AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Russia Ukrain War: ಕರ್ನಾಟಕದಲ್ಲಿ ಲೀಟರ್ ಸೂರ್ಯಕಾಂತಿ ಎಣ್ಣೆ ಬೆಲೆ 100 ರೂಪಾಯಿ ಏರಿಕೆ; ಗ್ರಾಹಕರಿಗೆ ಸಂಕಷ್ಟ

Sunflower Oil: ಅಡುಗೆಗೆ ಬಳಸುವ ಸೂರ್ಯಕಾಂತಿ ಎಣ್ಣೆ ಒಂದೇ ವಾರದಲ್ಲಿ ಸುಮಾರು 100 ರೂಪಾಯಿಯಷ್ಟು ಹೆಚ್ಚಾಗಿದೆ. ಅಡುಗೆ ಎಣ್ಣೆಯ ದಾಸ್ತಾನಿಗೆ ಕರ್ನಾಟಕ ಸರ್ಕಾರ ಮಿತಿ ಹೇರಿದೆ.

Russia Ukrain War: ಕರ್ನಾಟಕದಲ್ಲಿ ಲೀಟರ್ ಸೂರ್ಯಕಾಂತಿ ಎಣ್ಣೆ ಬೆಲೆ 100 ರೂಪಾಯಿ ಏರಿಕೆ; ಗ್ರಾಹಕರಿಗೆ ಸಂಕಷ್ಟ
ಸೂರ್ಯಕಾಂತಿ ಎಣ್ಣೆ (ಪ್ರಾತಿನಿಧಿಕ ಚಿತ್ರ)
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:Mar 07, 2022 | 10:01 AM

ಬೆಂಗಳೂರು: ಕರ್ನಾಟಕದಿಂದ ಸಾವಿರಾರು ಕಿಲೋಮೀಟರ್ ದೂರದಲ್ಲಿರುವ ಉಕ್ರೇನ್​ನಲ್ಲಿ (Ukraine Russia War) ಸಿಡಿಯುತ್ತಿರುವ ಬಾಂಬ್​ಗಳ ಬಿಸಿ ನೇರವಾಗಿ ನಮ್ಮ ಅಡುಗೆಮನೆಗಳಿಗೆ ತಟ್ಟಿದೆ. ಅಡುಗೆಗೆ ಬಳಸುವ ಸೂರ್ಯಕಾಂತಿ ಎಣ್ಣೆ (Sunflower Oil) ಒಂದೇ ವಾರದಲ್ಲಿ ಸುಮಾರು 100 ರೂಪಾಯಿಯಷ್ಟು ಹೆಚ್ಚಾಗಿದೆ. ಕಾಳಸಂತೆಕೋರರು ಅಡುಗೆ ಎಣ್ಣೆಯ ಕಳ್ಳದಾಸ್ತಾನು ಮಾಡಲು ಮುಂದಾಗಿದ್ದು, ಇದನ್ನು ಹತ್ತಿಕ್ಕಲು ಸರ್ಕಾರವು ಕಠಿಣ ಕ್ರಮಗಳನ್ನು ಘೋಷಿಸಿದೆ. ಬೆಲೆ ಹೆಚ್ಚಾಗಬಹುದು ಎಂಬ ಆತಂಕದಲ್ಲಿ ಚಿಲ್ಲರೆಯಾಗಿ ಎಣ್ಣೆ ಖರೀದಿಸುವ ಗೃಹಸ್ಥರು ಮತ್ತು ಸಗಟಾಗಿ ಎಣ್ಣೆ ಖರೀದಿರುವ ಹೊಟೆಲ್​ ಉದ್ಯಮಿಗಳು ಸಹ ದಾಸ್ತಾನು ಮಾಡಲು ಮುಂದಾಗಿದ್ದು ಅಡುಗೆ ಎಣ್ಣೆಯ ಬೆಲೆ ನೋಡನೋಡುತ್ತಲೇ ಆಕಾಶಕ್ಕೆ ಏರುತ್ತಿದೆ.

