AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Gita GPT: ಚಾಟ್​ ಜಿಪಿಟಿಯಂತೆ ಭಗವದ್ಗೀತೆ ಆಧರಿಸಿ ‘ಗೀತಾ ಜಿಪಿಟಿ’ ಸಿದ್ಧಪಡಿಸಿದ ಗೂಗಲ್ ಎಂಜಿನಿಯರ್, ವೈಶಿಷ್ಟ್ಯವೇನು?

ಇದೀಗ ಎಲ್ಲೆಲ್ಲೂ Chat GPTಯದ್ದೇ ಸುದ್ದಿ,  ಓಪನ್ ಎಐನ ಚಾಟ್ ಜಿಪಿಟಿಯು ಟೆಕ್ ಕಂಪನಿಗಳನ್ನು ತಲೆಕೆಡಿಸಿಕೊಳ್ಳುವಂತೆ ಮಾಡಿದೆ.

Gita GPT: ಚಾಟ್​ ಜಿಪಿಟಿಯಂತೆ ಭಗವದ್ಗೀತೆ ಆಧರಿಸಿ ‘ಗೀತಾ ಜಿಪಿಟಿ’ ಸಿದ್ಧಪಡಿಸಿದ ಗೂಗಲ್ ಎಂಜಿನಿಯರ್, ವೈಶಿಷ್ಟ್ಯವೇನು?
ಗೀತಾ ಜಿಪಿಟಿImage Credit source: Newsbytes
ನಯನಾ ರಾಜೀವ್
|

Updated on: Feb 08, 2023 | 8:18 AM

Share

ಇದೀಗ ಎಲ್ಲೆಲ್ಲೂ Chat GPTಯದ್ದೇ ಸುದ್ದಿ,  ಓಪನ್ ಎಐನ ಚಾಟ್ ಜಿಪಿಟಿಯು ಟೆಕ್ ಕಂಪನಿಗಳನ್ನು ತಲೆಕೆಡಿಸಿಕೊಳ್ಳುವಂತೆ ಮಾಡಿದೆ. ಗೂಗಲ್​ನಂತಹ ಕಂಪನಿಗಳು ತಮ್ಮ ಎಐ ಆಧಾರಿತ ಚಾಟ್​ಬಾಟ್ ಬಾರ್ಡ್​ ಅನ್ನು ಅಕಾಲಿಕವಾಗಿ ಬಿಡುಗಡೆ ಮಾಡುವಂತೆ ಒತ್ತಾಯಿಸಲಾಗಿದೆ ಈ ಅಂಶದಿಂದ ಇದರ ಶಕ್ತಿ ಹಾಗೂ ಜನಪ್ರಿಯತೆಯನ್ನು ಅಳೆಯಬಹುದಾಗಿದೆ. ಗೀತಾ ಜಿಪಿಟಿಯನ್ನು ಗೂಗಲ್ ಇಂಡಿಯಾದ ಸಾಫ್ಟ್​ವೇರ್ ಎಂಜಿನಿಯರ್ ಸುಕುರು ಸಾಯಿ ವಿನೀತ್ ಸಿದ್ಧಪಡಿಸಿದ್ದಾರೆ.

ಈ ಅಪ್ಲಿಕೇಶನ್​ನಿಂದ ನೀವು ಪ್ರಶ್ನೆಗಳನ್ನು ಕೇಳಿದಾಗ ಇದು ಗೀತಾ ಬೋಧನೆಗಳ ಆಧಾರದ ಮೇಲೆ ಉತ್ತರಗಳನ್ನು ನೀಡುತ್ತದೆ. ಇದರಲ್ಲಿ ‘ಗೀತಾ ಸೆ ಪರಾಮರ್ಶ್​’ ಸೌಲಭ್ಯವಿದೆ. ಈ ಎಐ ಅಪ್ಲಿಕೇಷನ್ ಗೀತಾ ಪಾಠಗಳ ಮೂಲಕ ಬಳಕೆದಾರರಿಗೆ ಸರಿಯಾದ ಮಾಹಿತಿ, ಸಲಹೆಯನ್ನು ನೀಡುತ್ತದೆ. https://gita.kishans.in ನಲ್ಲಿ, ಚಾಟ್‌ಬಾಟ್ ಶ್ರೀಕೃಷ್ಣನ ಪಾತ್ರವನ್ನು ನಿರ್ವಹಿಸುತ್ತದೆ, ಆದರೆ ಬಳಕೆದಾರರು ಅರ್ಜುನನಂತೆ ಸಲಹೆ ಪಡೆಯಬಹುದು.

