AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

TiE India Internet Day; ಬೆಂಗಳೂರು, ದೆಹಲಿ, ಭುವನೇಶ್ವರದಲ್ಲಿ ಕಾರ್ಯಕ್ರಮಗಳು; ದಿನಾಂಕ ಮತ್ತಿತರ ವಿವರ ತಿಳಿಯಿರಿ

iDay Celebration From TiE: ದಿ ಇಂಡಸ್ ಆಂಟ್ರಪ್ರೆನ್ಯೂರ್ಸ್ (TiE) ಗುಂಪಿನ ವತಿಯಿಂದ 12ನೇ ಆವೃತ್ತಿಯ ಇಂಡಿಯಾ ಇಂಟರ್ನೆಟ್ ಡೇ ಅನ್ನು ಆಗಸ್ಟ್ 24ರಂದು ಆಚರಿಸಲಾಗುತ್ತಿದೆ. ದೆಹಲಿಯ ಬಳಿಕ ಆಗಸ್ಟ್ 26ರಂದು ಬೆಂಗಳೂರಿನಲ್ಲಿ, ಆಗಸ್ಟ್ 29ರಂದು ಭುವನೇಶ್ವರದಲ್ಲಿ ಕಾರ್ಯಕ್ರಮ ನಡೆಯಲಿದೆ. ವಿವಿಧ ಗಣ್ಯರು ಚರ್ಚಾಗೋಷ್ಠಿಗಳಲ್ಲಿ ಪಾಲ್ಗೊಳ್ಳಲಿದ್ದಾರೆ.

TiE India Internet Day; ಬೆಂಗಳೂರು, ದೆಹಲಿ, ಭುವನೇಶ್ವರದಲ್ಲಿ ಕಾರ್ಯಕ್ರಮಗಳು; ದಿನಾಂಕ ಮತ್ತಿತರ ವಿವರ ತಿಳಿಯಿರಿ
ಇಂಡಿಯಾ ಇಂಟರ್ನೆಟ್ ಡೇ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Aug 23, 2023 | 10:43 AM

Share

ನವದೆಹಲಿ, ಆಗಸ್ಟ್ 23: ನಾಳೆ (ಆಗಸ್ಟ್ 24) TiE ಸಂಸ್ಥೆ ವತಿಯಿಂದ ಇಂಡಿಯಾ ಇಂಟರ್ನೆಟ್ ಡೇ (iDay) ಆಚರಿಸಲಾಗುತ್ತಿದೆ. ಇದು 12ನೇ ಆವೃತ್ತಿಯ ಐಡೇ ಆಗಲಿದ್ದು, ದೆಹಲಿ ವಿಭಾಗದ TiE ಸಂಸ್ಥೆ ಈ ಕಾರ್ಯಕ್ರಮ ಆಯೋಜಿಸುತ್ತಿದೆ. ‘ಎಐ ಪವರ್ಡ್ ಇಂಡಿಯಾ: ವಿಷನ್ ಅಂಡ್ ರಿಯಾಲಿಟಿ’ ಎಂಬುದು ಈ 12ನೇ ಆವೃತ್ತಿಯ ಕಾರ್ಯಕ್ರಮದ ಥೀಮ್. ಕೃತಕ ಬುದ್ಧಿಮತ್ತೆ ಅಥವಾ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ತಂತ್ರಜ್ಞಾನ ವ್ಯಾವಹಾರಿಕ ರೂಪುರೇಖೆಯನ್ನು ಹೇಗೆ ಬದಲಾಯಿಸುತ್ತಿದೆ ಎಂಬುದನ್ನು ಕಾರ್ಯಕ್ರಮದಲ್ಲಿ ಚರ್ಚಿಸಲಾಗುತ್ತದೆ. ಆಗಸ್ಟ್ 25ರಂದು ಬೆಂಗಳೂರಿನಲ್ಲೂ ಈ ಕಾರ್ಯಕ್ರಮ ನಡೆಯುತ್ತದೆ. ಕರ್ನಾಟಕ ರಾಜ್ಯ ಸರ್ಕಾರದ ಐಟಿ ಸಚಿವ ಪ್ರಿಯಾಂಕ್ ಖರ್ಗೆ, ಬೆಂಗಳೂರಿನ ಓಲಾ ಸಹ-ಸಂಸ್ಥಾಪಕ ಭವೀಶ್ ಅಗರ್ವಾಲ್ ಮೊದಲಾದವರು ಬೆಂಗಳೂರಿನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಮಾತನಾಡಲಿದ್ದಾರೆ.

