AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Pension Bills: ವೇತನಕ್ಕಿಂತಲೂ ಪಿಂಚಣಿಗೇ ಹೆಚ್ಚು ವ್ಯಯಿಸಿದ ಸರ್ಕಾರ; ಸಿಎಜಿ ವರದಿ

2019-20ರಲ್ಲಿ ಕರ್ನಾಟಕ, ಗುಜರಾತ್ ಹಾಗೂ ಪಶ್ಚಿಮ ಬಂಗಾಳ ರಾಜ್ಯಗಳು ಸಂಬಳ ನೀಡಲು ಮಾಡಿದ್ದಕ್ಕಿಂತ ಹೆಚ್ಚು ಖರ್ಚನ್ನು ಪಿಂಚಣಿ ನೀಡಲು ಮಾಡಿವೆ ಎಂದು ವರದಿ ತಿಳಿಸಿದೆ.

Pension Bills: ವೇತನಕ್ಕಿಂತಲೂ ಪಿಂಚಣಿಗೇ ಹೆಚ್ಚು ವ್ಯಯಿಸಿದ ಸರ್ಕಾರ; ಸಿಎಜಿ ವರದಿ
ಸಾಂದರ್ಭಿಕ ಚಿತ್ರImage Credit source: PTI
TV9 Web
| Edited By: |

Updated on: Dec 05, 2022 | 5:51 PM

Share

ನವದೆಹಲಿ: ಕೇಂದ್ರ ಸರ್ಕಾರ (Central Government) ಮತ್ತು ಗುಜರಾತ್ (Gujarat) ಸೇರಿದಂತೆ ಮೂರು ರಾಜ್ಯಗಳು 2019-20ರಲ್ಲಿ ಉದ್ಯೋಗಿಗಳಿಗೆ ವೇತನ (Salary) ನೀಡಲು ವ್ಯಯಿಸಿರುವ ವೆಚ್ಚಕ್ಕಿಂತಲೂ ಪಿಂಚಣಿ ನೀಡಲು ಮಾಡಿರುವ ವೆಚ್ಚ ಹೆಚ್ಚಾಗಿದೆ ಎಂಬುದು ಸಿಎಜಿ (CAG) ವರದಿಯಿಂದ ತಿಳಿದುಬಂದಿದೆ. ಅಧಿಕಾರಕ್ಕೆ ಬಂದರೆ ಹಳೆಯ ಪಿಂಚಣಿ ವ್ಯವಸ್ಥೆ (OPS) ಜಾರಿ ಮಾಡುವುದಾಗಿ ರಾಜಕೀಯ ಪಕ್ಷಗಳು ಹಿಮಾಚಲ ಪ್ರದೇಶ ಮತ್ತು ಗುಜರಾತ್ ವಿಧಾನಸಭೆ ಚುನಾವಣೆಗಳಲ್ಲಿ ಭರವಸೆ ನೀಡಿರುವ ಬೆನ್ನಲ್ಲೇ ಈ ವರದಿ ಬಹಿರಂಗವಾಗಿದೆ.

ಕಾಂಗ್ರೆಸ್ ಆಡಳಿತ ಇರುವ ರಾಜಸ್ಥಾನ ಮತ್ತು ಛತ್ತೀಸ್​ಗಡ ರಾಜ್ಯಗಳು ಈಗಾಗಲೇ ಹಳೆಯ ಪಿಂಚಣಿ ವ್ಯವಸ್ಥೆ ಜಾರಿಗೊಳಿಸಲು ನಿರ್ಧರಿಸಿವೆ. ಗುಜರಾತ್ ಮತ್ತು ಹಿಮಾಚಲ ಪ್ರದೇಶಗಳಲ್ಲಿ ಅಧಿಕಾರಕ್ಕೆ ಬಂದರೆ ಹಳೆಯ ಪಿಂಚಣಿ ವ್ಯವಸ್ಥೆ ಜಾರಿಗೊಳಿಸುವ ಭರವಸೆ ನೀಡಿವೆ.

ಇದನ್ನೂ ಓದಿ: ನೀವು ಇಪಿಎಸ್ ಪಿಂಚಣಿದಾರರೇ? ಇನ್ನು ಯಾವಾಗ ಬೇಕಾದರೂ ಜೀವನ ಪ್ರಮಾಣಪತ್ರ ಸಲ್ಲಿಸಬಹುದು

