How to save 1 crore | ಪ್ರತಿ ತಿಂಗಳು 10,000 ರೂಪಾಯಿ ಉಳಿತಾಯ ಮಾಡಿ, ಕೋಟ್ಯಧಿಪತಿ ಆಗಲು ಇಲ್ಲಿದೆ ಮಾರ್ಗ

ಪ್ರತಿ ತಿಂಗಳಿಗೆ 10.000 ರೂಪಾಯಿ ಉಳಿಸುತ್ತಾ 1 ಕೋಟಿ ರೂಪಾಯಿಯನ್ನು ಉಳಿತಾಯ ಮಾಡೋದು ಹೇಗೆ ಎಂದು ಆಲೋಚಿಸುವವರು ಕಡ್ಡಾಯ ಓದಲೇಬೇಕಾದ ಲೇಖನ ಇದು.

How to save 1 crore | ಪ್ರತಿ ತಿಂಗಳು 10,000 ರೂಪಾಯಿ ಉಳಿತಾಯ ಮಾಡಿ, ಕೋಟ್ಯಧಿಪತಿ ಆಗಲು ಇಲ್ಲಿದೆ ಮಾರ್ಗ
ಪ್ರಾತಿನಿಧಿಕ ಚಿತ್ರ
Follow us
|

Updated on: May 03, 2021 | 4:09 PM

ಗುರಿ ಮತ್ತು ಸಮಯ ಇವೆರಡರ ಬಗ್ಗೆಯೂ ಸ್ಪಷ್ಟತೆ ಇದ್ದರೆ ಜೀವನ ಸರಾಗವಾಗಿ ಮುನ್ನಡೆಯುತ್ತದೆ. ಮಕ್ಕಳ ಶಿಕ್ಷಣ, ಮದುವೆ, ರಿಟೈರ್​ಮೆಂಟ್ ಹೀಗೆ ಯಾವುದಕ್ಕೆ ಯಾವಾಗ ಎಷ್ಟು ದುಡ್ಡು ಬೇಕಾಗುತ್ತದೆ ಅಂತ ಅಂದಾಜು ಮಾಡಿಟ್ಟುಕೊಂಡು, ತಿಂಗಳಿಗೆ ಇಷ್ಟು ಎಂದು ಹಣ ಕೂಡಿಡುತ್ತಾ ಸಾಗಿದರೆ ಆಯಾ ಸನ್ನಿವೇಶ ನಮ್ಮನ್ನು ಗಾಬರಿ ಪಡಿಸಲ್ಲ. ಇದಕ್ಕೆ ಮೊದಲು ಒಂದು ಸೂತ್ರವನ್ನು ಪಾಲಿಸಬೇಕು. ಅದೇನೆಂದರೆ, ನಿಮಗೆ ಬರುವ ಆದಾಯ ಹಾಗೂ ಅದರಲ್ಲಿ ಉಳಿತಾಯದ ಮೊತ್ತವನ್ನು ಕಳೆದು, ಬಾಕಿ ಉಳಿದ ಮೊತ್ತದಲ್ಲಿ ಖರ್ಚನ್ನು ಮಾಡಬೇಕು. ಬಹಳ ಜನರ ಲೆಕ್ಕ ಹೇಗೆಂದರೆ, ಆದಾಯದಲ್ಲಿ ಖರ್ಚು ಮಾಡಿದ ನಂತರ ಉಳಿದದ್ದು ಉಳಿತಾಯವಾಗಿರುತ್ತದೆ. ಆದ್ದರಿಂದ ಮೊದಲಿಗೆ ಉಳಿತಾಯಕ್ಕೆ ಆದ್ಯತೆ.

ಈಗ ಉದಾಹರಣೆ ನೋಡಿ. ಪ್ರತಿ ತಿಂಗಳು ನೀವು 5000 ರೂಪಾಯಿ ಉಳಿಸ್ತಾ ಇದೀರಿ ಅಂದುಕೊಳ್ಳಿ. ಅದು ಈಕ್ವಿಟಿ ಮ್ಯೂಚುವಲ್ ಫಂಡ್​ನಲ್ಲಿ ಹೂಡಿಕೆ ಮಾಡ್ತಾ ಇದೀರಿ. ಆ ಮೊತ್ತ ಶೇ 12ರ ದರದಲ್ಲಿ ಬೆಳೆಯುತ್ತಾ ಹೋದಲ್ಲಿ 20 ವರ್ಷದ ನಂತರ 50 ಲಕ್ಷ ರೂಪಾಯಿ ಆಗುತ್ತದೆ. ಆ ಒಟ್ಟು ಮೊತ್ತದಲ್ಲಿ ನಿಮ್ಮ ಹೂಡಿಕೆ 12 ಲಕ್ಷ ರೂಪಾಯಿಯಾದರೆ, ಬಾಕಿ ಮೊತ್ತ ನಿಮ್ಮದೇ ಹಣ ಮಾಡಿರುವ ಗಳಿಕೆಯಾಗಿರುತ್ತದೆ.

