2024ರಲ್ಲಿ ಜಾಗತಿಕ ಆರ್ಥಿಕ ಮತ್ತು ರಾಜಕೀಯ ತಳಮಳ ಮಧ್ಯೆಯೂ ಮಿಂಚಿನಂತೆ ಸಂಚರಿಸಿದ ಭಾರತದ ಆರ್ಥಿಕತೆ

Indian economy in 2024: ಭಾರತದ ಆರ್ಥಿಕತೆ 2024ರ ವರ್ಷದಲ್ಲಿ ಭರವಸೆ ಮೂಡಿಸಿದೆ. ಜಾಗತಿಕವಾಗಿ ವಿವಿಧ ಬಿಕ್ಕಟ್ಟುಗಳ ನಡುವೆಯೂ ಭಾರತ ಉತ್ತಮ ಬೆಳವಣಿಗೆ ಸಾಧಿಸಿದೆ. ವಿಶ್ವದ ಪ್ರಮುಖ ಆರ್ಥಿಕತೆಗಳ ಪೈಕಿ ಭಾರತ ಅತಿವೇಗದ ಜಿಡಿಪಿ ದರ ಹೊಂದಿದೆ. ಫಾರೆಕ್ಸ್ ರಿಸರ್ವ್ಸ್ 2024ರಲ್ಲಿ ಗರಿಷ್ಠ ಮಟ್ಟಕ್ಕೆ ಹೋಗಿದೆ. ವಿದೇಶೀ ಹೂಡಿಕೆಗಳು ಹೆಚ್ಚಾಗಿವೆ. ಜಿಎಸ್​ಟಿ ಸಂಗ್ರಹ ಹೆಚ್ಚುತ್ತಲೇ ಇದೆ.

2024ರಲ್ಲಿ ಜಾಗತಿಕ ಆರ್ಥಿಕ ಮತ್ತು ರಾಜಕೀಯ ತಳಮಳ ಮಧ್ಯೆಯೂ ಮಿಂಚಿನಂತೆ ಸಂಚರಿಸಿದ ಭಾರತದ ಆರ್ಥಿಕತೆ
ಭಾರತದ ಆರ್ಥಿಕತೆ

Updated on: Dec 23, 2024 | 3:24 PM

2024, ಭಾರತದ ಆರ್ಥಿಕತೆಗೆ ಮಿಶ್ರ ಫಲ ಸಿಕ್ಕಿದ ವರ್ಷವಾಗಿದೆ. ಜಾಗತಿಕ ಆರ್ಥಿಕ ಮತ್ತು ರಾಜಕೀಯ ಬಿಕ್ಕಟ್ಟುಗಳ ಮಧ್ಯೆಯೂ ಭಾರತದ ಆರ್ಥಿಕ ಬೆಳವಣಿಗೆ ತಕ್ಕಮಟ್ಟಿಗಿನ ವೇಗದಲ್ಲಿ ಸಾಗಿದೆ. ಇದು ಸಕಾರಾತ್ಮಕ ಅಂಶವಾದರೆ, ಕೆಲ ಆಂತರಿಕ ಸಮಸ್ಯೆಗಳು ಆರ್ಥಿಕ ವೇಗವನ್ನು ಮಂದಗೊಳಿಸಿರುವುದೂ ಉಂಟು. ಈ ವರ್ಷ ಭಾರತದ ಆರ್ಥಿಕ ಮತ್ತು ಹಣಕಾಸು ಪರಿಸ್ಥಿತಿ ಹೇಗಿತ್ತು ಎಂಬ ಚಿತ್ರಣ ಇಲ್ಲಿದೆ….

ಭಾರತದ ಉತ್ತಮ ಜಿಡಿಪಿ ದರ

2024ರ ಕ್ಯಾಲಂಡರ್ ವರ್ಷದ ಮೊದಲೆರಡು ಕ್ವಾರ್ಟರ್​ನಲ್ಲಿ, ಅಂದರೆ, ಜನವರಿಯಿಂದ ಜೂನ್​ವರೆಗಿನ ಅವಧಿಯಲ್ಲಿ ಭಾರತದ ಆರ್ಥಿಕತೆ ಉತ್ತಮವಾಗಿ ಬೆಳವಣಿಗೆ ಹೊಂದಿದೆ. 2023-24ರ ಹಣಕಾಸು ವರ್ಷದಲ್ಲಿ ಜಿಡಿಪಿ ಶೇ. 8.2ರ ದರದಲ್ಲಿ ಬೆಳೆದಿದೆ. ಸರ್ಕಾರದಿಂದ ಬಂಡವಾಳ ವೆಚ್ಚ, ಆಂತರಿಕ ಬೇಡಿಕೆಯು ಈ ಬೆಳವಣಿಗೆಗೆ ಪುಷ್ಟಿ ನೀಡಿದ ಸಂಗತಿಗಳಾಗಿವೆ.