2019-20ನೇ ಸಾಲಿನಲ್ಲಿ ಕೇಂದ್ರ ಸರ್ಕಾರವು 9.78 ಲಕ್ಷ ಕೋಟಿ ರೂ. ವ್ಯಯಿಸಿತ್ತು. ಇದು ಸರ್ಕಾರದ ಒಟ್ಟು ಆದಾಯ 26.15 ಲಕ್ಷ ಕೋಟಿ ರೂ.ಗಳ ಶೇಕಡಾ 37ರಷ್ಟಾಗಿದೆ. ಇದರಲ್ಲಿ 1.39 ಲಕ್ಷ ಕೋಟಿ ವೇತನಕ್ಕೆ ಮಾಡಿದ ವೆಚ್ಚವಾದರೆ 1.83 ಲಕ್ಷ ಕೋಟಿ ಪಿಂಚಣಿಗೆ ಮಾಡಿದ ವೆಚ್ಚವಾಗಿತ್ತು. ಬಡ್ಡಿ ಪಾವತಿ ಮತ್ತು ಸಾಲಕ್ಕಾಗಿ 6.55 ಲಕ್ಷ ಕೋಟಿ ವ್ಯಯಿಸಿತ್ತು. ಸಾಲದ ಸೇವೆ ಮತ್ತು ಬಡ್ಡಿಗಾಗಿ ಮಾಡಿದ ವೆಚ್ಚ ಶೇಕಡಾ 67ರಷ್ಟಾಗಿತ್ತು. ಉಳಿದ ಶೇಕಡಾ 19 ಮತ್ತು 14ರಷ್ಟು ವೆಚ್ಚ ಪಿಂಚಣಿ ಹಾಗೂ ವೇತನಕ್ಕೆ ವ್ಯಯಿಸಲಾಗಿತ್ತು. ಇದು ಸರ್ಕಾರವು ವೇತನಕ್ಕಿಂತ ಪಿಂಚಣಿಗೇ ಹೆಚ್ಚು ವ್ಯಯಿಸುತ್ತಿರುವುದನ್ನು ತೋರಿಸುತ್ತದೆ ಎಂದು 2019-20ನೇ ವರ್ಷಕ್ಕೆ ಸಂಬಂಧಿಸಿದ ‘ಯೂನಿಯನ್ ಆ್ಯಂಡ್ ಸ್ಟೇಟ್ ಫೈನಾನ್ಸಸ್ ಎಟ್ ಗ್ಲಾನ್ಸ್’ ಎಂಬ ವರದಿಯಲ್ಲಿ ಸಿಎಜಿ ಉಲ್ಲೇಖಿಸಿದೆ ಎಂದು ‘ಇಂಡಿಯನ್ ಎಕ್ಸ್​ಪ್ರೆಸ್’ ವರದಿ ಮಾಡಿದೆ.

ಪಿಂಚಣಿಗೆ ಹೆಚ್ಚು ವೆಚ್ಚ; ಕರ್ನಾಟಕವೂ ಹೊರತಲ್ಲ

ವೇತನಕ್ಕಿಂತ ಪಿಂಚಣಿಗೇ ಹೆಚ್ಚು ವ್ಯಯಿಸಿದ ರಾಜ್ಯಗಳಲ್ಲಿ ಕರ್ನಾಟಕವೂ ಸೇರಿದೆ. 2019-20ರಲ್ಲಿ ಕರ್ನಾಟಕ, ಗುಜರಾತ್ ಹಾಗೂ ಪಶ್ಚಿಮ ಬಂಗಾಳ ರಾಜ್ಯಗಳು ಸಂಬಳ ನೀಡಲು ಮಾಡಿದ್ದಕ್ಕಿಂತ ಹೆಚ್ಚು ಖರ್ಚನ್ನು ಪಿಂಚಣಿ ನೀಡಲು ಮಾಡಿವೆ ಎಂದು ವರದಿ ಉಲ್ಲೇಖಿಸಿದೆ. ಕರ್ನಾಟಕವು ಪಿಂಚಣಿಗೆ 18,404 ಕೋಟಿ ರೂ. ವ್ಯಯಿಸಿದ್ದರೆ ವೇತನಕ್ಕೆ 14,573 ಕೋಟಿ ರೂ. ವ್ಯಯಿಸಿದೆ. ಪಶ್ಚಿಮ ಬಂಗಾಳ ಪಿಂಚಣಿಗೆ 17,462 ಕೋಟಿ ರೂ. ವೆಚ್ಚ ಮಾಡಿದ್ದರೆ ಸಂಬಳ ನೀಡಲು 16,915 ಕೋಟಿ ರೂ. ವ್ಯಯಿಸಿತ್ತು. ಗುಜರಾತ್​ನಲ್ಲಿ ಪಿಂಚಣಿ ಕಾಯ್ದೆ ಅನ್ವಯ 17,663 ಕೋಟಿ ರೂ. ವೆಚ್ಚ ಮಾಡಿದ್ದರೆ, ವೇತನಕ್ಕೆ 11,126 ಕೋಟಿ ರೂ. ವೆಚ್ಚ ಮಾಡಲಾಗಿತ್ತು.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
TV9 Web
TV9 Web