ಶೇ 12ರ ಖಾತ್ರಿ ಬೆಳವಣಿಗೆ ದರ ಒಂದು ವೇಳೆ ನೀವು ಉಳಿತಾಯವನ್ನು ಪ್ರತಿ ತಿಂಗಳು 10,000 ರೂಪಾಯಿಗೆ ಹೆಚ್ಚು ಮಾಡಿದಿರಿ ಅಂದುಕೊಳ್ಳಿ. ಆಗ ಮೆಚ್ಯೂರಿಟಿ ಮೊತ್ತವು ರೂ. 1 ಕೋಟಿಯಷ್ಟಾಗುತ್ತದೆ. ಇನ್ನು ಸಮಯವನ್ನೂ ಹೆಚ್ಚು ಮಾಡ್ತೀವಿ, ಅಂದರೆ 25 ವರ್ಷಗಳ ಅವಧಿಗೆ 5000 ಅಥವಾ 10,000 ರೂಪಾಯಿ ಉಳಿತಾಯ ಮಾಡ್ತೀವಿ ಅಂದುಕೊಳ್ಳುವಿರಾದರೆ, ಶೇ 12ರ ಖಾತ್ರಿ ಬೆಳವಣಿಗೆ ದರದಲ್ಲಿ ಕ್ರಮವಾಗಿ 95 ಲಕ್ಷ ರೂಪಾಯಿ ಮತ್ತು 1.9 ಕೋಟಿ ರೂಪಾಯಿ ಆಗುತ್ತದೆ.

ಆದರೆ, ನಿಮ್ಮ ಗುರಿ ನಿಗದಿ ಮಾಡಿಕೊಳ್ಳುವಾಗ ಹಣದುಬ್ಬರದ ಬಗ್ಗೆಯೂ ಗಮನ ಇರಲಿ. ನಿಮ್ಮ ಮಗನದೋ ಮಗಳದೋ ಇಪ್ಪತ್ತು ವರ್ಷದ ನಂತರ ಶೈಕ್ಷಣಿಕ ಉದ್ದೇಶಕ್ಕೆ ಇವತ್ತಿನ ಲೆಕ್ಕಕ್ಕೆ 25 ಲಕ್ಷ ರೂಪಾಯಿ ಹಣ ಬೇಕಾಗಿದ್ದಲ್ಲಿ, ನೀವು ಅದಕ್ಕೆ 10 ಲಕ್ಷ ರೂಪಾಯಿ ಹೆಚ್ಚಿಗೆ ಅಂದುಕೊಂಡು ಹಣ ಕೂಡಿಡಬೇಕು.

