AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೂರು ತಿಂಗಳಲ್ಲಿ 80,000 ಟೆಕ್ಕಿಗಳ ಲೇ ಆಫ್; ಮುಂದೈತೆ ಇನ್ನೂ ದೊಡ್ಡ ಬಲಿ

Global tech companies layoff nearly 80,000 employees in first 3 months of 2026: ಎಐ ಅಳವಡಿಕೆಯ ಕಾರಣಕ್ಕೆ ತಂತ್ರಜ್ಞಾನ ಕಂಪನಿಗಳು ಸಾಕಷ್ಟು ಲೇ ಆಫ್ ಮಾಡುತ್ತಿವೆ. ಜಾಗತಿಕವಾಗಿ ಜನವರಿಯಿಂದ ಮಾರ್ಚ್​ವರೆಗೆ 80,000 ಟೆಕ್ಕಿಗಳು ಕೆಲಸ ಕಳೆದುಕೊಂಡಿದ್ದಾರೆ. ಇದರಲ್ಲಿ ಎಐ ಮತ್ತು ಆಟೊಮೇಶನ್ ಕಾರಣದಿಂದಲೇ ಅರ್ಧದಷ್ಟು ಉದ್ಯೋಗನಷ್ಟ ಆಗಿದೆ. ಆದರೆ, ಎಐ ಅಳವಡಿಕೆಯ ಫಲಶ್ರುತಿ ಶುರುವಾಗಲು ಇನ್ನೂ ಬಹಳ ಸಮಯ ಇದೆ. ಈಗಲೇ ಲೇ ಆಫ್ ನಡೆಯುತ್ತಿರುವುದು ಯಾಕೆ?

ಮೂರು ತಿಂಗಳಲ್ಲಿ 80,000 ಟೆಕ್ಕಿಗಳ ಲೇ ಆಫ್; ಮುಂದೈತೆ ಇನ್ನೂ ದೊಡ್ಡ ಬಲಿ
ಲೇ ಆಫ್Image Credit source: Shutterstock
ಸುಗ್ಗನಹಳ್ಳಿ ವಿಜಯಸಾರಥಿ
|

Updated on:May 29, 2026 | 4:28 PM

Share

ನವದೆಹಲಿ, ಏಪ್ರಿಲ್ 9: ಎಐ ಬೆಳವಣಿಗೆ ಮತ್ತು ಅಳವಡಿಕೆಯ ಫಲ ಪೂರ್ಣವಾಗಿ ಸಿಗುವಂತಾಗಲು ಬಹಳ ದಿನಗಳು ಬೇಕು. ಆದರೆ, ಈಗಲೇ ಹಲವು ಟೆಕ್ ಕಂಪನಿಗಳು ಲೇ ಆಫ್​ಗೆ ತೊಡಗಿವೆ. ಜಾಗತಿಕ ತಂತ್ರಜ್ಞಾನ ಕ್ಷೇತ್ರದ ಸಂಸ್ಥೆಗಳು ಈ ವರ್ಷದ ಮೊದಲ ಕ್ವಾರ್ಟರ್​ನಲ್ಲಿ (ಜನವರಿ-ಮಾರ್ಚ್) 80,000 ಉದ್ಯೋಗಿಗಳನ್ನು ಮನೆಗೆ ಕಳುಹಿಸಿವೆ. ರ‍್ಯಾಷನಲ್ ಎಫ್​ಎಕ್ಸ್ (RationalFX) ಬಿಡುಗಡೆ ಮಾಡಿದ ದತ್ತಾಂಶದ ಪ್ರಕಾರ, ಜನವರಿ 1ರಿಂದ ಏಪ್ರಿಲ್ 1ರವರೆಗೆ 78,557 ಮಂದಿಯನ್ನು ಲೇ ಆಫ್ (Lay offs) ಮಾಡಲಾಗಿದೆ. ಇದು ಅಧಿಕೃತವಾಗಿ ಲೇ ಆಫ್ ಆಗಿರುವಂಥದ್ದು. ಇದರಲ್ಲಿ ಹೆಚ್ಚಿನ ಪರಿಣಾಮ ಬಿದ್ದಿರುವುದು ಅಮೆರಿಕದ ಮೇಲೆ.

