ಮಹಾಸಾಗರ ತಳದಲ್ಲಿ ಕೋಬಾಲ್ಟ್ ನಿಕ್ಷೇಪ; ಮೈನಿಂಗ್​ಗೆ ಅನುಮತಿ ಕೋರಿದ ಭಾರತ; ಅತ್ತ ಶ್ರೀಲಂಕಾದಿಂದಲೂ ಪೈಪೋಟಿ

Afanasy Nikitin Seamount at Central Indian Ocean: ಭಾರತ, ಮಾಲ್ಡೀವ್ಸ್ ಮತ್ತು ಶ್ರೀಲಂಕಾ ಕರಾವಳಿ ಸಮೀಪ ಇರುವ ಅಫಾನಾಸಿ ನಿಕಿಟಿನ್ ಸೀಮೌಂಟ್ ಎಂಬ ಸಾಗರ ತಳದ ಬೆಟ್ಟದಲ್ಲಿ ಕೋಬಾಲ್ಟ್ ನಿಕ್ಷೇಪ ಇದೆ. ಈ ಬೆಟ್ಟವನ್ನು ಅಧ್ಯಯನ ಮಾಡಲು ಅನುಮತಿ ಕೋರಿ ಜಮೈಕಾದಲ್ಲಿರುವ ಇಂಟರ್​ನ್ಯಾಷನಲ್ ಸೀಬೆಡ್ ಅಥಾರಿಟಿ ಬಳಿ ಭಾರತ ಅರ್ಜಿ ಹಾಕಿದೆ. ಈ ಸೀಮೌಂಟ್ ಭಾರತದಿಂದ 1,350 ಕಿಮೀ ದೂರದಲ್ಲಿದ್ದರೆ, ಶ್ರೀಲಂಕಾದಿಂದ 1,050 ದೂರದಲ್ಲಿದೆ.

ಮಹಾಸಾಗರ ತಳದಲ್ಲಿ ಕೋಬಾಲ್ಟ್ ನಿಕ್ಷೇಪ; ಮೈನಿಂಗ್​ಗೆ ಅನುಮತಿ ಕೋರಿದ ಭಾರತ; ಅತ್ತ ಶ್ರೀಲಂಕಾದಿಂದಲೂ ಪೈಪೋಟಿ
ಅಫಾನಾಸಿ ನಿಕಿಟಿನ್ ಸೀಮೌಂಟ್
Follow us
|

Updated on: Jun 20, 2024 | 12:52 PM

ನವದೆಹಲಿ, ಜೂನ್ 20: ಹಿಂದೂ ಮಹಾಸಾಗರದ ಒಳಗಿರುವ ಕೋಬಾಲ್ಟ್ ಲೋಹಯುಕ್ತ ಗುಡ್ಡದ ಮೈನಿಂಗ್ ನಡೆಸಲು ಅನುಮತಿಗಾಗಿ ಭಾರತ ಅತೀವ ಪ್ರಯತ್ನ ನಡೆಸುತ್ತಿದೆ. ಅಫಾನಾಸಿ ನಿಕಿಟಿನ್ ಸೀಮೌಂಟ್ (Afanasy Nikitin Seamount) ಎಂದು ಕರೆಯಲಾಗುವ ಈ ಸಾಗರ ತಳದ ಕೋಬಾಲ್ಟ್ ನಿಕ್ಷೇಪವು (cobalt blocks) ಭಾರತದ ದಕ್ಷಿಣ ಕರಾವಳಿ ತುದಿಯಿಂದ 1,350 ಕಿಮೀ ದೂರದಲ್ಲಿದೆ. ಜಾಗತಿಕವಾಗಿ ಸಾಗರರ ಮಧ್ಯೆ ನಡೆಯುವ ಆರ್ಥಿಕ ಚಟುವಟಿಕೆಗಳ ಕಾನೂನು ನಿಯಂತ್ರಣ ಪ್ರಾಧಿಕಾರ ಎನಿಸಿರುವ ಇಂಟರ್ನ್ಯಾಷನಲ್ ಸೀಬೆಡ್ ಅಥಾರಿಟಿ (International seabed Authority) ಬಳಿಕ ಅನುಮತಿಗಾಗಿ ಭಾರತ ಅರ್ಜಿ ಸಲ್ಲಿಸಿದೆ. ಐದು ಲಕ್ಷ ಡಾಲರ್ ಶುಲ್ಕವನ್ನೂ ಕಟ್ಟಿರುವ ಭಾರತ, ಆ ಜಾಗದಲ್ಲಿ 15 ವರ್ಷ ಕಾಲ ಭೌಗೋಳಿಕ, ಪರಿಸರ ಅಧ್ಯಯನ ನಡೆಸಲು ಅನುಮತಿಸುವಂತೆ ಮನವಿ ಮಾಡಿದೆ.

