AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜಿಎಸ್​​​ಟಿ ಕಲೆಕ್ಷನ್ ಏಪ್ರಿಲ್​​ನಲ್ಲಿ 2.37 ಲಕ್ಷ ರೂ; ಹೊಸ ದಾಖಲೆ ಬರೆದ ತೆರಿಗೆ ಸಂಗ್ರಹ; ಕರ್ನಾಟಕ ಟಾಪ್-2

GST collections in 2025 April: 2025ರ ಏಪ್ರಿಲ್ ತಿಂಗಳಲ್ಲಿ ಭಾರತದ ವಿವಿಧ ರಾಜ್ಯಗಳಲ್ಲಿ ಒಟ್ಟು 2.37 ಲಕ್ಷ ಕೋಟಿ ರೂ ಜಿಎಸ್​​ಟಿ ಸಂಗ್ರಹವಾಗಿದೆ. ರೀಫಂಡ್​​​ಗಳನ್ನು ಕಳೆದರೆ ಸರ್ಕಾರಕ್ಕೆ 2.09 ಲಕ್ಷ ಕೋಟಿ ರೂ ಜಿಎಸ್​​​ಟಿ ಉಳಿದಿದೆ. ಬಹುತೇಕ ಎಲ್ಲಾ ರಾಜ್ಯಗಳಲ್ಲೂ ಏಪ್ರಿಲ್​​​ನಲ್ಲಿ ದಾಖಲೆಯ ಜಿಎಸ್​​ಟಿ ಸಿಕ್ಕಿದೆ. ಮಹಾರಾಷ್ಟ್ರದಲ್ಲಿ ಇದೇ ಮೊದಲ ಬಾರಿಗೆ 41,000 ಕೋಟಿ ರೂಗೂ ಅಧಿಕ ಜಿಎಸ್​​ಟಿ ಸಿಕ್ಕಿದೆ. ಕರ್ನಾಟಕ ಎರಡನೇ ಸ್ಥಾನದಲ್ಲಿದೆ. ತಮಿಳುನಾಡನ್ನು ಹರ್ಯಾಣ ಹಿಂದಿಕ್ಕಿದೆ.

ಜಿಎಸ್​​​ಟಿ ಕಲೆಕ್ಷನ್ ಏಪ್ರಿಲ್​​ನಲ್ಲಿ 2.37 ಲಕ್ಷ ರೂ; ಹೊಸ ದಾಖಲೆ ಬರೆದ ತೆರಿಗೆ ಸಂಗ್ರಹ; ಕರ್ನಾಟಕ ಟಾಪ್-2
ಜಿಎಸ್​​ಟಿ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: May 02, 2025 | 11:41 AM

Share

ನವದೆಹಲಿ, ಮೇ 02: ಸರಕು ಮತ್ತು ಸೇವಾ ತೆರಿಗೆ ಸಂಗ್ರಹ (GST collections) 2025ರ ಏಪ್ರಿಲ್ ತಿಂಗಳಲ್ಲಿ 2.37 ಲಕ್ಷ ಕೋಟಿ ರೂನಷ್ಟಾಗಿರುವುದು ತಿಳಿದುಬಂದಿದೆ. ಇಲ್ಲಿಯವರೆಗೆ ಯಾವುದೇ ತಿಂಗಳಲ್ಲಿ ಕಂಡ ಅತಿಹೆಚ್ಚು ತೆರಿಗೆ ಸಂಗ್ರಹ ಇದಾಗಿದೆ. ಆ ಮಟ್ಟಿಗೆ ಇದು ಹೊಸ ದಾಖಲೆ. ಹಿಂದಿನ ತಿಂಗಳಲ್ಲಿ (2025ರ ಮಾರ್ಚ್) 1.96 ಲಕ್ಷ ರೂ ಜಿಎಸ್​​ಟಿ ಸಂಗ್ರಹವಾಗಿತ್ತು. ಹಿಂದಿನ ವರ್ಷದ ಏಪ್ರಿಲ್​​​ನಲ್ಲಿ (2024ರದ್ದು) 2.10 ಲಕ್ಷ ರೂ ಜಿಎಸ್​​ಟಿ ಸಿಕ್ಕಿತ್ತು. ಈ ಬಾರಿ ಎಲ್ಲಾ ದಾಖಲೆ ಧೂಳೀಪಟವಾಗಿದೆ. ರೀಫಂಡ್ ಕಳೆದು 2.09 ಲಕ್ಷ ಕೋಟಿ ರೂ ನಿವ್ವಳ ಜಿಎಸ್​​ಟಿ ಹರಿದುಬಂದಿದೆ.

