಥೆಗಳು ಸೇರಿ ಕಟ್ಟಿರುವ ಕಂಪನಿ ಇದು. ಅಮೂಲ್​ನ ರೀತಿಯಲ್ಲೇ ಭಾರತ್ ಟ್ಯಾಕ್ಸಿಯ ಬ್ಯುಸಿನೆಸ್ ಮಾಡಲ್ ಇದೆ. ಅಮುಲ್​ನಲ್ಲಿ ಹಾಲು ಉತ್ಪಾದಕರೇ ಮಾಲೀಕರಾಗಿದ್ದಾರೆ. ಭಾರತ್ ಟ್ಯಾಕ್ಸಿಯಲ್ಲಿ ಚಾಲಕರೇ ಮಾಲೀಕರಾಗಿರುತ್ತಾರೆ.

ಏನಿದು ಭಾರತ್ ಟ್ಯಾಕ್ಸಿ?

ಓಲಾ, ಊಬರ್, ರಾಪಿಡೋ, ನಮ್ಮ ಯಾತ್ರಿ ರೀತಿಯಲ್ಲಿ ಭಾರತ್ ಟ್ಯಾಕ್ಸಿ ಒಂದು ರೇಡ್ ಹೈಲಿಂಗ್ ಪ್ಲಾಟ್​ಫಾರ್ಮ್ ಆಗಿದೆ. ಓಲಾ, ಊಬರ್, ರಾಪಿಡೋ ಕಂಪನಿಗಳು ಡ್ರೈವರ್​ಗಳಿಂದ ಪ್ರತೀ ರೇಡ್​ನಲ್ಲಿ ಶೇ. 30ರಷ್ಟು ಕಮಿಷನ್ ಪಡೆಯುತ್ತವೆ. ಆದರೆ, ಭಾರತ್ ಟ್ಯಾಕ್ಸಿಯಲ್ಲಿ ಈ ಕಮಿಷನ್ ಮಾಡಲ್ ಇರೋದಿಲ್ಲ. ರೇಡ್​ನಲ್ಲಿ ಬರುವ ಹಣವೆಲ್ಲವೂ ಚಾಲಕರಿಗೆಯೇ ಸಂದಾಯವಾಗುತ್ತದೆ.

ಇದನ್ನೂ ಓದಿ: ನಿಷ್ಕ್ರಿಯ ಇಪಿಎಫ್ ಅಕೌಂಟ್​ಗಳಲ್ಲಿರುವ ಹಣ ನೇರವಾಗಿ ನಿಮ್ಮ ಬ್ಯಾಂಕ್ ಖಾತೆಗೆ?

ಹಾಗೆಯೇ, ಊಬರ್, ಓಲಾ, ರಾಪಿಡೋದಲ್ಲಿ ಚಾಲಕರಿಗೆ ಕನಿಷ್ಠ ದರ (ಮಿನಿಮಮ್ ಬೇಸ್ ರೇಟ್) ನಿಗದಿಯಾಗಿರುವುದಿಲ್ಲ. ಅಂದರೆ, ಒಂದು ರೇಡ್​ನಲ್ಲಿ ಕನಿಷ್ಠ ಖಾತ್ರಿ ದರ ಎಂಬುದು ಡ್ರೈವರ್​ಗೆ ಖಾತ್ರಿ ಇರುವುದಿಲ್ಲ. ಆದರೆ, ಭಾರತ್ ಟ್ಯಾಕ್ಸಿಯಲ್ಲಿ ಇಂಥ ಫೀಚರ್ ಅನ್ನು ಅಳವಡಿಸಲಾಗಿದೆ.

ಭಾರತ್ ಟ್ಯಾಕ್ಸಿಗೆ ಆದಾಯ ಹೇಗೆ?

ಭಾರತ್ ಟ್ಯಾಕ್ಸಿ ಪ್ಲಾಟ್​ಫಾರ್ಮ್​ಗೆ ಜೋಡಿತ ಆಗಬಯಸುವ ಚಾಲಕರು 500 ರೂ ಮೌಲ್ಯದ ಷೇರುಗಳನ್ನು ಖರೀದಿಸಬೇಕು. ಇದು ಆದಲ್ಲಿ ಭಾರತ್ ಟ್ಯಾಕ್ಸಿಯಲ್ಲಿ ಚಾಲಕರಿಗೆ ಒಂದು ಸಣ್ಣ ಪಾಲು ಸಿಗುತ್ತದೆ. ಈ ಮೂಲಕ ಅವರು ಸಹ-ಮಾಲೀಕರಾದಂತೆ.

