AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರತದಲ್ಲಿ ತಯಾರಕಾ ವಲಯ ಇತ್ತೀಚೆಗೆ ಎಷ್ಟು ಮುಂದುವರಿದಿದೆ ಗೊತ್ತಾ? ಉದ್ಯಮಿ ಪ್ರಕಾಶ್ ದದಲಾನಿ ಕೊಟ್ಟ ನಿದರ್ಶನ ಇದು

Prakash Dadlani's X post on Kettle manufacturing: ಮೂರು ವರ್ಷದ ಹಿಂದೆ ಒಂದು ಕೆಟಲ್ (ನೀರು ಬಿಸಿಮಾಡುವ ಎಲೆಕ್ಟ್ರಿಕ್ ಪಾತ್ರೆ) ಅನ್ನು ಪೂರ್ಣವಾಗಿ ಆಮದು ಮಾಡಿಕೊಳ್ಳಲಾಗುತ್ತಿತ್ತು. ಈಗ ಸ್ಟೀಲ್ ಬಾಡಿ, ಹೀಟಿಂಗ್ ಪ್ಲೇಟ್ ಮತ್ತು ಕಂಟ್ರೋಲರ್ ಹೊರತುಪಡಿಸಿ, ಕೆಟಲ್​​ನ ಉಳಿದ ಬಿಡಿಭಾಗಗಳನ್ನು ಭಾರತದಲ್ಲಿ ನಿರ್ಮಿಸಲಾಗುತ್ತಿದೆ. ಆ ಬಿಡಿಭಾಗಗಳ ತಯಾರಿಕೆಯಿಂದ ಉದ್ಯೋಗ ಸೃಷ್ಟಿಯಾಗಿದೆ, ಹಣ ಉಳಿತಾಯವಾಗಿದೆ, ಬೆಲೆ ಕಡಿಮೆ ಆಗಿದೆ ಎಂಬಿತ್ಯಾದಿ ನಾನಾ ಉಪಯೋಗಗಳನ್ನು ಉದ್ಯಮಿ ಪ್ರಕಾಶ್ ದದಲಾನಿ ತಿಳಿಸಿದ್ದಾರೆ.

ಭಾರತದಲ್ಲಿ ತಯಾರಕಾ ವಲಯ ಇತ್ತೀಚೆಗೆ ಎಷ್ಟು ಮುಂದುವರಿದಿದೆ ಗೊತ್ತಾ? ಉದ್ಯಮಿ ಪ್ರಕಾಶ್ ದದಲಾನಿ ಕೊಟ್ಟ ನಿದರ್ಶನ ಇದು
ಪ್ರಕಾಶ್ ದದಲಾನಿ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Mar 30, 2025 | 3:38 PM

ನವದೆಹಲಿ, ಮಾರ್ಚ್ 30: ಭಾರತದಲ್ಲಿ ತಯಾರಕಾ ವಲಯ ಆರಕ್ಕೇರುತ್ತಿಲ್ಲ, ಮೂರಕ್ಕಿಳಿಯುತ್ತಿಲ್ಲ. ಸರ್ಕಾರದ ಪಿಎಲ್​​ಐ ಸ್ಕೀಮ್ ಮಕಾಡೆ ಮಲಗಿದೆ ಎನ್ನುವಂತಹ ಟೀಕೆಗಳನ್ನು ನೀವು ಕೇಳಿರಬಹುದು. ಭಾರತದಲ್ಲಿ ಇತ್ತೀಚಿನ ವರ್ಷಗಳಲ್ಲಿ ಮ್ಯಾನುಫ್ಯಾಕ್ಚರಿಂಗ್ ಸೆಕ್ಟರ್ (manufacturing sector) ಅದೆಷ್ಟು ಮಟ್ಟಿಗೆ ಪ್ರಗತಿ ಹೊಂದಿದೆ ಎಂಬುದಕ್ಕೆ ಉದ್ಯಮಿ ಪ್ರಕಾಶ್ ದದಲಾನಿ (Prakash Dadlani) ಒಂದು ಪಾತ್ರೆಯ ಉದಾಹರಣೆ ನೀಡಿದ್ದಾರೆ. ಹಿಂದೆ ಒಂದು ಕೆಟಲ್ (Kettle – ನೀರು ಕುದಿಸಬಹುದಾದ ಪಾತ್ರೆ) ತಯಾರಿಕೆ ಭಾರತದಲ್ಲಿ ಹೇಗಿತ್ತು, ಈಗ ಹೇಗಿದೆ ಎಂಬುದನ್ನು ಅವರು ವಿವರಿಸಿದ್ದಾರೆ. ಭಾರತದಲ್ಲಿ ತಯಾರಿಕಾ ಕ್ಷೇತ್ರ ತನ್ನ ಬೆಳವಣಿಗೆ ಜೊತೆಗೆ ಯಾವ್ಯಾವ ಸ್ತರದಲ್ಲಿ ಸಕಾರಾತ್ಮಕ ಪರಿಣಾಮ ಉಂಟು ಮಾಡಿದೆ ಎನ್ನುವುದನ್ನು ಅಂಕಿ ಅಂಶಗಳಿಂದ ತಿಳಿಸಿದ್ದಾರೆ.