ಇಂಡಿಯಾ ಇಂಟರ್ನೆಟ್ ಡೇ ಮೊದಲ ಬಾರಿಗೆ ಆಯೋಜಿಸಿದ್ದು 2012ರಲ್ಲಿ. ಆಗಿನಿಂದ ಇದು ಹೆಚ್ಚು ಪ್ರವರ್ಧಮಾನಕ್ಕೆ ಬಂದಿದೆ. ಭಾರತದ ಸ್ಟಾರ್ಟಪ್ ನಗರಿಗಳೆನಿಸಿದ ಬೆಂಗಳೂರು, ದೆಹಲಿ ಮತ್ತು ಭುಬನೇಶ್ವರ್​ನಲ್ಲಿ ಐಡೇ ಆಚರಿಸಲಾಗುತ್ತದೆ. ಬೆಂಗಳೂರಿನಲ್ಲಿ ಆಗಸ್ಟ್ 25ರಂದು ಕಾರ್ಯಕ್ರಮ ನಡೆಯುತ್ತದೆ. ಮೂರನೇ ಸ್ಟಾರ್ಟಪ್ ಹಬ್ ಎನಿಸಿದ ಒಡಿಶಾದ ಭುವನೇಶ್ವರ್ ನಗರದಲ್ಲಿ ಆಗಸ್ಟ್ 29ರಂದು ಚರ್ಚಾಗೋಷ್ಠಿ ನಡೆಯುತ್ತದೆ.

ಇದನ್ನೂ ಓದಿ: ಟಾಟಾ ಗ್ರೂಪ್ ಮಾಲಕತ್ವದ ಕ್ಯಾರಟ್​ಲೇನ್ ಕಂಪನಿಯ ಉದ್ಯೋಗಿಗಳಿಗೆ ಸಿಗಲಿದೆ 340 ಕೋಟಿ ರೂ ಮೊತ್ತದ ಪಾಲು

TiEಯಿಂದ ನಡೆಯುವ ಇಂಡಿಯಾ ಇಂಟರ್ನೆಟ್ ಡೇ ಕಾರ್ಯಕ್ರಮದಲ್ಲಿ ಮಾತನಾಡುವ ಕೆಲ ಗಣ್ಯರಿವರು:

  • ಪ್ರಿಯಾಂಕ್ ಖರ್ಗೆ, ಕರ್ನಾಟಕ ಐಟಿ ಸಚಿವ
  • ಭವೀಶ್ ಅಗರ್ವಾಲ್, ಓಲಾ ಕ್ಯಾಬ್ಸ್ ಸಹ-ಸಂಸ್ಥಾಪಕ
  • ರಾಣಾ ಬರುವಾ, ಹಾವಸ್ ಇಂಡಿಯಾ ಗ್ರೂಪ್ ಸಿಇಒ
  • ವಾಣಿ ಕೋಲ, ಕಳಾರಿ ಕ್ಯಾಪಿಟಲ್ ಎಂಡಿ
  • ಅಂಕುರ್ ವಾರಿಕೂ ಗುಡ್, ವೆಬ್​ವೇದ ಸಂಸ್ಥಾಪಕ
  • ಪ್ರಿಯಾಂಕಾ ಗಿಲ್, ಗುಡ್ ಮೀಡಿಯಾ ಸಿಇಒ ಮತ್ತು ಗ್ಲಾಮ್ ಗ್ರೂಪ್ ಸಂಸ್ಥಾಪಕರು
  • ಪೀಯುಶ್ ಬನ್ಸಾಲ್, ಲೆನ್ಸ್​ಕಾರ್ಟ್ ಸಹ-ಸಂಸ್ಥಾಪಕರು
  • ದೀಪ್ ಕಾಲ್ರ, ಮೇಕ್ ಮೈ ಟ್ರಿಪ್ ಸಂಸ್ಥಾಪಕರು
  • ರಾಜನ್ ಆನಂದನ್, ಪೀಕ್ ಎಕ್ಸ್​ವಿ ಪಾರ್ಟ್ನರ್ಸ್ ಅಂಡ್ ಸರ್ಜ್ ಸಂಸ್ಥೆಯ ಎಂಡಿ
  • ಆಶೀಶ್ ಮೋಹಪಾತ್ರ, ಆಫ್​ಬ್ಯುಸಿನೆಸ್ ಮತ್ತು ಆಕ್ಸಿಝೋ ಸಹ-ಸಂಸ್ಥಾಪಕರು
  • ಆಂಶೂ ಶರ್ಮಾ, ಮ್ಯಾಜಿಕ್​ಪಿನ್ ಸಹ-ಸಂಸ್ಥಾಪಕರು