ಭಾರತ್ ಟ್ಯಾಕ್ಸಿ ಸಂಸ್ಥೆಯು ಮುಂದೆ ಲಾಭ ಗಳಿಸುತ್ತಾ ಹೋದಂತೆ, ಲಾಭದಲ್ಲಿ ಸಿಂಹಪಾಲನ್ನು ಚಾಲಕರಿಗೇ ಮರಳಿಸಲಾಗುವುದು. ನೂರು ರೂ ಲಾಭದಲ್ಲಿ 80 ರೂ ಅನ್ನು ಚಾಲಕರಿಗೆ ಕೊಡಲಾಗುತ್ತದೆ. ಉಳಿದ ಶೇ. 20ರಷ್ಟನ್ನು ಪ್ಲಾಟ್​ಫಾರ್ಮ್ ಅಭಿವೃದ್ಧಿ ಮತ್ತಿತರ ಕಾರ್ಯಗಳಿಗೆ ಬಳಕೆ ಮಾಡಲಾಗುತ್ತದೆ.

ಇದನ್ನೂ ಓದಿ: ಐಡಿಯಾ ಯಾರದು ಅನ್ನೋದು ಮುಖ್ಯ ಅಲ್ಲ, ಅದನ್ನು ಜಾರಿಗೆ ತರೋನೇ ಜಾಣ: ಚ್ಯಾಟ್​ಜಿಪಿಟಿ ರೂವಾರಿ ಸ್ಯಾಮ್ ಆಲ್ಟ್​ಮ್ಯಾನ್ ಸಲಹೆ ಕೇಳಿ

ಇಲ್ಲಿ ಲಾಭದಲ್ಲಿ ಚಾಲಕರೆಲ್ಲರಿಗೆ ಸಮಾನವಾಗಿ ಹಂಚಲಾಗುವುದಿಲ್ಲ. ಚಾಲಕರು ಅವರು ಕ್ರಮಿಸಿರುವ ದೂರಕ್ಕೆ ಅನುಗುಣವಾಗಿ ಲಾಭ ಹಂಚಿಕೆ ಆಗುತ್ತದೆ.