ತಿಂಗಳಿಗೆ 3000 ರೂಪಾಯಿಯಂತೆ 30 ವರ್ಷದಲ್ಲಿ 1 ಕೋಟಿ ಯಾರಾದರೂ ತಿಂಗಳಿಗೆ 3000 ರೂಪಾಯಿಯನ್ನು SIP (Systematic Investment Plan) ವಿಧಾನದಲ್ಲಿ 30 ವರ್ಷಗಳ ಅವಧಿಗೆ ಉಳಿತಾಯ ಮಾಡಿದರೆ ಮೆಚ್ಯೂರಿಟಿ ಮೊತ್ತ 1 ಕೋಟಿ ರೂಪಾಯಿ ದಾಟುತ್ತದೆ. ನೀವು ಯಾವುದಾದರೂ ಎಸ್​ಐಪಿ ಕ್ಯಾಲ್ಕುಲೇಟರ್ ಬಳಸಿಕೊಂಡು, ಹೂಡಿಕೆ ಮೊತ್ತ ಹಾಗೂ ಮೆಚ್ಯೂರಿಟಿ ವೇಳೆಯಲ್ಲಿ ಸಿಗವ ಹಣದ ಬಗ್ಗೆ ಲೆಕ್ಕ ಹಾಕಿಕೊಳ್ಳಬಹುದು. ರಿಸ್ಕ್ ತೆಗೆದುಕೊಳ್ಳುವ ನಿಮ್ಮ ಸಾಮರ್ಥ್ಯ, ವಯಸ್ಸು ಎಲ್ಲವನ್ನೂ ಗಮನದಲ್ಲಿಟ್ಟುಕೊಂಡು ಈಕ್ವಿಟಿ ಮ್ಯೂಚುವಲ್ ಫಂಡ್​ಗಳಲ್ಲಿ ಹೂಡಿಕೆ ಮಾಡಿ. ವಿವಿಧ ವಲಯದ, ವಿವಿಧ ಗಾತ್ರದ ಕಂಪೆನಿಯ ಷೇರುಗಳ ಮೇಲೆ ಹೂಡಿಕೆ ಮಾಡುವಂತೆ ಮೂರ್ನಾಲ್ಕು ಬಗೆಯ ಫಂಡ್​ಗಳನ್ನು ಆರಿಸಿಕೊಳ್ಳಿ. ನಿಮ್ಮ ಗುರಿ ದೀರ್ಘಾವಧಿಯದ್ದಾಗಿರಲಿ.

ನೀವಿನ್ನೂ ಉಳಿತಾಯ ಶುರು ಮಾಡಿಲ್ಲ ಅಂತಾದರೆ ಈಗಲೇ ಆರಂಭಿಸಿ. ನೀವು ಹೆಚ್ಚು ತಡ ಮಾಡಿದಷ್ಟು ಹೆಚ್ಚಿನ ಮೊತ್ತವನ್ನು ಹೂಡಿಕೆ ಮಾಡಬೇಕಾಗುತ್ತದೆ. ತುಂಬ ಬೇಗ ಶುರು ಮಾಡಿದರೆ ಉಳಿತಾಯ ಮಾಡಡಬೇಕಾದ ಮೊತ್ತ ಕಡಿಮೆ ಆಗುತ್ತದೆ. ಆದರೆ ಅದೇ ಉಳಿತಾಯದ ಹಣವು ನಿಮಗಾಗಿ ದುಡಿಯೋದು ಹೆಚ್ಚಿಗೆ ಇರುತ್ತದೆ.

ಇದನ್ನೂ ಓದಿ: Post Office MIS: ಪೋಸ್ಟ್ ಆಫೀಸ್ ತಿಂಗಳ ಆದಾಯ ಯೋಜನೆಯಲ್ಲಿ ರೂ. 4,950 ಪಡೆಯಿರಿ

ಇದನ್ನೂ ಓದಿ: 10,000 ರೂಪಾಯಿ ಹೂಡಿದವರಿಗೆ 20 ವರ್ಷದಲ್ಲಿ 2 ಕೋಟಿ ಮಾಡಿಕೊಟ್ಟ ಕಂಪೆನಿಯ ಕಥೆಯಿದು

(How to become crorepati by saving Rs 5000 per month? Here is an explainer)