ಕಳೆದ ಆರೇಳು ತಿಂಗಳಿಂದ ಜಿಎಸ್​​ಟಿ ಸಂಗ್ರಹ ಗಣನೀಯವಾಗಿ ಏರಿಕೆ ಆಗುತ್ತಾ ಬಂದಿದೆ. ಅಕ್ಟೋಬರ್​​​ನಿಂದ ಮಾರ್ಚ್​​ವರೆಗಿನ ಆರು ತಿಂಗಳಲ್ಲಿ ಜಿಎಸ್​​ಟಿ ಸಂಗ್ರಹ ಪ್ರತೀ ತಿಂಗಳೂ 1.73 ಲಕ್ಷ ಕೋಟಿ ರೂನಿಂದ 1.96 ಲಕ್ಷ ಕೋಟಿ ರೂವರೆಗೆ ಆಗಿರುವುದು ಅಂಕಿ ಅಂಶದಿಂದ ಗೊತ್ತಾಗುತ್ತದೆ. ಸಾಮಾನ್ಯವಾಗಿ ಹಣಕಾಸು ವರ್ಷದ ಕೊನೆಯ ತಿಂಗಳು ಹಾಗೂ ಆರಂಭಿಕ ತಿಂಗಳಲ್ಲಿ ಜಿಎಸ್​​ಟಿ ಸಂಗ್ರಹ ಹೆಚ್ಚಿರುತ್ತದೆ.

ಇದನ್ನೂ ಓದಿ: 11 ರಾಜ್ಯಗಳ 26 ಗ್ರಾಮೀಣ ಬ್ಯಾಂಕುಗಳ ವಿಲೀನ ಪೂರ್ಣ; ಕರ್ನಾಟಕದಲ್ಲಿ ಒಂದುಗೂಡಿದ ಬ್ಯಾಂಕುಗಳಿವು…

ಇದನ್ನೂ ಓದಿ
Image
ಕರ್ನಾಟಕ ಸೇರಿ 11 ರಾಜ್ಯಗಳ 26 ಗ್ರಾಮೀಣ ಬ್ಯಾಂಕುಗಳು ವಿಲೀನ
Image
ಅಪೋಲೋ ಆಸ್ಪತ್ರೆ ಸೃಷ್ಟಿಗೆ ಕಾರಣವಾದ ಮಗುವಿನ ಸಾವು
Image
ಮೈನಸ್​​ಗೆ ಕುಸಿದ ಅಮೆರಿಕದ ಆರ್ಥಿಕತೆ; ಏನು ಕಾರಣ?
Image
1913ರಲ್ಲಿ 1 ರುಪಾಯಿಗೆ 11.11 ಡಾಲರ್? ಇಲ್ಲಿದೆ ಕುಸಿತದ ಕಥೆ