ಆಮದಿನಿಂದ ದೂರ ಇದ್ದರೆ ಇದು ಪ್ರಯೋಜನ

ಪ್ರಕಾಶ್ ದದಲಾನಿ ಅವರು ಕಳೆದ ಮೂರು ದಶಕಗಳಿಂದ ಎಲೆಕ್ಟ್ರಿಕ್ ಉಪಕರಣಗಳ ಬ್ಯುಸಿನೆಸ್​​ನಲ್ಲಿದ್ದಾರೆ. ಮಿಕ್ಸರ್ ಗ್ರೈಂಡರ್ ತಯಾರಿಸುವ ಟಾಪ್​​ಸೇಲ್ ಬ್ರ್ಯಾಂಡ್​​ನ ಮುಖ್ಯಸ್ಥರಾಗಿದ್ದಾರೆ. ಎಕ್ಸ್​​ನಲ್ಲೂ ಸಕ್ರಿಯವಾಗಿರುವ ಅವರು, ಉದ್ಯಮ ವ್ಯವಹಾರಗಳ ವಿಚಾರದಲ್ಲಿ ತಮಗೆ ಅನಿಸಿದ್ದನ್ನು ಮುಚ್ಚು ಮರೆಯಿಲ್ಲದೇ ವ್ಯಕ್ತಪಡಿಸುವುದುಂಟು. ಮೊನ್ನೆ ಅವರು ಭಾರತದಲ್ಲಿ ಮ್ಯಾನುಫ್ಯಾಕ್ಚರಿಂಗ್ ಸೆಕ್ಟರ್ ಹೇಗೆ ಬೆಳವಣಿಗೆ ಹೊಂದುತ್ತಿದೆ ಎಂಬುದನ್ನು ಅಂಕಿ ಅಂಶಗಳಿಂದ ತಿಳಿಸುವ ಒಂದು ಪೋಸ್ಟ್ ಹಾಕಿದ್ದಾರೆ. ಒಂದು ಕೆಟಲ್​​ನ ಚಿತ್ರವನ್ನೂ ಲಗತ್ತಿಸಿದ್ದಾರೆ.

ಇದನ್ನೂ ಓದಿ
Image
ಅತಿ ಹೆಚ್ಚು ಬೇಡಿಕೆಯಿರುವ ಖನಿಜ ಸಂಪತ್ತು ದೇಶದಲ್ಲಿದೆ
Image
ಸರ್ಕಾರದಿಂದ ಸಹಕಾರಿ ಟ್ಯಾಕ್ಸಿ ಸರ್ವಿಸ್?
Image
ಆಸ್ತಿ ನೋಂದಣಿ ಸಂದರ್ಭದಲ್ಲಿ ಯಾರನ್ನು ಸಾಕ್ಷಿದಾರರನ್ನಾಗಿ ಮಾಡಬಹುದು?
Image
ಮೊದಲ ಮೇಡ್ ಇನ್ ಇಂಡಿಯಾ ಎಂಆರ್​​ಐ ಸ್ಕ್ಯಾನರ್

ಇದನ್ನೂ ಓದಿ: ಅತಿ ಹೆಚ್ಚು ಬೇಡಿಕೆಯಿರುವ ಖನಿಜ ಸಂಪತ್ತು ದೇಶದಲ್ಲಿದೆ, ಪತ್ತೆ ಹಚ್ಚಿ ಹೊರತೆಗೆಯುವ ಪ್ರಯತ್ನವಾಗಲಿ : ಅನಿಲ್ ಅಗರ್ವಾಲ್