ಕುತೂಹಲದ ಸಂಗತಿ ಎಂದರೆ ಈ ಹತ್ತಿರಹತ್ತಿರ 80,000 ಲೇಆಫ್ ಪ್ರಕರಣಗಳಲ್ಲಿ ಅರ್ಧದಷ್ಟು ಉದ್ಯೋಗಗಳು ಎಐ ಮತ್ತು ಆಟೊಮೇಶನ್ ಅಳವಡಿಕೆಯ ಪರಿಣಾಮದಿಂದ ಆಗಿರುವಂಥದ್ದು. ಆದರೆ, ಉದ್ಯೋಗ ಕ್ಷೇತ್ರದಲ್ಲಿ ಎಐನ ನಿಜವಾದ ಪರಿಣಾಮ ಇನ್ನೂ ಹೆಚ್ಚಿನ ಮಟ್ಟದಲ್ಲಿರುತ್ತದಂತೆ. ಈಗ ಲೇ ಆಫ್ ಆಗಿರುವುದು ಒಂದು ಸಣ್ಣ ಸ್ಯಾಂಪಲ್ ಮಾತ್ರ. ಮುಂಬರುವ ದಿನಗಳಲ್ಲಿ ಉದ್ಯೋಗ ಮಾರುಕಟ್ಟೆಯಲ್ಲಿ ದೊಡ್ಡ ಸಂಚಲನವೇ ಸೃಷ್ಟಿಯಾಗಬಹುದು ಎಂದು ಪರಿಣಿತರು ಎಚ್ಚರಿಸುತ್ತಿದ್ದಾರೆ.

ಇದನ್ನೂ ಓದಿ: ಧೋಬಿ ಎಲ್ಲಿ ಡೈಮಂಡ್ ಡೀಲ್ಸ್ ಎಲ್ಲಿ? ಬಟ್ಟೆ ಒಗೆಯುವವನಿಗೆ 598 ಕೋಟಿ ರೂ ಟ್ಯಾಕ್ಸ್ ನೋಟೀಸ್ ಬಂದಿದ್ದು ಯಾಕೆ?

ಎಐ ನೆಪದಲ್ಲಿ ಲೇ ಆಫ್ ಮಾಡಲಾಗುತ್ತಿದೆಯಾ?

ಲೇ ಆಫ್ ಟ್ರೆಂಡ್ ಕೋವಿಡ್ ಕಾಲಘಟ್ಟದಿಂದ ಹೆಚ್ಚಾಗಿದೆ. ಟೆಕ್ ಕಂಪನಿಗಳು ನಿಯಮಿತವಾಗಿ ಉದ್ಯೋಗಿಗಳ ಸಂಖ್ಯೆ ಇಳಿಸುತ್ತಿದೆ. ಈಗ ಎಐ ನೆಪವೊಡ್ಡಿ ಲೇ ಆಫ್ ಮಾಡಲಾಗುತ್ತಿದೆಯಾ? ಕಾಗ್ನೈಸೆಂಟ್​ನಲ್ಲಿ ಮುಖ್ಯ ಎಐ ಆಫೀಸರ್ ಆಗಿರುವ ಬಾಬಕ್ ಹಾಡ್​ಜಾಟ್ ಅವರು ಹೀಗೊಂದು ಅನುಮಾನಪಟ್ಟಿದ್ದಾರೆ.

ಎಐ ಈಗಷ್ಟೇ ಅಳವಡಿಕೆ ಆಗುತ್ತಿದೆ. ಅದರಿಂದ ಉತ್ಪಾದನೆ ಹೆಚ್ಚಳ ಶುರುವಾಗಲು ಹಲವು ತಿಂಗಳುಗಳೇ ಬೇಕು. ಕಂಪನಿಗಳು ಈ ಎಐ ಮತ್ತು ಆಟೊಮೇಶನ್ ನೆಪವೊಡ್ಡಿ ಈಗಲೇ ಉದ್ಯೋಗಿಗಳನ್ನು ತೆಗೆಯುತ್ತಿದ್ದಾರೆ ಎಂದು ಅವರು ಶಂಕಿಸಿದ್ದಾರೆ.