ಕೋಬಾಲ್ಟ್ ಬಹಳ ಅಮೂಲ್ಯ ಲೋಹ…

ಈ ಭೂಮಿಯಲ್ಲಿ ಸಿಗುವ ಅತ್ಯಂತ ವಿರಳ ಖನಿಜಗಳಲ್ಲಿ ಕೋಬಾಲ್ಟ್ ಒಂದು. ಎಲೆಕ್ಟ್ರಿಕ್ ವಾಹನ ಮತ್ತು ಬ್ಯಾಟರಿಗಳಿಗೆ ಇದು ಬಹಳ ಮುಖ್ಯ. ಹೀಗಾಗಿ, ಕೋಬಾಲ್ಟ್​ಗೆ ಬಹಳಷ್ಟು ಬೇಡಿಕೆ ಇದೆ. ಭಾರತದಲ್ಲಿ ನಾಲ್ಕೈದು ಜಾಗದಲ್ಲಿ ಕೋಬಾಲ್ಟ್ ಇರುವಿಕೆಯನ್ನು ಗುರುತಿಸಲಾಗಿದೆ. ಇದರ ಮೈನಿಂಗ್ ಕಾರ್ಯ ಭಾರತಕ್ಕೆ ಹೊಸತು. ಬೇರೆ ಬೇ ದೇಶಗಳಲ್ಲಿ ಇರುವ ಕೋಬಾಲ್ಟ್ ನಿಕ್ಷೇಪದ ಮೈನಿಂಗ್ ಪಡೆಯಲೂ ಭಾರತ ಪ್ರಯತ್ನಿಸುತ್ತಿದೆ.

ಇದನ್ನೂ ಓದಿ: ಐದು ದಶಕದಲ್ಲಿ ಭಾರತದ ಸಂಪತ್ತು ಸಾವಿರ ಪ್ರತಿಶತದಷ್ಟು ಹೆಚ್ಚಾಗಲಿದೆ: ಎನ್​ಎಸ್​ಇ ಸಿಇಒ ಆಶೀಶ್ ಕುಮಾರ್ ಚೌಹಾಣ್

ವಿಶ್ವದ ಅತಿವಿರಳ ಖನಿಜಗಳ ವಿಚಾರಕ್ಕೆ ಬಂದರೆ ಚೀನಾದ ಪ್ರಾಬಲ್ಯ ಬಹಳ ಇದೆ. ವಿಶ್ವದ ಶೇ. 70ರಷ್ಟು ಕೋಬಾಲ್ಟ್ ಅನ್ನು ಚೀನಾ ದೇಶವೇ ತಯಾರಿಸುತ್ತದೆ. ಹಲವು ಪ್ರಮುಖ ಖನಿಜಗಳ ಸರಬರಾಜು ಚೀನಾ ಮೇಲೆ ಹೆಚ್ಚು ಅವಲಂಬಿತವಾಗಿದೆ. ಹೀಗಾಗಿ, ಭಾರತಕ್ಕೆ ಕೋಬಾಲ್ಟ್ ಇತ್ಯಾದಿ ಖನಿಜಗಳು ಸಿಕ್ಕಷ್ಟೂ ಬೇಕು.

ಸಾಗರ ತಳದಲ್ಲಿ ಮೈನಿಂಗ್ ನಡೆಸುವ ಕಾರ್ಯವೂ ಭಾರತಕ್ಕೆ ಹೊಸತು. ಭಾರತಕ್ಕೆ ಸಮೀಪವೇ ಸಾಗರತಳದಲ್ಲಿ ಕೋಬಾಲ್ಟ್ ನಿಕ್ಷೇಪ ಇದ್ದರೂ ಅದನ್ನು ಪಡೆಯುವುದು ಅಷ್ಟು ಸುಲಭವಾಗಿಲ್ಲ. ಈ ಸ್ಥಳವು ಮಾಲ್ಡೀವ್ಸ್ ಮತ್ತು ಶ್ರೀಲಂಕಾಗೂ ಸಮೀಪವೇ ಇದೆ. ಅಫಾನಾಸಿ ನಿಕಿಟಿನ್ ಸೀಮೌಂಟ್ ಎಂದು ಕರೆಯಲಾಗುವ ಈ ಸಾಗರತಳದ ಗುಡ್ಡವು ಭಾರತದಿಂದ 1,350 ಕಿಮೀ ದೂರದಲ್ಲಿದೆ. ಮಾಲ್ಡೀವ್ಸ್​ನಿಂದ 1,100 ಕಿಮೀ ದೂರ, ಹಾಗು ಶ್ರೀಲಂಕಾದಿಂದ 1,050 ಕಿಮೀ ದೂರದಲ್ಲಿದೆ.