ತಾಜಾ ಸುದ್ದಿ
ಜೆಸಿಬಿಯಲ್ಲಿ ಕಲ್ಯಾಣ ಮಂಟಪಕ್ಕೆ ಬಂದು, ಅಂಕದ ಕೋಳಿ ಪೈಟ್ ಆಡಿದ ನವಜೋಡಿಗಳು
ಜೆಸಿಬಿಯಲ್ಲಿ ಕಲ್ಯಾಣ ಮಂಟಪಕ್ಕೆ ಬಂದು, ಅಂಕದ ಕೋಳಿ ಪೈಟ್ ಆಡಿದ ನವಜೋಡಿಗಳು
ರಿಜಿಸ್ಟ್ರೇಷನ್ ಸರ್ಟಿಫಿಕೇಟ್ ನೀಡದಿದ್ದಕ್ಕೆ KNC ಬಳಿ ವಿದ್ಯಾರ್ಥಿಗಳ ಗಲಾಟೆ
ರಿಜಿಸ್ಟ್ರೇಷನ್ ಸರ್ಟಿಫಿಕೇಟ್ ನೀಡದಿದ್ದಕ್ಕೆ KNC ಬಳಿ ವಿದ್ಯಾರ್ಥಿಗಳ ಗಲಾಟೆ
ವಂಟಮೂರಿ ಘಟನೆ ಅವಮಾನದಿಂದ ತಲೆ ತಗ್ಗಿಸುವಂತೆ ಮಾಡಿದೆ:ಲಕ್ಷ್ಮಿ ಹೆಬ್ಬಾಳ್ಕರ್
ವಂಟಮೂರಿ ಘಟನೆ ಅವಮಾನದಿಂದ ತಲೆ ತಗ್ಗಿಸುವಂತೆ ಮಾಡಿದೆ:ಲಕ್ಷ್ಮಿ ಹೆಬ್ಬಾಳ್ಕರ್
ಬರದ ಬಗ್ಗೆ ಚರ್ಚಿಸದೆ ಪ್ರತಿಭಟಿಸುವ ಶಾಸಕರಿಗೆ ನಾಚಿಕೆಯಾಗಬೇಕು: ಸಿಎಂ
ಬರದ ಬಗ್ಗೆ ಚರ್ಚಿಸದೆ ಪ್ರತಿಭಟಿಸುವ ಶಾಸಕರಿಗೆ ನಾಚಿಕೆಯಾಗಬೇಕು: ಸಿಎಂ
ಬರ ಮತ್ತು ಉತ್ತರ ಕರ್ನಾಟಕ ಚರ್ಚೆಗೆ ಅಧಿವೇಶನ ವಾರ ವಿಸ್ತರಿಸಲಿ: ಯತ್ನಾಳ್
ಬರ ಮತ್ತು ಉತ್ತರ ಕರ್ನಾಟಕ ಚರ್ಚೆಗೆ ಅಧಿವೇಶನ ವಾರ ವಿಸ್ತರಿಸಲಿ: ಯತ್ನಾಳ್
ಸ್ಪೀಕರ್ ಗೆ ಎಲ್ಲ ನಮಸ್ಕಾರ್ ಸಾರ್ ಅನ್ನಬೇಕು ಅಂದರೆ ತಪ್ಪೇನು?ಜಮೀರ್ ಅಹ್ಮದ್
ಸ್ಪೀಕರ್ ಗೆ ಎಲ್ಲ ನಮಸ್ಕಾರ್ ಸಾರ್ ಅನ್ನಬೇಕು ಅಂದರೆ ತಪ್ಪೇನು?ಜಮೀರ್ ಅಹ್ಮದ್
ಸ್ಪೀಕರ್ ಖಾದರ್ ಹೇಳುವ ಮಾತು ಸದನದಲ್ಲಿರುವವರೆಲ್ಲರ ಮನಸ್ಸಿಗೆ ನಾಟುತ್ತದೆ
ಸ್ಪೀಕರ್ ಖಾದರ್ ಹೇಳುವ ಮಾತು ಸದನದಲ್ಲಿರುವವರೆಲ್ಲರ ಮನಸ್ಸಿಗೆ ನಾಟುತ್ತದೆ
ಹುಟ್ಟೂರು ಹರದನಹಳ್ಳಿಯಲ್ಲಿ ಮನೆ ದೇವರಿಗೆ ಹೆಚ್​ಡಿಡಿ ದಂಪತಿ ಪೂಜೆ
ಹುಟ್ಟೂರು ಹರದನಹಳ್ಳಿಯಲ್ಲಿ ಮನೆ ದೇವರಿಗೆ ಹೆಚ್​ಡಿಡಿ ದಂಪತಿ ಪೂಜೆ
ಬಿಗ್ ಬಾಸ್​ನಲ್ಲಿ ಆಪ್ತರನ್ನೇ ನಾಮಿನೇಟ್ ಮಾಡಿದ ಕಂಟೆಸ್ಟಂಟ್​ಗಳು
ಬಿಗ್ ಬಾಸ್​ನಲ್ಲಿ ಆಪ್ತರನ್ನೇ ನಾಮಿನೇಟ್ ಮಾಡಿದ ಕಂಟೆಸ್ಟಂಟ್​ಗಳು
ಬೆಂಗಳೂರಿನ ಜಯನಗರದಲ್ಲಿ ಹಾಡಹಗಲೇ ಸ್ಕೂಟರ್‌ ಕಳ್ಳತನ
ಬೆಂಗಳೂರಿನ ಜಯನಗರದಲ್ಲಿ ಹಾಡಹಗಲೇ ಸ್ಕೂಟರ್‌ ಕಳ್ಳತನ