AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

China BRI: ಚೀನಾದ ಬೆಲ್ಟ್ ಮತ್ತು ರೋಡ್ ಪ್ರಾಜೆಕ್ಟ್ ಅನುಷ್ಠಾನ ಯೋಜನೆಗೆ ಸಹಿಹಾಕುತ್ತೇವೆ: ನೇಪಾಳ ಉಪಪ್ರಧಾನಿ ಹೇಳಿಕೆ

Nepal Dy PM Speaks: ಚೀನಾದ ಬೆಲ್ಟ್ ಅಂಡ್ ರೋಡ್ ಇನಿಷಿಯೇಟಿವ್ ಯೋಜನೆ ನೇಪಾಳದಲ್ಲಿ ಶೀಘ್ರವೇ ಜಾರಿಗೆ ಬರುವ ಸಾಧ್ಯತೆ ಇದೆ. ಬಿಆರ್​ಐ ಅನುಷ್ಠಾನ ಯೋಜನೆಗೆ ನೇಪಾಳ ಮತ್ತು ಚೀನಾ ಸಹಿಹಾಕಲಿವೆ ಎಂದು ನೇಪಾಳ ಉಪಪ್ರಧಾನಿ ಸ್ಪಷ್ಟಪಡಿಸಿದ್ದಾರೆ. ಚೀನಾ ಮತ್ತು ನೇಪಾಳ ಸಂಬಂಧದಲ್ಲಿ ಹುಳಿಹಿಂಡಲು ಕೆಲ ದೇಶಗಳು ಪ್ರಯತ್ನಿಸುತ್ತಿವೆ ಎಂದು ಚೀನಾದ ಕಮ್ಯೂನಿಸ್ಟ್ ಪಕ್ಷದ ನಾಯಕ ಆಪಾದಿಸಿದ್ದಾರೆ.

China BRI: ಚೀನಾದ ಬೆಲ್ಟ್ ಮತ್ತು ರೋಡ್ ಪ್ರಾಜೆಕ್ಟ್ ಅನುಷ್ಠಾನ ಯೋಜನೆಗೆ ಸಹಿಹಾಕುತ್ತೇವೆ: ನೇಪಾಳ ಉಪಪ್ರಧಾನಿ ಹೇಳಿಕೆ
ನೇಪಾಳ ಮತ್ತು ಚೀನಾ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jan 29, 2024 | 12:15 PM

Share

ಕಠ್ಮಂಡು, ಜನವರಿ 29: ಚೀನಾದ ಮಹತ್ವಾಕಾಂಕ್ಷಿ ಬಿಆರ್​ಐ ಯೋಜನೆ ಅಥವಾ ಬೆಲ್ಟ್ ಅಂಡ್ ರೋಡ್ ಇನಿಷಿಯೇಟಿವ್​ ಯೋಜನೆ (BRI- Belt and Road Initiative) ಜಾರಿಗೆ ನೇಪಾಳ ಕೊನೆಯ ಹೆಜ್ಜೆ ಹಾಕುತ್ತಿದೆ. ಬಿಆರ್​ಐ ಅನುಷ್ಠಾನ ಯೋಜನೆಗೆ ನೇಪಾಳ ಮತ್ತು ಚೀನಾ ಬಹಳ ಶೀಘ್ರದಲ್ಲೇ ಸಹಿ ಹಾಕಲಿವೆ ಎಂದು ನೇಪಾಳದ ಉಪಪ್ರಧಾನಿ ನಾರಾಯಣ್ ಕಾಜಿ ಶ್ರೇಷ್ಠ (Narayan Kaji Shrestha) ಹೇಳಿದ್ದಾರೆ. ಇದರೊಂದಿಗೆ, ಏಳು ವರ್ಷದ ಹಿಂದೆ ಆದ ಒಪ್ಪಂದ ಜಾರಿಯಾಗುವ ಕಾಲ ಸನ್ನಿಹಿತವಾಗಿದೆ.