ಈ ಮೂರು ದೇಶಗಳ ಪೈಕಿ ಶ್ರೀಲಂಕಾಗೆ ಇದು ಅತಿ ಸಮೀಪ ಇದೆ. ಇದು ತನಗೆ ಸೇರಿದ್ದು ಎಂಬುದು ಶ್ರೀಲಂಕಾದ ವಾದ. ಸದ್ಯ ಈ ಕೋಬಾಲ್ಟ್ ನಿಕ್ಷೇಪ ಇರುವ ಜಾಗ ಯಾವ ದೇಶಕ್ಕೂ ಸೇರಿಲ್ಲ. ಆದರೆ, ಸಾಗರ ಗಡಿಭಾಗವನ್ನು 200 ನಾಟಿಕಲ್ ಮೈಲುಗಳಷ್ಟು ವಿಸ್ತರಣೆಗೆ ಶ್ರೀಲಂಕಾ ಹಲವು ವರ್ಷಗಳ ಹಿಂದೆಯೇ ಅರ್ಜಿ ಹಾಕಿತ್ತು. ಆದರೆ, 2022ರಲ್ಲಿ ಭಾರತವು ಈ ಅರ್ಜಿ ಬಗ್ಗೆ ತಕರಾರು ವ್ಯಕ್ತಪಡಿಸಿದೆ. ಅಂತಾರಾಷ್ಟ್ರೀಯ ಕೋರ್ಟ್​ನಲ್ಲಿ ಶ್ರೀಲಂಕಾ ಪರವಾಗಿ ತೀರ್ಪು ಬಂದರೆ ಕೋಬಾಲ್ಟ್ ನಿಕ್ಷೇಪದ ಜಾಗ ಶ್ರೀಲಂಕಾ ವ್ಯಾಪ್ತಿಗೆ ಬರುತ್ತದೆ.