ಇದನ್ನೂ ಓದಿ: ಒಂದು ಕಾಲದಲ್ಲಿ ಗೂರ್ಖಾ ಪಡೆಗಳಿಂದ ರಕ್ಷಣೆ ಪಡೆದಿದ್ದ ಈ ಸುಲ್ತಾನನ ಬಳಿ 500 ರೋಲ್ಸ್ ರಾಯ್ಸ್, 300 ಫೆರಾರಿ ಸೇರಿ 7,000 ವಾಹನಗಳು

ಇಂಡಿಯಾ ಇಂಟರ್ನೆಟ್ ಡೇ ಯಾಕಾಗಿ?

ಭಾರತದ ಅಂತರ್ಜಾಲ ಉದ್ಯಮದ ಗಣ್ಯರನ್ನು ಒಂದು ವೇದಿಕೆ ತಂದು ವಿಚಾರ ವಿನಿಯಮಕ್ಕೆ ಆಸ್ಪದ ಮಾಡುವ ಉದ್ದೇಶದಿಂದ ಭಾರತ ಅಂತರ್ಜಾಲ ದಿನ ಅಥವಾ ಇಂಡಿಯಾ ಇಂಟರ್ನೆಟ್ ಡೇ ಅನ್ನು ಆಚರಿಸಲಾಗುತ್ತಿದೆ. ಹೊಸ ಸ್ಟಾರ್ಟಪ್ ಸಂಸ್ಥಾಪಕರಿಗೆ ಈ ಉದ್ಯಮದ ಹಿರಿಯರೊಂದಿಗೆ ಮುಖಾಮುಖಿಯಾಗುವ ಮತ್ತು ನೇರವಾಗಿ ಸಂವಾದ ನಡೆಸುವ ಹಾಗೂ ಈ ಮೂಲಕ ಹೊಸ ಸಾಧ್ಯಾಸಾಧ್ಯತೆಗಳನ್ನು ಅವಲೋಕಿಸುವ ಅವಕಾಶ ಈ ಕಾರ್ಯಕ್ರಮದಿಂದ ಸಿಗುತ್ತದೆ.

ಏನಿದು TiE?

TiE ಎಂದರೆ ದಿ ಇಂಡಸ್ ಆಂಟ್ರಪ್ರನ್ಯೂರ್ಸ್. ಇಂಡಸ್ ಪ್ರದೇಶ, ಅಂದರೆ ಭಾರತೀಯ ಉಪಖಂಡದ ಪ್ರದೇಶ ಮೂಲದ ಯಶಸ್ವಿ ಉದ್ಯಮಿಗಳು, ಕಾರ್ಪೊರೇಟ್ ಎಕ್ಸಿಕ್ಯೂಟಿವ್​ಗಳು, ಹಿರಿಯ ವೃತ್ತಿಪರರ ಒಂದು ಗುಂಪು ಇದು. ದೆಹಲಿ-ಎನ್​ಸಿಆರ್, ಬೆಂಗಳೂರು ಸೇರಿದಂತೆ ವಿಶ್ವದ ಅನೇಕ ನಗರಗಳಲ್ಲಿ ಇದರ ವಿಭಾಗಗಳಿವೆ. ಈ ವರ್ಷದ ಇಂಡಿಯಾ ಇಂಟರ್ನೆಟ್ ಡೇ ಆಯೋಜಿಸಿರುವ ದೆಹಲಿ-ಎನ್​ಸಿಆರ್​ನ TiE ಚಾಪ್ಟರ್ ಬಹಳ ಸಕ್ರಿಯವಾಗಿರುವ ವಿಭಾಗಗಳಲ್ಲಿ ಒಂದು.