ಕರ್ನಾಟಕದಲ್ಲಿ ಕೇವಲ ಒಂದು ವಾರದ ಮೊದಲು ಸರಾಸರಿ ₹ 110ರಿಂದ ₹ 140 ರ ಆಸುಪಾಸಿನಲ್ಲಿ ಒಂದು ಲೀಟರ್ ಸೂರ್ಯಕಾಂತಿ ಎಣ್ಣೆ ಸಿಗುತ್ತಿತ್ತು. ಆದರೆ ಈಗ ಇದು ₹ 170ರಿಂದ ₹ 220ಕ್ಕೆ ಏರಿಕೆಯಾಗಿದೆ. ಇದಕ್ಕೇನು ಕಾರಣ ಎಂದು ಹುಡುಕಿದರೆ ದೊಡ್ಡಬಳ್ಳಾಪುರದಂಥ ಸಣ್ಣ ಊರಿನಲ್ಲಿ ಚಿಲ್ಲರೆ ಅಂಗಡಿ ನಡೆಸುತ್ತಿರುವ ಶಿವರಾಮ ಅವರಂಥವರೂ ಸಹ ಉಕ್ರೇನ್ ಯುದ್ಧ ಎಂದು ನೆಪ ಹೇಳುತ್ತಾರೆ. ಪಾಕೆಟ್ ಮೇಲೆ ಈ ಹಿಂದೆಯೂ ಇಷ್ಟೇ ಬೆಲೆ ಇತ್ತು. ಆದರೆ ನೀವು ಕೊಡುತ್ತಿರುವ ಡಿಸ್ಕೌಂಟ್ ಮಾತ್ರ ಕಡಿಮೆಯಾಗಿದೆ ಎಂದು ಪ್ರಶ್ನಿಸಿದರೆ, ಪಾಕೆಟ್​ ಮೇಲಿನ ರೇಟ್ ಬದಲಿಸಲು ಕಂಪನಿಗೂ ಇನ್ನೂ ಸಾಧ್ಯವಾಗಿಲ್ಲ ಎಂದು ಉತ್ತರಿಸುತ್ತಾರೆ.

ಸಗಟು ವ್ಯಾಪಾರಿಗಳು ಕೊಡುವ ಉತ್ತರಗಳೂ ಹೆಚ್ಚೂ ಕಡಿಮೆ ಇದೇ ರೀತಿ ಇವೆ. ‘ಈ ಯುದ್ಧ ಹೀಗೆಯೇ ಮುಂದುವರಿದು, ಉಕ್ರೇನ್​ನ ಬಂದರಗಳು ವಹಿವಾಟಿಗೆ ಮುಕ್ತವಾಗದಿದ್ದರೆ ಮುಂದಿನ ದಿನಗಳಲ್ಲಿ ಬೆಲೆ ಇನ್ನಷ್ಟು ಏರಿಕೆಯಾಗಲಿದೆ’ ಎನ್ನುತ್ತಾರೆ ಸಗಟು ವ್ಯಾಪಾರಿ ಮಂಜುನಾಥ್. ‘ಕರ್ನಾಟಕವು ಎಣ್ಣೆಬೀಜಗಳ ದೊಡ್ಡ ಗ್ರಾಹಕ ರಾಜ್ಯವಾಗಿದೆ’ ಎನ್ನುತ್ತಾರೆ ಕರ್ನಾಟಕ ಆಯಿಲ್ ಫೆಡರೇಷನ್​ನ ಅಧಿಕಾರಿಗಳು.

‘ಭಾರತವು ಆಮದು ಮಾಡಿಕೊಳ್ಳುವ ಅಡುಗೆ ಎಣ್ಣೆಯ ಪೈಕಿ ಶೇ 15ರಷ್ಟು ಸೂರ್ಯಕಾಂತಿ ಎಣ್ಣೆಯೇ ಇದೆ. ಈ ಪೈಕಿ ಬಹುತೇಕ ಪ್ರಮಾಣದ ಉತ್ಪನ್ನ ಉಕ್ರೇನ್​ನಿಂದಲೇ ಭಾರತಕ್ಕೆ ಬರುತ್ತಿತ್ತು’ ಎನ್ನುವುದು ಕೇಂದ್ರ ಆಹಾರ ಮತ್ತು ಸಾರ್ವಜನಿಕ ವಿತರಣೆ ಇಲಾಖೆಯ ಮಾಹಿತಿ. ‘ಕರ್ನಾಟವು ತಿಂಗಳಿಗೆ 25ರಿಂದ 30 ಸಾವಿರ ಟನ್​ಗಳಷ್ಟು ಸೂರ್ಯಕಾಂತಿ ಎಣ್ಣೆಯನ್ನು ಆಮದು ಮಾಡಿಕೊಳ್ಳುತ್ತಿತ್ತು. ಪೂರೈಕೆ ಸರಪಳಿಯಲ್ಲಿ ಆಗಿರುವ ಸಮಸ್ಯೆಗಳಿಂದಾಗಿ ಮಾರುಕಟ್ಟೆಯಲ್ಲಿ ಖಾದ್ಯತೈಲದ ಕೊರತೆ ಕಾಣಿಸಿಕೊಂಡಿದ್ದು, ಬೆಲೆ ಸತತ ಏರಿಕೆಯಾಗುತ್ತಿದೆ’ ಎಂಬ ಹೆಸರು ಹೇಳಲು ಇಚ್ಛಿಸದ ಅಧಿಕಾರಿಯೊಬ್ಬರ ಹೇಳಿಕೆಯನ್ನು ಡೆಕ್ಕನ್ ಹೆರಾಲ್ಡ್ ಜಾಲತಾಣ ವರದಿ ಮಾಡಿದೆ.