ಇದನ್ನೂ ಓದಿ: ಬಜೆಟ್​ಗೆ ಮುಂಚೆ ಪ್ರಮುಖ ಆರ್ಥಿಕ ತಜ್ಞರ ಜೊತೆ ನಿರ್ಮಲಾ ಸೀತಾರಾಮನ್ ಸಭೆ

ಕೋಬಾಲ್ಟ್ ಒಂದಕ್ಕೆ ಭಾರತ ಜಟಾಪಟಿಯಲ್ಲ…

ಅಫಾನಾಸಿ ನಿಕಿಟಿನ್ ಸೀಮೌಂಟ್ ಜಾಗದ ಮೇಲೆ ಭಾರತಕ್ಕೆ ಆಸಕ್ತಿ ಇರುವುದು ಕೋಬಾಲ್ಟ್ ಖನಿಜದ ವಿಚಾರಕ್ಕೆ ಮಾತ್ರವಲ್ಲ ಎಂಬುದನ್ನು ಗಮನಿಸಬೇಕು. ಈ ಸ್ಥಳವನ್ನು ಭಾರತ ಕೈಬಿಟ್ಟರೆ ಚೀನಾ ಈ ಪ್ರದೇಶದಲ್ಲಿ ತನ್ನ ಉಪಸ್ಥಿತಿ ಹೆಚ್ಚಿಸಿಕೊಳ್ಳುವ ಅಪಾಯ ಇದೆ. ಇದು ಭಾರತಕ್ಕೆ ತಲೆನೋವಾಗಿರುವ ಸಂಗತಿ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ
ಸಭೆಗೆ ಬಂದ ಕುಮಾರಸ್ವಾಮಿಯನ್ನು ಸ್ವಾಗತಿಸಿದ ಸಿದ್ದರಾಮಯ್ಯ: ವಿಡಿಯೋ ನೋಡಿ
ಸಭೆಗೆ ಬಂದ ಕುಮಾರಸ್ವಾಮಿಯನ್ನು ಸ್ವಾಗತಿಸಿದ ಸಿದ್ದರಾಮಯ್ಯ: ವಿಡಿಯೋ ನೋಡಿ
‘ದರ್ಶನ್​ ಜೈಲಿಗೆ ಹೋದಮೇಲೆ ನನ್ನ ಮಗಳು ಸರಿಯಾಗಿ ಊಟ ಮಾಡುತ್ತಿಲ್ಲ’
‘ದರ್ಶನ್​ ಜೈಲಿಗೆ ಹೋದಮೇಲೆ ನನ್ನ ಮಗಳು ಸರಿಯಾಗಿ ಊಟ ಮಾಡುತ್ತಿಲ್ಲ’
ಶ್ರೀಗಳು ಸ್ಥಾನ ಬಿಟ್ಟುಕೊಡಿ ಅಂದಿದ್ದು ಸಿದ್ದರಾಮಯ್ಯರನ್ನು ವಿಚಲಿತರಾಗಿಸಿದೆ
ಶ್ರೀಗಳು ಸ್ಥಾನ ಬಿಟ್ಟುಕೊಡಿ ಅಂದಿದ್ದು ಸಿದ್ದರಾಮಯ್ಯರನ್ನು ವಿಚಲಿತರಾಗಿಸಿದೆ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಾಳೆಯೂ ಶಾಲೆಗ, ಕಾಲೇಜುಗಳಿಗೆ ರಜೆ ಘೋಷಣೆ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಾಳೆಯೂ ಶಾಲೆಗ, ಕಾಲೇಜುಗಳಿಗೆ ರಜೆ ಘೋಷಣೆ
ಕೆಪಿಸಿಸಿ ಅಧ್ಯಕ್ಷ ಸ್ಥಾನ ಸಿಕ್ಕರೆ ರಾಜಣ್ಣ ಮಂತ್ರಿ ಸ್ಥಾನ ತ್ಯಜಿಸುತ್ತಾರೆ?
ಕೆಪಿಸಿಸಿ ಅಧ್ಯಕ್ಷ ಸ್ಥಾನ ಸಿಕ್ಕರೆ ರಾಜಣ್ಣ ಮಂತ್ರಿ ಸ್ಥಾನ ತ್ಯಜಿಸುತ್ತಾರೆ?
ಆ ಶ್ರೀ ಸ್ಥಾನ ಬಿಟ್ಟುಕೊಡ್ತಾರಾ? ಕೇಳಿ ನಾನೇ ಸ್ವಾಮೀಜಿ ಆಗ್ತೇನೆ: ರಾಜಣ್ಣ
ಆ ಶ್ರೀ ಸ್ಥಾನ ಬಿಟ್ಟುಕೊಡ್ತಾರಾ? ಕೇಳಿ ನಾನೇ ಸ್ವಾಮೀಜಿ ಆಗ್ತೇನೆ: ರಾಜಣ್ಣ
ಕೆಂಪೇಗೌಡರ ಜಯಂತಿಯಲ್ಲಿ ಹಾಸನ ಡಿಸಿ ಕಣ್ಣೀರು, ಕಾರಣವೇನು ಗೊತ್ತಾ?
ಕೆಂಪೇಗೌಡರ ಜಯಂತಿಯಲ್ಲಿ ಹಾಸನ ಡಿಸಿ ಕಣ್ಣೀರು, ಕಾರಣವೇನು ಗೊತ್ತಾ?
ಚಂದ್ರಶೇಖರ ಶ್ರೀಗಳು ನೀಡಿದ ಹೇಳಿಕೆಗೆ ಆರ್ ಅಶೋಕ ತಮ್ಮ ವ್ಯಾಖ್ಯಾನ ನೀಡಿದರು!
ಚಂದ್ರಶೇಖರ ಶ್ರೀಗಳು ನೀಡಿದ ಹೇಳಿಕೆಗೆ ಆರ್ ಅಶೋಕ ತಮ್ಮ ವ್ಯಾಖ್ಯಾನ ನೀಡಿದರು!
ದರ್ಶನ್ ಕಾಣಲು ಬಂದ ವಿಶೇಷ ಚೇತನ ಅಭಿಮಾನಿಯ ಮಾತು
ದರ್ಶನ್ ಕಾಣಲು ಬಂದ ವಿಶೇಷ ಚೇತನ ಅಭಿಮಾನಿಯ ಮಾತು
ಮಳೆಯಿಂದಾಗಿ ಯೂನಿಯನ್ ಬ್ಯಾಂಕ್ ಎಸಿಯೊಳಗೆ ಬಂದು ಅವಿತು ಕುಳಿತ ಮರಿ ಹೆಬ್ಬಾವು
ಮಳೆಯಿಂದಾಗಿ ಯೂನಿಯನ್ ಬ್ಯಾಂಕ್ ಎಸಿಯೊಳಗೆ ಬಂದು ಅವಿತು ಕುಳಿತ ಮರಿ ಹೆಬ್ಬಾವು