ಬೆಲ್ಟ್ ಅಂಡ್ ರೋಡ್ ಇನಿಷಿಯೇಟಿವ್ ಅಥವಾ ಸಿಲ್ಕ್ ರೋಡ್ ಪ್ರಾಜೆಕ್ಟ್ ಚೀನಾದ ಅತ್ಯಂತ ಮಹತ್ವಾಕಾಂಕ್ಷಿ ಯೋಜನೆಯಾಗಿದೆ. ಚೀನಾ ಹಾಗೂ ವಿಶ್ವದ ಇತರ ಭಾಗಗಳ ನಡುವೆ ವ್ಯಾಪಾರ ಮಾರ್ಗ ಸೃಷ್ಟಿಸುವ ದೂರಾಲೋಚನೆಯ ಯೋಜನೆ ಇದು. ನೇಪಾಳ, ಪಾಕಿಸ್ತಾನ ಹೀಗೆ ವಿವಿಧ ದೇಶಗಳ ಮೂಲಕ ಈ ವ್ಯಾಪಾರ ಮಾರ್ಗ ಹಾದು ಹೋಗುತ್ತದೆ. ವಿವಿಧ ದೇಶಗಳಲ್ಲಿ ಇದಕ್ಕೆ ಬೇಕಾದ ಮೂಲಸೌಕರ್ಯಗಳನ್ನು ಚೀನಾ ನಿರ್ಮಿಸುತ್ತದೆ. ಆದರೆ, ಆಯಾ ದೇಶಗಳೇ ಈ ಸೌಕರ್ಯ ನಿರ್ಮಾಣದ ವೆಚ್ಚವನ್ನು ಭರಿಸಬೇಕು. ಚೀನಾದ ಈ ಮಹಾ ವ್ಯಾಪಾರ ಮಾರ್ಗದಿಂದ ಆಯಾ ದೇಶಗಳ ಆರ್ಥಿಕ ಬೆಳವಣಿಗೆಗೂ ಸಹಕಾರಿ ಆಗುತ್ತದೆ ಎಂಬುದು ಚೀನಾದ ವಾದ.

ಇದನ್ನೂ ಓದಿ: Bansal Story: ಬೆಂಗಳೂರಿನ ಅಪಾರ್ಟ್ಮೆಂಟ್​ನಲ್ಲಿ 3 ಲಕ್ಷ ಬಂಡವಾಳದಲ್ಲಿ ಶುರುವಾದ ಬಿಸಿನೆಸ್ ಇವತ್ತು 30 ಸಾವಿರ ಕೋಟಿ ರೂ ಮೌಲ್ಯದ ಕಂಪನಿ

ಭಾರತದ ಬಗ್ಗೆ ಪರೋಕ್ಷವಾಗಿ ಟೀಕೆ

ನೇಪಾಳವೂ ಚೀನಾದ ಬಿಆರ್​ಐ ಯೋಜನೆಯಿಂದ ಲಾಭವಾಗಬಹುದು ಎಂಬ ನಿರೀಕ್ಷೆಯಲ್ಲಿದೆ. ಮೊನ್ನೆ ಚೀನಾದ ಆಡಳಿತಾರೂಢ ಕಮ್ಯೂನಿಸ್ಟ್ ಪಕ್ಷದ ಹಿರಿಯ ನಾಯಕ ಸುನ್ ಹೈಯಾನ್ ನೇಪಾಳಕ್ಕೆ ಭೇಟಿ ನೀಡಿದ್ದರು. ಈ ವೇಳೆ ನೇಪಾಳ ಮತ್ತು ಚೀನಾ ಸಂಬಂಧಕ್ಕೆ ಹುಳಿ ಹಿಂಡುವ ಬೇರೆ ದೇಶಗಳು ಪ್ರಯತ್ನಿಸುತ್ತಿವೆ ಎಂದು ಸುನ್ ಶಂಕೆ ವ್ಯಕ್ತಪಡಿಸಿದ್ದಾರೆ.