ನೀವು ವೆಬ್‌ಸೈಟ್‌ಗೆ ಹೋದಾಗ, ಅರ್ಜುನಾ, ನನ್ನ ಸ್ನೇಹಿತ, ನಿಮಗೆ ಏನು ತೊಂದರೆಯಾಗುತ್ತಿದೆ? ಎಂದು ಕೇಳುವ ಚಾಟ್‌ಬಾಟ್ ಕೃಷ್ಣನ ಪಾತ್ರವನ್ನು ನೀವು ನೋಡುತ್ತೀರಿ. ಅಪ್ಲಿಕೇಶನ್ 1.20 ಲಕ್ಷಕ್ಕೂ ಹೆಚ್ಚು ಪ್ರಶ್ನೆಗಳಿಗೆ ಉತ್ತರಗಳನ್ನು ಹೊಂದಿದೆ ಎಂದು ಹೇಳುತ್ತದೆ.

ಮತ್ತಷ್ಟು ಓದಿ: ಚಾಟ್​ಜಿಪಿಟಿ ಕಾರ್ನರ್​​! ನಾವು ಎಲ್ಲವನ್ನೂ ‘ಭಾರತೀಯ’ಗೊಳಿಸುವಲ್ಲಿ ಚಾಣಾಕ್ಷರು

ಜೀವನದ ಅರ್ಥವೇನು, ನಾನು ದ್ವೇಷಸಬೇಕೆ? ಎನ್ನುವ ಪ್ರಶ್ನೆ ಕೇಳಿದಾಗ, ಗೀತಾ ಜಿಪಿಟಿಯು ದ್ವೇಷವು ಶಾಂತಿ ಮತ್ತು ನೆಮ್ಮದಿಯ ಮಾರ್ಗವಲ್ಲ. ಎಲ್ಲಾ ಜೀವಿಗಳ ಬಗ್ಗೆ ಪ್ರೀತಿ ಮತ್ತು ಸಹಾನುಭೂತಿಯ ಭಾವನೆಗಳನ್ನು ಬೆಳೆಸಲು ಪ್ರಯತ್ನಿಸಿ ಎಂದು ಉತ್ತರ ನೀಡಿದೆ. ಭಗವದ್ಗೀತೆಯು ಮಹಾಭಾರತದ ಯುದ್ಧದ ಸಮಯದಲ್ಲಿ ಅರ್ಜುನ ಮತ್ತು ಅವನ ಸಾರಥಿ ಕೃಷ್ಣನ ನಡುವಿನ ಸಂಭಾಷಣೆಯನ್ನು ಆಧರಿಸಿದ ಸಿದ್ಧಪಡಿಸಲಾಗಿದೆ.

ಜ್ಞಾನಯೋಗ, ಕರ್ಮಯೋಗ, ಭಕ್ತಿಯೋಗ, ರಾಜಯೋಗ ಮುಂತಾದವುಗಳನ್ನು ಚರ್ಚಿಸಲಾಗಿದೆ. ಗೀತೆಯು ಮನುಷ್ಯನಿಗೆ ಕರ್ಮದ ಮಹತ್ವವನ್ನು ವಿವರಿಸುತ್ತದೆ. ಗೀತೆಯಲ್ಲಿ ಮಾನವ ಜೀವನದ ಸಾರವನ್ನು ವಿವರಿಸಲಾಗಿದೆ.

ಇದು 18 ಅಧ್ಯಾಯಗಳು ಮತ್ತು 700 ಪದ್ಯಗಳನ್ನು ಹೊಂದಿದೆ. ಗೀತಾ ಮಾನವರು ತಮ್ಮ ಉದ್ದೇಶವನ್ನು ಕಂಡುಕೊಳ್ಳಲು ಮತ್ತು ಶುದ್ಧತೆ, ಶಕ್ತಿ, ಶಿಸ್ತು, ಪ್ರಾಮಾಣಿಕತೆ, ದಯೆ ಮತ್ತು ಸಮಗ್ರತೆಯ ಜೀವನವನ್ನು ನಡೆಸಲು ಪ್ರೋತ್ಸಾಹಿಸುತ್ತದೆ.

ವಾಣಿಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಯಡಿಯೂರಪ್ಪ ವಿರುದ್ಧ ನಾನು ವಾಗ್ದಾಳಿ ನಡೆಸಲೇ ಇಲ್ಲ: ಲಿಂಬಾವಳಿ
ಯಡಿಯೂರಪ್ಪ ವಿರುದ್ಧ ನಾನು ವಾಗ್ದಾಳಿ ನಡೆಸಲೇ ಇಲ್ಲ: ಲಿಂಬಾವಳಿ
ಕೇಸ್ ವಾಪಸ್ ತೆಗೆದುಕೊಂಡರೆ ಮನು ವಿರುದ್ಧ ಸಾಕ್ಷಿ ಬಿಡ್ತೀನಿ: ಸಂತ್ರಸ್ತೆ
ಕೇಸ್ ವಾಪಸ್ ತೆಗೆದುಕೊಂಡರೆ ಮನು ವಿರುದ್ಧ ಸಾಕ್ಷಿ ಬಿಡ್ತೀನಿ: ಸಂತ್ರಸ್ತೆ
ಸಿನಿಮಾ ಆರಿಸಿಕೊಂಡಿದ್ದೇಕೆ? ಜನಾರ್ಧನ ರೆಡ್ಡಿ ಪುತ್ರನ ಉತ್ತರ
ಸಿನಿಮಾ ಆರಿಸಿಕೊಂಡಿದ್ದೇಕೆ? ಜನಾರ್ಧನ ರೆಡ್ಡಿ ಪುತ್ರನ ಉತ್ತರ
ಪಕ್ಷದ ಕಾರ್ಯದರ್ಶಿ ಮತ್ತು ಅಧಿಕಾರಿಗಳ ಸಭೆ ರಾಮನಗರದಲ್ಲಿ ನಡೆಯಲಿದೆ: ಶಾಸಕ
ಪಕ್ಷದ ಕಾರ್ಯದರ್ಶಿ ಮತ್ತು ಅಧಿಕಾರಿಗಳ ಸಭೆ ರಾಮನಗರದಲ್ಲಿ ನಡೆಯಲಿದೆ: ಶಾಸಕ
ಮನೆಯಲ್ಲಿ ಯಾರೂ ಇಲ್ಲದಿದ್ದಾಗ 3ನೇ ಮಹಡಿಯ ಕಿಟಕಿಯಿಂದ ಹೊರಗೆ ನೇತಾಡಿದ ಮಗು
ಮನೆಯಲ್ಲಿ ಯಾರೂ ಇಲ್ಲದಿದ್ದಾಗ 3ನೇ ಮಹಡಿಯ ಕಿಟಕಿಯಿಂದ ಹೊರಗೆ ನೇತಾಡಿದ ಮಗು
ಸುರ್ಜೇವಾಲಾ ಶಾಸಕರನ್ನು ಭೇಟಿಯಾಗುತ್ತಿರುವುದು ಒಂದು ಪ್ರಕ್ರಿಯೆ: ಲಕ್ಷ್ಮಿ
ಸುರ್ಜೇವಾಲಾ ಶಾಸಕರನ್ನು ಭೇಟಿಯಾಗುತ್ತಿರುವುದು ಒಂದು ಪ್ರಕ್ರಿಯೆ: ಲಕ್ಷ್ಮಿ
ಸರ್ಕಾರೀ ಕೆಲಸದ ನಿಮಿತ್ತ ಸಿಎಂ, ಡಿಸಿಎಂ ದೆಹಲಿ ಹೋಗಿರಬಹುದು: ದೇಶಪಾಂಡೆ
ಸರ್ಕಾರೀ ಕೆಲಸದ ನಿಮಿತ್ತ ಸಿಎಂ, ಡಿಸಿಎಂ ದೆಹಲಿ ಹೋಗಿರಬಹುದು: ದೇಶಪಾಂಡೆ
ಐಶ್ವರ್ಯಾ ಗೌಡ ವಂಚನೆ ಪ್ರಕರಣ: ಮತ್ತೆ ಇಡಿ ವಿಚಾರಣೆಗೆ ಹಾಜರಾದ ಡಿಕೆ ಸುರೇಶ್
ಐಶ್ವರ್ಯಾ ಗೌಡ ವಂಚನೆ ಪ್ರಕರಣ: ಮತ್ತೆ ಇಡಿ ವಿಚಾರಣೆಗೆ ಹಾಜರಾದ ಡಿಕೆ ಸುರೇಶ್
ಊರಿಗೆ ರಸ್ತೆಗಿಂತ ಬಡವನ ಹೊಟ್ಟೆಗೆ ಅನ್ನ ಮತ್ತು ಮೈಗೆ ಬಟ್ಟೆ ಮುಖ್ಯ: ಸವದಿ
ಊರಿಗೆ ರಸ್ತೆಗಿಂತ ಬಡವನ ಹೊಟ್ಟೆಗೆ ಅನ್ನ ಮತ್ತು ಮೈಗೆ ಬಟ್ಟೆ ಮುಖ್ಯ: ಸವದಿ
ಇವತ್ತು ಸಿದ್ದೇಶ್ವರ ಹುಟ್ಟುಹಬ್ಬ, ವಿಶ್ ಮಾಡಲು ಬಂದಿದ್ದೇವೆ: ಹರೀಶ್
ಇವತ್ತು ಸಿದ್ದೇಶ್ವರ ಹುಟ್ಟುಹಬ್ಬ, ವಿಶ್ ಮಾಡಲು ಬಂದಿದ್ದೇವೆ: ಹರೀಶ್