ಕಾಗ್ನೈಸೆಂಟ್ ಕಂಪನಿಯ ಶೇ. 70ರಷ್ಟು ಉದ್ಯೋಗಿಗಳು ಭಾರತದಲ್ಲಿದ್ದಾರೆ. ಬೆಮಗಳೂರಿನಲ್ಲಿ ಇದರ ಎಐ ಲ್ಯಾಬೊರೇಟರಿಗಳನ್ನು ತೆರೆಯಲಾಗಿದೆ. ಇಲ್ಲಿ ಎಐ ಏಜೆಂಟ್​ಗಳು ಸೇರಿದಂತೆ ಹೊಸ ಅಡ್ವಾನ್ಸ್ಡ್ ಟೂಲ್​ಗಳನ್ನು ತಯಾರಿಸುವ ಕಾರ್ಯವಾಗುತ್ತಿದೆ. ವಿವಿಧ ಉದ್ದಿಮೆಗಳಿಗೆ ಉತ್ಪನ್ನಶೀಲತೆ ಹೆಚ್ಚಿಸಲು ಈ ಎಐ ಪರಿಕರಗಳು ನೆರವಾಗಲಿವೆ.

ಇದನ್ನೂ ಓದಿ: ಬೇರೆಯವರ ಪ್ಯಾನ್ ಕಾರ್ಡ್ ದಾಖಲೆ ಬಳಸಿ ಸಾಲ ಸೂರೆಗೊಂಡ ವಂಚಕರು; ನಿಮ್ಮ ಪ್ಯಾನ್ ದುರ್ಬಳಕೆ ಗುರುತಿಸುವುದು ಹೇಗೆ?

ಆಟೊಮೇಶನ್​ನಿಂದ ಉದ್ಯೋಗ ನಶಿಸುವುದಿಲ್ಲ, ಬದಲಾಗಿ ಕೆಲಸದ ಬದಲಾವಣೆ ಆಗಬಹುದು. ಇದು ಕಾಗ್ನೈಸೆಂಟ್​ನ ಚೀಫ್ ಎಐ ಆಫೀಸರ್ ಹೇಳುವ ಮಾತು. ಎಐ ಅಳವಡಿಕೆಯಲ್ಲಿ ಸಕ್ರಿಯವಾಗಿ ತೊಡಗಿರುವ ಕಂಪನಿಯು ತನ್ನ ಉದ್ಯೋಗಿಗಳನ್ನು ಲೇ ಆಫ್ ಮಾಡುವ ಆಲೋಚನೆಯಲ್ಲಿ ಇಲ್ಲ ಎನ್ನುವುದು ಗಮನಾರ್ಹ. ಉದ್ಯೋಗಿಗಳಿಗೆ ಅಗತ್ಯ ಎಐ ಕೌಶಲ್ಯಗಳನ್ನು ನೀಡಿ ಅವರನ್ನು ಹೆಚ್ಚಿನ ಸಂಕೀರ್ಣ ಕೆಲಸಗಳಿಗೆ ಬಳಸಿಕೊಳ್ಳುವುದು ಕಂಪನಿಯ ಗುರಿ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 1:09 pm, Thu, 9 April 26