‘ಮೂರು ವರ್ಷದ ಹಿಂದೆ ಈ ಕೆಟಲ್ ಅನ್ನು ಪೂರ್ಣವಾಗಿ ಆಮದು ಮಾಡಿಕೊಳ್ಳಲಾಗುತ್ತಿತ್ತು. ಇವತ್ತು ಈ ಕೆಟಲ್​​ನ ಸ್ಟೀಲ್ ಕವಚ, ಕಂಟ್ರೋಲರ್ ಮತ್ತು ಹೀಟಿಂಗ್ ಪ್ಲೇಟ್​​ ಅನ್ನು ಮಾತ್ರವೇ ಹೊರದೇಶಗಳಿಂದ ತರಿಸಲಾಗುತ್ತಿದೆ. ಉಳಿದವನ್ನು ಭಾರತದಲ್ಲೇ ನಿರ್ಮಿಸಲಾಗುತ್ತಿದೆ’ ಎಂದು ತಮ್ಮ ಎಕ್ಸ್ ಪೋಸ್ಟ್​​ನಲ್ಲಿ ಪ್ರಕಾಶ್ ದದ್ಲಾನಿ ಬರೆದಿದ್ದಾರೆ. ಹಾಗೆಯೇ, ಭಾರತದಲ್ಲಿ ಈ ಬಿಡಿಭಾಗಗಳು ತಯಾರಾಗುವುದರಿಂದ ಏನೆಲ್ಲಾ ಪರಿಣಾಮ ಉಂಟಾಗುತ್ತವೆ ಎಂದೂ ಅವರು ಅವಲೋಕಿಸಿದ್ದಾರೆ.

ಪ್ರಕಾಶ್ ದದಲಾನಿ ಅವರು ತಮ್ಮ ಪೋಸ್ಟ್​​ನಲ್ಲಿ ಬರೆದಿರುವ ಪ್ರಕಾರ ಒಂದು ಕೋಟಿ ಕೆಟಲ್​​ಗಳ ಬಿಸಿನೆಸ್ ಆಗಿದೆ ಎಂದರೆ, ಭಾರತದಲ್ಲಿ ಒಂದು ಕೋಟಿ ಪವರ್ ಕಾರ್ಡ್​​ಗಳು ತಯಾರಾಗಿವೆ. ಒಂದು ಕೋಟಿ ಪ್ಯಾಕೇಜಿಂಗ್ ಪ್ರಿಂಟ್ ಆಗಿವೆ. ಒಂದು ಕೋಟಿ ಪ್ಲಾಸ್ಟಿಕ್ ಭಾಗಗಳು ಮೌಲ್ಡ್ ಆಗಿವೆ. ಉದ್ಯೋಗಗಳು ಸೃಷ್ಟಿಯಾಗಿವೆ. ಕುಟುಂಬಗಳಿಗೆ ಆಧಾರ ಗಟ್ಟಿಗೊಂಡಿದೆ. ವಿದೇಶೀ ಮೀಸಲು ನಿಧಿಯಲ್ಲಿ ಸಾವಿರಾರು ಕೋಟಿ ರೂನಷ್ಟು ಉಳಿತಾಯವಾಗಿದೆಯಂತೆ.

ಇದನ್ನೂ ಓದಿ: ಯುಗಾದಿ ಗಿಫ್ಟ್; ಶೇ. 2 ಡಿಎ ಹೆಚ್ಚಿಸಲು ಸಂಪುಟ ಅನುಮೋದನೆ; ಒಟ್ಟು ತುಟ್ಟಿಭತ್ಯೆ ಶೇ. 55ಕ್ಕೆ ಏರಿಕೆ

ತಮ್ಮ ಪೋಸ್ಟ್​​ನಲ್ಲಿ ಇನ್ನೂ ಮುಂದುವರಿಸಿ ಬರೆದಿರುವ ಅವರು, ಗ್ರಾಹಕರು ಕಡಿಮೆ ಪಾವತಿಸುತ್ತಿದ್ಧಾರೆ. ಉದ್ಯಮಿಗಳು ಕಲಿಯುತ್ತಿದ್ದಾರೆ. ಫ್ಯಾಕ್ಟರಿಗಳು ದೊಡ್ಡ ಮಟ್ಟದಲ್ಲಿ ತಯಾರಿಕೆ ಮಾಡುತ್ತಿದ್ದಾರೆ. ಭಾರತವು ನಿರ್ಮಾಣ ಆಗುತ್ತಿದೆ. ಈ ವೇಗದಲ್ಲಿ ಹೋದರೆ, ಈ ಕೆಟಲ್ ಸಂಪೂರ್ಣ ಮೇಡ್ ಇನ್ ಇಂಡಿಯಾ ಆಗಬಹುದು. ಇದೊಂದು ಉದಾಹರಣೆ ಮಾತ್ರ. ಮುಂದಿನದು ಏನಿರಬಹುದು ಊಹಿಸಿ ಎಂದಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