ಇದನ್ನೂ ಓದಿ: ವಿಳಂಬದ ಐಟಿ ರಿಟರ್ನ್ಸ್ ಸಲ್ಲಿಕೆ: ಬಾಂಬೆ ಹೈಕೋರ್ಟ್ ಮಧ್ಯಪ್ರವೇಶ; ಡಿ. 31ರ ಡೆಡ್​ಲೈನ್ ವಿಸ್ತರಣೆಗೆ ಆದೇಶ

ಫಾರೆಕ್ಸ್ ರಿಸರ್ವ್ಸ್ ಹೆಚ್ಚಳ

ಈ ವರ್ಷ ಭಾರತದ ಫಾರೆಕ್ಸ್ ರಿಸರ್ವ್ಸ್ ಗರಿಷ್ಠ ಮಟ್ಟಕ್ಕೆ ಏರಿತ್ತು. ಇತಿಹಾಸದಲ್ಲೇ ಮೊದಲ ಬಾರಿಗೆ ವಿದೇಶೀ ವಿನಿಮಯ ಮೀಸಲು ನಿಧಿ 700 ಬಿಲಿಯನ್ ಡಾಲರ್ ಗಡಿ ದಾಟಿತ್ತು. ಚೀನಾ, ಜಪಾನ್ ಮತ್ತು ಸ್ವಿಟ್ಜರ್​ಲ್ಯಾಂಡ್ ಬಳಿಕ ಅತಿಹೆಚ್ಚು ಫಾರೆಕ್ಸ್ ರಿಸರ್ವ್ಸ್ ಭಾರತದ್ದಾಗಿದೆ.

ಭರ್ಜರಿ ಜಿಎಸ್​ಟಿ ಸಂಗ್ರಹ

ಭಾರತದಲ್ಲಿ ಈ ವರ್ಷ ಜಿಎಸ್​ಟಿ ಸಂಗ್ರಹ ಸಖತ್ತಾಗಿ ಆಗುತ್ತಿದೆ. ತಿಂಗಳಿಗೆ ಸರಾಸರಿಯಾಗಿ 1.7 ಲಕ್ಷ ಕೋಟಿ ರೂನಷ್ಟು ಜಿಎಸ್​ಟಿ ಮೊತ್ತವು ಸರ್ಕಾರದ ಖಜಾನೆಗೆ ತುಂಬುತ್ತಿದೆ. ಇದು ಆರ್ಥಿಕ ಚಟುವಟಿಕೆ ಉತ್ತಮ ರೀತಿಯಲ್ಲಿ ಆಗುತ್ತಿರುವುದರ ದ್ಯೋತಕವಾಗಿದೆ. ಸರ್ಕಾರಕ್ಕೆ ಹೆಚ್ಚು ಬಂಡವಾಳ ವೆಚ್ಚ ಮಾಡಲೂ ಇದು ಸಹಾಯಕವಾಗಿದೆ.

ಇದನ್ನೂ ಓದಿ: ಸಾಫ್ಟ್​ಪವರ್​ಗಿಂತಲೂ ಮಿಗಿಲಾದ ಶಕ್ತಿ ಭಾರತದ್ದು; ಭಾರತವಿಲ್ಲದೇ ಜಗತ್ತು ನಡೆಯಲ್ಲ: ಮಾಜಿ ಜರ್ಮನ್ ರಾಯಭಾರಿ ಲಿಂಡ್ನರ್

ಹಾಗೆಯೇ, ವಿದೇಶೀ ನೇರ ಹೂಡಿಕೆಗಳು 2024ರಲ್ಲಿ 1 ಟ್ರಿಲಿಯನ್ ಡಾಲರ್​ಗೂ ಅಧಿಕ ಮಟ್ಟಕ್ಕೆ ಹೋಗಿದೆ. ಮ್ಯಾನುಫ್ಯಾಕ್ಚರಿಂಗ್, ಟೆಕ್ನಾಲಜಿ ಮತ್ತು ನವೀಕರಣ ಇಂಧನ ವಲಯಗಳಲ್ಲಿ ಹೆಚ್ಚಿನ ಎಫ್​ಡಿಐ ಬಂದಿವೆ. ಪಿಎಲ್​ಐ ಸ್ಕೀಮ್​ಗಳು ಸಾಕಷ್ಟು ಎಫ್​ಡಿಐ ಅನ್ನು ಆಕರ್ಷಿಸುತ್ತಿವೆ. ಹಣದುಬ್ಬರ ಕೆಲ ತಿಂಗಳು ಕೈಮೀರಿದಂತೆ ಇದ್ದರೂ ಆಶಾದಾಯಕ ಪರಿಸ್ಥಿತಿ ವ್ಯಾಪ್ತಿಯಲ್ಲೇ ಇದೆ. ತರಕಾರಿ ಬೆಲೆಗಳ ಹೆಚ್ಚಳವೇ ಹಣದುಬ್ಬರ ಏರಿಕೆಗೆ ಪ್ರಮುಖ ಕಾರಣ. ಇದು ನಿಯಂತ್ರಣಕ್ಕೆ ಬಂದರೆ ಹಣದುಬ್ಬರ ಶೇ. 5ಕ್ಕಿಂತ ಒಳಗೆ ಬರುವ ಸಾಧ್ಯತೆಯೇ ಹೆಚ್ಚು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Follow Us