ಎಣ್ಣೆ ಬೆಲೆ ಮತ್ತಷ್ಟು ಹೆಚ್ಚಾಗಬಹುದು ಎಂದು ಗ್ರಾಹಕರು ಮುಗಿಬಿದ್ದು ಖರೀದಿಸುತ್ತಿದ್ದಾರೆ. ಇದೂ ಸಹ ಬೆಲೆ ಏರಿಕೆಗೆ ಕಾರಣವಾಗಿದೆ ಎಂದು ಚಿಲ್ಲರೆ ಮತ್ತು ಸಗಟು ವ್ಯಾಪಾರಿಗಳು ಹೇಳುತ್ತಾರೆ. ಸಗಟು ದರಗಳಲ್ಲಿ ಪ್ರತಿ ಲೀಟರ್​ಗೆ ₹ 40 ಹೆಚ್ಚಾಗಿದೆ. 5 ಲೀಟರ್​ ಎಣ್ಣೆ ಕ್ಯಾನ್​ಗಳ ಬೆಲೆ ಕೇವಲ 2 ತಿಂಗಳ ಅವಧಿಯಲ್ಲಿ ₹ 650ರಿಂದ ₹ 800ಕ್ಕೆ ಏರಿಕೆಯಾಗಿದೆ. ಈ ಪೈಕಿ ಕೇವಲ 7 ದಿನಗಳಲ್ಲಿ ₹ 100ರಷ್ಟು ಹೆಚ್ಚಾಗಿದೆ. ಒಂದು ಲೀಟರ್ ಎಣ್ಣೆ ಪೊಟ್ಟಣಗಳ ಬೆಲೆ ₹ 120ರಿಂದ ₹ 200ರವರೆಗೆ ಹೆಚ್ಚಾಗಿದೆ ಎಂದು ಚಿಲ್ಲರೆ ವ್ಯಾಪಾರಿ ಶಿವರಾಮ್ ಹೇಳುತ್ತಾರೆ.

ಆಹಾರ ಇಲಾಖೆ ಅಧಿಕಾರಿಗಳ ಸಭೆ ಉಕ್ರೇನ್-ರಷ್ಯಾ ಸಂಘರ್ಷವು ಕರ್ನಾಟಕದ ಮೇಲೆ ಬೀರಬಹುದಾದ ಪರಿಣಾಮಗಳನ್ನು ತಿಳಿದುಕೊಳ್ಳಲೆಂದು ಆಹಾರ ಇಲಾಖೆಯ ಅಧಿಕಾರಿಗಳು ಇತ್ತೀಚೆಗೆ ಸಭೆ ನಡೆಸಿದ್ದರು. ಕಳ್ಳದಾಸ್ತಾನು ತಡೆಯಲು ಕಠಿಣ ಕ್ರಮ ಕೈಗೊಳ್ಳಬೇಕೆಂಬ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಗಿತ್ತು ಎಂದು ಮೂಲಗಳು ಹೇಳಿವೆ.