TV9 Kannada

Read More
ಧರ್ಮಸ್ಥಳಕ್ಕೆ ಕಳಂಕ ತರಲು ಗ್ಯಾಂಗ್ ಹುನ್ನಾರ:ಚಿನ್ನಯ್ಯನಿಂದ ಸ್ಫೋಟಕ ಮಾಹಿತಿ
ಧರ್ಮಸ್ಥಳಕ್ಕೆ ಕಳಂಕ ತರಲು ಗ್ಯಾಂಗ್ ಹುನ್ನಾರ:ಚಿನ್ನಯ್ಯನಿಂದ ಸ್ಫೋಟಕ ಮಾಹಿತಿ
‘ನಾಗುಗೆ ವಧು ಬೇಕಾಗಿದೆ’ ಟೈಟಲ್ ವಿಶೇಷತೆ ಬಗ್ಗೆ ವಿವರಿಸಿದ ನಿರ್ದೇಶಕ ಚೇತನ್
‘ನಾಗುಗೆ ವಧು ಬೇಕಾಗಿದೆ’ ಟೈಟಲ್ ವಿಶೇಷತೆ ಬಗ್ಗೆ ವಿವರಿಸಿದ ನಿರ್ದೇಶಕ ಚೇತನ್
ಗೊರಗುಂಟೆಪಾಳ್ಯ ಭೀಕರ ರಸ್ತೆ ಅಪಘಾತ: ಸ್ಫೋಟಕ ಮಾಹಿತಿ ನೀಡಿದ ಡಿಸಿಪಿ
ಗೊರಗುಂಟೆಪಾಳ್ಯ ಭೀಕರ ರಸ್ತೆ ಅಪಘಾತ: ಸ್ಫೋಟಕ ಮಾಹಿತಿ ನೀಡಿದ ಡಿಸಿಪಿ
ಗೃಹಲಕ್ಷ್ಮೀ ಯೋಜನೆ ಪರಿಷ್ಕರಣೆ: 3.89 ಲಕ್ಷ ಜನ ಸ್ಕೀಂನಿಂದ ಔಟ್!
ಗೃಹಲಕ್ಷ್ಮೀ ಯೋಜನೆ ಪರಿಷ್ಕರಣೆ: 3.89 ಲಕ್ಷ ಜನ ಸ್ಕೀಂನಿಂದ ಔಟ್!
ವಿಡಿಯೋ: ಸಿನಿಮಾಗಳಲ್ಲಿ ಆಕ್ಷನ್ ದೃಶ್ಯ ಎಷ್ಟು ಕಷ್ಟವಾಗಿರುತ್ತೆ ನೋಡಿ
ವಿಡಿಯೋ: ಸಿನಿಮಾಗಳಲ್ಲಿ ಆಕ್ಷನ್ ದೃಶ್ಯ ಎಷ್ಟು ಕಷ್ಟವಾಗಿರುತ್ತೆ ನೋಡಿ
ಬೈಕ್​​​ಗೆ ಗುದ್ದಿ ನೇರವಾಗಿ ಅಡಿಕೆ ತೋಟಕ್ಕೆ ನುಗ್ಗಿದ KSRTC ಬಸ್
ಬೈಕ್​​​ಗೆ ಗುದ್ದಿ ನೇರವಾಗಿ ಅಡಿಕೆ ತೋಟಕ್ಕೆ ನುಗ್ಗಿದ KSRTC ಬಸ್
ಮತದಾನವಿಲ್ಲದೇ ಕರ್ನಾಟಕದಿಂದ ನಾಲ್ವರು ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆ
ಮತದಾನವಿಲ್ಲದೇ ಕರ್ನಾಟಕದಿಂದ ನಾಲ್ವರು ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆ
‘ಬಾಯ್ಸ್ ನೆವರ್ ಕಾಂಪ್ರಮೈಸ್’: ಸಿನಿಮಾ ಬಗ್ಗೆ ನಿರ್ದೇಶಕರ ಮಾತು
‘ಬಾಯ್ಸ್ ನೆವರ್ ಕಾಂಪ್ರಮೈಸ್’: ಸಿನಿಮಾ ಬಗ್ಗೆ ನಿರ್ದೇಶಕರ ಮಾತು
'ಅವನು ನನ್ನ ವಿರುದ್ಧವೇ ಕೆಲಸ ಮಾಡಿದ್ದಾನೆ': ಜಮಿರ್ ವಿರುದ್ಧ ಸಿದ್ದು ಗರಂ
'ಅವನು ನನ್ನ ವಿರುದ್ಧವೇ ಕೆಲಸ ಮಾಡಿದ್ದಾನೆ': ಜಮಿರ್ ವಿರುದ್ಧ ಸಿದ್ದು ಗರಂ
ಹಿಂದುಳಿದ ವರ್ಗಗಳ ಇಲಾಖೆಯಲ್ಲಿ ಅನುದಾನ ತಾರತಮ್ಯದ ಆರೋಪ
ಹಿಂದುಳಿದ ವರ್ಗಗಳ ಇಲಾಖೆಯಲ್ಲಿ ಅನುದಾನ ತಾರತಮ್ಯದ ಆರೋಪ