‘ನೇಪಾಳ ಮತ್ತು ಚೀನಾ ಸಂಬಂಧದ ಜೊತೆಗೆ ಬೇರೆ ದೇಶಗಳು ಆಟವಾಡಲು ಪ್ರಯತ್ನಿಸುತ್ತಿವೆ. ಈ ದೇಶಗಳು ಬರುತ್ತವೆ, ಹೋಗುತ್ತವೆ. ಅವರ ಚಟುವಟಿಕೆಯಿಂದ ಬಾಧಿತರಾಗುವುದು ನೇಪಾಳ ಮತ್ತು ಚೀನಾದ ಜನರೇ’ ಎಂದು ಸುನ್ ಹೈಯಾನ್ ಹೇಳಿದ್ದಾರೆ.

ಇದನ್ನೂ ಓದಿ: Savings: ಇನ್ನೊಂದು ವರ್ಷ ಸಮಯಾವಕಾಶ ಇರುವ ಮಹಿಳಾ ಸಮ್ಮಾನ್ ಸೇವಿಂಗ್ಸ್ ಸರ್ಟಿಫಿಕೇಟ್ ಸ್ಕೀಮ್​ನ ಲಾಭ ತಿಳಿಯಿರಿ

ಆದರೆ, ಚೀನಾದ ಕಮ್ಯೂನಿಸ್ಟ್ ಮುಖಂಡ ಭಾರತದ ಹೆಸರೆತ್ತದೆಯೇ ಪರೋಕ್ಷವಾಗಿ ಬೊಟ್ಟು ಮಾಡಿ ತೋರಿಸಿದಂತಿತ್ತು. ಚೀನಾದ ಬೆಲ್ಟ್ ಅಂಡ್ ರೋಡ್ ಇನಿಷಿಯೇಟಿವ್ ಯೋಜನೆಗೆ ಭಾರತ ಶಾಮೀಲಾಗಿಲ್ಲ. ಚೀನಾದ ಏಕಮುಖಿ ಧೋರಣೆಯನ್ನು ಭಾರತ ಆಕ್ಷೇಪಿಸುತ್ತಾ ಬಂದಿದೆ. ನೇಪಾಳ ಮತ್ತು ಭಾರತದ ಮಧ್ಯೆ ಐತಿಹಾಸಿಕ, ಸಾಂಸ್ಕೃತಿಕ ಮತ್ತು ಧಾರ್ಮಿಕ ಬೆಸುಗೆ ಇದೆ. ನೇಪಾಳದ ಒಂದು ವರ್ಗವು ಚೀನಾದ ಸಿಲ್ಕ್ ರೋಡ್ ಪ್ರಾಜೆಕ್ಟ್ ಅನ್ನು ವಿರೋಧಿಸುತ್ತದೆ. ಈ ವಿರೋಧಕ್ಕೆ ಭಾರತವೇ ಕುಮ್ಮಕ್ಕು ನೀಡುತ್ತಿರಬಹುದು ಎಂಬುದು ಚೀನಾದ ಶಂಕೆ.

ಮಾಲ್ಡೀವ್ಸ್​ನ ರೀತಿಯಲ್ಲಿ ನೇಪಾಳವೂ ಕೂಡ ಭಾರತ ಮತ್ತು ಚೀನಾ ನಡುವೆ ಹೊಯ್ದಾಡುತ್ತಲೇ ಇದೆ. ನೇಪಾಳದಲ್ಲಿ ಒಂದು ವರ್ಗವು ಭಾರತವನ್ನು ಬೆಂಬಲಿಸಿದರೆ, ಮತ್ತೊಂದು ವರ್ಗವು ಚೀನಾ ಪರ ನಿಲುವು ಹೊಂದಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
Vijaya Sarathy SN
Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!