‘ಕರ್ನಾಟಕದಲ್ಲಿ ಸದ್ಯದ ಪರಿಸ್ಥಿತಿಯಲ್ಲಿ ಖಾದ್ಯತೈಲದ ಕೊರತೆ ಇಲ್ಲ. ಸಗಟು ಮತ್ತು ಚಿಲ್ಲರೆ ವ್ಯಾಪಾರಿಗಳು ದಾಸ್ತಾನು ಇರಿಸಬಹುದಾದ ಪ್ರಮಾಣವನ್ನು ಈಗಾಗಲೇ ಕಡಿಮೆ ಮಾಡಿದ್ದೇವೆ. ಆದರೆ ಮುಂದಿನ ದಿನಗಳಲ್ಲಿ ಉತ್ತಮ ಬೆಲೆ ಸಿಗಬಹುದು ಎನ್ನುವ ಆಸೆಯಿಂದ ಕೆಲವರು ದಾಸ್ತಾನು ಮಾಡಲು ಮುಂದಾಗಿರುವುದನ್ನು ತಳ್ಳಿಹಾಕಲು ಸಾಧ್ಯವಿಲ್ಲ. ಗೋದಾಮುಗಳ ಮೇಲೆ ಅಧಿಕಾರಿಗಳು ಹಠಾತ್ ದಾಳಿ ನಡೆಸಿ, ಪರಿಶೀಲಿಸಿ ಕ್ರಮಕೈಗೊಳ್ಳಲಿದ್ದಾರೆ’ ಎಂದು ಆಹಾರ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ಕಪಿಲ್ ಮೋಹನ್ ಹೇಳಿದ್ದಾರೆ.

ಬೆಂಗಳೂರಿಗೆ ದಿನಕ್ಕೆ 900 ಟನ್ ಸೂರ್ಯಕಾಂತಿ ಎಣ್ಣೆ ಬೇಕು ಬೆಂಗಳೂರು ನಗರದ ಜನಸಂಖ್ಯೆ 1.25 ಕೋಟಿ ದಾಟಿದೆ. ನಗರದ ಒಂದು ದಿನದ ಸೂರ್ಯಕಾಂತಿ ಎಣ್ಣೆಯ ಬಳಕೆ ಸರಾಸರಿ 900 ಟನ್ ಇದೆ. ಕರ್ನಾಟಕಕ್ಕೆ ಮುಖ್ಯವಾಗಿ ಗುಜರಾತ್, ಆಂಧ್ರ ಪ್ರದೇಶ ಮತ್ತು ಮಂಗಳೂರಿನ ಬಂದರುಗಳಿಂದ ಸೂರ್ಯಕಾಂತಿ ಎಣ್ಣೆ ಸರಬರಾಜು ಆಗುತ್ತದೆ. ಆದರೆ ಉಕ್ರೇನ್ ಯುದ್ಧದ ನಂತರ ಸೂರ್ಯಕಾಂತಿ ಎಣ್ಣೆ ಪೂರೈಕೆ ಹೆಚ್ಚು ಕಡಿಮೆ ಸ್ಥಗಿತವಾಗಿದೆ.

‘ಪೂರೈಕೆ ಮತ್ತು ಮಾರಾಟ ವ್ಯವಸ್ಥೆಯಲ್ಲಿ ಆಗಿರುವ ಸಮಸ್ಯೆಯಿಂದ ಬೆಲೆ ಹೆಚ್ಚಾಗುತ್ತಿದೆ’ ಎನ್ನುತ್ತಾರೆ ಕರ್ನಾಟಕ ಎಣ್ಣೆ ಬೆಳೆಗಾರರ ಸಹಕಾರ ಮಹಾಮಂಡಳ ನಿಯಮಿತದ ವ್ಯವಸ್ಥಾಪಕ ನಿರ್ದೇಶಕ ಸಿ.ಜಿ.ರೆಡ್ಡಿ.

ಇದನ್ನೂ ಓದಿ: Russia-Ukraine War: ಇಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿಯವರೊಂದಿಗೆ ಪ್ರಧಾನಿ ಮೋದಿ ಮಾತು

ಇದನ್ನೂ ಓದಿ: Brent Crude: ಉಕ್ರೇನ್ ಮೇಲೆ ತೀವ್ರಗೊಂಡ ರಷ್ಯಾ ದಾಳಿ: ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ಕಚ್ಚಾ ತೈಲ