2025 ಏಪ್ರಿಲ್​​ನಲ್ಲಿ ಅತಿಹೆಚ್ಚು ಜಿಎಸ್​​​ಟಿ ಸಂಗ್ರಹವಾದ ರಾಜ್ಯಗಳ ಪಟ್ಟಿ

ಒಟ್ಟು ಜಿಎಸ್​​ಟಿ ಸಂಗ್ರಹ: 2.37 ಲಕ್ಷ ಕೋಟಿ ರೂ

  1. ಮಹಾರಾಷ್ಟ್ರ: 41,645 ಕೋಟಿ ರೂ
  2. ಕರ್ನಾಟಕ: 17,815 ಕೋಟಿ ರೂ
  3. ಗುಜರಾತ್: 14,970 ಕೋಟಿ ರೂ
  4. ಹರ್ಯಾಣ: 14,057 ಕೋಟಿ ರೂ
  5. ತಮಿಳುನಾಡು: 13,831 ಕೋಟಿ ರೂ
  6. ಉತ್ತರಪ್ರದೇಶ: 13,600 ಕೋಟಿ ರೂ
  7. ದೆಹಲಿ: 8,260 ಕೋಟಿ ರೂ
  8. ಪಶ್ಚಿಮ ಬಂಗಾಳ: 8,188 ಕೋಟಿ ರೂ
  9. ತೆಲಂಗಾಣ: 6,983 ಕೋಟಿ ರೂ
  10. ರಾಜಸ್ಥಾನ್: 6,228 ಕೋಟಿ ರೂ
  11. ಒಡಿಶಾ: 6,174 ಕೋಟಿ ರೂ
  12. ಮಧ್ಯಪ್ರದೇಶ: 5,302 ಕೋಟಿ ರೂ
  13. ಆಂಧ್ರಪ್ರದೇಶ: 4,686 ಕೋಟಿ ರೂ
  14. ಜಾರ್ಖಂಡ್: 4,167 ಕೋಟಿ ರೂ
  15. ಛತ್ತೀಸ್​​​ಗಡ: 4,135 ಕೋಟಿ ರೂ
  16. ಕೇರಳ: 3,436 ಕೋಟಿ ರೂ
  17. ಪಂಜಾಬ್: 3,104 ಕೋಟಿ ರೂ

ಏಪ್ರಿಲ್ ತಿಂಗಳಲ್ಲಿ ಒಟ್ಟು ಜಿಎಸ್​​ಟಿ ಸಂಗ್ರಹ 2.37 ಲಕ್ಷ ಕೋಟಿ ರೂ ಇದ್ದರೂ, ರೀಫಂಡ್​​​ಗಳನ್ನು ಕಳೆದು ಉಳಿಯುವ ನಿವ್ವಳ ಜಿಎಸ್​​ಟಿ ಸಂಗ್ರಹ 2.09 ಲಕ್ಷ ಕೋಟಿ ರೂ.

ಇದನ್ನೂ ಓದಿ: ಒಂದು ರೂಗೆ ಚಿಕಿತ್ಸೆ, 11,000 ವೈದ್ಯರಿಗೆ ಕೆಲಸ; ಡಾ. ಪ್ರತಾಪ್ ರೆಡ್ಡಿ ಲಕ್ಷ ಕೋಟಿ ರೂ ಸಾಮ್ರಾಜ್ಯದ ಕಥೆ

ಮೇ ತಿಂಗಳಲ್ಲಿ ಕಡಿಮೆ ಜಿಎಸ್​​ಟಿ ಸಂಗ್ರಹ ಸಾಧ್ಯತೆ

ಏಪ್ರಿಲ್​​ನಲ್ಲಿ ದಾಖಲೆಯ ಜಿಎಸ್​​ಟಿ ಸಂಗ್ರಹ ಆಗಿರುವುದು ಭಾರತದ ಆರ್ಥಿಕತೆಯ ಆರೋಗ್ಯದ ಸಂಕೇತವಾಗಿದೆ ಎಂಬುದು ಇವೈ ಇಂಡಿಯಾದ ಟ್ಯಾಕ್ಸ್ ಪಾರ್ಟ್ನರ್ ಸೌರಭ್ ಅಗರ್ವಾಲ್ ಹೇಳುತ್ತಾರೆ. ಅವರ ಪ್ರಕಾರ, ಮುಂಬರುವ ದಿನಗಳಲ್ಲಿ ಜಾಗತಿಕ ಆರ್ಥಿಕ ಅನಿಶ್ಚಿತ ಪರಿಸ್ಥಿತಿ ಇರುವುದರಿಂದ ಮೇ ತಿಂಗಳಲ್ಲಿ ಜಿಎಸ್​​ಟಿ ಸಂಗ್ರಹ ತುಸು ತಗ್ಗಬಹುದು. ಒಟ್ಟಾರೆ ಭಾರತದ ಆರ್ಥಿಕತೆ ಆಶಾಭಾವನೆ ಮೂಡಿಸುತ್ತದೆ ಎನ್ನುತ್ತಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