ಈ ವರ್ಷದ ಆಚರಣೆಯಲ್ಲಿ ಇಡೀ ವರ್ಷಾದ್ಯಂತ ವಿವಿಧ ಮಾಸ್ಟರ್​ಕ್ಲಾಸ್​ಗಳು, ವರ್ಕ್​ಶಾಪ್​ಗಳು ನಡೆಯಲಿವೆ. ನವೋದ್ಯಮಿಗಳಿಗೆ ಸಹಾಯಕವಾಗಬಲ್ಲಂತಹ ವಿವಿಧ ಸ್ತರದ ಕಾರ್ಯಕ್ರಮಗಳು ವರ್ಷಾದ್ಯಂತ ಆಯೋಜಿಸಲಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
Vijaya Sarathy SN
Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
ಭೀಕರ ಬಿರುಗಾಳಿಗೆ ಶೀಟ್​ ಸಮೇತ ಗಾಳಿಯಲ್ಲಿ ಹಾರಿದ ವ್ಯಕ್ತಿ
ಭೀಕರ ಬಿರುಗಾಳಿಗೆ ಶೀಟ್​ ಸಮೇತ ಗಾಳಿಯಲ್ಲಿ ಹಾರಿದ ವ್ಯಕ್ತಿ
ಮಾಧುಸ್ವಾಮಿ ದಿಢೀರ್ ಪ್ರತ್ಯಕ್ಷ:ಸ್ವಪಕ್ಷದ ನಾಯಕರ ನಡೆಗೆ ಬಹಿರಂಗ ಅಸಮಾಧಾನ
ಮಾಧುಸ್ವಾಮಿ ದಿಢೀರ್ ಪ್ರತ್ಯಕ್ಷ:ಸ್ವಪಕ್ಷದ ನಾಯಕರ ನಡೆಗೆ ಬಹಿರಂಗ ಅಸಮಾಧಾನ
ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​
ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?
ನಾಯಂಡಹಳ್ಳಿ ಗೋದಾಮಿನಲ್ಲಿ ಅಗ್ನಿ ಅನಾಹುತ: ಧಗ ಧಗಿಸಿದ ವಸ್ತುಗಳು
ನಾಯಂಡಹಳ್ಳಿ ಗೋದಾಮಿನಲ್ಲಿ ಅಗ್ನಿ ಅನಾಹುತ: ಧಗ ಧಗಿಸಿದ ವಸ್ತುಗಳು
ಬುರ್ಖಾ ಧರಿಸಿ ಬಂದು ಚಿನ್ನದಂಗಡಿ ಮಾಲೀಕನ ಕಣ್ಣಿಗೆ ಖಾರದಪುಡಿ ಎರಚಿದ ಮಹಿಳೆ
ಬುರ್ಖಾ ಧರಿಸಿ ಬಂದು ಚಿನ್ನದಂಗಡಿ ಮಾಲೀಕನ ಕಣ್ಣಿಗೆ ಖಾರದಪುಡಿ ಎರಚಿದ ಮಹಿಳೆ
ಮೋದಿ ರೀತಿ ಬೆಂಗಾವಲು ಪಡೆ ವಾಹನ ಕಡಿಮೆ ಮಾಡ್ತಾರಾ ಸಿಎಂ? ಹೇಳಿದ್ದೇನು ನೋಡಿ
ಮೋದಿ ರೀತಿ ಬೆಂಗಾವಲು ಪಡೆ ವಾಹನ ಕಡಿಮೆ ಮಾಡ್ತಾರಾ ಸಿಎಂ? ಹೇಳಿದ್ದೇನು ನೋಡಿ
ಅಜ್ಜನ ಹೆಸರ ಮೇಲೆ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ ಸಮರ್ಥ್ ಶಾಮನೂರು!
ಅಜ್ಜನ ಹೆಸರ ಮೇಲೆ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ ಸಮರ್ಥ್ ಶಾಮನೂರು!
ದಿಲೀಪ್​​ರ ಉಳಿಸಿಕೊಳ್ಳಲು ಪತ್ನಿ ಮಾಡಿದ ಪ್ರಯತ್ನಗಳ ವಿವರಿಸಿದ ಆಟೋ ಚಾಲಕ
ದಿಲೀಪ್​​ರ ಉಳಿಸಿಕೊಳ್ಳಲು ಪತ್ನಿ ಮಾಡಿದ ಪ್ರಯತ್ನಗಳ ವಿವರಿಸಿದ ಆಟೋ ಚಾಲಕ
ಇಂದಿರಾ ಗಾಂಧಿ ಬಳಿಕ ಮೋದಿಯೇ ಮಾಸ್​​ ಲೀಡರ್​​ ಎಂದ ಕೆ.ಎನ್​​. ರಾಜಣ್ಣ
ಇಂದಿರಾ ಗಾಂಧಿ ಬಳಿಕ ಮೋದಿಯೇ ಮಾಸ್​​ ಲೀಡರ್​​ ಎಂದ ಕೆ.ಎನ್​​. ರಾಜಣ್ಣ