ಭಾರತ್ ಟ್ಯಾಕ್ಸಿ ಸದ್ಯ ದೆಹಲಿ ಎನ್​​ಸಿಆರ್ ಮತ್ತು ರಾಜಕೋಟ್ ಈ ಎರಡು ನಗರಗಳಲ್ಲಿ ಚಾಲನೆಯಲ್ಲಿದೆ. ಮುಂಬರುವ ವರ್ಷಗಳಲ್ಲಿ ಬಹುತೇಕ ಎಲ್ಲಾ ನಗರ ಹಾಗೂ ಪಟ್ಟಣಗಳಲ್ಲಿ ಇದರ ಸೇವೆ ಬರಲಿದೆ. ಕೋಟಿಗೂ ಅಧಿಕ ಚಾಲಕರನ್ನು ಈ ಸೇವೆಗೆ ಜೋಡಿಸಿಕೊಳ್ಳುವ ಗುರಿ ಇದೆ. ಹಾಗೆಯೇ, ಸಹಕಾರ ತತ್ವದಲ್ಲಿ ಆರಂಭವಾಗಿರುವ ಮೊದಲ ಟ್ಯಾಕ್ಸಿ ಕಂಪನಿ ಇದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಹುಬ್ಬಳ್ಳಿ ಸ್ಟೇಡಿಯಂ ಪೆವಿಲಿಯನ್​ಗೆ ಸುನಿಲ್ ಜೋಶಿ ಹೆಸರು ನಾಮಕರಣ
ಹುಬ್ಬಳ್ಳಿ ಸ್ಟೇಡಿಯಂ ಪೆವಿಲಿಯನ್​ಗೆ ಸುನಿಲ್ ಜೋಶಿ ಹೆಸರು ನಾಮಕರಣ
ಎಕ್ಸಾಂನಲ್ಲಿ ಟೈಮ್ ಮ್ಯಾನೇಜ್​ಮೆಂಟ್ ಮಾಡೋಕೆ ಆಗ್ತಾ ಇಲ್ವಾ?
ಎಕ್ಸಾಂನಲ್ಲಿ ಟೈಮ್ ಮ್ಯಾನೇಜ್​ಮೆಂಟ್ ಮಾಡೋಕೆ ಆಗ್ತಾ ಇಲ್ವಾ?
ತಡರಾತ್ರಿ ಗ್ರಾಮದಲ್ಲಿ ಓಡಾಡಿದ ಕಾಡಾನೆಗಳ ಹಿಂಡು!
ತಡರಾತ್ರಿ ಗ್ರಾಮದಲ್ಲಿ ಓಡಾಡಿದ ಕಾಡಾನೆಗಳ ಹಿಂಡು!
ರಾಜ್ಯ ಸರ್ಕಾರ ದಿವಾಳಿ, ಸಂಬಳ ನೀಡಲೂ ಹಣವಿಲ್ಲ: ಅಶೋಕ್​​ ಸ್ಫೋಟಕ ಆರೋಪ
ರಾಜ್ಯ ಸರ್ಕಾರ ದಿವಾಳಿ, ಸಂಬಳ ನೀಡಲೂ ಹಣವಿಲ್ಲ: ಅಶೋಕ್​​ ಸ್ಫೋಟಕ ಆರೋಪ
ಉದ್ಯೋಗಾಕಾಂಕ್ಷಿಗಳ ಕಿಚ್ಚು: ಅನುಮತಿ ನಿರಾಕರಣೆ ನಡುವೆಯೂ ಬೃಹತ್​ ಪ್ರತಿಭಟನೆ
ಉದ್ಯೋಗಾಕಾಂಕ್ಷಿಗಳ ಕಿಚ್ಚು: ಅನುಮತಿ ನಿರಾಕರಣೆ ನಡುವೆಯೂ ಬೃಹತ್​ ಪ್ರತಿಭಟನೆ
ಪೊಲೀಸರ ವಿರೋಧದ ಮಧ್ಯೆಯೇ ಜಯನಗರ ವೃತ್ತದ ಕಡೆಗೆ ಯುವಕರ ಮೆರವಣಿಗೆ!
ಪೊಲೀಸರ ವಿರೋಧದ ಮಧ್ಯೆಯೇ ಜಯನಗರ ವೃತ್ತದ ಕಡೆಗೆ ಯುವಕರ ಮೆರವಣಿಗೆ!
Live: ಧಾರವಾಡದಲ್ಲಿ ಅಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿ ಸಂಘಟನೆ ಪ್ರತಿಭಟನೆ
Live: ಧಾರವಾಡದಲ್ಲಿ ಅಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿ ಸಂಘಟನೆ ಪ್ರತಿಭಟನೆ
ಬೆಂಗಳೂರು: ಸೈರನ್​ನಿಂದ ತಪ್ಪಿತು ಕೆನರಾ ಬ್ಯಾಂಕ್ ಕಳ್ಳತನ ಯತ್ನ!
ಬೆಂಗಳೂರು: ಸೈರನ್​ನಿಂದ ತಪ್ಪಿತು ಕೆನರಾ ಬ್ಯಾಂಕ್ ಕಳ್ಳತನ ಯತ್ನ!
ರೇಣುಕಾಸ್ವಾಮಿ ಕೊಲೆ ಕೇಸ್​​​ನಲ್ಲಿ ತನಿಖಾಧಿಕಾರಿಗಳಿಂದ ನಡೆದಿದೆ ಎಡವಟ್ಟು?
ರೇಣುಕಾಸ್ವಾಮಿ ಕೊಲೆ ಕೇಸ್​​​ನಲ್ಲಿ ತನಿಖಾಧಿಕಾರಿಗಳಿಂದ ನಡೆದಿದೆ ಎಡವಟ್ಟು?
ಮನೆಯಲ್ಲಿ ಅಗ್ನಿ ಅವಘಡ, ಅವಳಿ ಶಿಶುಗಳು ಸೇರಿ ಆರು ಮಂದಿ ಸಜೀವದಹನ
ಮನೆಯಲ್ಲಿ ಅಗ್ನಿ ಅವಘಡ, ಅವಳಿ ಶಿಶುಗಳು ಸೇರಿ ಆರು ಮಂದಿ ಸಜೀವದಹನ