Published On - 10:01 am, Mon, 7 March 22

ಕುಷ್ಟಗಿ-ಹುಬ್ಬಳ್ಳಿ ಪ್ಯಾಸೆಂಜರ್ ರೈಲಿಗೆ ಚಾಲನೆ ನೀಡಿದ ಸಚಿವ ವಿ ಸೋಮಣ್ಣ
ಕುಷ್ಟಗಿ-ಹುಬ್ಬಳ್ಳಿ ಪ್ಯಾಸೆಂಜರ್ ರೈಲಿಗೆ ಚಾಲನೆ ನೀಡಿದ ಸಚಿವ ವಿ ಸೋಮಣ್ಣ
ಮಂಡಿನೋವಿನ ಸಮಸ್ಯೆಯ ನಂತರ ಸಿದ್ದರಾಮಯ್ಯ ನಡಿಗೆ ಶೈಲಿ ಬದಲಾಗಿದೆ
ಮಂಡಿನೋವಿನ ಸಮಸ್ಯೆಯ ನಂತರ ಸಿದ್ದರಾಮಯ್ಯ ನಡಿಗೆ ಶೈಲಿ ಬದಲಾಗಿದೆ
ರಾಕೇಶ್ ಪೂಜಾರಿ ಸಾವಿನ ಬಗ್ಗೆ ದುನಿಯಾ ವಿಜಯ್ ಮಾತು
ರಾಕೇಶ್ ಪೂಜಾರಿ ಸಾವಿನ ಬಗ್ಗೆ ದುನಿಯಾ ವಿಜಯ್ ಮಾತು
ನತದೃಷ್ಟ ಮಗುವಿಗೆ ತಂದೆಯಿಲ್ಲ, ಕುಟುಂಬದಲ್ಲಿ ಮೂವರಿಗೆ ಹುಟ್ಟುಕಿವುಡು: ಸಂಸದ
ನತದೃಷ್ಟ ಮಗುವಿಗೆ ತಂದೆಯಿಲ್ಲ, ಕುಟುಂಬದಲ್ಲಿ ಮೂವರಿಗೆ ಹುಟ್ಟುಕಿವುಡು: ಸಂಸದ
ಕಟ್ಟಡದೊಳಗೆ ಅಡಗಿದ್ದ ಜೈಶ್ ಉಗ್ರರ ಎನ್​ಕೌಂಟರ್ ನಡೆದಿದ್ದು ಹೇಗೆ?
ಕಟ್ಟಡದೊಳಗೆ ಅಡಗಿದ್ದ ಜೈಶ್ ಉಗ್ರರ ಎನ್​ಕೌಂಟರ್ ನಡೆದಿದ್ದು ಹೇಗೆ?
ಸುಮಾರು ಮೂರು ಲಕ್ಷ ಜನ ಸಾಧನಾ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ: ಈಶ್ವರ್
ಸುಮಾರು ಮೂರು ಲಕ್ಷ ಜನ ಸಾಧನಾ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ: ಈಶ್ವರ್
ಮಗಳ ಸಾವಿಗೆ ಸೇಡು ತೀರಿಸಿಕೊಂಡ ಅಪ್ಪ: ಕೊಲೆ ಮಾಡುತ್ತಿರುವ ಭಯಾನಕ ವಿಡಿಯೋ!
ಮಗಳ ಸಾವಿಗೆ ಸೇಡು ತೀರಿಸಿಕೊಂಡ ಅಪ್ಪ: ಕೊಲೆ ಮಾಡುತ್ತಿರುವ ಭಯಾನಕ ವಿಡಿಯೋ!
ಸೋಶಿಯಲ್ ಮಿಡಿಯಾದಲ್ಲಿ ವೃಥಾ ಕಾಮೆಂಟ್ ಮಾಡುವವರ ಮೇಲೆ ಕೇಸ್: ಉಮಾ ಪ್ರಶಾಂತ್
ಸೋಶಿಯಲ್ ಮಿಡಿಯಾದಲ್ಲಿ ವೃಥಾ ಕಾಮೆಂಟ್ ಮಾಡುವವರ ಮೇಲೆ ಕೇಸ್: ಉಮಾ ಪ್ರಶಾಂತ್
ಕಡಲೂರಿನ ಕಾರ್ಖಾನೆ ದುರಂತ; ಟ್ಯಾಂಕ್ ಸ್ಫೋಟಗೊಂಡು 20 ಜನರಿಗೆ ಗಾಯ
ಕಡಲೂರಿನ ಕಾರ್ಖಾನೆ ದುರಂತ; ಟ್ಯಾಂಕ್ ಸ್ಫೋಟಗೊಂಡು 20 ಜನರಿಗೆ ಗಾಯ
ತಿರಂಗಾ ಯಾತ್ರೆಯಲ್ಲಿ ಮಾಜಿ ಯೋಧರ ಕೈಹಿಡಿದು ಹೆಜ್ಜೆಹಾಕಿದ ನಾಯಕರು
ತಿರಂಗಾ ಯಾತ್ರೆಯಲ್ಲಿ ಮಾಜಿ ಯೋಧರ ಕೈಹಿಡಿದು ಹೆಜ್ಜೆಹಾಕಿದ ನಾಯಕರು