Follow Us
ಸುಗ್ಗನಹಳ್ಳಿ ವಿಜಯಸಾರಥಿ
ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
ದೀದಿ ಕೋಟೆಯನ್ನು ಬಿಜೆಪಿ ಛಿದ್ರಗೊಳಿಸಿದ್ದು ಹೇಗೆ? ಪ್ರಲ್ಹಾದ್ ಜೋಶಿ ಮಾಹಿತಿ
ದೀದಿ ಕೋಟೆಯನ್ನು ಬಿಜೆಪಿ ಛಿದ್ರಗೊಳಿಸಿದ್ದು ಹೇಗೆ? ಪ್ರಲ್ಹಾದ್ ಜೋಶಿ ಮಾಹಿತಿ
ಮಮತಾ ಬ್ಯಾನರ್ಜಿ ಮನೆ ಹೊರಗೆ ಟಿಎಂಸಿ ಶಾಸಕ ಕುನಾಲ್ ಘೋಷ್ ಮೇಲೆ ಮೊಟ್ಟೆ ದಾಳಿ
ಮಮತಾ ಬ್ಯಾನರ್ಜಿ ಮನೆ ಹೊರಗೆ ಟಿಎಂಸಿ ಶಾಸಕ ಕುನಾಲ್ ಘೋಷ್ ಮೇಲೆ ಮೊಟ್ಟೆ ದಾಳಿ
ಮಾಜಿ ಸೈನಿಕನ ಸಾವಿಗೆ ಟ್ವಿಸ್ಟ್​:FSL ವರದಿಯನ್ನೇ ತಿರುಚಿದ ಗ್ಯಾಂಗ್!
ಮಾಜಿ ಸೈನಿಕನ ಸಾವಿಗೆ ಟ್ವಿಸ್ಟ್​:FSL ವರದಿಯನ್ನೇ ತಿರುಚಿದ ಗ್ಯಾಂಗ್!
ಮೋದಿ ಅಧಿಕಾರ ಸಾಕು ಅಂದಿದ್ರು; ಅಚ್ಚರಿಯ ಸಂಗತಿ ಬಿಚ್ಚಿಟ್ಟ ಪ್ರಲ್ಹಾದ್ ಜೋಶಿ
ಮೋದಿ ಅಧಿಕಾರ ಸಾಕು ಅಂದಿದ್ರು; ಅಚ್ಚರಿಯ ಸಂಗತಿ ಬಿಚ್ಚಿಟ್ಟ ಪ್ರಲ್ಹಾದ್ ಜೋಶಿ
ಕಾಕ್ರೋಜ್‌ ಪಾರ್ಟಿ ಸಂಸ್ಥಾಪಕನಿಗೆ ಕಪಾಳಮೋಕ್ಷ: ವಿಡಿಯೋ ವೈರಲ್‌
ಕಾಕ್ರೋಜ್‌ ಪಾರ್ಟಿ ಸಂಸ್ಥಾಪಕನಿಗೆ ಕಪಾಳಮೋಕ್ಷ: ವಿಡಿಯೋ ವೈರಲ್‌
RSS ವಿವರಣೆ ಕೇಳಿದ ಪ್ರಿಯಾಂಕ್ ಖರ್ಗೆಗೆ ತೇಜಸ್ವಿ ಸೂರ್ಯ ಖಡಕ್ ಉತ್ತರ
RSS ವಿವರಣೆ ಕೇಳಿದ ಪ್ರಿಯಾಂಕ್ ಖರ್ಗೆಗೆ ತೇಜಸ್ವಿ ಸೂರ್ಯ ಖಡಕ್ ಉತ್ತರ
ಜಮೀರ್‌ಗೆ ಸಚಿವ ಸ್ಥಾನ ನೀಡಬೇಕೆಂದು ಪಟ್ಟು: ಪಾದರಾಯನಪುರದಲ್ಲಿ ಹೈಡ್ರಾಮಾ
ಜಮೀರ್‌ಗೆ ಸಚಿವ ಸ್ಥಾನ ನೀಡಬೇಕೆಂದು ಪಟ್ಟು: ಪಾದರಾಯನಪುರದಲ್ಲಿ ಹೈಡ್ರಾಮಾ
ತಾಯಿಯಿಂದ ಬೇರ್ಪಟ್ಟು ಗ್ರಾಮಕ್ಕೆ ಬಂದ ಮರಿಯಾನೆ: ಆಹಾರ ನೀಡಿದ ಗ್ರಾಮಸ್ಥರು!
ತಾಯಿಯಿಂದ ಬೇರ್ಪಟ್ಟು ಗ್ರಾಮಕ್ಕೆ ಬಂದ ಮರಿಯಾನೆ: ಆಹಾರ ನೀಡಿದ ಗ್ರಾಮಸ್ಥರು!
ಅನಾರೋಗ್ಯ ಹಿನ್ನೆಲೆ ಆಸ್ಪತ್ರೆಗೆ ದಾಖಲಾದ ಶಾಸಕ ಇಕ್ಬಾಲ್ ಹುಸೇನ್
ಅನಾರೋಗ್ಯ ಹಿನ್ನೆಲೆ ಆಸ್ಪತ್ರೆಗೆ ದಾಖಲಾದ ಶಾಸಕ ಇಕ್ಬಾಲ್ ಹುಸೇನ್
ಅಮೆರಿಕ-ಇರಾನ್ ಶಾಂತಿ ಒಪ್ಪಂದ, ಪ್ರಮುಖ ಷರತ್ತುಗಳೇನು?
ಅಮೆರಿಕ-ಇರಾನ್ ಶಾಂತಿ ಒಪ್ಪಂದ, ಪ್ರಮುಖ ಷರತ್ತುಗಳೇನು?